ಮನೆ, ಮನೆತನ, ಕುಟುಂಬ ಇತ್ಯಾದಿಗಳ ಬಗ್ಗೆ ನಮ್ಮಲ್ಲಿ ಇಂದು ಬಹಳವಾಗಿ ಚರ್ಚೆ, ಸಂವಾದಗಳು ಸಡೆಯುತ್ತಿವೆ. ಕೆಲವೆಡೆ ಚರ್ಚೆ-ಸಂವಾದಗಳು ಶಬ್ದರೂಪಕ್ಕಷ್ಟೇ ಸೀಮಿತವಾಗಿ ' ಇದೆಲ್ಲವೂ ಕಾಲದ ಪರಿಣಾಮ: ಕಾಲಾಯ ತಸ್ಮೈ ನಮಃ, ನಾವು ಏನನ್ನೂ ಮಾಡಲಾರೆವು, ಗಾಳಿ ಬಂದಂತೆ ತೂರಿಕೊ' ಎಂದು ಅಸಹಾಯಕತೆಯನ್ನು ತೋರಿಸಿ, ಎಂದಿನಂತೆ ತಮ್ಮ ಜೀವನ ನಡೆಸುವವರು ಬಹಳಷ್ಟು ಮಂದಿ ಇದ್ದರೆ, ಇನ್ನಷ್ಟು ಮಂದಿ ಇಂತಹ ಚಿಂತನೆಯನ್ನು ನಡೆಸದವರೂ ಇದ್ದಾರೆ. ಮತ್ತಷ್ಟು ಮಂದಿ 'ನಾವು ಯಾವ ಊರಿಗೆ ಹೋಗಬೇಕೆಂದು ನಿರ್ಧಾರವಾಗಿದೆ, ಅದಕ್ಕೆ ಆ ದಾರಿಯಲ್ಲಿ ಹೋಗದೆ, ಬೇರೊಂದು ದಾರಿ ಹಿಡಿದಿರುವುದಾದರೆ ಅದನ್ನು ಬಿಟ್ಟು, ಸರಿಯಾದ ದಾರಿಯನ್ನು ಆಶ್ರಯಿಸಬೇಕು' ಎಂದು ತಿಳಿದು, ಅದರಂತೆ ತಾವು ಕ್ರಮಿಸಿದ ದಾರಿಯಿಂದ ಹಿಂದಕ್ಕೆ ಬಂದು ಸರಿಯಾದ ದಾರಿಯಲ್ಲಿ ಪ್ರಯಾಣಿಸಲು ನಿಶ್ಚಯಿಸಿ, ಅದರಂತೆಯೇ ಮಾಡುತ್ತಾರೆ. ಅಂತಹವರನ್ನೇ ಯುಕ್ತ-ಅಯುಕ್ತ ವಿವೇಚನಶಕ್ತಿಯುಳ್ಳ ವಿವೇಕಿಗಳು ಎಂದು ಕರೆಯಲಾಗುತ್ತದೆ. ಇಂತಹ ವಿವೇಕವು ಪ್ರತಿಯೊಬ್ಬ ಮನುಷ್ಯನಿಗೂ, ಆತನು ಪ್ರವೇಶಿಸುವ ಎಲ್ಲ ಕ್ಷೇತ್ರಗಳಲ್ಲೂ (ಓದು, ಬರಹ, ಶಾಲೆ, ಮನೆಯ ನಿರ್ವಹಣೆ, ಕೃಷಿ, ಕಛೇರಿ, ಕಾರ್ಖಾನೆ, ಸಮಯದ ಸದ್ಬಳಕೆ, ಸಾಮಾಜಿಕ ಸಂಬಂಧ ಇತ್ಯಾದಿ) ಇರಬೇಕು. ಅಂತಹ ವಿವೇಕವಿಲ್ಲದೆ, ಒಟ್ಟಾರೆಯಾಗಿ ಹೇಗೋ ಜೀವನವನ್ನು ಸಾಗಿಸುತ್ತಿದ್ದೇವೆ ಎಂದುಕೊಳ್ಳುವ ಜನರನ್ನು ಕಠೋಪನಿಷತ್ತು 'ಅಂಧೇನೈವ ನೀಯಮಾನಾ ಯಥಾಂಧಾಃ (ಕುರುಡರು ಕುರುಡರಿಗೆ ದಾರಿ ತೋರಿಸಿದರೆ ಹೆಗೋ ಹಾಗೆ ಅವರು ದಾರಿ ತಪ್ಪುತ್ತಾರೆ) ಎಂದು ಎಚ್ಚರಿಸಿದೆ. ಇಂತಹ ವಿವೇಚನೆಯ ತಿಳುವಳಿಕೆಯನ್ನು ಹೊಂದಿದವನೇ ನಿಜವಾದ ಮಾನವ ಅಥವಾ ಮನುಷ್ಯ. 'ಮಾನವ' ಹಾಗೂ 'ಮನುಷ್ಯ' ಎಂಬ ಪದಗಳೇ 'ಮನ್' ಎಂಬ ಧಾತುವಿನಿಂದ ಹುಟ್ಟಿದೆ. ಇದರ ಅರ್ಥ ಜ್ಞಾನ ಅಥವಾ ತಿಳುವಳಿಕೆ. ಮನುಷ್ಯನ ದೇಹ ಇತರ ಚತುಷ್ಪಾದ ಪ್ರಾಣಿಗಳ ದೇಹದಂತೆ ಪಂಚಭೂತಗಳಿಂದಲೇ ಆಗಿದೆಯಾದ್ದರಿಂದ ಹಸಿವೆ, ಬಾಯಾರಿಕೆ, ನಿದ್ದೆ, ಕಾಮತೃಷೆ ಇತ್ಯಾದಿಗಳು ಸಹಜ ಆದರೆ ಇವುಗಳನ್ನು ತಣಿಸಿಕೊಳ್ಳುವಾಗ ಮನುಷ್ಯನು ಚತುಷ್ಪಾದ ಪ್ರಾಣಿಗಳಂತೆ ನಡೆದುಕೊಳ್ಳದೆ ಒಂದು ಸಭ್ಯಮಾರ್ಗವನ್ನು ಅನುಸರಿಸಬೇಕು. ಹಾಗೂ ತನ್ನ ಜೀವನವು ಕೇವಲ ಆಹಾರ, ನಿದ್ದೆ, ಭಯ, ಮೈಥನಗಳಿಗೆ ಸೀಮಿತವಲ್ಲ; ತನ್ನ ದೇಹದ ಅಂಗಗಳ ಪೈಕಿ ತಲೆಯೇ (ಮೆದುಳು, ಮನಸ್ಸು) ಮುಖ್ಯವಾದದ್ದು. ಉದರನಿಮಿತ್ತಂ ಬಹುಕೃತವೇಷಃ ಎಂದು ಆದಿ ಶಂಕರರು ಹೇಳಿದಂತೆ ಹೊಟ್ಟೆಪಾಡಿಗಾಗಿ ಮಾತ್ರ ವಿವಿಧ ವಿದ್ಯೆ, ವೃತ್ತಿ ಒಡೆದೆನೆಂದರೆ ಅದರಿಂದ ಮಾನವನ ನಿಜವಾದ ಗುರಿಯು ಸಾಧಿತವಾಗುವುದಿಲ್ಲ. ಮಾನವನ ಗುರುಯೆಂದರೆ ತನ್ನ ಬಗ್ಗೆ ತಾನು ತಿಳಿದುಕೊಳ್ಳುವುದು. ಇದನ್ನೇ 'ಆತ್ಮಜ್ಞಾನ ಎಂದು ನಮ್ಮ ಹಿರಿಯರು ಹೇಳಿದ್ದಾರೆ.
