ಆದಿನ ಬೆಳಗ್ಗೆ ಏಳುವಾಗಲೇ ಅನ್ನಿಸಿತು, ಇವತ್ತು ಏನೋ ವಿಶೇಷವಿರುತ್ತದೆ ಎಂದು. ರೇಡಿಯೋದಲ್ಲಿ 'ಮಹಿಳೆಯರ ಪಾತ್ರ' ಎಂದು ಸಮಾಜಸೇವಕಿಯ ಮಾತು ನಡೆಯುತ್ತಿತ್ತು. ಜಯಳಿಗೆ ಆ ದಿನ ಎನೋ ಒಂದು ತರಹದ ಭಾವನೆಗಳು. ರೇಡಿಯೋದಲ್ಲಿ ಹೇಳುವುದನ್ನು ಕೇಳುವಾಗ ಹೌದು, ಹೀಗೇ ಮಾಡಬೇಕು ಅನ್ನಿಸಿತು. ಮಹಿಳೆಯ ಸ್ಥಾನದ ಬಗ್ಗೆ ಜಾಗೃತಿ ರಿಸರ್ವೇಶನ್ ಬಗ್ಗೆ ವಿವಾದಗಳು ಎಲ್ಲ ಕೇಳಿದ ಮಾತುಗಳೇ ಯಾವುದೂ ಹೊಸದಲ್ಲ.
ಅವಳಿಗೆ ಅತ್ತೆಯ ಮಾತು ಜ್ಞಾಪಕಕ್ಕೆ ಬಂತು, ಇಂತದೆಲ್ಲ ಕೇಳಲು ಚಂದ, ಹೇಳಲೂ ಚಂದ. ಆದರೆ ಕಾರ್ಯರೂಪಕ್ಕೆ ತರಲು ಇನ್ನೂ ಎಷ್ಟು ಶತಮಾನವೋ?
0 Comments
ಬದಲಾವಣೆ ಜಗದ ನಿಯಮ, ಸೂಕ್ತವಾದ ಸಮಯದದಲ್ಲಿ ಎಲ್ಲವೂ ಮಾರ್ಪಾಡಾಗಬೇಕಾಗುತ್ತದೆ. ವ್ಯವಸ್ಥೆಯೂ ಇದಕ್ಕೆ ಹೊರತಲ್ಲ. ಇತ್ತೀಚೆಗೆ ಹಲವು ನಿರಾಶ್ರಿತರ ಸಾವಿನೊಂದಿಗೆ ಸುದ್ದಿಯಲ್ಲಿದ್ದ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ನಿರಾಶ್ರಿತರಿಗೆ ಆರೋಗ್ಯಪೂರ್ಣ ಉತ್ತಮ ಪರಿಸರ ನಿರ್ಮಾಣವಾಗುತ್ತಿದೆ.
ಬದಲಾವಣೆಯ ಗತಿಯನ್ನು ಹೆಚ್ಚಿಸಲು ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳ ದಂಡೇ ಸಿದ್ಧವಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯ ಮತ್ತು 13 ಅನುಮೋದಿತ ಸಮಾಜಕಾರ್ಯ ಶಾಲೆಗಳಿಂದ 35 ಜನ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಆದರೆ ಇವರಿಗೆ ಸೂಕ್ತ ಮಾರ್ಗದರ್ಶನ, ತಿಳಿವಳಿಕೆ ನೀಡಬೇಕಾದದ್ದು ಅತ್ಯಗತ್ಯ. ಬಹಳಷ್ಟು ವಿದ್ಯಾರ್ಥಿಗಳು ಈಗತಾನೆ ಸಮಾಜಕಾರ್ಯ ಹೊಸ್ತಿಲನ್ನು ಪ್ರವೇಶಿಸುತ್ತಿರುವುದರಿಂದ ಇದು ಅನಿವಾರ್ಯವು ಕೂಡ. ಈ ಕಥೆಯು 100 ವರ್ಷಗಳಿಗಿಂತಲೂ ಹಳೆಯದಾಗಿರಬಹುದು. ಆದರೆ ಪ್ರಸ್ತುತ ದಿನಗಳಿಗೂ ಅನ್ವಯವಾಗುವ ವಾಸ್ತವದ ಚಿತ್ರಣ.
