ಡಾ.ಹೆಚ್. ನರಸಿಂಹಯ್ಯನವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು; ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು; ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾಗಿದ್ದರು; ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಬಹು ಮುಖ್ಯವಾಗಿ ವೈಜ್ಞಾನಿಕ ಮನೋಭಾವವನ್ನು ಹೊಂದಿದ್ದ ಇವರು ರಾಷ್ಟ್ರೀಯ ಸೇವಾಯೋಜನೆಯ ಚೇತನರಾಗಿದ್ದರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯ ವಿಭಾಗದ ಸ್ಥಾಪನೆ ಹಾಗೂ ಬೆಳವಣಿಗೆಗೆ ಶ್ರಮಿಸಿದರು.
0 Comments
ಪೀಠಿಕೆ
ನಾವು ಭಾರತದ ಇತಿಹಾಸ ಪುಟಗಳನ್ನು ಒಮ್ಮೆ ಪರಾಮರ್ಶಿಸಿದರೆ, ನಮಗೆ ಭಾರತ ರಾಷ್ಟ್ರ ಬೆಳೆದು ಬಂದಂತಹ ಅನೇಕ ಹಂತಗಳು ನಮ್ಮ ಕಣ್ಣು ಮುಂದೆ ಹಾದು ಹೋಗುತ್ತವೆ. ಭಾರತ ರಾಷ್ಟ್ರಕ್ಕೆ ಜಗತ್ತಿನಲ್ಲಿ ವಿಶೇಷವಾದ ಮನ್ನಣೆ ಇದೆ. ಇದಕ್ಕೆ ಪ್ರಮುಖವಾದ ಕಾರಣವೆಂದರೆ ನಮ್ಮ ರಾಷ್ಟ್ರ ಹೊಂದಿರುವ ಶ್ರೀಮಂತ ಸಂಸ್ಕೃತಿ. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ರಾಷ್ಟ್ರ. ಇದಕ್ಕೆ ಪುಷ್ಟಿ ನೀಡುವಂತೆ ನಮ್ಮ ದೇಶದಲ್ಲಿ ಸರ್ವಧರ್ಮಗಳಿಗೂ (ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಪಾರ್ಸಿ, ಇತ್ಯಾದಿ) ಸಂವಿಧಾನಾತ್ಮಕವಾಗಿ ಮಾನ್ಯತೆ ಇರುವುದು. ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ ಇವುಗಳ ಹಿನ್ನಲೆಯಲ್ಲಿ ಜಗತ್ತಿನ ಕೈಗಾರಿಕಾ ಕ್ಷೇತ್ರದಲ್ಲಿ ಬದಲಾವಣೆಗಳ ವೇಗ ಮತ್ತು ತೀವ್ರತೆ ಹೆಚ್ಚುತ್ತಿವೆ. ಇವುಗಳಿಂದ ಉಂಟಾಗುತ್ತಿರುವ ಒತ್ತಡಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಂಸ್ಥೆಗಳು ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಇವುಗಳಲ್ಲಿ ಕೈಸನ್ (ನಿರಂತರ ಉತ್ತಮೀಕರಣ) ಜಸ್ಟ್ ಇನ್ ಟೈಮ್ (ಬೇಕಾದ ವಸ್ತುಗಳು ಬೇಕಾದ ಪ್ರಮಾಣದಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಖಾನೆಗೆ ಸರಬರಾಜಾಗುವುದು) ಕ್ವಾಲಿಟಿ ಸರ್ಕಲ್ಸ್ (ಗುಣಮಟ್ಟ ವೃತ್ತಗಳು) ಹಾಗೂ 5S (ಐದು ಎಸ್) ಮುಖ್ಯವಾದ ಕೆಲವು. ಇವೆಲ್ಲವೂ ರೂಪಿತವಾದದ್ದು ಜಪಾನಿನಲ್ಲಿ. ಈಗ ಪ್ರಪಂಚದೆಲ್ಲೆಡೆಯಲ್ಲೂ ಬಳಕೆಯಲ್ಲಿವೆ. 5S ಮುಖ್ಯಾಂಶಗಳನ್ನು ಸಂಕ್ಷಿಪ್ತವಾಗಿ ಕೆಳಗೆ ಹೇಳಿದೆ.
ಮನುಷ್ಯನಿಂದು ತನ್ನ ಜೀವನದ ಹೋರಾಟದಲ್ಲಿ ಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಸಂಘರ್ಷದ ಲಕ್ಷಣವೇ ಅಶಾಂತಿ, ಅಸಮಾಧಾನ. ನಾವು ಯಾವುದನ್ನು ಪಡೆಯುವುದಕ್ಕೋಸ್ಕರ ಸಂಘರ್ಷ ನಡೆಸುತ್ತೇವೆಯೊ ಅದು ಕೊನೆಗೆ ದಕ್ಕಿದರೂ ಅದನ್ನು ಅನುಭವಿಸುವ ಮನಃಸ್ಥಿತಿಯಲ್ಲಿ ನಾವಿರುವುದಿಲ್ಲ. ಯುದ್ಧದ ವಿಷಯದಲ್ಲಿ ಒಂದು ಮಾತಿದೆ- ಸತ್ತವ ಗೆದ್ದ, ಗೆದ್ದವ ಸೋತ ಎಂಬುದಾಗಿ. ಯುದ್ಧ ಗೆದ್ದ ನಂತರದ ಶಾಂತಿ ಎಂದರೆ ಅದು ಸ್ಮಶಾನಶಾಂತಿಯೇ ವಿನಾ ನೈಜ ಶಾಂತಿ ಅಲ್ಲ.
ಸಮಾಜದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಮೂಲ ಮಂತ್ರ ಶಿಕ್ಷಣ ಎಂದರೆ ತಪ್ಪಾಗಲಾರದು. ಸಮಸ್ಯೆಗಳ ಆಗರವೇ ಆಗಿರುವಂತಹ ಸಮಾಜವನ್ನು ತಿದ್ದಿ ತೀಡಿ ಅಲ್ಲಿ ಬದಲಾವಣೆಯನ್ನು ಕಾಣಬೇಕೆಂಬುದು ಎಲ್ಲರ ಆಶಯ. ಸಮಾಜದಲ್ಲಿನ ಪ್ರತಿಯೊಂದು ಸ್ತರದ ಅಭಿವೃದ್ಧಿ ದೇಶದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂಬುದನ್ನು ನಾವು ಮೊದಲಿನಿಂದಲೂ ಅರಿತಿದ್ದೇವೆ. ಈ ಅಭಿವೃದ್ಧಿಯನ್ನು ಸಾಧಿಸಬೇಕಾದಲ್ಲಿ ಶಿಕ್ಷಣದ ಪಾತ್ರ ಅತಿಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಸಮಾಜಕಾರ್ಯ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಅರಿಯಬೇಕಿದೆ.
ಈ ವಿಶಿಷ್ಟ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ತಮ್ಮ ವೃತ್ತಿಪರತೆಯನ್ನು ಮಾದರಿ ಹಿನ್ನೆಲೆಯುಳ್ಳವರಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ದಕ್ಷ ಹಾಗೂ ಕ್ರಿಯಾಶೀಲ ಕುಲಸಚಿವ ಡಾ.ರಂಗನಾಥ್ ಅವರೆ, ಡಾ.ಎಚ್.ಎಂ. ಮರುಳಸಿದ್ಧಯ್ಯ ಅವರನ್ನು ಕುರಿತಾದ 'ಸಮಾಜಕಾರ್ಯದ ಕಣಸುಗಾರ' ಕೃತಿಯನ್ನು ಬಿಡುಗಡೆ ಮಾಡಿ, ಈಗಾಗಲೇ ಮೌಲ್ಯಯುತ ಮಾತುಗಳನ್ನಾಡಿದ ಗಾಂಧೀವಾದಿಗಳು, ಗಾಂಧಿ ವಿಚಾರಗಳು, ಮೌಲ್ಯಗಳು ಹಾಗೂ ಆಚರಣೆಗೆ ಬದ್ಧರಾಗಿರುವ ಹಿರಿಯ ಸರ್ವೋದಯ ನಾಯಕರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿರುವ ಸನ್ಮಾನ್ಯ ಎಚ್.ಎಸ್. ದೊರೆಸ್ವಾಮಿ ಅವರೇ, ಈ ಸಮಾರಂಭದ ಪ್ರಮುಖ ಕೇಂದ್ರ ಬಿಂದುವಾಗಿರುವ, ಯೋಗ ಕೂಡಿಬಂದಿದ್ದರೆ ಯಾವುದಾದರೂ ಒಂದು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆಸಲ್ಲಿಸುವ ಎಲ್ಲ ಅರ್ಹತೆ, ಸಾಮರ್ಥ್ಯ ಹಾಗೂ ಯೋಗ್ಯತೆವುಳ್ಳರಾಗಿರುವ ನಾಡಿನ ಹೆಸರಾಂತ ಸಮಾಜಶಾಸ್ತ್ರಜ್ಞರೂ ಸಮಾಜಕಾರ್ಯ ಜೀವಂತ ದಂತಕತೆಯೂ ಆಗಿರುವ ಸನ್ಮಾನ್ಯ ಡಾ.ಎಚ್.ಎಂ.ಮರುಳಸಿದ್ಧಯ್ಯನವರೇ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬಳು ಮಹಿಳೆ ಇರುತ್ತಾಳೆ ಎಂಬುದರ ದ್ಯೋತಕವಾಗಿ ಎಚ್.ಎಂ.ಎಂ.ಅವರ ಬೆನ್ನೆಲುಬಾಗಿರುವ ಹಿರಿಯ ಸಹೋದರಿ ಶ್ರೀಮತಿ ಶಾಂತವೀರಮ್ಮನವರೇ.
ಮಾನವನಿಗೆ ದೇಹ ಅಥವಾ ಶರೀರದ ಸ್ಥಿತಿ ಉತ್ತಮವಾಗಿರಬೇಕು, ಜೊತೆಗೆ ಮನಸ್ಸೂ ಉತ್ತಮವಾಗಿರಬೇಕು. ದೇಹ ಮತ್ತು ಮನಸ್ಸು ಎರಡೂ ಉತ್ತಮವಾಗಿರಬೇಕಾದರೆ, ಆತನ ಇಲ್ಲವೆ ಆಕೆಯ ಆರೋಗ್ಯ ತುಂಬಾ ಚೆನ್ನಾಗಿರಬೇಕು. ರೋಗ ಬರದಂತೆ ತಡೆಯಬೇಕು. ಅಕಸ್ಮಾತ್ ರೋಗ ಬಂದರೆ ನಿವಾರಣೆ ಮಾಡಬೇಕು ಇದು ಮಾನವನ ಆರೋಗ್ಯಕ್ಕೆ ಸಂಬಂಧಿಸಿದ ಸೂತ್ರವಾಗಿದೆ.1 ಇದನ್ನೇ ಆರೋಗ್ಯವೇ ಭಾಗ್ಯ, ಆರೋಗ್ಯವೇ ಮಹಾಭಾಗ್ಯ, ಆರೋಗ್ಯವೇ ಸಂಪತ್ತು ಎಂಬುದಾಗಿ ಹೇಳಲಾಗುತ್ತಿದೆ. ಮಾನವನ ಬದುಕಿನಲ್ಲಿ ಆರೋಗ್ಯ ಭಾಗ್ಯಕ್ಕಿಂತ ಮೀಗಿಲಾದದ್ದು ಬೇರೊಂದಿಲ್ಲ. ಇದಕ್ಕೆ ಮಹತ್ತರ ಸ್ಥಾನವಿದೆ.
ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಯು ದೂರದೃಷ್ಟಿಯ ಪ್ರತೀಕ. ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಆಡಳಿತದಲ್ಲಿ ಪಾಲ್ಗೊಳ್ಳುತ್ತಾ, ತಮ್ಮ ಅಗತ್ಯಗಳನ್ನು ತಾವೇ ಒಟ್ಟಾಗಿ ಪೂರೈಸಿಕೊಳ್ಳಬೇಕೆಂಬ ಉದ್ದೇಶದಿಂದ, ಸ್ಥಳೀಯ ಸರ್ಕಾರಗಳೆಡೆ ಹೆಚ್ಚು ಒಲವನ್ನು ತೋರಿದರು. ಜನರ ಸಹಭಾಗಿತ್ವವೇ ನಿಜವಾದ ಅಭಿವೃದ್ಧಿಯೆಂಬುದನ್ನು ನಂಬಿ, ವಿದ್ಯಾವಂತರನ್ನು ಈ ಕೆಲಸಕ್ಕೆ ತೊಡಗಿಸುವ ಕಾರ್ಯವನ್ನು ಗಾಂಧೀಜಿಯೋಪಾದಿಯಾಗಿ ವಿವೇಕಾನಂದ, ಜೆ.ಪಿ.ವಿನೋಬಾ, ಅಂಬೇಡ್ಕರ್ರೆಲ್ಲರೂ ಒಮ್ಮತದಿಂದ ಪ್ರಯತ್ನಿಸಿದರು. ಈ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನು ತಾವೂ ನಡೆಸಿ, ಇತರರಿಗೂ ಪ್ರೋತ್ಸಾಹಿಸಿರುವುದು ಆ ಹಿರಿಯರ ಹಿರಿಮೆಯನ್ನು ಸಾರುತ್ತದೆ. ಇವರ ನಡೆ ನುಡಿಗಳಿಂದ ಪ್ರೇರಣೆ ಹೊಂದಿ, ತಮ್ಮ ಗ್ರಾಮ ಪಂಚಾಯ್ತಿಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಹಲವು ಉದಾಹರಣೆಗಳಲ್ಲಿ, ಪಂಚಾಯ್ತಿ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಂಡು, ಹಳ್ಳಿಯನ್ನು ಒಗ್ಗೂಡಿಸಿ, ಸಾಮಾಜಿಕ ಬದಲಾವಣೆಯನ್ನು ತಂದ, ತಮಿಳುನಾಡಿನ ಇಳಂಗೋ ರಾಮಸ್ವಾಮಿಯವರ ಕುತುಂಬಾಕಂ ಗ್ರಾಮ ವಿಶೇಷ. ಅಲ್ಲಿನ ಪ್ರಯೋಗಗಳ ಬಗೆಗಿನ ಪಕ್ಷಿನೋಟ ಇಲ್ಲಿದೆ.