0 Comments
ಪ್ರಿಯ ಬಂಧುಗಳೇ,
ಹಿರಿಯವರಾದ ಡಾ.ದೊರೆಸ್ವಾಮಿಯವರೇ, ಡಾ. ಪ್ರಭುದೇವ ಅವರೇ, ಸ್ನೇಹಿತರಾದ ಪ್ರೊ. ಭೈರಪ್ಪನವರೇ, ಡಾ.ಬೈರೇಗೌಡರೇ, ಮತ್ತಿತರ ಹಿತವರೆ. ನಾನು ಮಾತನಾಡುವ ಅಗತ್ಯವಿಲ್ಲವೆಂದರೂ ನಾಲ್ಕಾರು ಮಾತು ಆಡಲೇಬೇಕಾಗಿದೆ. ನನ್ನ ಬಗ್ಗೆ ಬರೆದ ಈ ಕೃತಿಯು ತಯಾರಾಗುತ್ತಿದ್ದಂತೆಯೇ ಓದುತ್ತಾ ಹೋದೆ, ಮುಗಿದ ಮೇಲೆಯೂ ಓದಿದೆ. ಒಂದಾದ ಮೇಲೆ ಒಂದು, ಎರಡು ಪ್ರಶ್ನೆಗಳನ್ನು ಲೇಖಕರಿಗೆ ಹಾಕಿದೆ. ಈ ಪುಸ್ತಕದಲ್ಲಿ ಚಿತ್ರಿತವಾದ ವ್ಯಕ್ತಿ ನಾನೇ ಹೌದೇ? ಎಂಬುದು ನನ್ನ ಮೊದಲ ಪ್ರಶ್ನೆ. ಇದಕ್ಕೆ ಅವರ ಉತ್ತರ 'ಹೌದು' ಎಂದು. ಹಾಗಾದರೆ ನಾನು ಇದಕ್ಕೆ ಅರ್ಹನೇ? ಎಂಬುದು ನನ್ನ ಎರಡನೆಯ ಪ್ರಶ್ನೆ. ಇದಕ್ಕೂ ಅವರು ತುಂಬಾ ಔದಾರ್ಯದಿಂದ 'ಹೌದು' ಎಂದರು. ಆದರೆ, ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಲ್ಲಿ ಗುಣಗಳು ಇದ್ದಂತೆ ದೌರ್ಬಲ್ಯಗಳೂ ಇರುತ್ತವೆ. ಇಲ್ಲಿ ಚಿತ್ರಿತವಾದ ವ್ಯಕ್ತಿಯಲ್ಲಿ ದೌರ್ಬಲ್ಯಗಳು ಕಾಣಿಸುತ್ತಲೇ ಇಲ್ಲವಲ್ಲ, ಯಾಕೆ? ಆತ್ಮಚರಿತ್ರೆಯಲ್ಲಾಗಲೀ, ಇತರರು ಬರೆದ ವ್ಯಕ್ತಿ ಚರಿತ್ರೆಯಲ್ಲಾಗಲೀ ಗುಣ ದೌರ್ಬಲ್ಯಗಳ ಪ್ರಸ್ತಾಪವಿದ್ದರೂ ಪಾಶ್ಚಾತ್ಯ-ಪ್ರಾಚ್ಯ ಸಮಾಜ ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡಿದಾಗ ಪಾಶ್ಚಾತ್ಯ ಬರಹಗಳಲ್ಲಿ ಹೆಚ್ಚು ವಾಸ್ತವತೆ ಕಂಡಂತೆ ದೌರ್ಬಲ್ಯಗಳನ್ನು ಆದಷ್ಟೂ ಕಾಣಿಸದಂತೆ ನೋಡಿಕೊಳ್ಳಲಾಗುತ್ತದೆ. ಹಾಗೆ ನೋಡಿದರೆ ಗಣ ದೌರ್ಬಲ್ಯಗಳು ನೋಡುಗರ, ಅರ್ಥೈಸಿಕೊಳ್ಳುವವರ, ಮನೋಪರಿಪಾಕವನ್ನು ಅವಂಬಿಸಿರುತ್ತದೆ. ಜೊತೆಗೆ, ಇವೆಲ್ಲವೂ ಸಾಪೇಕ್ಷವಾದ ಅಂಶಗಳೇ ಎಂಬುದು ತಮಗೆ ತಿಳಿದವುಗಳೇ. ಇದು ಬರಿ ಧಾರ್ಮಿಕ ಸ್ಥಳವಲ್ಲ. ಇದರಷ್ಟಕ್ಕೆ ಇದೊಂದು ಸರಕಾರ. ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತಂತೆ ನಾಡಿನ ಜನಪ್ರಿಯ [ಪತ್ರಿಕೆಯೊಂದು ಕೆಲವರ್ಷಗಳ ಹಿಂದೆ ಪ್ರಕಟಿಸಿದ ಲೇಖನಕ್ಕೆ ತಲೆಬರೆಹ ನೀಡಿದ್ದು ಹೀಗೆ. ಬರಹದ ಕುರಿತು ನೀಡುವ ಚಿಕ್ಕ ಬಾಕ್ಸ್ನಲ್ಲಿ ಇದಕ್ಕೊಂದಿಷ್ಟು ಸಮರ್ಥನೆ ಇದೆ. ಇಲ್ಲಿ ಮಂಜುನಾಥ ದೇವಾಲಯವೇ ಪಾರ್ಲಿಮೆಂಟ್, ಹೆಗ್ಗಡೆಯವರೇ ಪ್ರಧಾನಿ. ಅವರ ಉಯಿಲು ಕೇಳುವ ವೇಗವೇ ಸುಪ್ರೀಂಕೋರ್ಟು, ಧರ್ಮವೇ ಇಲ್ಲಿಯ ಸಂವಿಧಾನ, ಭಕ್ತರೇ ಭಕ್ತಿಯಿಂದ ಬರೆದ ಕಾನೂನು. ಒಂದು ದೇಶದ ಸರಕಾರದಲ್ಲಿ ಏನೆಲ್ಲಾ ದಾಖಲೆಗಳಿರುತ್ತವೋ ಎಲ್ಲವೂ ಧರ್ಮಸ್ಥಳದಲ್ಲಿವೆ. ಸರಕಾರದ ಏನೆಲ್ಲಾ ಕೆಲಸಗಳನ್ನು ಮಾಡುತ್ತದೋ ಧರ್ಮಸ್ಥಳ ಅವೆಲ್ಲಾ ಕೆಲಸಗಳನ್ನು ಮಾಡುತ್ತದೆ. ಇದೊಂದು ಮಾದರಿ ಸರಕಾರ, ಪ್ರಧಾನಿ ಕ್ಯಾಬಿನೆಟ್ ಮಂತ್ರಿಗಳು, ರಾಜ್ಯಸಚಿವರು ಎಲ್ಲರೂ ಇಲ್ಲಿ ಒಬ್ಬರೇ, ಅವರೇ ಶ್ರೀ ವೀರೇಂದ್ರ ಹೆಗ್ಗಡೆಯವರು. ಈ ಧರ್ಮಕ್ಷೇತ್ರಕ್ಕೆ ಅವರೇ ಖಾವಂದರು (ಒಡೆಯರು), ಹೀಗೆನ್ನುವುದು ಆತ್ಮೀಯ ಮತ್ತು ಗೌರವದ ಸಂಬೋಧನೆ.
ಮೊದಲ ಮಾತು:
ನಮ್ಮ ದೇಶದ ಶೇಕಡಾ 654 ಕೃಷಿಕರು ಸಣ್ಣ ಹಿಡುವಳಿದಾರರು. ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಬಲ್ಲ ತಂತ್ರಜ್ಞಾನ, ಹಣಕಾಸಿನ ಶಕ್ತಿ ಇವರಿಲ್ಲಿಲ್ಲವಾದುದರಿಂದ ಇವರು ಬಡವರಾಗಿಯೇ ಉಳಿದಿದ್ದಾರೆ. ಹೆಚ್ಚಿನವರು ತಮ್ಮ ಭೂಮಿಯಲ್ಲಿ ವಾರ್ಷಿಕ ಅಲ್ಪಕಾಲದ ಒಂದು ಬೆಳೆಯನ್ನು ಮಾತ್ರ ಬೆಳೆಯುತ್ತಾರೆ ಇಲ್ಲವೇ ಬೀಳು ಬಿಡುತ್ತಾರೆ ಹಾಗೂ ಸ್ವತಃ ಕೂಲಿಕಾರ್ಮಿಕರಾಗಿಯೇ ಉಳಿದಿದ್ದಾರೆ. ಸಣ್ಣ ಹಿಡುವಳಿದಾರರ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಕೂಲಿಯಾಳುಗಳ ಕೊರತೆ. ಇವರಿಗೆ ತಮ್ಮ ಭೂಮಿಯಿಂದ ಬರುವ ಅತ್ಯಲ್ಪ ಆದಾಯದಲ್ಲಿ ಕಾರ್ಮಿಕರಿಗೆ ವೇತನ ನೀಡಿ ಕೃಷಿ ಕೆಲಸ ಮಾಡಿಸುವ ತಾಕತ್ತು ಇಲ್ಲ. ಇವರ ಬೆಳೆಯು ನಾಲ್ಕಾರು ತಿಂಗಳ ನಂತರ ಇಳುವರಿ ನೀಡುವ ಬೆಳೆಯಾದುದರಿಂದ ಕೂಲಿಯಾಳುಗಳಿಗೆ ವಾರ ವಾರ ವೇತನ ನೀಡಲು ಇವರಲ್ಲಿ ಹಣವಿಲ್ಲ. ಆದುದರಿಂದ ಹೆಚ್ಚಿನ ಸಣ್ಣ ಹಿಡುವಳಿದಾರರ ಕೃಷಿ ಕೌಟುಂಬಿಕ ಸದಸ್ಯರ ಕೂಲಿಯನ್ನೇ ನೆಚ್ಚಿಕೊಂಡಿರುತ್ತದೆ. ಹೀಗಾಗಿ ಇವರಲ್ಲಿ ಪ್ರಯೋಗಶೀಲತೆ ಕಮ್ಮಿ, ನಿರಂತರ ಆದಾಯ ನೀಡುವ ಕೃಷಿಗಳು ಇಲ್ಲ. ಹೆಚ್ಚಿನ ರೈತರ ಭೂಮಿ ದಾಖಲಾತಿಗಳು ಸಮರ್ಪಕವಿಲ್ಲದ್ದರಿಂದ ಇವರಿಗೆ ಬ್ಯಾಂಕ್ ಸಾಲವೂ ದೊರೆಯುವುದಿಲ್ಲ. ಒಂದು ಸಂಶೋಧನೆಯಂತೆ ನಮ್ಮ ದೇಶದ ಶೇಕಡಾ 27 ರೈತರಿಗೆ ಮಾತ್ರ ಬ್ಯಾಂಕುಗಳಿಂದ ಸಾಲ ದೊರೆಯುತ್ತಿದೆ. ಶೇಕಡಾ 23 ರೈತರಿಗೆ ಲೇವಾದೇವಿಗಾರರಿಂದ ಸಾಲ ದೊರೆಯುತ್ತಿದೆ. ಇನ್ನುಳಿದ 51 ಶೇಕಡಾ ರೈತರು ಯಾವುದೇ ಹಣಕಾಸು ಸಹಾಯದಿಂದ ವಂಚಿತರಾಗಿದ್ದಾರೆ (ಎನ್.ಎಸ್.ಎಸ್.ಓ ಸಮೀಕ್ಷೆ 2003). ಸಾಧನೆ ಮಾಡಬೇಕೆಂಬ ಹಂಬಲವುಳ್ಳ ಕೆಲ ಸಣ್ಣ ರೈತರು ಕೈಕಚ್ಚಿಕೊಳ್ಳುತ್ತಾರೆ. ಕಳೆದ ಒಂದು ದಶಕದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಎರಡು ಲಕ್ಷ ಮೀರಿದೆ. ಸ್ವಾತಂತ್ರ್ಯಾನಂತರದಲ್ಲಿ ನಡೆದ ಎಲ್ಲ ಯುದ್ಧಗಳಲ್ಲಿ ಒಟ್ಟಾಗಿ ವೀರ ಮರಣ ಹೊಂದಿದ ಸೈನಿಕರಿಗಿಂತ ಈ ಸಂಖ್ಯೆ ಜಾಸ್ತಿ! ಭಾರತ ಹಳ್ಳಿಗಳ ದೇಶ. ವ್ಯವಸಾಯ ಪ್ರಧಾನವಾಗಿರುವ ಈ ದೇಶದಲ್ಲಿ ಅನಕ್ಷರತೆಯ ಪಿಡುಗು, ಕಂದಾಚಾರ ಮತ್ತು ಪರಂಪರೆಯಿಂದ ಬಂದ ಕೃಷಿ ಪದ್ಧತಿಗಳು ಒಂದು ಕಡೆಯಿಂದ ಕಾಡುತ್ತಿದ್ದರೆ, ಸಾಮಾನ್ಯ ಸೌಲಭ್ಯಗಳನ್ನೂ ಪಡೆದುಕೊಳ್ಳಲಾಗದ ಪರಿಸ್ಥಿತಿ. ಕೃಷಿ ಪದ್ಧತಿಯನ್ನು ಅಭಿವೃದ್ಧಿ ಪಡಿಸಲು ಸೌಲಭ್ಯಗಳು ಇದೆಯೇ, ಇದ್ದರೆ ಯಾರನ್ನು ಕೇಳಬೇಕು? ಯಾರು ಸಹಾಯ ಮಾಡುವವರು? ಎಂದೆಲ್ಲಾ ಪ್ರಶ್ನೆಗಳು ಸಾಮಾನ್ಯವಾಗಿ ಉದ್ಭವಿಸುತ್ತವೆ. ಆದರೆ, ಇದಕ್ಕೆ ಸಮಾಧಾನವಿದೆ ಎಂದು ಹೇಳುವವರಿದ್ದರೂ ಅಂಥಹವರನ್ನು ತಪ್ಪಿಸಿ ಈ ಸಮಾಧಾನಗಳಿಗೂ ಬೆಲೆಯನ್ನು ಕಟ್ಟಿ ಬೆಲೆಗೆ ತಕ್ಕಂತೆ, ಉತ್ತರಗಳನ್ನು ಮರೀಚಿಕೆಯಂತೆ ತೋರಿಸಿ ತಮಗೆ ಬೇಕಾದಂತೆ ಈ ಮುಗ್ಧ ಜನರನ್ನು ಉಪಯೋಗಿಸಿಕೊಳ್ಳುವ ಮಧ್ಯವರ್ತಿಗಳು ಮೊದಲಿನಿಂದಲೂ ಇದ್ದಾರೆ.
ಸದ್ವಿಚಾರಗಳು ನಮಗೆ ಎಲ್ಲಾ ದಿಕ್ಕಿನಿಂದಲೂ ಸಿಗಲಿ - ಋಗ್ವೇದ
ಹೊಂದಾಣಿಕೆ ಮಾಡಿಕೊಳ್ಳುವುದು ಅನುಕರಣೆ ಅಲ್ಲ, ಅದು ಸಹನಶೀಲತೆ ಮತ್ತು ದೃಢ ಶಕ್ತಿಯ ಸಂಕೇತ - ಮಹಾತ್ಮಾ ಗಾಂಧಿ ಈ ಸಂಚಿಕೆಯಲ್ಲಿ ನಾವು ನಿಮಗೆ ಒಂದು ಅದ್ಭುತವಾದ ಮಹಿಳೆಯ ಬಗ್ಗೆ ಪರಿಚಯ ಮಾಡಿಕೊಡುತ್ತೇವೆ. ಇವರು ತನ್ನ ಇಡೀ ಜೀವನವನ್ನು ವಿಕಲ ಚೇತನರಿಗಾಗಿ ಮುಡುಪಾಗಿಟ್ಟಿದ್ದಾರೆ. ವಿಕಲಚೇತನರ ಕ್ಷೇತ್ರ ಎಂದರೆ ನಮಗೆ ತಕ್ಷಣ ಹೊಳೆಯುವುದೇ ಡಾ.ಇಂದುಮತಿ ರಾವ್. ಇವರು ಬೆಂಗಳೂರಿನ ಸಿ.ಬಿ.ಆರ್. ನೆಟ್ವರ್ಕ್ (ಸೌತ್ ಏಷಿಯಾ) ದ ಸಂಸ್ಥಾಪಕರು, ಕ್ಷೇತ್ರೀಯ ಮಾರ್ಗದರ್ಶಿಗಳು ಆಗಿದ್ದಾರೆ. ಸುಮಾರು 40 ಕ್ಕಿಂತ ಹೆಚ್ಚು ವರ್ಷಗಳಿಂದ ಇವರು ವಿಕಲಚೇತನರ ಅಂತಃಸತ್ತ್ವವನ್ನು ಸಮರ್ಥಶಕ್ತಿಯನ್ನಾಗಿ ರೂಪಿಸುವುದರಲ್ಲಿ ಕಾರ್ಯ ನಿರತವಾಗಿದ್ದಾರೆ. ಸಾಮಾನ್ಯವಾಗಿ ನಾವು ವಿಕಲಚೇತನರು ಎಂದರೆ ಸಾಕು, ಅವರು ಕೈಲಾಗದವರು, ಅಯ್ಯೋ ಪಾಪಾ ಎನ್ನುತ್ತೇವೆ. ಆದರೆ ಡಾ. ಇಂದುಮತಿ ರಾವ್ ಅವರ ದೃಷ್ಟಿಯಲ್ಲಿ ವಿಕಲಚೇತನ ಎನ್ನುವುದು ಶಕ್ತಿ. ಅವರನ್ನು ಬೇರೆ ಮಾಡಬಾರದು, ಅವರು ಸಾಮಾನ್ಯ ಜನರಲ್ಲಿ ಸೇರುತ್ತಾರೆ ಎನ್ನುತ್ತಾರೆ. ಎಲ್ಲರಂತೆಯೇ ಸಮಸ್ತ ಶಕ್ತಿಯು ಅವರಲ್ಲಿಯೇ ಇರುತ್ತದೆ. ಅದು ಪ್ರಕಟಗೊಳ್ಳಲು ಪೂರಕ ಪರಿಸರ ಬೇಕು ಎಂಬುದು ಅವರ ವಿಶ್ವಾಸ. ಹಿನ್ನೆಲೆ :- ಶಂಕರ ಪಾಠಕರ ಹುಟ್ಟೂರು ಬನವಾಸಿ. (ಕದಂಬ ವಂಶ ಸ್ಥಾಪಕ ಮಯೂರವರ್ಮನ ರಾಜಧಾನಿ) ಬನವಾಸಿಯಲ್ಲಿ ಮಧುಕೇಶ್ವರ ದೇವಸ್ಥಾನವಿದೆ. ಊರಿನ ಮೂರು ದಿಕ್ಕಿನಲ್ಲಿ ಹರಿಯುತ್ತಿದೆ ವರದಾ ನದಿ. ವೈಶಾಖ ಮಾಸದಲ್ಲಿ ವಾರ್ಷಿಕ ರಥೋತ್ಸವ - ಜಾತ್ರೆ ಆಗುತ್ತವೆ. ಬನವಾಸಿ ಶಂಕರ ಪಾಠಕರ ಬಾಲ್ಯದಲ್ಲಿ ಆಗಿನ ಬ್ರಿಟಿಷ್ ಆಡಳಿತದ ಮುಂಬಯಿ ಪ್ರಾಂತ್ಯದಲ್ಲಿ ಸೇರಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಒಂದು ದೊಡ್ಡ ಹಳ್ಳಿ. 