1892ರ ಇಸವಿ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದ 18 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಕಾಲೇಜಿನ ಶುಲ್ಕವನ್ನು ಕಟ್ಟಲು ಪರದಾಡುತ್ತಿದ್ದ. ಆತನೊಬ್ಬ ಅನಾಥನಾಗಿದ್ದು ಈ ಹಣವನ್ನು ಹೇಗೆ ಹೊಂದಿಸುವುದು ಎಂಬುದೂ ಸಹ ಅವನಿಗೆ ಗೊತ್ತಿರಲಿಲ್ಲ. ಹೀಗೆ ಯೋಚನೆಯಲ್ಲಿರುವಾಗ ತಕ್ಷಣ ಆತನಿಗೆ ಒಂದು ಉಪಾಯ ಹೊಳೆಯಿತು. ತನ್ನ ಸ್ನೇಹಿತನೊಡಗೂಡಿ ಕಾಲೇಜಿನಲ್ಲಿ ಒಂದು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿ ಅದರಿಂದ ಬರುವ ಹಣವನ್ನು ತನ್ನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿದನು. ಈ ಯೋಜನೆಯನ್ನು ಕಾರ್ಯರೂಪಗೊಳಿಸಲು ಅಂದಿನ ಪ್ರಸಿದ್ಧ ಪಿಯಾನೋ ವಾದಕರಾಗಿ ಹೆಸರು ಮಾಡಿದ್ದ ಇಗ್ನೇಸಿ.ಜೆ.ಪೆಡೆರ್ವಸ್ಕಿ ಎಂಬುವರನ್ನು ಭೇಟಿ ಮಾಡಿ ತಮ್ಮ ಯೋಜನೆಗಳನ್ನು ತಿಳಿಸಿದರು. ಪೆಡೆರ್ವಸ್ಕಿಯ ವ್ಯವಸ್ಥಾಪಕರು ಹಣದ ಮೊತ್ತವನ್ನು ಗೊತ್ತುಪಡಿಸಿದರು. ಆ ಮೊತ್ತವು 2000 ಅಮೇರಿಕನ್ ಡಾಲರ್ಗಳಾಗಿತ್ತು. ಈ ಶರತ್ತಿಗೆ ಒಪ್ಪಿದ ಯುವಕರು ಕಾರ್ಯಕ್ರಮವನ್ನು ಆಯೋಜಿಸಿಯೇ ಬಿಟ್ಟರು. ಭಾರತೀಯ ನಂಬಿಕೆ ಹಾಗೂ ಸಂಸ್ಕೃತಿಯಲ್ಲಿ ಜನರು ವಿವಿಧ ರಿತೀಯ ಶಕ್ತಿಗಳಿಂದ ಸ್ವಾಧೀನ/ ಸ್ವಾಮ್ಯಕ್ಕೊಳಪಡುವುದನ್ನು ನಾವೆಲ್ಲ ಕೇಳಿದ್ದೇವೆ. ಹಲವಾರು ಬಾರಿ ನೋಡಿರುತ್ತೇವೆ. ಸ್ವಾಧೀನ(ದೈವಾವೇಶ)ದಲ್ಲಿರುವವರು, ತಾವು ಬೇರೆ ಶಕ್ತಿ\ಆತ್ಮದ ವಶದಲ್ಲಿರುವಂತೆ ಬೇರೆ ರೀತಿಯ ಆವಭಾವ, ಮಾತು, ವರ್ತನೆಯನ್ನು ತೋರಿಸುತ್ತಾರೆ. ಅವರ ವರ್ತನೆಯು ಅವರ ನೈಜ ವರ್ತನೆಗಿಂತ ಭಿನ್ನವಾಗಿರುತ್ತದೆ. ನನಗೆ ಈ ರೀತಿಯ ವರ್ತನೆಯ ಪರಿಚಯವಾಗಿದ್ದು ಮೂವತ್ತು ವರ್ಷಗಳ ಹಿಂದೆ ನಮ್ಮ ನಾಡಿನ ಪ್ರತಿಷ್ಠಿತ ಮಾನಸಿಕ ಆರೋಗ್ಯ ಸಂಸ್ಥೆಯಾದ `ನಿಮ್ಹಾನ್ಸ್', ಬೆಂಗಳೂರಿನಲ್ಲಿ, ಮನೋವೈದ್ಯಕೀಯ ಸಮಜಕಾಯ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮ ಪದವಿ ಮಾಡುತ್ತಿದ್ದಾಗ. ಆ ಸಮಯದಲ್ಲಿ ಕೆಲವು ರೋಗಿಗಳು ಜೋರಾಗಿ ಬೈದಾಡುತ್ತ, ಕೂಗಾಡುತ್ತಿದ್ದರು. ಅವರನ್ನು ಮೈಮೇಲೆ ದೆವ್ವ/ಗಾಳಿ ಬಂದಿದೆಯೆಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿದೆ ಎಂದು ಉತ್ತರ ಬರತ್ತಿತ್ತು. ಈ ವಿಷಯ ಕೇಳಿ ನನಗೆ ಆಶ್ಚರ್ಯವಾಗಿತ್ತು.
ಸಮಾಜಕಾರ್ಯ ಶಿಕ್ಷಣ, ಪ್ರಮೇಯದ ಪ್ರಸ್ತುತ ಸ್ಥಿತಿ ಹಾಗೂ ಭವಿಷ್ಯದ ರೂಪುರೇಷೆಗಳು
ದಿನಾಂಕ:10-02-2011 ರಂದು ಕುವೆಂಪು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗ ಆಯೋಜಿಸಿದ್ದ ಎರಡು ದಿನದ ಕಾರ್ಯಾಗಾರ. ಸಮಾಜದಲ್ಲಿನ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಸಮಾಜಕಾರ್ಯ ಸಂಶೋಧನೆ ದಾರಿದೀಪವಾಗಬೇಕು ಮತ್ತು ಸಮಾಜಕಾರ್ಯದಂತಹ ಶಿಕ್ಷಣದಲ್ಲಿ ರಚನಾತ್ಮಕ ಬದಲಾವಣೆಗಳನ್ನು ತಂದು ಗುಣಾತ್ಮಕ ಸಂಶೋಧನೆಗಳು ನಡೆಯಬೇಕು ಎಂದು ಪ್ರೊಫೆಸರ್ ಎಸ್.ಎ.