ಡಾ. ವಾಸುದೇವ ಪಾಂಡುರಂಗಿ ನಡೆದು ಬಂದ ದಾರಿ
ಜನನ : ಜನವರಿ 05, 1930 ಸ್ಥಳ : ರಾಣೇಬೆನ್ನೂರು ತಂದೆ : ರಾಮಾಚಾರ್ಯ ತಾಯಿ : ಸೀತಾಬಾಯಿ ಸಹೋದರರು : ಮೂರು ಸಹೋದರಿಯರು: ನಾಲ್ಕು ವಿದ್ಯಾಭ್ಯಾಸ : ಎಂ.ಡಿ. ಪ್ರಸೂತಿಶಾಸ್ತ್ರ- ಸ್ತ್ರೀರೋಗಶಾಸ್ತ್ರ (Obstetrics & Gynecology) ಮಕ್ಕಳು : ಮೂರು ಮಕ್ಕಳು. ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ. ಡಾ. ವಾಸುದೇವ ಪಾಂಡುರಂಗಿಯವರ ಜನನವಾದದ್ದು 05 ನೆಯ ಜನವರಿ 1930 ರಂದು ಆಗಿನ ಧಾರವಾಡ ಜಿಲ್ಲೆಯ ರಾಣೇಬೆನ್ನೂರಿನಲ್ಲಿ. ತಂದೆ ಮೂಲತಃ ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾಗಿದ್ದ ಕಾರಣ ಬಾಲ್ಯದಲ್ಲಿಯೆ ಸಂಸ್ಕೃತ ಅಭ್ಯಾಸ ನೀಡಲಾಯಿತು. ಇವರ ಪ್ರಾಥಮಿಕ ಶಿಕ್ಷಣ ರಾಣೇಬೆನ್ನೂರಿನಲ್ಲಿ ಮುಗಿಸಿ ಕಾಲೇಜಿಗಾಗಿ ಧಾರವಾಡಕ್ಕೆ ತೆರಳಿದರು. ನಂತರ 1949 ರಲ್ಲಿ ಗ್ರಾಂಟ ಮೆಡಿಕಲ್ ಕಾಲೇಜು ಮುಂಬೈ ಸೇರಿ 1954 ರಲ್ಲಿ ವೈದ್ಯಕೀಯ (MBBS) ಪದವಿ ಗಳಿಸಿದರು. ಅದಾದ ಬಳಿಕ ಅದೇ ಗ್ರಾಂಟ ಮೆಡಿಕಲ್ ಕಾಲೇಜ್ ಮುಂಬೈ ಮುಖಾಂತರ ಪ್ರಸೂತಿಶಾಸ್ತ್ರ- ಸ್ತ್ರೀರೋಗಶಾಸ್ತ್ರಗಳಲ್ಲಿ ಎಂ.ಡಿ ಪದವಿ ಪಡೆದರು. ಕನ್ನಡದ ಮೇರುಕೃತಿ, ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗವು ಜೀವನಾನುಭವದ ಸಾರವಾಗಿದ್ದು ಸಕಲರಿಗೂ ಒಳಿತನ್ನು ಬಯಸುವ ಕೃತಿಯಾಗಿದೆ. ಎಲ್ಲಾ ವೇದಗಳ ಸಾರಕ್ಕೆ, ಜೀವನಾನುಭವಗಳನ್ನು ಬೆರೆಸಿ ಮಾಡಿದ ಅಮೃತವೇ ಮಂಕುತಿಮ್ಮನ ಕಗ್ಗ. ಇಲ್ಲಿನ ಹಿತನುಡಿಗಳನ್ನು ಅರ್ಥೈಸಿಕೊಂಡು, ಜೀವನದಲ್ಲಿ ಅಳವಡಿಸಿಕೊಂಡರೆ, ಜೀವನದಲ್ಲಿನ ಬಹುತೇಕ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಆಂದೋಲನಗಳು ತಾರಕಕ್ಕೇರುತ್ತಿರುವ ಸಂದರ್ಭದಲ್ಲೇ ಮೈಸೂರು ನಗರಕ್ಕೆ ಆನೆಗಳು ನುಗ್ಗಿ ನಗರದ ನಾಗರಿಕರನ್ನು ಭಯಭೀತಗೊಳಿಸಿವೆ. ಅರೇ, ಇವೆರಡಕ್ಕೂ ಯಾವ ಸಂಬಂಧ ಎಂದು ವಿಚಿತ್ರ ರಾಗದಲ್ಲಿ ಆಶ್ಚರ್ಯದ ಧ್ವನಿ ಎತ್ತುವವರೇ ಹೆಚ್ಚೆಂಬುದು ನನಗೆ ಗೊತ್ತು. ಹೇಗೂ ಮುಖ್ಯಮಂತ್ರಿ ಯಡಿಯೂರಪ್ಪನವರೇ, ಆನೆಗಳ ಹಾವಳಿಯನ್ನು ಇನ್ನು ಮುಂದೆ ಗಂಭೀರ ಸಮಸ್ಯೆಯೆಂದು ಪರಿಗಣಿಸುವುದಾಗಿ ಭರವಸೆ ನೀಡಿದ್ದಾರಲ್ಲಾ? ಇನ್ನು ನಮ್ಮ ಅರಣ್ಯ ಮಂತ್ರಿಯವರು ಆನೆಗಳು ನಗರ ಪ್ರವೇಶಿಸದಂತೆ ತಡೆಯಲು ವಿಶೇಷ ಕಾರ್ಯಪಡೆ ರಚಿಸುವುದಾಗಿಯೂ ಘೋಷಿಸಿದ್ದಾರಲ್ಲಾ?. ಆದರೆ, ಜನರ ವಿಚಿತ್ರ ರೀತಿಯ ಆಶ್ಚರ್ಯದಂತೆಯೇ ಈ ಇಬ್ಬರ ಈ ಭರವಸೆ ಮತ್ತು ಘೋಷಣೆಗಳೂ ಅಸಂಬದ್ಧ, ಹಾಸ್ಯಾಸ್ಪದ ಎನ್ನದೆ ವಿಧಿಯಿಲ್ಲ. ಭಯೋತ್ಪಾದಕರ ವಿರುದ್ಧ ಕಟ್ಟೆಚ್ಚರದ ಮಾತಾಯಿತು, ವಿಶೇಷ ಕಮಾಂಡೋ ಪಡೆಗಳ ರಚನೆಯೂ ಆಯಿತು. ಆದರೆ ಭಯೋತ್ಪಾದನೆಯ ಭಯ ಮತ್ತು ಹಾವಳಿ ನಿಂತಿದೆಯೇ? ಈಗ ಆನೆಗಳ ಹಾವಳಿ ವಿರುದ್ಧ ಕಟ್ಟೆಚ್ಚರದ ಮತ್ತು ವಿಶೇಷ ಕಾರ್ಯಪಡೆಯ ಮಾತು! ಇದರಿಂದ ಕಾರ್ಯತಃ ಏನಾದರೂ ಪ್ರಯೋಜನವಾದೀತೇ? ಎಲ್ಲ ಕಾಡುಗಳ ಅಥವಾ ನಗರಗಳ ಸುತ್ತ ಹಗಲೂ ರಾತ್ರಿ ಕಾವಲು ಪಡೆಗಳನ್ನು ನಿಯೋಜಿಸಲಾಗುವುದೇ? ಅದು ಸಾಧ್ಯವೇ? ಅದೇನೇ ಇರಲಿ, ಜನ ಜೀವನ ಯಾವಾಗಲೂ ಕಟ್ಟೆಚ್ಚರದಲ್ಲೇ, ವಿಶೇಷ ಪಡೆಗಳ ಕಣ್ಗಾವಲಿನಲ್ಲೇ ಇರುವಂತಾಗುವುದು ಯಾವುದೇ ಆರೋಗ್ಯಕರ ಸಮಾಜದ, ಅದೂ ಜಾಗತಿಕ ಶಕ್ತಿಯಾಗುವತ್ತ ಸಮೃದ್ಧವಾಗಿ ಬೆಳೆಯುತ್ತಿದೆಯೆಂದು ಹೇಳಲಾಗುವ ನಮ್ಮ ಸಮಾಜದ ಒಳ್ಳೆಯ ಲಕ್ಷಣವೇ?