1941ರಲ್ಲಿ ಜನಸಂಖ್ಯೆ ಸುಮಾರು 1000 ವಿರಬಹುದು. ಕಳೆದ 2001ರ ಜನಗಣತಿಯಲ್ಲಿ ಜನಸಂಖ್ಯೆ 7000. ಈಗ ಸುಮಾರು 9000 ಇರಬಹುದು. ಒಂದು ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಏಳನೇ ತರಗತಿಯವರೆಗೆ, ಹೆಣ್ಣು ಮಕ್ಕಳ ಶಾಲೆ ನಾಲ್ಕನೇ ತರಗತಿಯವರೆಗೆ, ಒಂದು ಉರ್ದು ಪ್ರಾಥಮಿಕ ಶಾಲೆಗಳಿದ್ದವು. ಒಟ್ಟು (4+2+1) 7 ಜನ ಮಾಸ್ತರರು, ಮಾಸ್ತರಿಣಿಯರು. ಇದಲ್ಲದೆ ಒಂದು ಪೊಲೀಸ್ ಸ್ಟೇಶನ್ - 3 ಪೇದೆಗಳು. ಅಗ್ರಿಕಲ್ಚರಲ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಅದರ ಅಂಗವಾಗಿ ಒಂದು ಚಿಕ್ಕ ಲೈಬ್ರರಿ. ಒಬ್ಬ ವ್ಯಕ್ತಿಯ ಮನೆಯಲ್ಲಿ ನಡೆಯುವ ಪೋಸ್ಟ್ ಆಫೀಸು, ಪೋಸ್ಟ್ ಮಾಸ್ತರರಿಗೆ ಗೌರವಧನ, ಗ್ರಾಮ ಪಂಚಾಯಿತಿ ಆಫೀಸು. ಬೆಳಿಗ್ಗೆ ಬನವಾಸಿಯಿಂದ ಹೊರಟು ಸಿರ್ಸಿಗೆ ಹೋಗಿ, ವಾಪಸ್ಸು ರಾತ್ರಿ ಮರಳಿ ಬರುವ ಒಂದು ಖಾಸಗಿ ಬಸ್ ಸರ್ವೀಸ್, ಆರೋಗ್ಯ ಸೇವೆ ಊರಿನ ಇಬ್ಬರು ವೈದ್ಯರಿಂದ. ಕಳೆದ 50 ವರ್ಷಗಳಲ್ಲಿ ಆದ ಮುಖ್ಯ ಬದಲಾವಣೆಗಳು ಜಯಂತಿ ಹೈಸ್ಕೂಲು, ರೆಗ್ಯೂಲರ್ ಪೋಸ್ಟ್ ಆಫೀಸು, ಪ್ರಾಥಮಿಕ ಆರೋಗ್ಯ ಕೇಂದ್ರ - ಅಲ್ಲಿ ಒಬ್ಬರು ಎಂ.ಬಿ.ಬಿ.ಎಸ್. ಡಾಕ್ಟರರು, ಒಬ್ಬಳು ನರ್ಸ್, ಸರಕಾರೀ ಬಸ್ ಸ್ಟಾಂಡ್ ಮತ್ತು ಬನವಾಸಿಗೆ ಬಂದು ಹೋಗುವ ಪ್ರವಾಸಿಗರು.
“Education is not passing the exams or getting a job. It is the building of stable real character and humanity”.
-Swami Vivekanand ಪ್ರಸ್ತಾವನೆ: ಸದೃಢ ಮನಸ್ಸಿನ ಆರೋಗ್ಯವಂತ, ಸಂತೋಷದಾಯಕ, ಉಲ್ಲಾಸದ ಯುವಕರು ಭಾರತದ ಆರ್ಥಿಕಾಭಿವೃದ್ಧಿಗೆ ಬೇಕಾಗಿದ್ದಾರೆ ಎಂದು ಗಾಂಧೀಜಿಯವರು ಹೇಳಿದ ಮಾತು ಇಂದು ಎಷ್ಟೊಂದು ಸತ್ಯವೆನಿಸುತ್ತದೆ. ಇಂದಿನ ಆರ್ಥಿಕಾಭಿವೃದ್ಧಿಗೆ ಮಾನವಿಕ ಸಂಪತ್ತು ಬಹಳ ಮುಖ್ಯ. ಲಭ್ಯವಿರುವ ಭೂಸಂಪತ್ತು, ಜಲಸಂಪತ್ತು, ಅರಣ್ಯಸಂಪತ್ತು, ಖನಿಜ ಸಂಪತ್ತು, ಇಂಧನ ತೈಲ ಮುಂತಾದ ಸಂಪನ್ಮೂಲಗಳನ್ನು ದಕ್ಷವಾಗಿ ಮತ್ತು ಮಿತವಾಗಿ ಬಳಸಿಕೊಳ್ಳುವುದರ ಮೂಲಕ ಅವುಗಳ ಅಪವ್ಯಯವಾಗದಂತೆ ಮತ್ತು ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಆದ್ದರಿಂದ ಇಂದು ಶಿಕ್ಷಣದ ರಕ್ಷಣೆ ಮುಖ್ಯವೆನಿಸುತ್ತದೆ. ಭಾರತ ಹಿಂದೆಂದೂ ಕಾಣದಂತಹ ಆರ್ಥಿಕಾಭಿವೃದ್ದಿಯನ್ನು ಸಾಧಿಸಿದ್ದರೂ (8% ರಷ್ಟು ಬೆಳವಣಿಗೆ) ಭವಿಷ್ಯದಲ್ಲಿ ಶಿಕ್ಷಣದ ಸವಾಲುಗಳು ಆರ್ಥಿಕಾಭಿವೃದ್ಧಿಗೆ ತಡೆಯಾಗಬಹುದೇ? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದರಿಂದ ಭಾರತದ ಆರ್ಥಿಕ ವ್ಯವಸ್ಥೆಯನ್ನು ಜಾಗತಿಕ ಪೈಪೋಟಿಯಲ್ಲಿ ಎದುರಿಸಲು ಸಿದ್ದಗೊಳಿಸಬೇಕಾಗಿದೆ. ಆದ್ದರಿಂದ ಇಂದು ಶಿಕ್ಷಣ ಆರ್ಥಿಕಾಭಿವೃದ್ಧಿಯ ಸಂಜೀವಿನಿ ಎಂದು ಹೇಳಬಹುದಾಗಿದೆ. ಪಂಡಿತ ಸುಧಾಕರ ಚತುರ್ವೇದಿ: ಬಾಲ್ಯ ಮತ್ತು ವಿದ್ಯಾಭ್ಯಾಸ
114 ವಸಂತಗಳನ್ನು ಪೂರೈಸಿರುವ, ಅಪ್ಪಟ ಕನ್ನಡಿಗರಾಗಿದ್ದು, ಬಹುಸಂಖ್ಯಾತ ಕನ್ನಡಿಗರಿಗೆ ಅಪರಿಚತರಾಗಿಯೇ ಉಳಿದಿರುವ, ತಮ್ಮ ಜೀವನದ ಬಹುಪಾಲು ದಿನಗಳನ್ನು ಉತ್ತರ ಭಾರತದಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋರಾಡಿದ, ಸದಾ ಹಸನ್ಮುಖಿ, ಸಹೃದಯಿ, ಕರ್ಮಯೋಗಿಗಳಾದ ಪಂಡಿತ ಸುಧಾಕರ ಚತುರ್ವೇದಿಯವರು 1897ನೆಯ ಇಸವಿ ಏಪ್ರಿಲ್ 20ರ ರಾಮನವಮಿಯಂದು ತುಮಕೂರು ಜಿಲ್ಲೆಯ ಕ್ಯಾತಸಂದ್ರ ಗ್ರಾಮದ ದಂಪತಿಗಳಾದ ಶ್ರೀಮತಿ ಲಕ್ಷ್ಮಮ್ಮ ಮತ್ತು ಶ್ರೀ ಶ್ರೀಕೃಷ್ಣರಾಯರವರ ಮಗನಾಗಿ ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ಜನ್ಮತಾಳಿದರೂ, ಸಮಾಜದ ಅನಿಷ್ಟ ಕಟ್ಟುಪಾಡುಗಳ ವಿರುದ್ಧ ಹೋರಾಡುತ್ತ ಬೆಳೆದು, ತಮ್ಮದೇ ಆದ ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಂಡ ಮೇರು ಪರ್ವತ ಸಾಧಕರಲ್ಲಿ ಸುಧಾಕರ ಪಂಡಿತರು ಒಬ್ಬರು. ಬಾಲ್ಯದಲ್ಲಿಯೇ ಅತೀ ಕ್ರಿಯಾಶೀಲ, ಚಟುವಟಿಕಗಳ ಗಣಿಯಾಗಿದ್ದ ಪ್ರತಿಭಾವಂತ ಹುಡುಗ ಎಂದು