ಭಾರಿ, ಉಪಕುಲಪತಿಗಳು, ಕುವೆಂಪು ವಿಶ್ವವಿದ್ಯಾಲಯ ಇವರು ಸಮಾಜಕಾರ್ಯ ಶಿಕ್ಷಣ, ಪ್ರಮೇಯದ ಪ್ರಸ್ತುತ ಸ್ಥಿತಿ ಹಾಗೂ ಭವಿಷ್ಯದ ರೂಪುರೇಷೆಗಳು ಕುರಿತು ಎರಡು ದಿನದ ಕಾರ್ಯಾಗಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಪ್ರೊಫೆಸರ್ ಐ.ಎ.ಶರೀಫ್, ನಿವೃತ್ತ ಪ್ರೊಫೆಸರ್ ನಿಮ್ಹಾನ್ಸ್, ಬೆಂಗಳೂರು, ಇವರು ಸಮಾಜಕಾರ್ಯ ಶಿಕ್ಷಣದಲ್ಲಿನ ಬದಲಾವಣೆ ಮತ್ತು ಪ್ರಚಲಿತ ಸ್ಥಿತಿಗತಿಗಳ ಬಗ್ಗೆ ಗಮನಹರಿಸಬೇಕು ಮತ್ತು ಪ್ರಚಲಿತ ಸಮಸ್ಯೆಗಳನ್ನು ಬಗೆಹರಿಸುವ ವೈಜ್ಞಾನಿಕ ವಿಧಾನವಾಗಿ ಇನ್ನೂ ಸಮಾಜಕಾರ್ಯದ ಅಭಿವೃದ್ಧಿ ಆಗಬೇಕು ಎಂದರು. ಇನ್ನೋರ್ವ ಮುಖ್ಯ ಅತಿಥಿ ಪ್ರೊಫೆಸರ್ ಜಿ.ಎಸ್.ಬಿದರಕೊಪ್ಪ, ನಿವೃತ್ತ ಪ್ರೊಫೆಸರ್, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. ಇವರು ಪ್ರಸ್ತುತ ಜಾಗತೀಕರಣದಲ್ಲಿ ಸಮಾಜಕಾರ್ಯದ ಶಿಕ್ಷಣದಲ್ಲಿ ವೈಜ್ಞಾನಿಕ ಪಠ್ಯಕ್ರಮ, ಬೋಧನಾ ವಿಧಾನ ಮತ್ತು ಕ್ಷೇತ್ರಕಾರ್ಯದಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕು ಮತ್ತು ಸಂಶೋಧನೆಗಳು ನಡೆದು ಹೆಚ್ಚು ಕ್ಷೇತ್ರಗಳಲ್ಲಿ ವಿಸ್ತಾರವಾಗಬೇಕು ಎಂದು ಕರೆ ನೀಡಿದರು. ಎಸ್.ಎ. ಶ್ರೀನಿವಾಸಮೂರ್ತಿ ಸಮಾಜ ಸೇವೆಯಲ್ಲಿ ನನ್ನ ಅನುಭವಗಳ ಬಗ್ಗೆ ಒಂದು ಲೇಖನ ಬೇಕೆಂದು ಕೇಳಿ ಶ್ರೀಮತಿ ಅನಿತ ಅವರು ದೂರವಾಣಿಯಲ್ಲಿ ಕರೆ ಮಾಡುವುದಕ್ಕೆ ಕೆಲವು ನಿಮಿಷಗಳ ಮೊದಲು ನನ್ನ ಮೊಬೈಲ್ ಫೋನ್ನಲ್ಲಿ ಒಂದು ಕರೆ ಬಂದಿತ್ತು. ಹೆಣ್ಣು ಧ್ವನಿಯೊಂದು ಕೇಳಿತ್ತು "ನೀವು ಒಂಟಿತನದಿಂದ ಬಳಲುತ್ತಿದ್ದೀರಾ?", ಎಂದು. ತಕ್ಷಣ "ಇಲ್ಲ" ಎಂದು ಹೇಳಿ ಅವಳ ಕರೆಯನ್ನು ಮುಗಿಸಿದ್ದೆ.