ನೀರೊಳಗಿದ್ದೂ ನೀರು ಕುಡಿಯದ ಪ್ರಾಣಿಯ ಬಗ್ಗೆ, ಕೆಸರಿನಲ್ಲಿ ಹುಟ್ಟಿ ವಿಕಸನಗೊಂಡ ಗಿಡದ ಎಲೆಯ ಮೇಲೆ ಇದ್ದೂ ಆ ಎಲೆಗೆ ಅಂಟಿಕೊಂಡಿರದ ಜಲಬಿಂದುವಿನ ಬಗ್ಗೆ, ಇಂತಹುದೇ ಹಲವಾರು ಉದಾಹರಣೆಗಳನ್ನು ನೀಡಿ ಮನುಷ್ಯ ಹೀಗಿರಬೇಕು ಎಂದು ಉಪನ್ಯಾಸಕರು ಹೇಳುವುದುಂಟು. ಆದರೆ, ವಾಸ್ತವದಲ್ಲಿ ಹಾಗೆ ಇರಲು ಸಾಧ್ಯವೆ? ಹನ್ನೆರಡನೆಯ ಶತಮಾನದ ಶರಣರು ದಾರಿಯಲ್ಲಿ ಬಿದ್ದಿದ್ದ ನಾಣ್ಯಗಳನ್ನು ತಮ್ಮದಲ್ಲ, ಅದನ್ನು ಎತ್ತಿಕೊಂಡು ಬಳಸುವುದು ಹಾಗಿರಲಿ, ಅವುಗಳನ್ನು ಮುಟ್ಟಲೂ ಕೂಡದು ಎಂಬ ವೀರ ವ್ರತಿಗಳಾಗಿದ್ದರು ಎಂಬುದುಂಟು. ಚಿನ್ನದ ಗಟ್ಟಿಯೊಂದು ಹೊಳೆಯುತ್ತ ನಮ್ಮ ಹಾದಿಯಲ್ಲಿ ಇಂದು ಬಿದ್ದಿದ್ದರೆ ನಾವು ಅದರ ಕಡೆ ಅಸಡ್ಡೆ ತೋರಿ ಹಾಗೆಯೇ ಹೋಗುತ್ತಿದ್ದೆವೆಯೆ? ಇಂಥ ಪ್ರಶ್ನೆಗಳು ಮೂಡಿ ಅವುಗಳಿಗೆ ಇತ್ಯಾತ್ಮಕ ಉತ್ತರ ದೊರೆಯುತ್ತಿರುವುದು ಮಾನ್ಯ ಎಂ.ವಿ.ರಾಜಶೇಖರನ್ ಅವರನ್ನು ನೆನೆದಾಗಲೆಲ್ಲಾ ಮತ್ತು ಅವರನ್ನು ಕಂಡು ಸಂಭಾಷಿಸುತ್ತಿರುವಾಗಲೆಲ್ಲಾ.
12.09.1928 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರ ತಾಲ್ಲೂಕಿನ ಮರಳವಾಡಿಯಲ್ಲಿ ಜನಿಸಿರುವ ಶ್ರೀ ಎಂ.ವಿ. ರಾಜಶೇಖರನ್ ಅವರು ಕರ್ನಾಟಕದ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. 1947-48ರ ಮೈಸೂರು ಚಲೋ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಶ್ರೀ ಎಂ.ವಿ. ರಾಜಶೇಖರನ್ ಅವರು, ಅಪ್ಪರ್ ಸೆಕೆಂಡರಿ (ಮಾಧ್ಯಮಿಕ ಶಾಲೆಯಲ್ಲಿ) ವ್ಯಾಸಂಗ ಮಾಡುತ್ತಿದ್ದಾಗಲೇ ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ಮೌಲ್ಯಗಳಿಗೆ ತಮ್ಮನ್ನ ತೆತ್ತುಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಮಿತ್ರಮೇಳ ಎಂಬ ಸಾಂಸ್ಕೃತಿಕ ಸಂಘಟನೆಯಲ್ಲಿ ದುಡಿದು ತಮ್ಮ ಮುಂದಿನ ಬದುಕನ್ನು ರಚನಾತ್ಮಕ ಕೆಲಸಗಳಿಗೆ ಮೀಸಲಾಗಿಟ್ಟಿದ್ದಾರೆ.