ಕರೆಸಿಕೊಂಡಿದ್ದ ಚತುರ್ವೇದಿಯವರ ಆರೋಗ್ಯ ಮಾತ್ರ ಹೇಳಿಕೊಳ್ಳುವಂತಿರಲಿಲ್ಲ. ಸದಾ ಕಾಯಿಲೆಗೆ ತುತ್ತಾಗುತ್ತಿದ್ದ ಪಂಡಿತ್ಜೀಯವರು ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ತಮ್ಮ ನೆಚ್ಚಿನ ಹಿರಿಯ ಸಹೋದರಿಯಾದ ಪದ್ಮಕ್ಕನ ಮುದ್ದಿನ ತಮ್ಮನಾಗಿ ಅವರಿಂದ ಕನ್ನಡ ಸಾಹಿತ್ಯ, ಸಂಸ್ಕೃತ ಮತ್ತು ಭಾರತ ದರ್ಶನ, ವೇದ ಅಧ್ಯಯನಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಬಾಲ್ಯದಲ್ಲಿಯೇ ವೇದ ಅಧ್ಯಯನಗಳ ಬಗ್ಗೆ ಪ್ರೌಢಿಮೆಯನ್ನು ಮೆರೆದರು. ಇವರ ಪ್ರೌಢಿಮೆಯನ್ನು ಗಮನಿಸಿದ ತಂದೆ ತಾಯಿಯರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉತ್ತರ ಭಾರತದ ಬಹುದೂರದ ಹರಿದ್ವಾರದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿಸಿದರು. ಈ ಗುರುಕುಲದಲ್ಲಿ ಪಂಡಿತ್ ಜೀಯವರು ನಾಲ್ಕು ವೇದಗಳನ್ನು (ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ) ಅಮೂಲಾಗ್ರವಾಗಿ ಅಧ್ಯಯನ ಮಾಡಿ ನಿಜವಾದ ಅರ್ಥದಲ್ಲಿ ಚತುರ್ವೇದಿ ಎಂಬ ಹೆಸರನ್ನು ಗಳಿಸಿ ಪ್ರಸಿದ್ಧರಾದರು. ಇಷ್ಟವಾದದ್ದೇ ಮುಖ್ಯವೋ ? ಮುಖ್ಯವಾದದ್ದು ಇಷ್ಟವಾಗಲೇಬೇಕೊ ? ಎರಡೂ ಮುಖ್ಯವಾದರೆ ಎರಡೂ ಇಷ್ಟವಾಗಲೇಬೇಕೆ ? ಹಾಗಾದರೆ ಯಾವುದನ್ನು ಆರಿಸಿಕೊಳ್ಳಬೇಕು ? ಇದು ಇಕ್ಕಟ್ಟಿನ ಪ್ರಸಂಗವೇ ಸರಿ. ವ್ಯಕ್ತಿಯು ಮುಖ್ಯವೊ, ಹಳ್ಳಿಗರು ಮುಖ್ಯವೊ ? ವ್ಯಕ್ತಿಗೆ ನೆರವಾಗಿ ಆತನ ಸೇವೆಯಲ್ಲಿ ನಿರತರಾಗಿರುವುದು ಇಷ್ಟವೊ, ಹಳ್ಳಿಗರೊಡನೆ ಇದ್ದು ಅವರ ಜೊತೆ ಕೆಲಸ ಮಾಡುವುದು ಇಷ್ಟವೊ ? ಇದು ಇಕ್ಕಟ್ಟಿನ ಪ್ರಸಂಗ.
ನಾವೆಲ್ಲ ಭಾರತ ದೇಶದ ಪ್ರಜೆಗಳು. ಈ ನಮ್ಮ ದೇಶದಲ್ಲಿ ಭ್ರಷ್ಟಾಚಾರ, ಸಾಮಾಜಿಕ ಅನ್ಯಾಯ, ಸಾಮಾಜಿಕ ಅಸಮಾನತೆ. ನಮ್ಮ ಕಣ್ಣ ಮುಂದೆಯೇ ರಾಜರೋಷವಾಗಿ ನಡೆಯುತ್ತಿದ್ದರು ನಮಗೆ ಅದರ ಪರಿವೇ ಇಲ್ಲದೆ ಮೂಕ ಪ್ರೇಕ್ಷರಂತೆ ನೋಡುತ್ತಿರುವುದು ಮೂರ್ಖತನವೇ ಸರಿ. ಇಂದಿನ ಸರ್ಕಾರಿ ಶಾಲೆಯ ಬಗ್ಗೆ, ಸರ್ಕಾರಿ ಶಿಕ್ಷಕರಿಗೆ ಇರುವ ಕಾಳಜಿ ಬಗ್ಗೆ ಹೇಳ ತೀರದಷ್ಟು. ಅಂದರೆ, ಸರ್ಕಾರಿ ಸಂಬಂಳವನ್ನು ಪಡೆದು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡಿಸುವುದು ಸಾಮಾಜಿಕ ನ್ಯಾಯಕ್ಕೆ, ಸಾಮಾಜಿಕ ಸಮಾನತೆಗೆ ಧಕ್ಕೆ ತಂದಂತಲ್ಲವೇ?
ಮುನ್ನುಡಿ:-
ಅರ್ಪಿತಾಳ ಕಥೆಯಲ್ಲಿ ಸಮಾಜದಲ್ಲಿ ತುಂಬಾ ಹಿಂಸೆಗೊಳಪಟ್ಟ ಒಬ್ಬ ತಾಯಿಯ ಮಗನನ್ನು ದಂಪತಿಗಳು ದತ್ತು ತೆಗೆದುಕೊಂಡು ಆ ಮಗುವಿನ ಒಳ್ಳೆಯ ಭವಿಷ್ಯಕ್ಕೆ ದಾರಿಯಾದರು. ಇನ್ನೊಂದು ಮಗುವನ್ನು ದತ್ತು ತೆಗೆದುಕೊಂಡು ಹೆಚ್.ಐ.ವಿ ಇರಬಹುದು ಎಂದು ತಿಳಿದರೂ ಎದೆ ಗುಂದದೆ, ಮಗುವನ್ನು ತಿರಸ್ಕರಿಸದೆ, ಮತ್ತೆ ಒಮ್ಮೆ ಪರೀಕ್ಷೆ ಮಾಡಿಸಿ, ಪ್ರೀತಿಯ ಸೆಲೆ ಹರಿಸಿದರು. ಇದೇ ರೀತಿ ಹೆತ್ತ ತಾಯಂದಿರು ತ್ಯಜಿಸಿದ ಮಕ್ಕಳಿಗೆ ಇಂತಹ ಮನೆಯೇ ತೃಪ್ತಿಕರ. ಕುಟುಂಬದ ಪ್ರೀತಿ ಸಿಕ್ಕಿ ಅನಾಥರಾಗದೆ ಬೆಳೆದರೆ ಎಷ್ಟೋ ಮಕ್ಕಳು ಬೀದಿಯ ಪಾಲಾಗಲಾರರು ಅಲ್ಲವೆ? ಮದುವೆಗೆ ಗೆಳತಿಯ ಆಮಂತ್ರಣ ಬಂದಿತ್ತು. ಆ ಮದುವೆ ಶುಭದಿನ ಹೊಸ ಜಗತ್ತೊಂದನ್ನು ಚಿತ್ರಪಟದಲ್ಲಿ ಮುದ್ರೆಯೊತ್ತುತ್ತದೆ ಅಂತ ತಿಳಿದಿರಲಿಲ್ಲ. ಜೀವವಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಕವಚವೊಂದು ಬದ್ಧತೆಯನ್ನು ನಿರ್ಮಿಸಿ ಕೊಡುತ್ತದೆ ಅಂತ ಗೊತ್ತಿತ್ತು. ಅದನ್ನು ಮೀರಿ ಮನುಷ್ಯನ ಮನಸ್ಸಿಗೇ ಸವಾಲೊಡ್ಡುವ ಶಾರೀರಿಕ ತಲ್ಲಣದ ಸನ್ನಿವೇಶಕ್ಕೆ ಎದೆಯನ್ನೊಮ್ಮೆ ಮುಟ್ಟಿ ನೋಡುತ್ತೇನೆ. ಹಸಿವಿನ ಪ್ರಪಂಚದ ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗುತ್ತೇನೆ. ಈ ಕಡಲ ಅಲೆಗಳಲ್ಲಿ ದಡ ಸೇರಲು ಹವಣಿಸುವ ಪುಟ್ಟ ದೋಣೆಯೆಂದು ಗೊತ್ತಿರಲಿಲ್ಲ. ಅಲೆಗಳು ಹಾಗೇ ಬಡಿಯುತ್ತಲೇ ಇವೆ... ತಡಿಯಲ್ಲಿ ಮೂಡಿಸಿದ ಹೆಜ್ಜೆಗಳ ಅಳಿಸುತ್ತಲೇ ಇವೆ...! ಹೆಜ್ಜೆಗಳು ಮೂಡುತ್ತಲೇ ಇವೆ...