ಪ್ರೀತಿ ವಿಶ್ವಾಸದಿಂದ ಬದುಕಿನ ಏರುಪೇರುಗಳಲ್ಲಿ ಬೆಂಬಲವಾಗಿರುವ ನನ್ನ ಕುಟುಂಬ ಮತ್ತು ಬಂಧು ಮಿತ್ರರೊಡನೆ ಇರುತ್ತಿರಲಿಲ್ಲವಾದರೆ, ನನ್ನ ಉತ್ತರ "ಹೌದು" ಎಂದಾಗುತ್ತಿತ್ತೊ ಏನೊ. ಹಣ ಕೊಟ್ಟು ಸ್ನೇಹಜಾಲಗಳ ಸದಸ್ಯನಾಗಿ ಗೆಳೆತನವನ್ನು ಕೊಂಡುಕೊಳ್ಳುತ್ತಿದ್ದೆನೇನೊ. ನಮ್ಮ ಮನೆಯ ಎದುರಿನಲ್ಲಿದ್ದ ಆಟದ ಮೈದಾನದಲ್ಲಿ, ಬೆಂಗಳೂರು ಮಹಾನಗರ ಪಾಲಿಕೆಯು, ಕೆಳ ಸೇತುವೆ ನಿರ್ಮಿಸುವಾಗ ಉಂಟಾದ ಕಲ್ಲು ಮಣ್ಣುಗಳ ತ್ಯಾಜ್ಯವನ್ನು ಸುರಿದಿದ್ದರು. ಅದನ್ನು ನೋಡಿ ಖಾಸಗಿ ಕಟ್ಟಡಗಳ ಅವಶೇಷಗಳೂ ಅಲ್ಲಿ ಹಾಕಲ್ಪಟ್ಟಿದ್ದವು. ಜೊತೆಗೆ ಕೆಲವರು ಕಸದ ರಾಶಿಯನ್ನೂ ಅಲ್ಲಿ ಹಾಕಿ, ಸೊಳ್ಳೆಗಳ ಕಾಟ ಮತ್ತು ದುರ್ಗಂಧದಿಂದ ಸುತ್ತುಮುತ್ತಲಿನ ಜನ ಕಂಗಾಲಾಗಿದ್ದರು. ಅವರುಗಳ ದೂರು ಅಧಿಕಾರಿಗಳ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ. ಸತತ ಎರಡು ವರ್ಷಗಳ ಕಾಲ, ಪತ್ರಗಳ ಮೂಲಕ, ಪತ್ರಿಕೆಗಳಲ್ಲಿ ಲೇಖನ ಬರೆದು, ಚಿತ್ರಗಳನ್ನು ಪ್ರಕಟಿಸಿ, ಅಧಿಕಾರಿಗಳನ್ನು ಭೇಟಿ ಮಾಡಿ, ಕಡೆಗೆ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಸಹಾಯದಿಂದ, ನಗರ ಪಾಲಿಕೆಯಿಂದ, ಮೈದಾನವನ್ನು ಸ್ವಚ್ಛಗೊಳಿಸಿ ಅಲ್ಲಿ ಉದ್ಯಾನವನ್ನು ಮಾಡಿಸುವಲ್ಲಿ ಫಲಪ್ರದನಾದೆ. ಇದನ್ನು ನೋಡಿ ನೆರೆಹೊರೆಯ ನಿವಾಸಿಗಳು, ಈ ಕ್ಷೇತ್ರದ ಅಭಿವೃದ್ಧಿಗೆ ಒಂದು ಸಂಘವನ್ನು ನೋಂದಾಯಿಸಿಕೊಂಡರು. ಈಗ ಇಲ್ಲಿನ ಹಿರಿಯ ನಾಗರಿಕರಿಗೆ, ಅದರಲ್ಲೂ ಸ್ತ್ರೀಯರಿಗೆ, ಬೆಳಿಗ್ಗೆ, ಸಂಜೆ ವಾಯುವಿಹಾರದ ತಾಣವಾಗಿದೆ-ಈ ಉದ್ಯಾನವನ.
ಸಮಾಜಕಾರ್ಯ ಅಧ್ಯಾಪನದಿಂದ ನಿವೃತ್ತಿ ಹೊಂದಿಯೇ ಹದಿನಾರು ವರ್ಷಗಳು ಉರುಳಿದವು. ನನ್ನ ಜೀವನವನ್ನು ಸಿಂಹಾವಲೋಕನ ಮಾಡಿದರೆ ಕಾಣುವುದೇನು? ಸಮಾಜಕಾರ್ಯದ ಮತ್ತು ನನ್ನ ಜೀವನಾನುಭವದ ಹೆಜ್ಜೆಗುರುತುಗಳೇನು? ಈ ಪ್ರಶ್ನೆಗಳ ಸುತ್ತಲೇ ತಿರುಗುತ್ತಿರುವ ಸ್ಥೂಲಾವಲೋಕನ ಈ ಮುಂದಿನದ್ದು.