ಪ್ರೊ.ಎಂ.ವಿ.ಮೂರ್ತಿಯವರು ನೀಳ ಕಾಯದ, ದಿಟ್ಟ ನಿಲುವಿನ ಧೀಮಂತ ವ್ಯಕ್ತಿ. ಮಾತು ಮತ್ತು ನಡತೆ ಎರಡರಲ್ಲೂ ಏಕತೆಯನ್ನು ಹೊಂದಿದಂತಹ ಬಹು ಅಪರೂಪ ಎನಿಸುವಂತಹ ವ್ಯಕ್ತಿತ್ವ. ನಮ್ಮ ನಾಡು, ಸಂಪ್ರದಾಯಗಳಲ್ಲಿ ಅಪಾರ ನಂಬಿಕೆ, ಕಾಳಜಿ ಹೊಂದಿದ್ದಂತಹ ಪ್ರೊ.ಎಂ.ವಿ.ಮೂರ್ತಿರವರು ಹುಟ್ಟಿದ್ದು ಮೇ 10, 1910, ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ. ತಂದೆ ಮಠಮ್ ನಾರಾಯಣಾಚಾರ್, ವೃತ್ತಿಯಿಂದ ಲಾಯರ್, ತಾಯಿ ಸುಂದರಾಬಾಯಿ. ನಾರಾಯಣಾಚಾರ್ ಮತ್ತು ಸುಂದರಾಬಾಯಿಯವರ 6 ಮಕ್ಕಳಲ್ಲಿ ಎರಡನೆಯವರು ನಮ್ಮ ಎಂ.ವಿ.ಮೂರ್ತಿ. ಬಾಲ್ಯದಿಂದಲೇ ಬಹು ಚಟುವಟಿಕೆಯ ಹುಡುಗನಾಗಿದ್ದ ಎಂ.ವಿ.ಮೂರ್ತಿಯವರು ಬೆಳೆದಂತೆ ತಂದೆ ತಾಯಿಗಳ ಪ್ರಭಾವದಿಂದ ಸಂಪ್ರದಾಯ, ಭಾಷೆಯ ಬಗ್ಗೆ ಅತೀವ ಆಸಕ್ತಿ ಮತ್ತು ಪ್ರೇಮವನ್ನು ಬೆಳೆಸಿಕೊಳ್ಳುತ್ತಾ ಬಂದರು.
ಪ್ರಸ್ತಾವನೆ:
ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆ ಪುರುಷನಿಗೆ ಸಮಾನವಾಗಿ ನಿಲ್ಲಲು ಪ್ರಯತ್ನಿಸುತ್ತಿದ್ದಾಳೆ. ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳು ಸಾಕ್ಷಿಯಾಗಿವೆ. ಹಲವಾರು ಕ್ಷೇತ್ರಗಳಲ್ಲಿ ಮಹಿಳೆ ಪುರುಷನನ್ನೇ ಮೀರಿ ನಿಂತಿದ್ದಾಳೆ. 1991ರ ಆರ್ಥಿಕ ನೀತಿಗಳಲ್ಲಿನ ಬದಲಾವಣೆಯಿಂದಾಗಿ ಮಹಿಳೆ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿಯೂ ತನ್ನನ್ನು ಕಂಡುಕೊಂಡಿದ್ದಾಳೆ, ಅದು ಕೇವಲ ಉದ್ಯೋಗವನ್ನಷ್ಟೇ ಸೃಷ್ಠಿಸಿಲ್ಲ, ಜೊತೆಗೆ ಮಹಿಳೆ ಪುರುಷನಿಗೆ ಸಮಾನವಾಗಿ ಯಾವುದೇ ಕ್ಷೇತ್ರದಲ್ಲಿ, ಯಾವುದೇ ಸಮಯದಲ್ಲಿ ಕೆಲಸ ಮಾಡಲು ಅರ್ಹಳು ಎಂಬುದನ್ನು ನಿರೂಪಿಸಲಾಗಿದೆ. ಪ್ರಮುಖವಾಗಿ ಸಾಫ್ಟ್ವೇರ್ ಉದ್ಯಮಗಳಲ್ಲಿ ಮಹಿಳೆಯರ ಪಾಲು ನೋಡಿದಾಗ ಆಶ್ಚರ್ಯವಾಗಬಹುದು. (ಪ್ರೊ.ಎಂ.ವಿ.ಮೂರ್ತಿ: 1910-2000= ಶ್ರೀಮತಿ ನೀರಜಾ ಮೂರ್ತಿ: 1918-2001)
ಪ್ರೊಫೆಸರ್ ಎಂ. ವಾಸುದೇವ ಮೂರ್ತಿಯವರನ್ನು ನೆನೆದಾಗಲೆಲ್ಲಾ ಮಾಧುರ್ಯ ತುಂಬಿದ, ಸ್ನೇಹಮಯ, ನಿರ್ವ್ಯಾಜ ಪ್ರೀತಿಯ, ಸರಳ ಆದರೆ ಉನ್ನತವಾದ ಜ್ಞಾನ ಭಂಡಾರಿ, ಮಾನವೀಯ ಮೌಲ್ಯಗಳ ಮೂರ್ತಿಯಾದ ಒಬ್ಬ ಹಿರಿಯ ಜೀವಿಯೊಂದು ಕಣ್ಣೆದಿರು ನಿಂತ ಅನುಭವವಾಗುತ್ತದೆ. ಸಮಾಜ ಸುಧಾರಣೆಯೆಂಬ ವಿಚಾರ ಗಮನಕ್ಕೆ ಬರುವಾಗ, ಇಲ್ಲಿ ಎರಡು ಹಂತಗಳನ್ನು ಗಮನಿಸಬೇಕು. ಒಂದು, ಸಮಾಜದಲ್ಲಿನ ದಲಿತರ ಮತ್ತು ಹಿಂದುಳಿದವರ ಪುರೋಗಮನ; ಎರಡು, ಎಲ್ಲ ಜಾತಿಗಳ ಮಹಿಳೆಯರ ಪುರೋಗಮನ, ಕರ್ನಾಟಕದಲ್ಲಿ ನಡೆದ ಇಂಥ ಚಳವಳಿಗಳ ಕೆಲವು ಗಣ್ಯ ಅಂಶಗಳನ್ನು ಇಲ್ಲಿ ಪರಿಶೀಲಿಸಲಾಗಿದೆ.
ಅಸ್ಪೃಶ್ಯತಾ ನಿವಾರಣೆ-ಎಂದರೆ ಅಸ್ಪೃಶ್ಯರ ಮೇಲೆ ಹೇರಲಾದ ಸಾಮಾಜಿಕ ದಿಗ್ಬಂಧನಗಳು (ಉಚ್ಚವರ್ಣದವರಿರುವ ಓಣಿಗಳಲ್ಲಿ ಓಡಾಡಬಾರದು, ಮೀಸೆ ಬಿಡಬಾರದು, ಛತ್ರಿ ಹಿಡಿಯಬಾರದು, ಮದುವೆ ಮೆರವಣಿಗೆಯಲ್ಲಿ ವಿಶಿಷ್ಟ ಸರಂಜಾಮುಗಳನ್ನು ಕೆಲವು ವಾದ್ಯಗಳು, ಕುದುರೆ ಇತ್ಯಾದಿ ಬಳಸಬಾರದು, ಸಾರ್ವಜನಿಕ ಬಾವಿಯಿಂದ, ಕೆರೆಯಿಂದ ನೀರು ತುಂಬಬಾರದು, ಮೇಲುವರ್ಗದವರು ಪೂಜಿಸುವ ದೇವಾಲಯಗಳನ್ನು ಪ್ರವೇಶಿಸಬಾರದು), ಶಿಕ್ಷಣಕ್ಕೆ ಅಡಚಣೆ, ಇತ್ಯಾದಿಗಳು ಒಂದು ರೀತಿಯ ಇತಿಮಿತಿಗಳು. ಈ ಹಲವಾರು ದಿಗ್ಬಂಧನಗಳಿಂದ ಅಸ್ಪೃಶ್ಯರು ಉಸಿರು ಕಟ್ಟುವ ವಾತಾವರಣದಲ್ಲಿ ಇದ್ದರು. ಬಹುಪಾಲು ಅಸ್ಪೃಶ್ಯರು ಮೂಲದ ಹೊಲೆಯರಾಗಿ ಕೆಲವು ಭೂಮಾಲಿಕವರ್ಗಗಳ ಗುಲಾಮರಾಗಿ ಯಾವುದೇ ಸ್ವಾತಂತ್ರ್ಯವಿಲ್ಲದೆ ಬಂಧಿತ ಸ್ಥಿತಿಯಲ್ಲಿ ಇದ್ದರು. ಪ್ರೀತಿ, ತ್ಯಾಗ, ಸೇವೆ-ಇವು ಮಾತ್ರ ಭಾರತದ ಉದ್ಧಾರವನ್ನು ಮಾಡಲು ಶಕ್ತ.