ದಿನಾಂಕ 18 ಸೆಪ್ಟೆಂಬರ್ 2011 ರ ಭಾನುವಾರ ಸಿ.ಎಮ್.ಆರ್ ಕಾಲೇಜಿನ ದ್ವೀತಿಯ ವರ್ಷದ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳುಆಧುನಿಕತೆಯ ತುಳಿತಕ್ಕೊಳಗಾದ ಸೋಲಿಗೇರಿ ಬುಡಕಟ್ಟು ಸಮುದಾಯದ ಪರಿಸ್ಥಿತಿಯನ್ನು ಅಧ್ಯಯಿಸಲು ಸೋಲಿಗೇರಿ ಗ್ರಾಮಕ್ಕೆಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಆದ ಅನುಭವವನ್ನು ಈ ಲೇಖನದ ಮೂಲಕ ಹಂಚಿಕೊಂಡಿದ್ದಾರೆ. ಈ ಸಮಾಜವೇ ಹೀಗೆ ಅನಿಸುತ್ತೆ. ಕೆಲವರ ಕೂಗಿಗೆ ಇಲ್ಲಿ ಬೆಲೆಯೇ ಇಲ್ಲ. ನೋವಿಗೆ ಸ್ಪಂದನೆಯಂತೂ ಇಲ್ಲವೇ ಇಲ್ಲ. ಆ ಕೂಗು ಅಕ್ಷರಶಃ ಅರಣ್ಯರೋದನ. ಕೂಗು ಕಿವಿಗೆ ಬಿದ್ದರೂ ಜಾಣಕಿವುಡು. ನೋವು ಎದೆ ಹಿಂಡಿದರೂ 'ದಿನಾ ಸಾಯೋರಿಗೆ ಅಳೋರ್ ಯಾರ್ರೀ' ಎಂಬ ತಿರಸ್ಕಾರ ಮನೋಭಾವ. ಈ ಮಾತು ನೂರು ಪ್ರತಿಶಃ ಅನ್ವಯವಾಗುವುದು, ಕನಕಪುರ ತಾಲ್ಲೂಕಿನ ಸಾತನೂರಿನ ದಕ್ಷಿಣಕ್ಕಿರುವ ಕಾಡಂಚಿನ ಗ್ರಾಮ ಸೋಲಿಗೇರಿಗೆ....
ವಿಶ್ವ ಇಂದು ಎಷ್ಟೊಂದು ಪ್ರಭಾವಿ ಮಹಿಳೆಯರನ್ನು ಕಂಡಿದೆ, ಮುಖ್ಯವಾಗಿ ಅಮೇರಿಕದ ಹಿಲರಿ ಕ್ಲಿಂಟನ್, ದಿ|| ಇಂದಿರಾಗಾಂಧಿ, ಜರ್ಮನಿಯ ಚಾನ್ಸುಲರ್ ಏಂಜಲಾ ಮರ್ಕೆಲಾ, ಶ್ರೀಲಂಕಾದ ದಿ|| ಮಾಜಿ ಅಧ್ಯಕ್ಷೆ ಕುಮಾರಿ ಬಂಡಾರಿ ನಾಯಕೆ, ಪೆಪ್ಸಿ-ಕೋಕ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಮುಖ್ಯಸ್ಥೆ ಇಂದಿರಾನೂಯಿ, ಪ್ರಸ್ತುತ ಆಸ್ಟ್ರೇಲಿಯದ ಮೊದಲ ಮಹಿಳಾ ಪ್ರಧಾನಮಂತ್ರಿ ಜೂಲಿಯ್ ಗಿಲಾರ್ಡ್. ಹೀಗೆ ಅನೇಕ ಪ್ರಭಾವಿ ಮಹಿಳೆಯರನ್ನು ಪ್ರಪಂಚವು ಕಂಡಿದೆ, ಆದರೆ ಈ ಮೇಲಿನ ಮಹಿಳಾ ಪ್ರಮುಖರು ಒಂದು ವಂಶಪಾರಂಪರ್ಯವಾಗಿ ಅಧಿಕಾರ ಹೊಂದಿದವರು. ಇನ್ನು ಕೆಲವರು ಹಣಕಾಸಿನ ಪ್ರಾಬಲ್ಯದಿಂದ ಪ್ರಪಂಚದಲ್ಲಿ ತಮ್ಮ ಛಾಪನ್ನು ಮೂಡಿಸಿದವರು. ಈ ದಿನ ನಾವು ಮಾತಾನಾಡುತ್ತಿರುವುದು ಈ ಮೇಲಿನ ಮಹಿಳಾ ಪ್ರಮುಖರ ಬಗ್ಗೆಯಲ್ಲ. ಇವತ್ತು ನಾವು ಪ್ರಪಂಚದ ಕಗ್ಗತ್ತಲೆಯ ನಾಡು ಎಂದು ಕರೆಯುವ ಆಫ್ರಿಕ ಖಂಡದ ಪುಟ್ಟ ಹಾಗೂ ಬಡ ರಾಷ್ಷ್ರವಾದ ಕೀನ್ಯಾ ದೇಶದ ಬಗ್ಗೆ ನಾವೆಲ್ಲಾ ಕೇಳಿದವರು. 21 ನೆಯ ಶತಮಾನದಲ್ಲಿ ಈ ಒಂದು ದೇಶದ ಕತ್ತಲನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿಯಂತೆ ಉದಯಿಸಿ ಬಂದ ಧೀರ ಮಹಿಳೆಯ ಹೆಸರೆ ಶ್ರೀಮತಿ ವಂಗಾರಿ ಮಾಥಾಯಿ. ಅಷ್ಟಕ್ಕೂ ಈ ವಂಗಾರಿ ಮಾಥಾಯಿ ಯಾರು ಅಂತೀರಾ? ಕೀನ್ಯಾ ದೇಶದಲ್ಲಿ ಜನಿಸಿದ ಸಾಮಾನ್ಯ ಮಹಿಳೆಯಾದವಳು ಇಂದು ಅಸಾಧಾರಣವಾದ ಕೆಲಸ ಮಾಡಿದ್ದಾಳೆ.
ಪೀಠಿಕೆ
ನಾವು ಭಾರತದ ಇತಿಹಾಸ ಪುಟಗಳನ್ನು ಒಮ್ಮೆ ಪರಾಮರ್ಶಿಸಿದರೆ, ನಮಗೆ ಭಾರತ ರಾಷ್ಟ್ರ ಬೆಳೆದು ಬಂದಂತಹ ಅನೇಕ ಹಂತಗಳು ನಮ್ಮ ಕಣ್ಣು ಮುಂದೆ ಹಾದು ಹೋಗುತ್ತವೆ. ಭಾರತ ರಾಷ್ಟ್ರಕ್ಕೆ ಜಗತ್ತಿನಲ್ಲಿ ವಿಶೇಷವಾದ ಮನ್ನಣೆ ಇದೆ. ಇದಕ್ಕೆ ಪ್ರಮುಖವಾದ ಕಾರಣವೆಂದರೆ ನಮ್ಮ ರಾಷ್ಟ್ರ ಹೊಂದಿರುವ ಶ್ರೀಮಂತ ಸಂಸ್ಕೃತಿ. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ರಾಷ್ಟ್ರ. ಇದಕ್ಕೆ ಪುಷ್ಟಿ ನೀಡುವಂತೆ ನಮ್ಮ ದೇಶದಲ್ಲಿ ಸರ್ವಧರ್ಮಗಳಿಗೂ (ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಪಾರ್ಸಿ, ಇತ್ಯಾದಿ) ಸಂವಿಧಾನಾತ್ಮಕವಾಗಿ ಮಾನ್ಯತೆ ಇರುವುದು. ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ ಇವುಗಳ ಹಿನ್ನಲೆಯಲ್ಲಿ ಜಗತ್ತಿನ ಕೈಗಾರಿಕಾ ಕ್ಷೇತ್ರದಲ್ಲಿ ಬದಲಾವಣೆಗಳ ವೇಗ ಮತ್ತು ತೀವ್ರತೆ ಹೆಚ್ಚುತ್ತಿವೆ. ಇವುಗಳಿಂದ ಉಂಟಾಗುತ್ತಿರುವ ಒತ್ತಡಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಂಸ್ಥೆಗಳು ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಇವುಗಳಲ್ಲಿ ಕೈಸನ್ (ನಿರಂತರ ಉತ್ತಮೀಕರಣ) ಜಸ್ಟ್ ಇನ್ ಟೈಮ್ (ಬೇಕಾದ ವಸ್ತುಗಳು ಬೇಕಾದ ಪ್ರಮಾಣದಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಖಾನೆಗೆ ಸರಬರಾಜಾಗುವುದು) ಕ್ವಾಲಿಟಿ ಸರ್ಕಲ್ಸ್ (ಗುಣಮಟ್ಟ ವೃತ್ತಗಳು) ಹಾಗೂ 5S (ಐದು ಎಸ್) ಮುಖ್ಯವಾದ ಕೆಲವು. ಇವೆಲ್ಲವೂ ರೂಪಿತವಾದದ್ದು ಜಪಾನಿನಲ್ಲಿ. ಈಗ ಪ್ರಪಂಚದೆಲ್ಲೆಡೆಯಲ್ಲೂ ಬಳಕೆಯಲ್ಲಿವೆ. 5S ಮುಖ್ಯಾಂಶಗಳನ್ನು ಸಂಕ್ಷಿಪ್ತವಾಗಿ ಕೆಳಗೆ ಹೇಳಿದೆ.