ಪ್ರವೇಶ ಆಕಸ್ಮಿಕ ಸಮಾಜಕಾರ್ಯಕ್ಕೆ ನಾನು ಪ್ರವೇಶಿಸಿದ್ದು ಆಶ್ಚರ್ಯಕರ ರೀತಿಯಲ್ಲಿ, ಬಹುಶಃ ನನ್ನ ಅರಿವಿಲ್ಲದಂತಯೇ ಗುರುತಿಸಬಹುದಾದರೆ ಸದಾಶ ಯ ಹೊಂದಿದ್ದ ಹಿರಿಯರೊಬ್ಬರ ಸಲಹೆ ಸೂಚನೆಯ ಮೇರೆಗೆ, ಕನ್ನಡ ಸಾಹಿತ್ಯದ ಆರಾಧಕ ಅಥವಾ ಕೃಷಿಕ ಆಗಬೇಕು ಎಂಬುದು ನನ್ನ ಅಪೇಕ್ಷೆಯಾಗಿತ್ತು. ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು, ಕವನ ಪ್ರಬಂಧ ರಚನೆಯಲ್ಲಿ ತೊಡಗಿದ್ದು, ಕನ್ನಡ ಸಾಹಿತ್ಯ ಕೃತಿಗಳನ್ನೇ ಓದುವುದರಲ್ಲಿ ಹೆಚ್ಚಿನ ಆಸಕ್ತಿ, ಆಸ್ಥೆಯನ್ನು ತಳೆದಿದ್ದೆ. ಅಂದಿನ ಮದ್ರಾಸು ಪ್ರಾಂತ್ಯಕ್ಕೆ ಎಸ್.ಎಸ್.ಎಲ್.ಸಿ., ಪರೀಕ್ಷೆಯಲ್ಲಿ ಕನ್ನಡದಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ. ನನ್ನ ಗುರುಗಳೂ ನನಗೆ ಪ್ರೋತ್ಸಾಹದ ನೆರವು ನೀಡುತ್ತಿದ್ದರು. ಇದೂ ನನ್ನ ಕನ್ನಡ ದುಡಿಮೆಗೆ ಒತ್ತಾಸೆಯಾಯ್ತು. (ಆರ್ಥಿಕ ಅನನುಕೂಲ ಮತ್ತು ಇತರ ತೊಂದರೆಗಳ ಕಾರಣದಿಂದ ಒಂದು ವರ್ಷ ನನ್ನ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದಿದ್ದುದರಿಂದ ಪತ್ರಿಕೋದ್ಯಮಿಯಾಗಿ ಹುಬ್ಬಳ್ಳಿ, ದಾವಣಗೆರೆ ನಗರಗಳಲ್ಲಿ ಕೆಲಸ ಮಾಡಬೇಕಾಯ್ತು) ಪ್ರೌಢಶಾಲಾ ಶಿಕ್ಷಣದ ನಂತರ ನನ್ನ ಅಣ್ಣ ಹಿ.ಮ. ನಾಗಯ್ಯನವರ ಸಹಾಯದಿಂದ ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಸೇರಿದೆ. ಅಲ್ಲಿ ಓದುವಾಗ ಪ್ರೊ. ಕೆ.