ಸ್ವಾಮಿ ವಿವೇಕಾನಂದರ ಈ ಮಾತನ್ನು ಅಕ್ಷರಶ: ಆಚರಣೆಗೆ ತಂದು ತೋರಿಸಿರುವವರು ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಆರಾಧ್ಯ ದೈವವೆನಿಸಿಕೊಂಡಿರುವ ಡಾ. ಸುದರ್ಶನ್ರವರು. ಡಾ. ಎಚ್. ಸುದರ್ಶನ್ರವರು ಬೆಂಗಳೂರು ದಕ್ಷಿಣ ತಾಲ್ಲೂಕಿನ ಯಮಲೂರು ಗ್ರಾಮಕ್ಕೆ ಸೇರಿದ ರೈತ ಕುಟುಂಬವೊಂದರಲ್ಲಿ 1950 ಡಿಸೆಂಬರ್ 30 ರಂದು ಜನ್ಮತಾಳಿದರು. ತಂದೆ ಹನುಮರೆಡ್ಡಿ, ಎಚ್.ಎ.ಎಲ್ನಲ್ಲಿ ಉದ್ಯೋಗಿ. ತಾಯಿ ಚಿನ್ನಮ್ಮ. ತನ್ನ 12ನೆಯ ವಯಸ್ಸಿನಲ್ಲಿದ್ದಾಗ ವೈದ್ಯಕೀಯ ಸೌಲಭ್ಯವಿಲ್ಲದೆ ತನ್ನ ಕಣ್ಣ ಮುಂದೆಯೇ ತನ್ನ ತಂದೆಯ ಸಾವಿನ ದೃಶ್ಯವನ್ನು ನೋಡಿದ ಸುದರ್ಶನ್ ಅವರಿಗೆ ವೈದ್ಯಕೀಯ ಅಧ್ಯಯನದ ಕಡೆ ಆಸಕ್ತಿ ಬೆಳೆಯಿತು. ಸುದರ್ಶನ್ ಅವರು 3ನೆಯ ತರಗತಿಯವರೆಗು ಯಮಲೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ತನ್ನ ಪೋಷಕರೊಡನೆ ಹಳ್ಳಿಯಿಂದ ಎತ್ತಿನಗಾಡಿಯಲ್ಲಿ ಬಂದು ಬೆಂಗಳೂರಿನ ಜಯನಗರದಲ್ಲಿ ನೆಲೆಸಿದರು. ರಾಣಿ ಸರಳಾದೇವಿ ಶಾಲೆ, ಜಯನಗರ ಮತ್ತು ರಾಷ್ಟ್ರೀಯ ವಿದ್ಯಾಲಯದಲ್ಲಿ ತಮ್ಮ ಪ್ರೌಢಶಿಕ್ಷಣವನ್ನು ಮುಗಿಸಿದರು. ಬಾಲ್ಯದಿಂದಲೂ ತುಂಬಾ ಬುದ್ಧಿವಂತರಾಗಿದ್ದರಿಂದ ತಮ್ಮ ಶಾಲೆಯಲ್ಲಿ ಡಬಲ್ ಪ್ರೊಮೋಷನ್ ಪಡೆದರು. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಎಸ್.ಎಸ್.ಎಲ್.ಸಿ ಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದರು. ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಮುಗಿಸಿದರು. ಮೆಡಿಕಲ್ಗೆ ಸೇರಬೇಕಾದಾಗ ಅವರ ವಯಸ್ಸು ನಿಗಧಿಗಿಂತ ಕಡಿಮೆಯಾದ್ದರಿಂದ ಒಂದು ವರ್ಷಗಳ ಕಾಲ ತನ್ನ ತಂದೆಯ ಸ್ನೇಹಿತರೊಬ್ಬರ ಕೃಷ್ಣ ಪ್ಲೋರ್ ಮಿಲ್ನಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರು. ಆರೋಗ್ಯಕರ ಸಮಾಜದ ಕನಸನ್ನು ಕಾಣುವ ನಾವು, ಈ ವಿಚಾರಕ್ಕೆ ಹೇಗೆ ಸ್ಪಂದಿಸಿದ್ದೇವೆ? ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ,ವ್ಯವಸ್ಥೆಯನ್ನು ಸರಿಪಡಿಸಲು ಅಗತ್ಯವಾದ ಸಾಮಾಜಿಕ ನೀತಿಗಳ ಬಗ್ಗೆ, ಅದರಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಚಿಂತಿಸಿದ್ದೇವೆಯೇ? ರಾಜಕೀಯ ದೊಂಬರಾಟದಲ್ಲಿ ತಲ್ಲೀನರಾಗಿರುವ ರಾಜಕಾರಣಿಗಳಿಗೆ ಅಭಿವೃದ್ಧಿಯೆಡೆಗಿನ ದೃಷ್ಟಿಕೋನವನ್ನು ನೀಡಲು ಎಂದಾದರೂಪ್ರಯತ್ನಿಸಿದ್ದೇವೆಯೇ? ಸಮಾಜಕಾರ್ಯವನ್ನು ಅಧ್ಯಯನ ಮಾಡಿಕೊಂಡು, ಉನ್ನತ ಸ್ಥಾನಕ್ಕೆ ಹೋದವರು ವ್ಯವಸ್ಥೆಯಲ್ಲಿಪಾಲುದಾರರಾಗುತ್ತಿರುವುದು ದುರಾದೃಷ್ಟವಲ್ಲವೇ?