ಮನುಷ್ಯನಿಂದು ತನ್ನ ಜೀವನದ ಹೋರಾಟದಲ್ಲಿ ಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಸಂಘರ್ಷದ ಲಕ್ಷಣವೇ ಅಶಾಂತಿ, ಅಸಮಾಧಾನ. ನಾವು ಯಾವುದನ್ನು ಪಡೆಯುವುದಕ್ಕೋಸ್ಕರ ಸಂಘರ್ಷ ನಡೆಸುತ್ತೇವೆಯೊ ಅದು ಕೊನೆಗೆ ದಕ್ಕಿದರೂ ಅದನ್ನು ಅನುಭವಿಸುವ ಮನಃಸ್ಥಿತಿಯಲ್ಲಿ ನಾವಿರುವುದಿಲ್ಲ. ಯುದ್ಧದ ವಿಷಯದಲ್ಲಿ ಒಂದು ಮಾತಿದೆ- ಸತ್ತವ ಗೆದ್ದ, ಗೆದ್ದವ ಸೋತ ಎಂಬುದಾಗಿ. ಯುದ್ಧ ಗೆದ್ದ ನಂತರದ ಶಾಂತಿ ಎಂದರೆ ಅದು ಸ್ಮಶಾನಶಾಂತಿಯೇ ವಿನಾ ನೈಜ ಶಾಂತಿ ಅಲ್ಲ.
ಸಮಾಜದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಮೂಲ ಮಂತ್ರ ಶಿಕ್ಷಣ ಎಂದರೆ ತಪ್ಪಾಗಲಾರದು. ಸಮಸ್ಯೆಗಳ ಆಗರವೇ ಆಗಿರುವಂತಹ ಸಮಾಜವನ್ನು ತಿದ್ದಿ ತೀಡಿ ಅಲ್ಲಿ ಬದಲಾವಣೆಯನ್ನು ಕಾಣಬೇಕೆಂಬುದು ಎಲ್ಲರ ಆಶಯ. ಸಮಾಜದಲ್ಲಿನ ಪ್ರತಿಯೊಂದು ಸ್ತರದ ಅಭಿವೃದ್ಧಿ ದೇಶದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂಬುದನ್ನು ನಾವು ಮೊದಲಿನಿಂದಲೂ ಅರಿತಿದ್ದೇವೆ. ಈ ಅಭಿವೃದ್ಧಿಯನ್ನು ಸಾಧಿಸಬೇಕಾದಲ್ಲಿ ಶಿಕ್ಷಣದ ಪಾತ್ರ ಅತಿಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಸಮಾಜಕಾರ್ಯ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಅರಿಯಬೇಕಿದೆ.
ಈ ವಿಶಿಷ್ಟ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ತಮ್ಮ ವೃತ್ತಿಪರತೆಯನ್ನು ಮಾದರಿ ಹಿನ್ನೆಲೆಯುಳ್ಳವರಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ದಕ್ಷ ಹಾಗೂ ಕ್ರಿಯಾಶೀಲ ಕುಲಸಚಿವ ಡಾ.ರಂಗನಾಥ್ ಅವರೆ, ಡಾ.ಎಚ್.ಎಂ. ಮರುಳಸಿದ್ಧಯ್ಯ ಅವರನ್ನು ಕುರಿತಾದ 'ಸಮಾಜಕಾರ್ಯದ ಕಣಸುಗಾರ' ಕೃತಿಯನ್ನು ಬಿಡುಗಡೆ ಮಾಡಿ, ಈಗಾಗಲೇ ಮೌಲ್ಯಯುತ ಮಾತುಗಳನ್ನಾಡಿದ ಗಾಂಧೀವಾದಿಗಳು, ಗಾಂಧಿ ವಿಚಾರಗಳು, ಮೌಲ್ಯಗಳು ಹಾಗೂ ಆಚರಣೆಗೆ ಬದ್ಧರಾಗಿರುವ ಹಿರಿಯ ಸರ್ವೋದಯ ನಾಯಕರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿರುವ ಸನ್ಮಾನ್ಯ ಎಚ್.ಎಸ್. ದೊರೆಸ್ವಾಮಿ ಅವರೇ, ಈ ಸಮಾರಂಭದ ಪ್ರಮುಖ ಕೇಂದ್ರ ಬಿಂದುವಾಗಿರುವ, ಯೋಗ ಕೂಡಿಬಂದಿದ್ದರೆ ಯಾವುದಾದರೂ ಒಂದು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆಸಲ್ಲಿಸುವ ಎಲ್ಲ ಅರ್ಹತೆ, ಸಾಮರ್ಥ್ಯ ಹಾಗೂ ಯೋಗ್ಯತೆವುಳ್ಳರಾಗಿರುವ ನಾಡಿನ ಹೆಸರಾಂತ ಸಮಾಜಶಾಸ್ತ್ರಜ್ಞರೂ ಸಮಾಜಕಾರ್ಯ ಜೀವಂತ ದಂತಕತೆಯೂ ಆಗಿರುವ ಸನ್ಮಾನ್ಯ ಡಾ.ಎಚ್.ಎಂ.ಮರುಳಸಿದ್ಧಯ್ಯನವರೇ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬಳು ಮಹಿಳೆ ಇರುತ್ತಾಳೆ ಎಂಬುದರ ದ್ಯೋತಕವಾಗಿ ಎಚ್.ಎಂ.ಎಂ.ಅವರ ಬೆನ್ನೆಲುಬಾಗಿರುವ ಹಿರಿಯ ಸಹೋದರಿ ಶ್ರೀಮತಿ ಶಾಂತವೀರಮ್ಮನವರೇ.
ಮಾನವನಿಗೆ ದೇಹ ಅಥವಾ ಶರೀರದ ಸ್ಥಿತಿ ಉತ್ತಮವಾಗಿರಬೇಕು, ಜೊತೆಗೆ ಮನಸ್ಸೂ ಉತ್ತಮವಾಗಿರಬೇಕು. ದೇಹ ಮತ್ತು ಮನಸ್ಸು ಎರಡೂ ಉತ್ತಮವಾಗಿರಬೇಕಾದರೆ, ಆತನ ಇಲ್ಲವೆ ಆಕೆಯ ಆರೋಗ್ಯ ತುಂಬಾ ಚೆನ್ನಾಗಿರಬೇಕು. ರೋಗ ಬರದಂತೆ ತಡೆಯಬೇಕು. ಅಕಸ್ಮಾತ್ ರೋಗ ಬಂದರೆ ನಿವಾರಣೆ ಮಾಡಬೇಕು ಇದು ಮಾನವನ ಆರೋಗ್ಯಕ್ಕೆ ಸಂಬಂಧಿಸಿದ ಸೂತ್ರವಾಗಿದೆ.1 ಇದನ್ನೇ ಆರೋಗ್ಯವೇ ಭಾಗ್ಯ, ಆರೋಗ್ಯವೇ ಮಹಾಭಾಗ್ಯ, ಆರೋಗ್ಯವೇ ಸಂಪತ್ತು ಎಂಬುದಾಗಿ ಹೇಳಲಾಗುತ್ತಿದೆ. ಮಾನವನ ಬದುಕಿನಲ್ಲಿ ಆರೋಗ್ಯ ಭಾಗ್ಯಕ್ಕಿಂತ ಮೀಗಿಲಾದದ್ದು ಬೇರೊಂದಿಲ್ಲ. ಇದಕ್ಕೆ ಮಹತ್ತರ ಸ್ಥಾನವಿದೆ.
ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಯು ದೂರದೃಷ್ಟಿಯ ಪ್ರತೀಕ. ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಆಡಳಿತದಲ್ಲಿ ಪಾಲ್ಗೊಳ್ಳುತ್ತಾ, ತಮ್ಮ ಅಗತ್ಯಗಳನ್ನು ತಾವೇ ಒಟ್ಟಾಗಿ ಪೂರೈಸಿಕೊಳ್ಳಬೇಕೆಂಬ ಉದ್ದೇಶದಿಂದ, ಸ್ಥಳೀಯ ಸರ್ಕಾರಗಳೆಡೆ ಹೆಚ್ಚು ಒಲವನ್ನು ತೋರಿದರು. ಜನರ ಸಹಭಾಗಿತ್ವವೇ ನಿಜವಾದ ಅಭಿವೃದ್ಧಿಯೆಂಬುದನ್ನು ನಂಬಿ, ವಿದ್ಯಾವಂತರನ್ನು ಈ ಕೆಲಸಕ್ಕೆ ತೊಡಗಿಸುವ ಕಾರ್ಯವನ್ನು ಗಾಂಧೀಜಿಯೋಪಾದಿಯಾಗಿ ವಿವೇಕಾನಂದ, ಜೆ.ಪಿ.ವಿನೋಬಾ, ಅಂಬೇಡ್ಕರ್ರೆಲ್ಲರೂ ಒಮ್ಮತದಿಂದ ಪ್ರಯತ್ನಿಸಿದರು. ಈ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನು ತಾವೂ ನಡೆಸಿ, ಇತರರಿಗೂ ಪ್ರೋತ್ಸಾಹಿಸಿರುವುದು ಆ ಹಿರಿಯರ ಹಿರಿಮೆಯನ್ನು ಸಾರುತ್ತದೆ. ಇವರ ನಡೆ ನುಡಿಗಳಿಂದ ಪ್ರೇರಣೆ ಹೊಂದಿ, ತಮ್ಮ ಗ್ರಾಮ ಪಂಚಾಯ್ತಿಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಹಲವು ಉದಾಹರಣೆಗಳಲ್ಲಿ, ಪಂಚಾಯ್ತಿ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಂಡು, ಹಳ್ಳಿಯನ್ನು ಒಗ್ಗೂಡಿಸಿ, ಸಾಮಾಜಿಕ ಬದಲಾವಣೆಯನ್ನು ತಂದ, ತಮಿಳುನಾಡಿನ ಇಳಂಗೋ ರಾಮಸ್ವಾಮಿಯವರ ಕುತುಂಬಾಕಂ ಗ್ರಾಮ ವಿಶೇಷ. ಅಲ್ಲಿನ ಪ್ರಯೋಗಗಳ ಬಗೆಗಿನ ಪಕ್ಷಿನೋಟ ಇಲ್ಲಿದೆ.