ಎಸ್. ಕೃಷ್ಣಮೂರ್ತಿ, ಪ್ರೊ. ಗೋಪಾಲಕೃಷ್ಣ ಅಡಿಗ, ಇಂಗ್ಲೆಂಡಿನ ಡೇವಿಡ್ ಹಾರ್ಸ್ ಬರೋ ಇಂಥವರ ನೆರವು ದೊರೆಯಿತು. ಅಲ್ಲಿಯೇ ಕರುಣಾಮಯಿ ಫಾದರ್ ಮುತಡಂ ಕಷ್ಟಕಾಲದಲ್ಲಿ ನೆರವಾದರು. ಆ ಅಧ್ಯಯನ ಕಾಲದಲ್ಲಿಯೇ ಕನ್ನಡದ ಕೃಷಿ ನಡೆದು ಅಂತಿಮ ಪರೀಕ್ಷೆಯಲ್ಲಿ ಒಂಭತ್ತನೆಯ ರ್ಯಾಂಕ್ ಪಡೆದುದಲ್ಲದೆ ಮೈಸೂರು ವಿಶ್ವವಿದ್ಯಾಲಯಕ್ಕೆ ಕನ್ನಡದಲ್ಲಿ ಪ್ರಥಮ ಸ್ಥಾನ ದೊರೆಕಿಸಿಕೊಂಡೆ ಎಂದು ನೆನಪು. ಆದುದರಿಂದಲೂ ಮಹಾರಾಜ ಕಾಲೇಜಿನಲ್ಲಿ ಕನ್ನಡ ಆನರ್ಸ್ ಓದಲು ನನಗೆ ಸಹಜವಾಗಿಯೇ ಅವಕಾಶ ಸಿಕ್ಕಿದುದಲ್ಲದೆ ಮೆರಿಟ್ ಸ್ಕಾಲರ್ಷಿಪ್ ಕೂಡಾ ದೊರೆಯಿತು. ಐ.ಎ.ಎಸ್. ಅಧಿಕಾರ ಮತ್ತು ಸಾಮಾಜಿಕ ಸ್ಥಾನಮಾನ, ಎದುರಲ್ಲಿ ಕಂಡರೆ ಸಾಕು ಎದ್ದು ನಿಂತು ಕೈ ಮುಗಿವ ಜನ,ಅಬ್ಬಾ! ನೆನೆಸಿಕೊಂಡರೆ ಏನೋ ಒಂದು ತರಹದ ಸಂತೋಷ. ಇಂತಹ ಅಧಿಕಾರ, ಗೌರವ, ಮನ್ನಣೆಗಳನ್ನು ಬೇಡವೆನ್ನುವುದು ಯಾರಿಗಾದರು ಸಾಧ್ಯವೇ? ಇಲ್ಲಪ್ಪ ಎನ್ನುವುದು ಸಾಮಾನ್ಯವಾಗಿ ಎಲ್ಲರ ಬಾಯಿಯಿಂದ ಕೇಳಿಬರುವ ಉತ್ತರ. ಆ ರೀತಿಯ ತೀರ್ಮಾನತೆಗೆದುಕೊಳ್ಳುವ ದಿಟ್ಟತನ ಕೇವಲ ಅಪರೂಪ ಮತ್ತು ಅಸಾಧ್ಯರು ಎನಿಸುವಂತಹ ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ಸಾಧ್ಯ. ಅಂತಹ ಅಸಮಾನ್ಯರ ಸಾಲಿನಲ್ಲಿ ಸೇರಿಸಬಹುದಾದಂತ ಹೆಸರೇ ಅರುಣಾರಾಯ್. ಇವರನ್ನು ಸಮಾಜ ಕಾರ್ಯದಅರುಣೋದಯ ಎಂದರೆ ತಪ್ಪಾಗಲಾರದು. ಇವರು ತಮ್ಮ ಜಾಣ್ಮೆ, ಬುದ್ದಿಶಕ್ತಿಗೆ ದೊರೆತ ಐ.ಎ.ಎಸ್. ಅಧಿಕಾರ ತೊರೆದು ಸಾಮಾಜಿಕಕಾರ್ಯಕರ್ತೆಯಾಗಿ ಸಲ್ಲಿಸಿದ ಸೇವೆ, ಕೊಡುಗೆ ಅಪಾರ.
|
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|