ಜಗತ್ತಿನ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತಕ್ಕೆ ವಿಶ್ವ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವದ ಸ್ಥಾನವಿದೆ. ಜೊತೆಗೆ ಭಾರತವು ನೈಸರ್ಗಿಕವಾಗಿ ಒಂದು ಸಂಪತ್ಭರಿತವಾದ ದೇಶವಾಗಿದೆ. ಈಗ ತಾನೇ ಅಭಿವೃದ್ಧಿಯ ಮೆಟ್ಟಿಲುಗಳನ್ನ ಏರತೊಡಗಿರುವ ಭಾರತ ಒಂದು ಅಭಿವೃದ್ಧಿಶೀಲ ದೇಶವೆಂದೆ ಪರಿಗಣಿಸಲ್ಪಟ್ಟಿದೆ. ಹಾಗೆ ಸಮಶೀತೋಷ್ಣ ಹವಮಾನ ಹೊಂದಿರುವ ಭಾರತವು ವಿಪುಲ ನೈಸರ್ಗಿಕ ಮತ್ತು ಮಾನವ ಸಂಪತ್ತಿನೊಂದಿಗೆ ಬಡಜನರಿಂದ ಕೂಡಿದ ಶ್ರೀಮಂತ ರಾಷ್ಟ್ರ ಎಂದು ಬಣ್ಣಿಸಲ್ಪಟ್ಟಿದೆ.
ಸಮಾಜಕಾರ್ಯವು ಒಂದು ವೃತ್ತಿ ಮಾತ್ರ ಆಗಿರದೆ ವಿಜ್ಞಾನವೂ ಹೌದು. ಮತ್ತು ಒಂದು ಕಲೆಯೂ ಹೌದು ಎಂಬ ಮಾನ್ಯತೆ ಪಡೆದಿದೆ. ಸಮಾಜಕಾರ್ಯವನ್ನು ಒಂದು ಸ್ವತಂತ್ರ ಅಧ್ಯಯನಶಾಸ್ತ್ರವೆಂದು ಪರಿಗಣಿಸುವುದಾದರೂ ಅದು ಪೂರ್ಣನೆಲೆಯಲ್ಲಿ ಸ್ವತಂತ್ರವಾಗಿರಲಾರದು. ಸಮಾಜಕಾರ್ಯವನ್ನು ವಾಸ್ತವಿಕ ನೆಲೆಯಲ್ಲಿ ವಿಶ್ಲೇಷಿಸುವುದಾದರೆ, ಅದು ಮಾನವನ ಜೀವನವನ್ನು ಸಮಗ್ರವಾಗಿ ಕಂಡು ಆತನ ಸಮಸ್ಯೆ, ತೊಂದರೆ ತೊಡಕುಗಳನ್ನು ಪೂರ್ಣವಾಗಿ ಪರೀಕ್ಷಿಸಿ ಅವುಗಳಿಗೆ ಪೂರ್ಣ ರೂಪದ ಪರಿಹಾರಗಳನ್ನು ಕಂಡುಕೊಳ್ಳುವ ಕಾರ್ಯದಲ್ಲಿ ನಿರತವಾಗಿರುವುದರಿಂದ ಮಾನವನ ಸಾಮಾಜಿಕ ಜೀವನದೊಂದಿಗೆ, ಇತರ ಹಲವು ಬಗೆಯ ವಿಜ್ಞಾನಗಳೊಂದಿಗೆ ಹಾಗೂ ಕಲೆಗಳೊಂದಿಗೆ ಸಂಬಂಧ ಹೊಂದಿರುವುದು ಅವಶ್ಯವಾಗಿದೆ. ತನ್ನ ಉದ್ದೇಶ ಸಾಧನೆಗಾಗಿ ಅದು ಇತರ ವಿಜ್ಞಾನ ಕಲೆ, ಹಾಗೂ ವೃತ್ತಿಗಳ ನೆರವನ್ನು ಪಡೆಯಲೇ ಬೇಕಾಗುತ್ತದೆ. ಅಂತೆಯೇ, ಅದು ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮಾನವಶಾಸ್ತ್ರ, ಸಮಾಜಶಾಸ್ತ್ರ, ನೀತಿಶಾಸ್ತ್ರ, ಮನೋವಿಜ್ಞಾನ, ಧರ್ಮಶಾಸ್ತ್ರ, ಶಿಕ್ಷಣಶಾಸ್ತ್ರ, ಕಾನೂನುಶಾಸ್ತ್ರ, ವೈದ್ಯಕೀಯಶಾಸ್ತ್ರ, ಮಾನವ ಭೂಗೋಳಶಾಸ್ತ್ರ, ಸೃಜನಾತ್ಮಕ ಸಾಹಿತ್ಯ ಮುಂತಾದ ಅಧ್ಯಯನಶಾಸ್ತ್ರಗಳ ಜೊತೆಗೆ ವೈದ್ಯವೃತ್ತಿ, ಮಾನಸೋಪಚಾರ, ನ್ಯಾಯವೃತ್ತಿ, ವಾಸ್ತುಶಿಲ್ಪ, ಶಿಕ್ಷಣ ಇತ್ಯಾದಿ ವೃತ್ತಿಗಳಿಂದ ಕೂಡ ನೆರವನ್ನು ಪಡೆಯಬೇಕಾಗುತ್ತದೆನೀ ಎಲ್ಲಾ ಅಧ್ಯಯನಶಾಸ್ತ್ರಗಳ ಮತ್ತು ವೃತ್ತಿಗಳ ಸಹಾಯದಿಂದ ಹಾಗೂ ಸಹಕಾರದಿಂದ ವಿಶಾಲವಾದ ದೃಷ್ಟಿಯನ್ನು ಸ್ಪಷ್ಟವಾದ ಕಾರ್ಯಕ್ಷೇತ್ರವನ್ನು, ವ್ಯಾವಹಾರಿಕ ಪದ್ಧತಿಯನ್ನೂ, ಪರಿಣಾಮಕರವಾದ ತಂತ್ರೋಪಾಯಗಳನ್ನು, ಮಾನವ ಬಾಂಧವ್ಯದ ಕೌಶಲ ಕಲೆಯನ್ನು ಸಮಾಜಕಾರ್ಯವು ತನ್ನಲ್ಲೇ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ನಿರ್ವಹಣೆಯಿಂದ ಪ್ರತಿ ಗ್ರಾಮದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯತೆಯನ್ನು ಕಾಪಾಡುವ ಜವಾಬ್ದಾರಿಜಿಲ್ಲಾ ಪಂಚಾಯತಿಗಳಾದ್ದಾಗಿರುತ್ತದೆ.
ಅನೈರ್ಮಲ್ಯ ಪರಿಸರ ಅನಾರೋಗ್ಯದ ಮೂಲ ಎಂಬ ಹಿರಿಯರ ಮಾತು ಸತ್ಯ. ಆರೋಗ್ಯ ಚೆನ್ನಾಗಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಜನರ ಮೂಲ ಸೌಲಭ್ಯಗಳನ್ನು ಪೂರೈಸಲು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ಉತ್ತಮ ನೈರ್ಮಲ್ಯ ಬಹಳ ಅವಶ್ಯಕವಾಗಿದೆ. ನೈರ್ಮಲ್ಯ ಕಾಪಾಡುವ ಮೂಲಕ ಅನೇಕ ಮೂಲಗಳಿಂದ ಬರುವ ಕಾಯಿಲೆಗಳನ್ನು ತಡೆಗಟ್ಟಬಹುದು ಎನ್ನುವ ಧ್ಯೇಯದೊಂದಿಗೆ ಬೆಳಗಾವಿ ಜಿಲ್ಲಾ ಪಂಚಾಯಿತಿಯು ಸಮುದಾಯ ಆಧಾರಿತ ಸಂಪೂರ್ಣ ನೈರ್ಮಲ್ಯ ಎಂಬ ಹೆಸರಿನಲ್ಲಿ ಒಂದು ಬೃಹತ್ ಆಂದೋಲನ ಆರಂಭಿಸಿದೆ. ಅಣ್ಣ್ಣಾಹಜಾರೆ ನೇತೃತ್ವದ ಜನಲೋಕಪಾಲ್ ಮಸೂದೆ ರಚನಾ ಸಮಿತಿ ವಿವಾದಕ್ಕೆ ಸಿಲುಕಿದೆ. ಒಂದು ಕಡೆ ಈ ಸಮಿತಿಯ ಸ್ವರೂಪವೇ ನಮ್ಮ ಸಂವಿಧಾನದ ಭಾವನೆಗೆ ವಿರುದ್ಧವಾಗಿದ್ದು, ಸಂಸದೀಯ ಪ್ರಜಾಸತ್ತಾತ್ಮಕ ವಿಧಿ-ವಿಧಾನಗಳಿಗೇ ಅಪಚಾರವೆಸಗುವಂತಿದೆ ಎಂದು ಕೆಲವರು ವಾದಿಸುತ್ತಿದ್ದರೆ, ಇನ್ನೊಂದು ಕಡೆ, ಸಾರ್ವಜನಿಕ ಜೀವನದಲ್ಲಿನ ಭ್ರಷ್ಟಾಚಾರದ ವಿರುದ್ಧದ ರಾಮಬಾಣವೆಂದೇ ಪರಿಗಣಿಸಲಾಗುತ್ತಿರುವ ಈ ಮಸೂದೆಯನ್ನು ರಚಿಸುತ್ತಿರುವವರೇ ಭ್ರಷ್ಟಾಚಾರಿಗಳಾಗಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ.
ಹನ್ನೆರಡು ವರ್ಷದ ಮುದ್ದು ಹುಡುಗಿ, ತನ್ನ ಓರಗೆಯವರನ್ನೆಲ್ಲಾ ಒಂದೆಡೆ ಸೇರಿಸಿಕೊಂಡು ತನಗೆ ತಿಳಿದ ಹೊಸ ವಿಷಯಗಳನ್ನು ಅವರಿಗೆ ತಿಳಿಸುತ್ತಾ ಅವರಿಗೆ ತಿಳಿದಿರುವ ವಿಷಯಗಳನ್ನು ಹಂಚಿಕೊಳ್ಳುವಂತೆ ಪ್ರೇರೇಪಿಸುತ್ತಾ ಅವರಲ್ಲಿರುವ ಪ್ರತಿಭೆಯನ್ನು ಹೊಗಳುತ್ತಾ ಅವರನ್ನು ಇನ್ನು ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳುವಂತೆ ಪ್ರೇರೇಪಿಸುವುದು ಅವಳಿಗೆ ತುಂಬಾ ಇಷ್ಟದ ಕೆಲಸ. ಬಾಲ್ಯದಿಂದಲೇ ಉತ್ಸಾಹದ ಚಿಲುಮೆಯಾಗಿದ್ದ ಈ ಮುದ್ದು ಮುಖದ ದಿಟ್ಟ ನಿಲುವಿನ ಹುಡುಗಿಯ ಹೆಸರೇ ವತ್ಸಲಾ. ಇಂದು ಈಕೆಗೆ 76ರ ಹರೆಯ ಇಂದಿಗೂ ಅದೇ ಬತ್ತದ ಉತ್ಸಾಹ, ಯಾವುದಾದರು ಸಾಮಾಜಿಕ ಕಾರ್ಯಕ್ರಮಕ್ಕೆ ಆಮಂತ್ರಿಸಿದರೆ ಮಳೆ, ಬಿಸಿಲು ಯಾವುದಕ್ಕು ಹಿಂಜರಿಯದೆ ಸರಿಯಾದ ಸಮಯಕ್ಕೆ ಅಲ್ಲಿ ಹಾಜರ್! ``ಸುಮ್ಮನೆ ಕುಳಿತು ಕೆಲಸಕ್ಕೆ ಬಾರದ ವಿಷಯದ ಬಗ್ಗೆ ಚರ್ಚಿಸುವುದು ಮತ್ತು ಚಿಂತಿಸುವುದು ಚಿಕ್ಕ ಗಾಯವನ್ನು ಸುಮ್ಮನಿರಲು ಬಿಡದೆ ಕೆರೆದು ಹುಣ್ಣಾಗಿಸುವಂತಹ ಮೂರ್ಖತನ. ಅದರ ಬದಲಿಗೆ ಆ ಸಮಯವನ್ನು ಸಮಾಜದ ಏಳಿಗೆಗೆ ಉಪಯೋಗಿಸಿಕೊಳ್ಳುವುದರಲ್ಲಿ ಜೀವನದ ಸಾರ್ಥಕತೆ ಇದೆ'' ಎನ್ನುವುದು ವತ್ಸಲಾರ ಅಭಿಪ್ರಾಯ.
ಯಾವುದೇ ಸ್ವಯಂ ಸೇವಾ ಸಂಸ್ಥೆ ಬೇರೆ ಬೇರೆಯವರಿಂದ ಸಹಾಯ ಹಸ್ತ ಚಾಚುವುದು ಸಹಜವಾಗಿದೆ. ಹೀಗೆ ಸಹಾಯ ಬೇಡಲು ಹೋದಾಗ ಎಲ್ಲವೂ ದೊಡ್ಡ ಪ್ರಮಾಣದಲ್ಲಿ ದಾನ ಸಿಗುತ್ತದೆ ಎಂದು ನಿರೀಕ್ಷಿಸುವುದು ಮಾತ್ರ ತಪ್ಪಾಗುತ್ತದೆ. ಎಲ್ಲಾ ರೀತಿಯ ಕೊಡುಗೈ ದಾನಿಗಳು ಇರುತ್ತಾರೆ. ಆದರೆ ಯಾವುದೇ ರೀತಿಯಲ್ಲಿ ಸಿಕ್ಕ ದಾನವನ್ನು (ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ) ಅಚ್ಚು ಕಟ್ಟಾಗಿ ಸದ್ವಿನಿಯೋಗ ಮಾಡಿಕೊಳ್ಳುವ ಜಾಣ್ಮೆ ಇರಬೇಕು. ಅದೇ ರೀತಿ ಒಂದು ಸಂಸ್ಥೆಗೆ ನೀಡಿದ ದಾನವನ್ನು ಹೇಗೆ ಸದ್ಬಳಕೆ ಮಾಡಿದರು, ಅಂದರೆ ಕಸದಿಂದ ರಸ ಮಾಡುವ ಜಾಣ್ಮೆಯ ಕುರಿತಾದ ಒಂದು ಕಥೆ ಇಲ್ಲಿದೆ.
|
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|