ಡಾ. ವಾಸುದೇವ ಪಾಂಡುರಂಗಿ ನಡೆದು ಬಂದ ದಾರಿ
ಜನನ : ಜನವರಿ 05, 1930 ಸ್ಥಳ : ರಾಣೇಬೆನ್ನೂರು ತಂದೆ : ರಾಮಾಚಾರ್ಯ ತಾಯಿ : ಸೀತಾಬಾಯಿ ಸಹೋದರರು : ಮೂರು ಸಹೋದರಿಯರು: ನಾಲ್ಕು ವಿದ್ಯಾಭ್ಯಾಸ : ಎಂ.ಡಿ. ಪ್ರಸೂತಿಶಾಸ್ತ್ರ- ಸ್ತ್ರೀರೋಗಶಾಸ್ತ್ರ (Obstetrics & Gynecology) ಮಕ್ಕಳು : ಮೂರು ಮಕ್ಕಳು. ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ. ಡಾ. ವಾಸುದೇವ ಪಾಂಡುರಂಗಿಯವರ ಜನನವಾದದ್ದು 05 ನೆಯ ಜನವರಿ 1930 ರಂದು ಆಗಿನ ಧಾರವಾಡ ಜಿಲ್ಲೆಯ ರಾಣೇಬೆನ್ನೂರಿನಲ್ಲಿ. ತಂದೆ ಮೂಲತಃ ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾಗಿದ್ದ ಕಾರಣ ಬಾಲ್ಯದಲ್ಲಿಯೆ ಸಂಸ್ಕೃತ ಅಭ್ಯಾಸ ನೀಡಲಾಯಿತು. ಇವರ ಪ್ರಾಥಮಿಕ ಶಿಕ್ಷಣ ರಾಣೇಬೆನ್ನೂರಿನಲ್ಲಿ ಮುಗಿಸಿ ಕಾಲೇಜಿಗಾಗಿ ಧಾರವಾಡಕ್ಕೆ ತೆರಳಿದರು. ನಂತರ 1949 ರಲ್ಲಿ ಗ್ರಾಂಟ ಮೆಡಿಕಲ್ ಕಾಲೇಜು ಮುಂಬೈ ಸೇರಿ 1954 ರಲ್ಲಿ ವೈದ್ಯಕೀಯ (MBBS) ಪದವಿ ಗಳಿಸಿದರು. ಅದಾದ ಬಳಿಕ ಅದೇ ಗ್ರಾಂಟ ಮೆಡಿಕಲ್ ಕಾಲೇಜ್ ಮುಂಬೈ ಮುಖಾಂತರ ಪ್ರಸೂತಿಶಾಸ್ತ್ರ- ಸ್ತ್ರೀರೋಗಶಾಸ್ತ್ರಗಳಲ್ಲಿ ಎಂ.ಡಿ ಪದವಿ ಪಡೆದರು. ಕನ್ನಡದ ಮೇರುಕೃತಿ, ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗವು ಜೀವನಾನುಭವದ ಸಾರವಾಗಿದ್ದು ಸಕಲರಿಗೂ ಒಳಿತನ್ನು ಬಯಸುವ ಕೃತಿಯಾಗಿದೆ. ಎಲ್ಲಾ ವೇದಗಳ ಸಾರಕ್ಕೆ, ಜೀವನಾನುಭವಗಳನ್ನು ಬೆರೆಸಿ ಮಾಡಿದ ಅಮೃತವೇ ಮಂಕುತಿಮ್ಮನ ಕಗ್ಗ. ಇಲ್ಲಿನ ಹಿತನುಡಿಗಳನ್ನು ಅರ್ಥೈಸಿಕೊಂಡು, ಜೀವನದಲ್ಲಿ ಅಳವಡಿಸಿಕೊಂಡರೆ, ಜೀವನದಲ್ಲಿನ ಬಹುತೇಕ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಆಂದೋಲನಗಳು ತಾರಕಕ್ಕೇರುತ್ತಿರುವ ಸಂದರ್ಭದಲ್ಲೇ ಮೈಸೂರು ನಗರಕ್ಕೆ ಆನೆಗಳು ನುಗ್ಗಿ ನಗರದ ನಾಗರಿಕರನ್ನು ಭಯಭೀತಗೊಳಿಸಿವೆ. ಅರೇ, ಇವೆರಡಕ್ಕೂ ಯಾವ ಸಂಬಂಧ ಎಂದು ವಿಚಿತ್ರ ರಾಗದಲ್ಲಿ ಆಶ್ಚರ್ಯದ ಧ್ವನಿ ಎತ್ತುವವರೇ ಹೆಚ್ಚೆಂಬುದು ನನಗೆ ಗೊತ್ತು. ಹೇಗೂ ಮುಖ್ಯಮಂತ್ರಿ ಯಡಿಯೂರಪ್ಪನವರೇ, ಆನೆಗಳ ಹಾವಳಿಯನ್ನು ಇನ್ನು ಮುಂದೆ ಗಂಭೀರ ಸಮಸ್ಯೆಯೆಂದು ಪರಿಗಣಿಸುವುದಾಗಿ ಭರವಸೆ ನೀಡಿದ್ದಾರಲ್ಲಾ? ಇನ್ನು ನಮ್ಮ ಅರಣ್ಯ ಮಂತ್ರಿಯವರು ಆನೆಗಳು ನಗರ ಪ್ರವೇಶಿಸದಂತೆ ತಡೆಯಲು ವಿಶೇಷ ಕಾರ್ಯಪಡೆ ರಚಿಸುವುದಾಗಿಯೂ ಘೋಷಿಸಿದ್ದಾರಲ್ಲಾ?. ಆದರೆ, ಜನರ ವಿಚಿತ್ರ ರೀತಿಯ ಆಶ್ಚರ್ಯದಂತೆಯೇ ಈ ಇಬ್ಬರ ಈ ಭರವಸೆ ಮತ್ತು ಘೋಷಣೆಗಳೂ ಅಸಂಬದ್ಧ, ಹಾಸ್ಯಾಸ್ಪದ ಎನ್ನದೆ ವಿಧಿಯಿಲ್ಲ. ಭಯೋತ್ಪಾದಕರ ವಿರುದ್ಧ ಕಟ್ಟೆಚ್ಚರದ ಮಾತಾಯಿತು, ವಿಶೇಷ ಕಮಾಂಡೋ ಪಡೆಗಳ ರಚನೆಯೂ ಆಯಿತು. ಆದರೆ ಭಯೋತ್ಪಾದನೆಯ ಭಯ ಮತ್ತು ಹಾವಳಿ ನಿಂತಿದೆಯೇ? ಈಗ ಆನೆಗಳ ಹಾವಳಿ ವಿರುದ್ಧ ಕಟ್ಟೆಚ್ಚರದ ಮತ್ತು ವಿಶೇಷ ಕಾರ್ಯಪಡೆಯ ಮಾತು! ಇದರಿಂದ ಕಾರ್ಯತಃ ಏನಾದರೂ ಪ್ರಯೋಜನವಾದೀತೇ? ಎಲ್ಲ ಕಾಡುಗಳ ಅಥವಾ ನಗರಗಳ ಸುತ್ತ ಹಗಲೂ ರಾತ್ರಿ ಕಾವಲು ಪಡೆಗಳನ್ನು ನಿಯೋಜಿಸಲಾಗುವುದೇ? ಅದು ಸಾಧ್ಯವೇ? ಅದೇನೇ ಇರಲಿ, ಜನ ಜೀವನ ಯಾವಾಗಲೂ ಕಟ್ಟೆಚ್ಚರದಲ್ಲೇ, ವಿಶೇಷ ಪಡೆಗಳ ಕಣ್ಗಾವಲಿನಲ್ಲೇ ಇರುವಂತಾಗುವುದು ಯಾವುದೇ ಆರೋಗ್ಯಕರ ಸಮಾಜದ, ಅದೂ ಜಾಗತಿಕ ಶಕ್ತಿಯಾಗುವತ್ತ ಸಮೃದ್ಧವಾಗಿ ಬೆಳೆಯುತ್ತಿದೆಯೆಂದು ಹೇಳಲಾಗುವ ನಮ್ಮ ಸಮಾಜದ ಒಳ್ಳೆಯ ಲಕ್ಷಣವೇ?
|
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
Stay updated and informed by joining our WhatsApp group for HR and Employment Law Classes - Every Fortnight.
The Zoom link for the sessions will be shared directly in the group. |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |