Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಬಿಕರಿಯಾಗದ ಕನಸುಗಳು

7/27/2022

0 Comments

 
Picture
ಲೇಖಕರು: ಆರ್. ಉಷಾ
ಪುಟಗಳು: 248

ಪುಟ ತಿರುವಿದಾಗ

ಭಾವಗೀತೆಗಳು
೧.           ಮುಸ್ಸಂಜೆಯ ಹಳೆ ನೆನಪು
೨.           ಮೆಲುಕು
೩.           ಶಂಭುಲಿಂಗನ ಗೀತೆ
೪.           ಹೊಂಬೆಳಗು
 
ಪ್ರೀತಿ-ಪ್ರೇಮ-ಪ್ರಣಯ
೫.           ದಾಂಪತ್ಯ
೬.           ನನ್ನವನು
೭.           ಮುಗುಳ್ನಗಲು ಉಗುಳ್ನುಂಗಲು ಹುಟ್ಟೀತೆ ಪ್ರೀತಿ
೮.          ಝುಮುಕಿ
೯.           ಶೃಂಗಾರ
೧೦.       ಗಮ್ಮತ್ತು

Read More
0 Comments

ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯ

7/27/2022

0 Comments

 
Picture
ಲೇಖಕರು: ಗಂಗಾಧರ ರೆಡ್ಡಿ ಎನ್.
ಡಾ. ಲೋಕೇಶ್ ಎಂ.ಯು.

ಪುಟಗಳು: 272

Picture
Picture

Read More
0 Comments

ಗೆಲುವು

7/27/2022

0 Comments

 
Picture
ಲೇಖಕರು: ಶೇಖರ್ ಗಣಗಲೂರು
ಪುಟಗಳು: 328
Buy
Picture
Picture

Read More
0 Comments

ಸಾಮಾಜಿಕ ಕ್ರಿಯಾಚರಣೆ

1/25/2022

5 Comments

 
Picture
ಲೇಖಕರು: ಡಾ. ಸಿ.ಆರ್. ಗೋಪಾಲ್
ಪುಟಗಳು: 440

Buy
ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಒಂದು ವಿಧಾನ. ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ, ಸಮಾಜಕಾರ್ಯದ ಮೂಲವಿಧಾನಗಳೆಂದು ಪರಿಗಣಿಸಿದ್ದರೆ, ಸಾಮಾಜಿಕ ಕ್ರಿಯಾಚರಣೆಯನ್ನು ಸಮಾಜಕಾರ್ಯದ ಒಂದು ಪೂರಕವಿಧಾನ ಎಂದು ಪರಾಮರ್ಶಿಸಲಾಗಿದೆ. ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಪ್ರಮುಖ ವಿಧಾನಗಳಲ್ಲಿ ಒಂದು ಎಂದು ವಿಶ್ಲೇಷಣೆ ಮಾಡುವವರೂ ಇದ್ದಾರೆ.
​
ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ ಅನುಗಾಲ (ಅವಿರತ) ನಡೆಯುವ ಯೋಜನೆ / ಕಾರ್ಯಕ್ರಮಗಳಾಗಿರುವುದರಿಂದ ಅವುಗಳನ್ನು ಮೂಲವಿಧಾನಗಳೆಂದು ಕರೆಯಲಾಗಿದೆ. ಆದರೆ ಸಾಮಾಜಿಕ ಕ್ರಿಯಾಚರಣೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಸಂಘಟನೆಗೊಳ್ಳುತ್ತದಾದ್ದರಿಂದ, ಅವನ್ನು ಪೂರಕವಿಧಾನ ಎಂದು ನಿರ್ಣಯಿಸಿರಬೇಕು. ಸಮಾಜದ ಓರೆ-ಕೋರೆಗಳನ್ನು ತಿದ್ದಲು, ದೌರ್ಜನ್ಯಗಳನ್ನು ತಡೆಯಲು, ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಮಾಜಿಕ ಕ್ರಿಯಾಚರಣೆ ಪ್ರಸ್ತುತ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕ್ರಿಯಾಚರಣೆಯೂ ಅತಿ ಅವಶ್ಯಕವಾದ ವಿಧಾನವೇ ಹೌದು.


Read More
5 Comments

ಮನೋ-ವೈದ್ಯಕೀಯ ಸಮಾಜಕಾರ್ಯ

1/25/2022

4 Comments

 
Picture
ಲೇಖಕರು: ಡಾ. ಲೋಕೇಶ್ ಎಂ.ಯು. ಮತ್ತು ಪವಿತ್ರ ಎ.ವಿ.
ಪುಟಗಳು: 200

Buy
20ನೇ ಶತಮಾನದಲ್ಲಿ ಆರಂಭಗೊಂಡ ನೂತನ ಜ್ಞಾನ ಶಾಖೆಯಾದ ಸಮಾಜಕಾರ್ಯ ವೃತ್ತಿಪರರಿಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವನ್ನು ಒದಗಿಸುವ ಬಹುಮುಖ ವೃತ್ತಿಯಾಗಿದೆ. ಪ್ರಸ್ತುತ ಸಮಾಜಕಾರ್ಯ ವೃತ್ತಿಯು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪಾತ್ರ ವಹಿಸುತ್ತಿದ್ದು, ಮಾನಸಿಕ ಆರೋಗ್ಯ ರಕ್ಷಣೆಯಲ್ಲೂ ತನ್ನದೇ ಆದ ಮಹತ್ವದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಆಧುನಿಕ ಸಮಾಜದಲ್ಲಿ ನಾನಾ ಕಾರಣಗಳಿಂದ ಮನೋವ್ಯಾಕುಲಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಹಾಗೂ ಅದರಲ್ಲಿರುವ ಸಂಕೀರ್ಣತೆಯ ಸವಾಲುಗಳು ದಿನೇ ದಿನೇ ಅಧಿಕವಾಗುತ್ತಿರುವುದು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ.

ಇಂದು ಸಮಾಜಕಾರ್ಯ ತನ್ನ ವ್ಯಾಪ್ತಿಯನ್ನು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿದೆ. ಈ ಹಿಂದೆ ಸಮಾಜಕಾರ್ಯ ವೃತ್ತಿಪರರ ಸೇವೆಗಳು ಸಮುದಾಯ ಆಧಾರಿತ ಕಾರ್ಯಕ್ರಮಗಳು ತರಬೇತಿ, ಅನುಷ್ಠಾನ, ಆಪ್ತ ಸಮಾಲೋಚನೆ, ಸಮಾಜಕಾರ್ಯದ ವಿವಿಧ ವಿಧಾನಗಳು/ತಂತ್ರಗಳ ಬಳಕೆ ಹಾಗೂ ಸಂಶೋಧನೆಗಳಿಗೆ ಸೀಮಿತವಾಗಿದ್ದವು. ಪ್ರಸ್ತುತ ಇವರ ಸೇವೆಗಳು ಮಾನಸಿಕ ಆರೋಗ್ಯ ಕ್ಷೇತ್ರಕ್ಕೂ ವಿಸ್ತರಿಸಿದ್ದು, ಮನೋ-ರೋಗಿಗಳನ್ನು ಚಿಕಿತ್ಸೆ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸುವ ಬಹುತಜ್ಞರ ಚಿಕಿತ್ಸಾ ತಂಡದಲ್ಲಿ ಮನೋ-ವೈದ್ಯಕೀಯ ಸಮಾಜಕಾರ್ಯಕರ್ತರ ಪಾತ್ರ ನಿರ್ಣಾಯಕವಾದುದಾಗಿದೆ. ಬಹುಮುಖ್ಯವಾಗಿ ಮಾನಸಿಕ ಆರೋಗ್ಯ ಉತ್ತೇಜಕ ಕಾರ್ಯಕ್ರಮಗಳು, ಮಾನಸಿಕ ಆರೋಗ್ಯ ಸಮಸ್ಯೆಗಳ ತಡೆಗಟ್ಟುವಿಕೆ, ಚಿಕಿತ್ಸಕ ಮಧ್ಯಸ್ಥಿಕೆಗಳು, ಪುನರ್ವಸತಿ ಸೇವೆಗಳು ಮತ್ತು ಮಾನಸಿಕ ರೋಗಿಗಳನ್ನು ಕುಟುಂಬಕ್ಕೆ ಮರುಜೋಡಿಸುವಲ್ಲಿ ಹಾಗೂ ಸಮುದಾಯದ ಮುಖ್ಯವಾಹಿನಿಗೆ ತರುವಲ್ಲಿ ವೃತ್ತಿಪರ ಮನೋ-ವೈದ್ಯಕೀಯ ಸಮಾಜಕಾರ್ಯಕರ್ತರ ಕೊಡುಗೆ ಗಣನೀಯವಾದುದು.

Read More
4 Comments

ಶಿಕ್ಷಣ ರಥ ನೀತಿ ಪಥ

1/25/2022

2 Comments

 
Picture
ಲೇಖಕರು: ಎಚ್.ಎನ್. ಯಾದವಾಡ
ಪುಟಗಳು: 144

Buy
ಶಿಕ್ಷಣದ ರಥವು ನೀತಿ ಪಥದ ಮೇಲೆ ಚಲಿಸಬೇಕು ಹಾಗೂ ಪಾಲಕರೆ ಮಕ್ಕಳಿಗೆ ದಾರಿದೀಪವಾಗಬೇಕು. ಮಕ್ಕಳು ಕೇವಲ ಶಿಕ್ಷಿತರಾದರೆ ಸಾಲದು, ಸುಶಿಕ್ಷಿತರಾಗಬೇಕು. ಸಭ್ಯ ಸಂಸ್ಕೃತಿಯ ನೀತಿ ಶಿಕ್ಷಣ ಅವರಿಗೆ ಸಿಗಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಿದರಾಯಿತು, ಅಲ್ಲಿ ಅವರು ಎಲ್ಲವನ್ನೂ ಕಲಿತುಕೊಂಡು ಬರುತ್ತಾರೆ ಎಂಬ ಭ್ರಮಾ ಲೋಕದಿಂದ ಪಾಲಕರು ಹೊರಗೆ ಬರಬೇಕು. ಮಕ್ಕಳ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ನೈತಿಕ, ಸಾಮಾಜಿಕ ಹಾಗೂ ಸೌಂದರ್ಯಾತ್ಮಕ, ಒಟ್ಟಾರೆ ಸರ್ವಾಂಗೀಣ ಮೌಲಿಕ ಶಿಕ್ಷಣವನ್ನು ಮಗುವು ಪಡೆದುಕೊಳ್ಳಬೇಕು. ಸಮಾಜದ ಮೂಲ ಘಟಕ ಹಾಗೂ ಮಗುವಿನ ಮೊದಲ ಪಾಠ ಶಾಲೆಯಾದ ಕುಟುಂಬದಿಂದಲೆ ಮಗುವು ಪ್ರೀತಿ, ಪ್ರೇಮ, ಸ್ನೇಹ, ಮಮತೆ, ಮಮಕಾರ ಹಾಗೂ ವಾತ್ಸಲ್ಯಗಳನ್ನು ಪಡೆದುಕೊಳ್ಳುತ್ತ ಬೆಳೆಯುತ್ತದೆ. ಶಿಸ್ತು, ಸಂಯಮ, ಶಾಂತಚಿತ್ತತೆ, ಸಹ ಜೀವನ ಹಾಗೂ ಸಹಕಾರದಂತಹ ಸದ್ಗುಣ ಸಂಪನ್ನತೆಗಳು ಮಕ್ಕಳಲ್ಲಿ ಜಾಗೃತಗೊಳ್ಳಲು ಪೂರಕವಾದ ವಾತಾವರಣ ಮನೆಯಲ್ಲಿರಬೇಕು. ಕುಟುಂಬದಲ್ಲಿ ಕಲಿತ ಮೌಲ್ಯಗಳೇ ಮುಂದೆ ವಿದ್ಯಾಧ್ಯಯನ ಮಾಡುವ ಶಿಕ್ಷಣ ಸಂಸ್ಥೆಗಳಲ್ಲಿ ಇನ್ನಷ್ಟು ದೃಢವಾಗುತ್ತವೆ. ಮೌಲ್ಯಾಧಾರಿತ ಶಿಕ್ಷಣ ಪಡೆದುಕೊಳ್ಳಲು ಪಾಲಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಅದರಿಂದ ಸುಂದರ ಸಮಾಜ ನಿರ್ಮಾಣವಾಗಲು ವೇದಿಕೆ ಸಿದ್ಧವಾಗುವುದು.

Read More
2 Comments

ವೃಂದಗತ ಸಮಾಜಕಾರ್ಯ

8/3/2020

5 Comments

 
Picture
ಲೇಖಕರು : ಡಾ. ಸಿ.ಆರ್. ಗೋಪಾಲ್
ಪುಟಗಳು : 336
Buy
ಪರಿವಿಡಿ
ಮುನ್ನುಡಿ
ಪ್ರಕಾಶಕರ
ಪ್ರಸ್ತಾವನೆ-ಕೃತಜ್ಞತೆ
ಲೇಖಕರ ಪರಿಚಯ
 
ಅಧ್ಯಾಯ - ಒಂದು
ಪೀಠಿಕೆ:- ಸಮಾಜಕಾರ್ಯದ ಸಂಕ್ಷಿಪ್ತ ಪರಿಚಯ, ಸಮಾಜಕಾರ್ಯದ ಮೂಲ ವಿಧಾನಗಳು, ಪೂರಕ ವಿಧಾನಗಳು.
 
ಅಧ್ಯಾಯ - ಎರಡು
ವೃಂದಗಳ ಅರ್ಥಗ್ರಹಿಕೆ:- ವ್ಯಾಖ್ಯೆಗಳು, ಜಮಾವಣೆ, ಸಮಷ್ಟಿತನ ಮತ್ತು ವೃಂದಗಳ ವ್ಯತ್ಯಾಸ, ವೃಂದದ ಅಂಶಗಳು, ವೃಂದದ ಪ್ರಕಾರಗಳು,
 
ಅಧ್ಯಾಯ - ಮೂರು
ವೃಂದಗತ ಸಮಾಜಕಾರ್ಯದ ವ್ಯಾಖ್ಯೆಗಳು, ಗ್ರಹಿಕೆಗಳು, ಲಕ್ಷಣಗಳು, ಉದ್ದೇಶಗಳು:- ವ್ಯಾಖ್ಯೆಗಳು, ವಿಸ್ತೃತ ವ್ಯಾಖ್ಯೆ, ಸ್ವಯಂಪ್ರೇರಣೆ ಅಥವಾ ಕಾರ್ಯಕರ್ತನ ಪ್ರೇರಣೆ, ವೃಂದದ ಸದಸ್ಯರ ಸಂಖ್ಯೆ, ಕಾರ್ಯಕರ್ತನ ಮಾರ್ಗದರ್ಶನ, ಅಂತರಕ್ರಿಯೆ-ಪಾರಸ್ಪರಿಕ ಕ್ರಿಯೆ, ಸಂಪರ್ಕ, ಹೊಂದಾಣಿಕೆ, ಗುಂಪಿನ ವಾತಾವರಣ, ಚಟುವಟಿಕೆಗಳು, ಅನುಭವ, ನಿಶ್ಚಿತ ಯೋಜನೆಗಳು, ಕಾರ್ಯಕ್ರಮಗಳು, ಪ್ರಜಾಪ್ರಭುತ್ವದ ಮೌಲ್ಯಗಳು, ವೃಂದಗತ ಸಮಾಜಕಾರ್ಯದ ಗ್ರಹಿಕೆಗಳು, ವೃಂದಗತ ಸಮಾಜಕಾರ್ಯದ ಲಕ್ಷಣಗಳು, ವೃಂದಗತ ಸಮಾಜಕಾರ್ಯದ ಧ್ಯೇಯೋದ್ದೇಶಗಳು, ಉದ್ದೇಶಗಳ ಪ್ರಕಾರಗಳು, ಸೇವಾಸಂಸ್ಥೆಯ ಉದ್ದೇಶಗಳು, ಗುಂಪಿನ ಸಹವಾಸದಿಂದ ಆಗುವ ಅನುಕೂಲಗಳು. 

Read More
5 Comments

ಸಮಾಜಕಾರ್ಯದ ಶಬ್ದಕೋಶ

6/11/2020

1 Comment

 
Picture
ಸಂಪಾದಕರು : ಪ್ರೊ. ಎಚ್.ಎಂ. ಮರುಳಸಿದ್ಧಯ್ಯ
ಪುಟ : 104
Buy
ಬಹಳ ವರ್ಷಗಳ ಹಿಂದೆ ಆಂಗ್ಲ ಭಾಷೆಯಲ್ಲಿದ್ದ ಸಮಾಜ ವಿಜ್ಞಾನ, ಸಮಾಜಕಾರ್ಯ ಸಾಹಿತ್ಯವನ್ನು ಓದುತ್ತಿದ್ದಾಗ ಕೆಲವು ಶಬ್ದಗಳ ಸರಿಯಾದ ಅರ್ಥ ಆಗಲಿಲ್ಲ. ಅಂಥ ಶಬ್ದಗಳನ್ನು ಪಟ್ಟಿ ಮಾಡುತ್ತಾ ಅವುಗಳಿಗೆ ಸೂಕ್ತವಾದ ಕನ್ನಡ ಶಬ್ದಗಳು ಯಾವುವು ಎಂಬುದನ್ನು ಆಂಗ್ಲ-ಕನ್ನಡ ನಿಘಂಟುಗಳಲ್ಲಿ ದೊರೆಯುವ ಸಮಾನ ಅರ್ಥಗಳ ಪಟ್ಟಿಯನ್ನು ಮಾಡತೊಡಗಿದೆ. ಈ ಕೆಲಸದ ಮೂಲಕ ನನ್ನ ತಿಳಿವಳಿಕೆಯನ್ನು ಹೆಚ್ಚು ಮಾಡಿಕೊಳ್ಳಬೇಕು ಎಂಬುದೇ ಆರಂಭದ ಉದ್ದೇಶವಾಗಿತ್ತು. ಆದರೆ, ಆ ಶಬ್ದಗಳು ಇತರರಿಗೂ, ಅದರಲ್ಲೂ ವಿದ್ಯಾರ್ಥಿಗಳಿಗೆ, ಹೆಚ್ಚಾಗಿ ಬೇಕಾಗುತ್ತವೆ ಎಂದು ಒಂದು ಕಿರು ಶಬ್ದಕೋಶವನ್ನು ಸಿದ್ಧ ಮಾಡತೊಡಗಿದೆ. ಈ ನನ್ನ ಕೆಲಸವನ್ನು ನನ್ನ ಸಹೋದ್ಯೋಗಿಗಳ ಮುಂದಿರಿಸಿ, ಅವರ ಸಹಕಾರವನ್ನೂ ಪಡೆದುಕೊಳ್ಳತೊಡಗಿದೆ. ಇಂಥ ಶಬ್ದಕೋಶವು ಸಮಾಜಕಾರ್ಯದ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ, ಕಾರ್ಯಕರ್ತರಿಗೂ ತುಂಬಾ ಉಪಯುಕ್ತವಾಗುತ್ತದೆ ಎಂಬ ಅಭಿಪ್ರಾಯವು ಅವರದೂ ಆಗಿತ್ತು. ಅವರು ನನಗೆ ನೆರವಾಗಲು ಮುಂದಾದರು. ಹೀಗೆ ಈ ಪುಸ್ತಿಕೆಯು ಸಿದ್ಧವಾಯಿತು.

Read More
1 Comment

ಸಮಾಜಸೇವೆಯ ಮಿನುಗುತಾರೆ ಮೀನಾ

6/10/2020

1 Comment

 
Picture
ಲೇಖಕರು : ಕೆ.ವಿ. ರಾಮ್
ಪುಟ : 224
Buy
ಅಂದು ಮೀನಾಕ್ಷಿಯ ಸಂಭ್ರಮ ಹೇಳತೀರದು. ಉತ್ಸಾಹ ಅವಳಲ್ಲಿ ತುಂಬಿ ತುಳುಕುತ್ತಿತ್ತು. ಮನೆಯಲ್ಲಿ ಎಲ್ಲಾ ಕೈವಾಡ ಅವಳದೇ. ಆ ಶುಕ್ರವಾರ ಕಾರ್ತಿಕ ಶುದ್ಧ ದ್ವಾದಶಿ-ಉತ್ಥಾನ ದ್ವಾದಶಿ. ಹೆಣ್ಣು ಮಕ್ಕಳು ತುಳಸೀದೇವಿಗೆ ಬೃಂದಾವನದಲ್ಲಿ ಪೂಜೆ ಮಾಡುವ ವಿಶೇಷ ದಿನ. ಪರಮ ಪೂಜ್ಯ ಪತಿವ್ರತೆ ವೃಂದೆಯನ್ನು ನೆನಪು ಮಾಡುವ ದಿನ. ತನ್ನ ಪಾತೀವ್ರತ್ಯ ಬಲದಿಂದ ತನ್ನ ಗಂಡ ಜರಾಸಂಧನನ್ನು ಅಜೇಯನನ್ನಾಗಿ ಮಾಡಿದ್ದ ಸತಿ. ದೇವತೆಗಳು ತಮ್ಮ ಶತ್ರುವಾದ ಜರಾಸಂಧನನ್ನು ದಮನ ಮಾಡಲಾಗದೆ ಅವನನ್ನು ದಮನ ಮಾಡುವಂತೆ ಮಹಾ ವಿಷ್ಣುವನ್ನು ಪ್ರಾರ್ಥಿಸಿದರು. ವೃಂದೆಯ ಪಾತೀವ್ರತ್ಯವನ್ನು ಭಂಗಪಡಿಸಿದ ಹೊರತು ಜರಾಸಂಧನನ್ನು ಗೆಲ್ಲುವುದು ಅಸಾಧ್ಯವೆಂದು ತಿಳಿದಿದ್ದ ವಿಷ್ಣು ಜರಾಸಂಧನು ಯುದ್ಧ ಮಾಡಲು ಹೊರಗೆ ಹೋಗಿದ್ದಾಗ ಅವನ ರೂಪ ಧರಿಸಿ ವೃಂದೆಯನ್ನು ಸೇರಿದ, ವಿಷ್ಣು ಆಕೆಯ ಪಾತೀವ್ರತ್ಯ ಭಂಗ ಮಾಡಿದ. ಆ ಗಳಿಗೆಯಲ್ಲೇ ಜರಾಸಂಧನ ಸೋಲು ಸಾವಾಗಿತ್ತು. ಸತ್ಯ ತಿಳಿದ ವೃಂದೆ ವಿಷ್ಣುವಿಗೂ ಪತ್ನಿ ವಿಯೋಗವಾಗಲೆಂದು ಶಪಿಸಿ, ಚಿತೆಯಲ್ಲಿ ಪ್ರಾಣಬಿಟ್ಟಳು. ವೃಂದೆ ಗತಿಸಿದ ಜಾಗದಲ್ಲೇ ತುಳಸೀ ಬೆಳೆಯಿತು. ಬೃಂದಾವನ ನಿರ್ಮಿತವಾಯಿತು. ತುಳಸಿ ಮಹಾವಿಷ್ಣುವಿನ ಪ್ರೀತಿ ಪಾತ್ರಳಾದಳು. ಹೀಗಾಗಿ ಉತ್ಥಾನ ದ್ವಾದಶಿ, ಹೆಣ್ಣು ಮಕ್ಕಳು ತುಳಸಿಗೆ ವೃಂದಾವನದಲ್ಲಿ ವಿಶೇಷ ಪೂಜೆ ಮಾಡಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸೆಂದು ಪ್ರಾರ್ಥಿಸುವ ವಿಶೇಷ ದಿನ.

Read More
1 Comment

ಆತ್ಮೀಯರು

6/10/2020

0 Comments

 
Picture
ಲೇಖಕರು : ಪ್ರೊ. ಎಚ್.ಎಂ. ಮರುಳಸಿದ್ಧಯ್ಯ
ಪುಟ : 228
Buy
ಪರಿವಿಡಿ
  1. ರಾಮಚಂದ್ರನ ಚಿತ್ರ
  2. ಬಾಗದಿಹ ನಿಲುವು-ಬಸವರಾಜ ಕಟ್ಟೀಮನಿಯವರದ್ದು
  3. ವಿಶ್ವವನ್ನೇ ತಮ್ಮ ಹೃದಯದಲ್ಲಿಟ್ಟುಕೊಂಡು ಕಾಪಾಡಿದ ಸುತ್ತೂರ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು
  4. ಬದುಕು-ಬರಹಗಳ ಸಮತೂಕ : ಡಾ. ಚೆನ್ನವೀರ ಕಣವಿ
  5. ಚೌಕಟ್ಟಿಗೆ ಸಿಗದ ವ್ಯಕ್ತಿತ್ವ : ಡಾ. ಚಿದಾನಂದಮೂರ್ತಿ
  6. ಗುರು-ಶಿಷ್ಯರ ಸೋಲು-ಗೆಲುವು-ವೀರಪ್ಪ ಮಾಸ್ತರನ್ನು ನೆನೆದು
  7. ನಮ್ಮ ನಡುವೆಯೇ ಇರುವ ಒಂದು `ಲೆಜಂಡ್ ಶ್ರೀ ರಾಜಶೇಖರನ್ !
  8. ಕೃತಜ್ಞತೆಯ ಸಮರ್ಪಣೆ-ಡಾ. ಸಿದ್ಧರಾಮಣ್ಣಗೆ
  9. ನನ್ನ ಸಮ್ಮತಿಯಿಂದ ಮುಗುಳೊಡೆದು ಮೃದು ಮಧುರವಾಗಿ ಅರಳಿದ ದಾಂಪತ್ಯ : ವಿಜಯನಳಿನಿ=ರಮೇಶ        
  10. ಧೀರ ದೊರೆಸ್ವಾಮಿ
  11. ಸ್ಥಿತಪ್ರಜ್ಞೆಯ ಅಪರಂಜಿ: ಪ್ರೊ. ಎಂ. ವಾಸುದೇವಮೂರ್ತಿ
  12. ಆದರ್ಶ-ಅನಾದರ್ಶಗಳ ಸೋಜಿಗ: ಉಮಾ-ಶ್ರೀ
  13. ಶೈಕ್ಷಣಿಕ ಮರುಭೂಮಿಯಲ್ಲೊಂದು ಓಯಸಿಸ್ : ಡಾ. ಟಿ. ತಿಪ್ಪೇಸ್ವಾಮಿ
  14. ಆಧುನಿಕ ಸಮಾಜಕಾರ್ಯಕ್ಕೆ ಪ್ರಾಚ್ಯದ ಲೇಪನ : ಶ್ರೀಮತಿ ಸುಶೀಲಮ್ಮ
  15. ಇಲ್ಲಿ, ಅಲ್ಲಿ, ಎಲ್ಲೆಲ್ಲೂ ಕೈಗೆ ಸಿಕ್ಕೂ ಸಿಗದ ಪಾದರಸ : ರಾ.ನಂ.
  16. ಸ್ಥಾಯೀ ಭಾವ : ಪ್ರೊ. ಶೇಖರ್ ಪೂಜಾರ್
  17. ಪ್ರೊ. ಎ.ಎಸ್.(ಆ.ಸೂ.) ವೆಂಕಟರಾಮಯ್ಯ
  18. ಅಚ್ಚರಿಯ ಆಗರ ಗೊರುಚ
  19. ವಿಶಾಲ ದೃಷ್ಟಿಯನ್ನು ನೀಡಿದ ಪ್ರೊ|| ಡೇವಿಡ್ ಹಾರ್ಸ್‍ಬ್ರೊ 
  20. ಅಲೆಮಾರಿ ಗೆಳೆಯ ಡಾ. ಮರಕಿಣಿ ಭಟ್ಟ
  21. ಅಳುವ ಕಡಲಲ್ಲಿ ನಗುವಿನ ಹಾಯಿ ದೋಣಿಯನ್ನು ಸಾಗಿಸಿದ ಪ್ರೊ. ಗೋಪಾಲಕೃಷ್ಣ ಅಡಿಗ
  22. ಅತಿರೇಕವೇ ಮೂರ್ತಿಗೊಂಡ ವ್ಯಕ್ತಿತ್ವದ ಡಾ. ಕೆ. ಈಶ್ವರನ್
  23. ಮರೆಯಲಾದೀತೆ ಮೋಡದಲ್ಲಿ ಮರೆಯಾದ ಚಂದ್ರಪ್ಪನವರನ್ನು !
  24. ಮಧುರಯಾತನೆಯ ಇತಿಹಾಸವನ್ನು ನನ್ನ ಜೀವನದಲ್ಲಿ ಬರೆದ ಪ್ರೊ. ಜಯಲಕ್ಷಮ್ಮಣ್ಣಿ
  25. ಮಲ್ಲೇಶ್ವರನಲ್ಲಡಗಿದ ಶ್ರೀ ಕೊಟ್ರಪ್ಪ
  26. ಲೌಕಿಕ-ಅಲೌಕಿಕದ ಸಂಯೋಚಿತ ವ್ಯಕ್ತಿತ್ವದ ಇನಾಮಹೊಂಗಲದ ಶ್ರೀ ಚೆನ್ನವೀರ ಸ್ವಾಮಿಗಳು
  27. ನನ್ನ ಬಾಳಿಗೆ ತಿರುವು ಕೊಟ್ಟ ಡಾ. ಬಿ.ಎಲ್. ಮಂಜುನಾಥ
  28. ಅವ್ವನಾದ ಅಕ್ಕ : ಬಸಕ್ಕ
  29. ಶೂನ್ಯ(ವನ್ನೆ) ಸಂಪಾದಿಸಿದ ಸ್ನೇಹಿತ, ಡಾ. ಟಿ.ವಿ. ನಾಗಪ್ಪ
  30. ಮಾಡುವ ಮಾಟದಲ್ಲಿ ತಾನಿಲ್ಲದಿದ್ದ ಡಾ. ಶಾಂತಿನಾಥ ದೇಸಾಯಿ
  31. ಗೊತ್ತಿಗೆ ಹಚ್ಚಿದ ಗುರು ಡಾ. ಸಿ.ಪಿ. ಗೋಯಲ್
 
ಅನುಬಂಧ
- ಸಮಾಜಕಾರ್ಯದ ಕಣಸುಗಾರ
  ಲೇಖಕಿ-ಕು. ನಿವೇದಿತ ಬಿ.ಎಂ

Read More
0 Comments

ಭಾಷಣ ಕೈಪಿಡಿ

5/22/2020

6 Comments

 
Picture
ಲೇಖಕರು: ಡಾ. ಸಿ.ಆರ್. ಗೋಪಾಲ್
ಪುಟಗಳು: 245
Buy
ಪರಿವಿಡಿ
ಮುನ್ನುಡಿ
ಪ್ರಕಾಶಕರ ನುಡಿ
ಪ್ರಸ್ತಾವನೆ-ಕೃತಜ್ಞತೆ
ಲೇಖಕರ ಪರಿಚಯ
 
1. ಅಧ್ಯಾಯ ಒಂದು
ಪೀಠಿಕೆ, ಭಾಷಣ ಒಂದು ಕಲೆ, ಭಾಷಣದ ವ್ಯಾಖ್ಯೆ-ವಿವರಣೆ, ಭಾಷಣದ ಉದ್ದೇಶ, ಭಾಷಣದ ಅಂಶಗಳು.
 
2. ಅಧ್ಯಾಯ ಎರಡು
ಭಾಷಣದ ವೇದಿಕೆ / ಸ್ಥಳ, ಮಹತ್ವ, ಉಪಯೋಗ   .
 
3. ಅಧ್ಯಾಯ ಮೂರು
ಭಾಷಣದ ವೈಶಿಷ್ಟ್ಯಗಳು, ಗುಣಲಕ್ಷಣಗಳು, ಆತ್ಮವಿಶ್ವಾಸ, ಸಕಾರಾತ್ಮಕ-ನಕಾರಾತ್ಮಕ ಭಾವನೆಗಳು.
 
4. ಅಧ್ಯಾಯ ನಾಲ್ಕು
ಭಾಷಣದ ವೈವಿಧ್ಯತೆ :- ಪ್ರಕಾರಗಳು, ವೇದಿಕೆ ಮತ್ತು ಭಾಷಣಗಳು, ನಿರೂಪಣೆ, ಪ್ರಾರ್ಥನೆ, ಸ್ವಾಗತ, ಪ್ರಾಸ್ತಾವಿಕ, ಪರಿಚಯ, ಉದ್ಘಾಟನೆ, ಮುಖ್ಯ ಅತಿಥಿಗಳ ಭಾಷಣ, ಬೀಳ್ಕೊಡಿಗೆ, ಸಮಾರೋಪ, ಅಧ್ಯಕ್ಷರ ಭಾಷಣ, ಅಭಿನಂದನಾ ಭಾಷಣ, ಸಂತಾಪ ಸೂಚನ ಭಾಷಣ, ಪ್ರಶಸ್ತಿ ಸ್ವೀಕಾರ ಸಮಯದಲ್ಲಿ ಭಾಷಣ, ವಂದನಾರ್ಪಣೆ, ವಾರ್ಷಿಕ ಆಚರಣೆಗಳು, ಹಬ್ಬಗಳು, ಜಯಂತಿಗಳು.

Read More
6 Comments

ಸಮಾಜಕಾರ್ಯದಲ್ಲಿ ಮನೋವಿಜ್ಞಾನ

5/22/2020

2 Comments

 
Picture
ಲೇಖಕರು: ಪ್ರದೀಪ ಎಂ.ಪಿ.
ಪುಟಗಳು: 272
Buy
ಪರಿವಿಡಿ
ಅಧ್ಯಾಯ ಒಂದು - ಮಾನವನ ಹುಟ್ಟು ಮತ್ತು ವಿಕಾಸ
  1. ವಿಜ್ಞಾನ (ವಿಶ್ವದ ಹುಟ್ಟು ಅಥವ ವಿಕಾಸ)
  2. ಚಾರ್ಲ್ಸ್ ಡಾರ್ವಿನ್
  3. ವಿಕಾಸವಾದದ ಮಹತ್ತ್ವ
  4. ಮಾನವನ ಹುಟ್ಟು ಮತ್ತು ವಿಕಾಸ
  5. ಮಾನವನ ದೇಹವನ್ನು ಗುರುತಿಸುವುದು  
  6. ಮಾನವನ ದೈಹಿಕ ವಿಕಾಸ
  7. ಮಾನವನ ದೇಹದ ಭಾಹ್ಯ ರಚನೆ
  8. ಮಾನವನ ದೇಹದ ಆಂತರಿಕ ರಚನೆ
 
ಅಧ್ಯಾಯ ಎರಡು - ಮೆದುಳು ಮತ್ತು ನರ ಮಂಡಲ ವ್ಯವಸ್ಥೆ
  1. ದೊಡ್ಡ ಮೆದುಳು
  2. ಕಿರು ಮೆದುಳು  
  3. ಮೆದುಳು ಕಾಂಡ
  4. ಮೆದುಳು ಬಳ್ಳಿ
  5. ಬಲ ಮೆದುಳು ಮತ್ತು ಎಡ ಮೆದುಳಿನ ಕಾರ್ಯಗಳು
  6. ಎಡ ಮೆದುಳಿನ ಕಾರ್ಯ, ಬಲ ಮೆದುಳಿನ ಕಾರ್ಯ
  7. ನರಕೋಶ
  8. ಮೆದುಳಿನ ಹಾನಿ
  9. ಸೋಂಕುಗಳು
  10. ಮೆದುಳಿನ ಫರಂಗಿ ರೋಗ ಅಥವಾ ಸಿಫಿಲಿಸ್
  11. ಚೋದನಿಕಗಳು (Hormones)
  12. ಮಾನವನಲ್ಲಿ ಕಂಡುಬರುವ ಅಂತಃಸ್ರಾವಕ ಗ್ರಂಥಿಗಳು

Read More
2 Comments

ಕಾರ್ಮಿಕ ಬಾಂಧವ್ಯಗಳ ಯಶಸ್ವಿ ನಿರ್ವಹಣೆ

5/22/2020

4 Comments

 
Picture
​ಲೇಖಕರು : ಗೋವಿಂದರಾಜು ಎನ್.ಎಸ್.
ಪುಟ : 308
Buy
ಪರಿವಿಡಿ
  1. ಪರಿಚಯ
  2. ಕೈಗಾರಿಕಾ ಬಾಂಧವ್ಯಗಳ ವಿಷಯದ ಮೇಲೆ ಇರುವ ಕಾನೂನು ಚೌಕಟ್ಟು (Legal Frame Work)    
  3. ಸಾಮೂಹಿಕ ಚೌಕಾಸಿ ಮತ್ತು ಒಪ್ಪಂದ ಪ್ರಕ್ರಿಯೆ (Collective Bargaining and Settlement Process)         
  4. ಉತ್ತಮ ಕೈಗಾರಿಕಾ ಬಾಂಧವ್ಯಗಳಿಗೆ ಬೇಕಾದ ಮೂಲಾಂಶಗಳು ತತ್ವಗಳು (ಮೂಲಾಧಾರಗಳು - Basics)
  5. ಉತ್ತಮ ಕೈಗಾರಿಕಾ ಬಾಂಧವ್ಯಗಳ ಸಾಧನೆಗೆ ಅನುಸರಿಸಬೇಕಾದ ಮಾರ್ಗೋಪಾಯಗಳು (Strategies and Techniques)  
  6. ಉದ್ಯಮ ಮಾಲೀಕರ ತಂತ್ರವಾಗಿ ಪ್ರತಿಬಂಧಕ ಆದೇಶ/ತಡೆಯಾಜ್ಞೆಗಳು (Injunctions)  
  7. ಕಾರ್ಮಿಕ ಸಂಘಗಳ ಬಾಹ್ಯ ನಾಯಕರು ಮತ್ತು ಕೈಗಾರಿಕಾ ಬಾಂಧವ್ಯ
  8. ಕಾನೂನು ಸಲಹೆಗಾರರು ಮತ್ತು ಕೈಗಾರಿಕಾ ಬಾಂಧವ್ಯ
  9. ಉತ್ಪಾದನಾ ವ್ಯವಸ್ಥಾಪಕರು/ಮೇಲ್ವಿಚಾರಕರು ಮತ್ತು ಕೈಗಾರಿಕಾ ಬಾಂಧವ್ಯ
  10. ಕೈಗಾರಿಕಾ ಬಾಂಧವ್ಯಗಳಲ್ಲಿ ರಾಜಿ ಸಂಧಾನ ಮತ್ತು ಮಧ್ಯಸ್ಥಿಕೆ (Conciliation and Mediation)   
  11. ಪ್ರಕ್ಷುಬ್ಧ ಸಮಯಗಳ ನಿರ್ವಹಣೆಗೆ ಸನ್ನದ್ಧತೆ ಮತ್ತು ಪೂರ್ವಸಿದ್ಧತೆ (Contingency Plans and Preparedness)        
  12. ಪ್ರಕ್ಷುಬ್ಧ ಸಮಯಗಳ ನಿರ್ವಹಣೆ (Managing Troubled Intervals)       
  13. ಬಹು ಕಾರ್ಮಿಕ ಸಂಘಗಳ ವಾತಾವರಣದಲ್ಲಿರುವ ಸವಾಲುಗಳು
  14. ಕಾರ್ಮಿಕ ವಿವಾದಗಳು ಮತ್ತು ಕೈಗಾರಿಕಾ ಬಾಂಧವ್ಯಗಳು
  15. ಗುತ್ತಿಗೆ ಕಾರ್ಮಿಕರು ಮತ್ತು ಕೈಗಾರಿಕಾ ಬಾಂಧವ್ಯಗಳು
  16. ಕಾರ್ಮಿಕ ಸಂಘದ ಉದಯವನ್ನು ತಪ್ಪಿಸಿದ ಕೆಲವು ಕಾರ್ಮಿಕ/ಮಾನವ ಸಂಪನ್ಮೂಲ ಮಾದರಿಗಳು
  17. ಮಾನವೀಯ ಅಂಶಗಳು ಮತ್ತು ಕೈಗಾರಿಕಾ ಬಾಂಧವ್ಯಗಳು (Human Factors) 
  18. ಶಿಸ್ತು ಪಾಲನೆಯ ಪ್ರಕ್ರಿಯೆ ಮತ್ತು ಆಂತರಿಕ ವಿಚಾರಣೆ (Disciplinary Procedure & Domestic Enquiry)  
  19. ಕೈಗಾರಿಕಾ ಬಾಂಧವ್ಯಗಳ ಸಮಸ್ಯೆಗಳು ಮತ್ತು ಪರಿಹಾರಗಳು
  20. ಅಂತಿಮ ಆಲೋಚನೆಗಳು
ಗ್ರಂಥ ಋಣ (References)
ಮಾರ್ಗದರ್ಶಕರ ನುಡಿ
ಮೊದಲ ಓದುಗರ ಅನಿಸಿಕೆಗಳು

Read More
4 Comments

ಪರಿವರ್ತನೆ

5/21/2020

0 Comments

 
Picture
ಲೇಖಕರು : ಕೆ.ವಿ. ರಾಮ್
ಪುಟ : 240
Buy
ಅಂದು ಭಾರತ ಸ್ವಾತಂತ್ರ್ಯ ದಿನಾಚರಣೆ. ಪರದಾಸ್ಯ ಕಳೆದು ಐದು ವರ್ಷಗಳಾಗಿದ್ದವು. ಎಲ್ಲಿ ನೋಡಿದರೂ ಜನಗಳಲ್ಲಿ ನವಚೇತನ ಉತ್ಸಾಹ ಕಾಣುತ್ತಿತ್ತು. ಸ್ವಾತಂತ್ರ್ಯ ದಿನಾಚರಣೆ ಎಲ್ಲೆಡೆ ನಡೆಯುತ್ತಿತ್ತು. ವಿದ್ಯಾಸಂಸ್ಥೆಗಳಲ್ಲಿ ಕಚೇರಿಗಳಲ್ಲಿ ಸರ್ಕಾರದ ಎಲ್ಲಾ ಸಂಸ್ಥೆಗಳಲ್ಲಿ ವೈಯಕ್ತಿಕ ಸಂಘ, ಸಂಸ್ಥೆಗಳಲ್ಲೂ ನಡೆಯುತ್ತಿದ್ದವು. ರಾಜಕೀಯ ಪಕ್ಷಗಳು ಪ್ರಾಥಃಕಾಲದಲ್ಲಿಯೇ, ದ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ, ಸ್ವಾತಂತ್ರ್ಯ ಸಂಗ್ರಾಮದ ನೆನಪು ಮಾಡಿಕೊಂಡು, ನವಭಾರತದ ನಿರ್ಮಾಣ ಯಾವ ರೀತಿ ಮಾಡಬೇಕೆಂದು ಅಭಿಪ್ರಾಯಗಳು ಹೇಳಿ, ಸಿಹಿತಿಂದು ತಮ್ಮ ನಿವಾಸಗಳಿಗೆ ತೆರಳುತ್ತಿದ್ದರು. ಮೈಸೂರಿನಲ್ಲಿ ಪ್ರಮುಖ ವಿದ್ಯಾಸಂಸ್ಥೆಯಾದ ಮಹಾರಾಜ ಕಾಲೇಜಿನಲ್ಲಿ  ಅದ್ವೀತಿಯವಾದ ಸ್ವಾತಂತ್ರ್ಯ ದಿನಾಚರಣೆ ಅತಿ ಸಂಭ್ರಮದಿಂದ ನಡೆದಿತ್ತು.

Read More
0 Comments

ಸಮಾಜಕಾರ್ಯ ಮತ್ತು ಸಮುದಾಯ ಅಭಿವೃದ್ಧಿ

5/21/2020

2 Comments

 
Picture
ಲೇಖಕರು : ಡಾ. ಎಸ್.ಬಿ. ಮುನಿರಾಜು
ಪುಟ : 310
Buy
ಪರಿವಿಡಿ
ಮುನ್ನುಡಿ
ನುಡಿನಮನ
ಪರಿವಿಡಿ
ಪರಿಶಿಷ್ಟಗಳು
​

1.  ಸಮಾಜ ಕಾರ್ಯ ಮತ್ತು ಸಮಾಜ ಕಾರ್ಯದ ವಿಧಾನಗಳು
2.  ಸಾಮಾಜಿಕ ಸಂಶೋಧನೆಯ ವಿನ್ಯಾಸ, ವಿಧಾನ, ಉದ್ದೇಶಗಳು ಮತ್ತು ಮಹತ್ವ
3.  ಆದಿಮ ಬುಡಕಟ್ಟು ಅಭಿವೃದ್ಧಿಯ ಹಿನ್ನೆಲೆ ಮತ್ತು ವಸ್ತುಸ್ಥಿತಿ
4.  ಜೇನುಕುರುಬರು
5.  ಕೊರಗರು
6.  ಆದಿಮ ಬುಡಕಟ್ಟು ಅಭಿವೃದ್ಧಿಯ ವಿಮರ್ಶೆ
7.  ಸಮಾಜಕಾರ್ಯ ನೆಲೆಯಲ್ಲಿ ಆದಿಮ ಬುಡಕಟ್ಟು ಅಭಿವೃದ್ಧಿ
 
ಅನುಬಂಧಗಳು
1.   ಅಂಕಿಅಂಶಗಳು
2.   ಪರಾಮರ್ಶನ ಗ್ರಂಥಗಳು
3.   ಛಾಯಾಚಿತ್ರಗಳು

Read More
2 Comments

ಪ್ರಶಸ್ತಿ

5/21/2020

0 Comments

 
Picture
ಲೇಖಕರು : ಆರ್. ಉಷಾ
ಪುಟ : 120
Buy
ಪರಿವಿಡಿ
1.         ಪ್ರಶಸ್ತಿ  
2.         ಹೊಸ ಬೆಳಕು
3.         ಡೈಮಂಡ್ ಮೆಡಲ್
4.         ಗೋಸುಂಬೆ
5.         ನಂಬಿಕೆ
6.         ಹಗಲುಗನಸು
7.         ಕುಬ್ಜ
8.         ಏಕಾಂಗಿ
9.         ಊಸರವಳ್ಳಿಗೊಂದು ಪತ್ರ
10.       ಸಾಲ

Read More
0 Comments

ಸನ್ಮಾರ್ಗ

5/21/2020

1 Comment

 
Picture
ಲೇಖಕರು : ಡಾ. ಸಿ.ಆರ್. ಗೋಪಾಲ್
ಪುಟ : 408
Buy
ಪರಿವಿಡಿ
ಮುನ್ನುಡಿ
ಪ್ರಕಾಶಕರ ನುಡಿ
ಲೇಖಕರ ಪರಿಚಯ
ಪ್ರಸ್ತಾವನೆ - ಕೃತಜ್ಞತೆ
 
1. ಅಧ್ಯಾಯ - ಒಂದು
ಗುಣತ್ರಯಗಳು ಮತ್ತು ಜೀವನ ಪದ್ಧತಿ-ಪೀಠಿಕೆ, ಮನುಷ್ಯನ ಸ್ವಭಾವಗಳು, ಸಾತ್ವಿಕ, ರಾಜಸ, ತಾಮಸ ಗುಣಗಳು, ಗುಣಗಳ ಕಾರಬಾರು, ಗುಣಗಳನ್ನು ಗುರುತಿಸುವ ಬಗೆ, ಸ್ಥಿತಪ್ರಜ್ಞನ ಲಕ್ಷಣಗಳು, ಅರಿಷಡ್ವರ್ಗಗಳು, ಯೋಗ ಮಾರ್ಗಗಳು, ಯೋಗ ಸಮನ್ವಯ.
 
2. ಅಧ್ಯಾಯ - ಎರಡು, ಭಾಗ - ಒಂದು
ಸನಾತನ ಧರ್ಮದಲ್ಲಿ ಶರೀರದ ಪರಿಕಲ್ಪನೆ - ಸನಾತನ ಜೀವನ ಪದ್ಧತಿಯಲ್ಲಿ ಶರೀರ, ಧಾರ್ಮಿಕ ಗ್ರಂಥಗಳಲ್ಲಿ ಶರೀರ, ಭಗವದ್ಗೀತೆ, ಮನುಷ್ಯರ ಸೃಷ್ಟಿ, ನಾಲ್ಕು ಶರೀರಗಳು, ಸ್ಥೂಲ ಶರೀರ, ಸಪ್ತ ಧಾತುಗಳು, ಅನಿರುದ್ಧ ಶರೀರ, ಪಂಚತನ್ಮಾತ್ರ, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಪ್ರಾಣಗಳು, ಮನೋವೃತ್ತಿಗಳು, ಲಿಂಗಶರೀರ, ಸ್ವರೂಪ ಶರೀರ, ಅನ್ನಮಯಾದಿ ಪಂಚ ಕೋಶಗಳು, (ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳು).

Read More
1 Comment

ವ್ಯಕ್ತಿಗತ ಸಮಾಜಕಾರ್ಯದ ಪರಿಚಯ

5/21/2020

0 Comments

 
Picture
ಲೇಖಕರು : ಗಂಗಾಧರ ರೆಡ್ಡಿ ಎನ್. ಮತ್ತು ರಮೇಶ ಎಂ.ಎಚ್.
ಪುಟ : 174
Buy
ಪರಿವಿಡಿ
ಅಧ್ಯಾಯ-1  ವ್ಯಕ್ತಿಗತ ಸಮಾಜಕಾರ್ಯ
1.1         ಪೀಠಿಕೆ 
1.2         ಪರಿಕಲ್ಪನೆ ಮತ್ತು ವಿಕಾಸ
1.3         ಅರ್ಥ ಮತ್ತು ವ್ಯಾಖ್ಯೆಗಳು
1.4         ಮೂಲಭೂತ ಪರಿಕಲ್ಪನೆಗಳು
1.5         ಉದ್ದೇಶಗಳು
 
ಅಧ್ಯಾಯ-2  ವ್ಯಕ್ತಿಗತ ಸಮಾಜಕಾರ್ಯದ ತತ್ವಗಳು
2.1         ವೈಯಕ್ತೀಕರಣದ ತತ್ವ
2.2         ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅಭಿವ್ಯಕ್ತಪಡಿಸಲು ಅವಕಾಶ ಕಲ್ಪಿಸುವ ತತ್ವ
2.3         ಅಂಗೀಕಾರದ/ಸ್ವೀಕಾರ ತತ್ವ
2.4         ನಿಯಂತ್ರಿತ ಭಾವನೆಗಳ ಅಂತರ್ಗತ ತತ್ವ
2.5         ತೀರ್ಪುರಹಿತ ಪ್ರವೃತ್ತಿಯ ತತ್ವ
2.6         ಅರ್ಥಿಯ ಸ್ವ-ನಿರ್ಣಯದ ತತ್ವ
2.7         ಗೌಪ್ಯತೆಯ ತತ್ವ
2.8         ಅರ್ಥಪೂರ್ಣ ಸಂಬಂಧ ತತ್ವ
2.9         ಸಂವಹನ ತತ್ವ 
2.10       ಸ್ವ-ಅರಿವಿನ ತತ್ವ
2.11       ಸಾಮಾಜಿಕ ಚಟುವಟಿಕೆಯ ತತ್ವ 
2.12       ವರ್ತನೆ ಮಾರ್ಪಡಿಸುವಿಕೆಯ ತತ್ವ
2.13       ಸಾಮಾಜಿಕ ಕಲಿಕೆಯ ತತ್ವ

Read More
0 Comments

ಸಮಾಜಕಾರ್ಯ

5/21/2020

3 Comments

 
Picture
ಲೇಖಕರು : ಡಾ. ರಮೇಶ ಎಂ. ಸೋನಕಾಂಬಳೆ
ಪುಟ : 304
ಪರಿವಿಡಿ
ಅಧ್ಯಾಯಗಳು
1. ಸಮಾಜಕಾರ್ಯ
1.1         ಪೀಠಿಕೆ 
1.2         ಆಧುನಿಕ ಸಮಾಜ
1.3         ಸಮಾಜಕಾರ್ಯ: ಅರ್ಥ ಮತ್ತು ವ್ಯಾಖ್ಯೆ
1.4         ಸಮಾಜಕಾರ್ಯದ ಸ್ವರೂಪ
1.5         ಸಮಾಜಕಾರ್ಯದ ವ್ಯಾಪ್ತಿ
1.6         ಸಮಾಜಕಾರ್ಯದ ಉದ್ದೇಶಗಳು 
1.7         ಸಮಾಜಕಾರ್ಯದ ಮೌಲ್ಯಗಳು
1.8         ಸಮಾಜಕಾರ್ಯದ ತತ್ವಗಳು
 
2. ಸಮಾಜಕಾರ್ಯ ವಿಧಾನಗಳು
2.1         ಪೀಠಿಕೆ 
2.2         ವ್ಯಕ್ತಿಗತ ಸಮಾಜಕಾರ್ಯ
2.3         ವೃಂದಗತ ಸಮಾಜಕಾರ್ಯ
2.4         ಸಮುದಾಯ ಸಂಘಟನೆ 
2.5         ಸಾಮಾಜಿಕ ಕ್ರಿಯೆ
2.6         ಸಮಾಜಕಾರ್ಯ ಸಂಶೋಧನೆ
2.7         ಸಮಾಜಕಾರ್ಯ ಆಡಳಿತ          

Read More
3 Comments

ಶಿಕ್ಷಣ ಮತ್ತು ಅಭಿವೃದ್ಧಿ

5/20/2020

0 Comments

 
Picture
ಲೇಖಕರು : ಡಾ. ಭಾಗ್ಯಮ್ಮ ಎನ್.
ಪುಟ : 214
ಪರಿವಿಡಿ
ಅಧ್ಯಾಯ-01 :     ಪೀಠಿಕೆ 
ಅಧ್ಯಾಯ-02 :     ಸಂಶೋಧನಾ ವಿಧಾನ   
ಅಧ್ಯಾಯ-03 :     ಶಾಲಾ ಶಿಕ್ಷಣ ಪದ್ಧತಿ
ಅಧ್ಯಾಯ-04 :     ಶಿಕ್ಷಣದ ಸಾರ್ವತ್ರೀಕರಣಕ್ಕೆ ಸರ್ಕಾರ ಕೈಗೊಂಡಿರುವ
                            ಕಾರ್ಯಕ್ರಮಗಳು     
ಅಧ್ಯಾಯ-05 :    ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಬಿಸಿಯೂಟ
                           ಯೋಜನೆಯ ಪ್ರಭಾವದ ಚಿತ್ರಣ    
ಅಧ್ಯಾಯ-06 :    ಬಿಸಿಯೂಟ ಯೋಜನೆಯ ಬಗ್ಗೆ ಎಸ್.ಡಿ.ಎಂ.ಸಿ. ಪೋಷಕ
                          ಮತ್ತು ಶಿಕ್ಷಕರ ಧೋರಣೆ     
ಅಧ್ಯಾಯ-07 :     ಸಾರಾಂಶ ಮತ್ತು ಉಪಸಂಹಾರ 
ಪರಾಮರ್ಶನ ಗ್ರಂಥಗಳು
ಛಾಯಾಚಿತ್ರಗಳು

Read More
0 Comments

ಇ.ಎಸ್.ಐ. ಮಾರ್ಗದರ್ಶಿ

12/19/2018

1 Comment

 
Picture
ಲೇಖಕರು : ಎಚ್.ಎನ್. ಯಾದವಾಡ
ಪುಟ : 84
Buy

ಪ್ರಶ್ನೆ: ನೀವೇ ಹೇಳಿದಂತೆ ಜನವರಿ 2017 ರಿಂದ ಇ.ಎಸ್.ಐ ವೇತನದ ಮಿತಿಯನ್ನು ಮಾಸಿಕ 21000-00 ರೂಪಾಯಿಗೆ ಹೆಚ್ಚಿಸಿದೆ. ಇಲ್ಲೊಂದು ಉಪ ಪ್ರಶ್ನೆ ನೌಕರನೊಬ್ಬ ಪಡೆಯುತ್ತಿರುವ ವೇತನವು ವೇತನ ವೃದ್ಧಿ, ಬೋನಸ್, ಅಧಿಕ ಕಾರ್ಯ ನಿರ್ವಹಿಸಿದುದಕ್ಕಾಗಿ ಪಡೆದ ಹಣವೂ ಸೇರಿ ತಿಂಗಳ ಒಂದರಲ್ಲಿ 21000-00 ರೂಪಾಯಿಗಿಂತ ಹೆಚ್ಚಾಗಿ ಬಿಟ್ಟರೆ, ಅಂತಹ ಸಂದರ್ಭದಲ್ಲಿ ವಿಮಾದಾರ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆಯೆ?
​

ಉತ್ತರ: ಅಂದರೆ, ವೇತನ ಮಿತಿಯನ್ನು ಮೀರಿದ ತಕ್ಷಣವೇ ನೌಕರ ವಿಮಾದಾರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ ಎಂಬುದು ನಿಮ್ಮ ಅನಿಸಿಕೆ. ಅದು ಹಾಗಲ್ಲ. ಇ.ಎಸ್.ಐ ಕಾನೂನಿನಂತೆ ವಂತಿಗೆ ಅವಧಿಯನ್ನು ವರ್ಷವೊಂದರಲ್ಲಿ ಎರಡು ಭಾಗವಾಗಿ ವಿಂಗಡಿಸಲಾಗಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಿಂದ ಮಾರ್ಚ್. ವಿಷಯ ಹೀಗಿರುವಾಗ ವಂತಿಗೆಯ ಅವಧಿಯ ಮಧ್ಯದಲ್ಲಿ ವೇತನವು ಹೆಚ್ಚಾದರೂ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯಲಾರರು. ವಂತಿಗೆಯ ಅವಧಿಯು ಮುಗಿಯುವವರೆಗೆ ಅವರು ಮುಂದುವರೆಯುತ್ತಾರೆ. ಅಷ್ಟೇ ಏಕೆ, ಹೆಚ್ಚಾದ ಮೊತ್ತಕ್ಕೂ ವಂತಿಗೆಯನ್ನು ಸಲ್ಲಿಸಬೇಕಾಗುತ್ತದೆ. ಉದಾಹರಣೆಗೆ: ವಂತಿಗೆಯ ಅವಧಿ ಏಪ್ರಿಲ್‌ನಿಂದ ಸೆಪ್ಟೆಂಬರ್ ಮಧ್ಯೆ ಜೂನ್ ತಿಂಗಳಿನಲ್ಲಿ ವೇತನ ವೃದ್ಧಿಯ ಪರಿಣಾಮವಾಗಿ ನೌಕರನೊಬ್ಬನ ವೇತನ ರೂಪಾಯಿ. 22000-00 ಆಗಿಬಿಟ್ಟರೆ, ವಂತಿಗೆಯನ್ನು 22000-00 ಕ್ಕೆ ಸಲ್ಲಿಸಬೇಕು. ಅದಕ್ಕಾಗಿ ವೇತನ ಮಿತಿಯಾದ ರೂಪಾಯಿ. 22000-00 ಗೆ ಮಾಡಲಾಗದು ಎನ್ನುವುದನ್ನು ಪ್ರಮುಖವಾಗಿ ಇಲ್ಲಿ ಗಮನಿಸಬೇಕು. ಮುಂದೆ ವಂತಿಗೆಯ ಅವಧಿ ಮುಗಿಯುತ್ತಲೆ ಆಗಲೂ 21000-00 ಕ್ಕೆ ಹೆಚ್ಚಾಗಿದ್ದರೆ, ಅನಾಯಾಸವಾಗಿ ಅಂತಹ ವಿಮಾದಾರರು ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ.

Read More
1 Comment

ಬದುಕು ಬದಲಾಯಿಸಿದ ಕಥನಗಳು

12/19/2018

0 Comments

 
Picture
ಲೇಖಕರು : ಶೇಖರ್ ಗಣಗಲೂರು
ಪುಟ : 151
Buy
ಪರಿವಿಡಿ
  1. ​ಮನದ ಕದ ತಟ್ಟಿದ ಪತ್ರ
  2. ಲೋಕಾತೀತಪುರುಷ!
  3. ನಂಬಿಕೆ...ದಾರಿ ಬೆಳಕು
  4. ನಮ್ಮ ಜೀವನ, ನಮ್ಮ ಆಯ್ಕೆ
  5. ನಮ್ಮತನ
  6. ಇತರರ ಬೆಳಕು
  7. ನಮ್ಮಲ್ಲಿರುವುದು ಮಹತ್ವವಾದದ್ದು...
  8. ಅಪ್ಪನ 25 ಪೈಸೆಯ ಮಿಠಾಯಿ
  9. ವ್ಯಕ್ತಿತ್ವ...ವ್ಯಕ್ತಿತ್ವದೊಂದಿಗೆ...
  10. ತುಸು ಹೆಚ್ಚಿನ ಶ್ರಮ...
  11. ಉತ್ಕಟವಾದ ಆಯ್ಕೆಗಳು
  12. ಮಂಗಳಮುಖಿ...
  13. ಉಚಿತ ಊಟವಿಲ್ಲ...
  14. ಹಸಿರು ಮಾಯವಾಯಿತು...
  15. ಕೊಂಚ ಜಾಸ್ತಿ ಬೇಕು...
  16. ನಕಾರಾತ್ಮಕತೆಯಲ್ಲಿಯೂ ಸಕಾರಾತ್ಮಕತೆಯಿದೆ...
  17. ಅಮ್ಮನ ವಿಮಾನದ ಆಸೆ...
  18. ನಾವು ನೋಯಿಸುವುದರಲ್ಲಿ ನಿಸ್ಸೀಮರು...? 
  19. ನನ್ನ ಸೂಪರ್ ಹೀರೋ...
  20. ಆ ವ್ಯಕ್ತಿತ್ವಗಳ ಸಾಕ್ಷಾತ್ಕಾರ...
  21. ನೋವಿನಲ್ಲೂ ಸಂಬಂಧಗಳು...
  22. ಬದಲಾವಣೆ ಬದಲಾಯಿಸಬಲ್ಲದು...
  23. ಬದಲಾಯಿಸಿದ ಪ್ರಾಮಾಣಿಕತೆ
  24. ಅಪ್ಪನ ಎರಡನೆಯ ಮಗ...
  25. ಗುರುಗಳಿಗೆ ಅರ್ಪಣೆ...
  26. ಅತ್ತೆ, ಸೊಸೆಯಾಗಬೇಕೆಂಬ ಆಸೆ...
  27. ನಿನ್ನೊಳಗಿನ ಕೌಶಲ್ಯವೇ, ನಿನ್ನ ಶಕ್ತಿ...
  28. ನಾಯಕ, ನಾಯಕನಿಗೆ ತೋರಿಸಿದ ದಾರಿ... 
ಗುರುಗಳ ನಲ್ನುಡಿಗಳು

Read More
0 Comments

ಕಾಡುಗೊಲ್ಲ ಮಹಿಳೆ : ಸಾಂಸ್ಕೃತಿಕ ಸಂಕಥನ

8/23/2018

2 Comments

 
Picture
ಲೇಖಕರು : ಡಾ. ಹೆಚ್.ಆರ್. ರೇಣುಕ
ಪುಟ : 192
ಮುನ್ನುಡಿ
ಜಾನಪದ ಅಧ್ಯಯನಗಳು ಇಂದು ಸಂಗ್ರಹಣ, ಪರಿಷ್ಕರಣ, ವಿಶ್ಲೇಷಣಾ ಹಂತಗಳನ್ನು ದಾಟುತ್ತಾ ಇತಿಹಾಸ, ಸಂಸ್ಕೃತಿಯ ಅನನ್ಯವಾದ ಸಂಗತಿಗಳಾಗುವ ಹಂತವನ್ನು ಮೀರಿ ಬದುಕನ್ನು ಕಟ್ಟಿಕೊಡುವ ಆರ್ಥಿಕ ಪ್ರಧಾನ ಯೋಜನೆಗಳಾಗಿ ರಾಜಕಾರಣ ನೀತಿ ನಿರುಪಗಳಾಗುತ್ತಿವೆ. ಜಾನಪದ ಅಧ್ಯಯನಗಳಲ್ಲಿ ಆಗಿರುವ ಈ ಬದಲಾವಣೆಯು ಅನೇಕ ಸಾಮಾಜಿಕ ಸಂಸ್ಥೆಗಳನ್ನು,  ಸಮುದಾಯ ಸಂಘಟನೆಗಳನ್ನು ಹುಟ್ಟುಹಾಕಿದೆ. ಮಾತ್ರವಲ್ಲ ಅತೀಸಣ್ಣ, ಸಣ್ಣ, ನಿರ್ಲಕ್ಷಿತ ಸಮುದಾಯಗಳನ್ನು ಗುರುತಿಸಿ ಅವುಗಳನ್ನು ಮುನ್ನೆಲೆಗೆ ತರುತ್ತಿದೆ. ಹೀಗೆ ಹೊಸ ತಲಮಾರಿನ ಜಾನಪದ ಅಧ್ಯಯನಗಳು ಹೆಚ್ಚು ವಸ್ತು ನಿಷ್ಟವಾಗುತ್ತಿವೆ. ಸಮಗ್ರವಾಗಿದ್ದ ಜಾನಪದ ಅಧ್ಯಯನಗಳು ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಅಭಿವೃದ್ಧಿ, ಬೌದ್ಧಿಕ, ಭೌತಿಕ, ಕಸುಬು, ಕಲೆ, ವೈದ್ಯ ಹೀಗೆ ನಾನಾ ಬಗೆಯಲ್ಲಿ ಸೂಕ್ಷ್ಮಗೊಂಡಿವೆ. ಜಾನಪದ ಅಧ್ಯಯನ ವಿಭಾಗಗಳು, ಅಧ್ಯಯನ ಪೀಠಗಳು, ಜಾನಪದ ವಿಶ್ವವಿದ್ಯಾನಿಲಯಗಳು ಈ ಸೂಕ್ಷ್ಮ ಅಧ್ಯಯನದ ಪ್ರತಿಫಲವಾಗಿವೆ ಎಂದರೆ ತಪ್ಪಾಗಲಾರದು. 

Read More
2 Comments

ಸಮುದಾಯ ಸಂಘಟನೆ

7/21/2018

0 Comments

 
Picture
ಲೇಖಕರು : ಡಾ. ಸಿ.ಆರ್. ಗೋಪಾಲ್
ಪುಟ : 490
Buy
ಪರಿವಿಡಿ
ಮುನ್ನುಡಿ
ಪ್ರಕಾಶಕರ ನುಡಿ
ಲೇಖಕರ ಪರಿಚಯ
ಪ್ರಸ್ತಾವನೆ - ಕೃತಜ್ಞತೆ
 
1. ಅಧ್ಯಾಯ-ಒಂದು
ಪೀಠಿಕೆ, ಸಮುದಾಯ, ವ್ಯಾಖ್ಯೆಗಳು, ಸಮುದಾಯದ ವೈಲಕ್ಷಣಗಳು, ಸಮುದಾಯದ ಬಗ್ಗೆ ಸ್ವಾಭಿಮಾನ, ಐಕ್ಯಭಾವ, ಪರಾವಲಂಬನಾ ಭಾವ, ಪಾತ್ರ ನಿರ್ವಹಣಾ ಭಾವ, ಬದಲಾಗುತ್ತಿರುವ ಪರಿಸ್ಥಿತಿ, ಸಮುದಾಯ-ಸಮಾಜ, ನೆರೆಹೊರೆ, ಸಂಘ, ಸಂಸ್ಥೆ ಇವುಗಳಲ್ಲಿರುವ ವ್ಯತ್ಯಾಸಗಳು.
 
2. ಅಧ್ಯಾಯ-ಎರಡು
ಸಮುದಾಯದ ಪ್ರಕಾರಗಳು :- ಭೌಗೋಲಿಕ ಮತ್ತು ಕ್ರಿಯಾತ್ಮಕ ಸಮುದಾಯಗಳು, ಗ್ರಾಮ ಸಮುದಾಯ, ಗ್ರಾಮ ಸಮುದಾಯದ ವೈಲಕ್ಷಣಗಳು, ಗ್ರಾಮ ಸಮುದಾಯಗಳ ವೈವಿಧ್ಯತೆ, ನಗರ ಸಮುದಾಯ, ಕೆಲವು ಆಯ್ದ ವ್ಯಾಖ್ಯೆಗಳು, ನಗರ ಸಮುದಾಯದ ವೈಲಕ್ಷಣಗಳು, ಬುಡಕಟ್ಟು ಸಮುದಾಯಗಳು, ಬುಡಕಟ್ಟು ಸಮುದಾಯದ ಪ್ರಮುಖ ಲಕ್ಷಣಗಳು.

Read More
0 Comments

ಶ್ರೀ ಪೆಟ್ಟೆರಾಯ ಸ್ವಾಮಿಯ ಧಾರ್ಮಿಕ ಹಿನ್ನೆಲೆ

8/2/2017

0 Comments

 
Picture
ಲೇಖಕರು : ಪ್ರವೀಣ್‍ಕುಮಾರ್ ಎಸ್.
ಪುಟ : 80
ಮುನ್ನುಡಿ
ನಹಿಜ್ಞಾನೇನ ಸದೃಶ್ಯಂ, ಜ್ಞಾನಕ್ಕೆ ಮಿಗಿಲಾದದ್ದು ಬೇರೊಂದು ಇಲ್ಲ. ಜ್ಞಾನವೇ ಸತ್ಯ, ನಿತ್ಯ ಹಾಗೂ ನಿರಂತರ. ಇಂತಹ ಜ್ಞಾನ ಪರಂಪರೆಯು ವಿದ್ಯಾರ್ಥಿಗಳಲ್ಲಿ ವಿಶೇಷವಾಗಿದ್ದು, ಅನೇಕ ಹಂತಗಳ ಮೂಲಕ ಜ್ಞಾನಾರ್ಜನೆಯನ್ನು ಪಡೆದುಕೊಳ್ಳುತ್ತಾರೆ. ಅಂದರೆ ಪ್ರಾಥಮಿಕ ಹಂತ, ಪ್ರೌಢಹಂತ, ಪದವಿಪೂರ್ವ, ಪದವಿ ಹಾಗೂ ಉನ್ನತ ಹಂತದ ಮೂಲಕ ಸಾಗುತ್ತದೆ. ಪದವಿ ಹಂತದಲ್ಲಿ ಉನ್ನತ ಶಿಕ್ಷಣದ ದೃಷ್ಟಿ ಮತ್ತು ಧ್ಯೇಯಗಳ ಸಾಕಾರ ಅಥವಾ ಅನುಷ್ಠಾನಕ್ಕಾಗಿ ವಿದ್ಯಾರ್ಥಿಗಳಲ್ಲಿ ಅನೇಕ ಕ್ರಿಯಾಶೀಲ ಚಟುವಟಿಕೆಗಳನ್ನು ಕಾಣುತ್ತೇನೆ. ಇಂತಹ ದೃಷ್ಠಿ ಮತ್ತು ಧ್ಯೇಯಗಳನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಕೋಟೆ, ಇಲ್ಲಿ ನಿರಂತರವಾಗಿ ಅಳವಡಿಸಿಕೊಂಡಿರುವುದು ಒಂದು ವಿಶೇಷ ಸಾಧನೆಯೇ ಆಗಿದೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ಬಿ.ಎ. ಪದವಿ, ಅಂತಿಮ ವರ್ಷದ ಹೆಚ್.ಇ.ಎಸ್ ವಿಭಾಗದ ಶ್ರೀ. ಪ್ರವೀಣ್‍ಕುಮಾರ್ ಎಸ್. ಎಂಬ ವಿದ್ಯಾರ್ಥಿಯು ತಾನು ಕಲಿಯುತ್ತಿರುವ ಸಮಾಜಶಾಸ್ತ್ರದ ಪಠ್ಯಕ್ರಮಕ್ಕೆ ಪೂರಕವಾಗಿರುವಂತಹ ಪತ್ರಿಕೆ VII: ಸಾಮಾಜಿಕ ಸಂಶೋಧನಾ ವಿಧಾನ ಮತ್ತು ತಂತ್ರಾಂಶಗಳಿಗೆ ಸಂಬಂಧಿಸಿದಂತೆ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ದೊಡ್ಡಹನುಮಯ್ಯ ಬಿ.ಹೆಚ್. ಇವರ ಮಾರ್ಗದರ್ಶನದ ಮೂಲಕ ಸಂಶೋಧಿಸಿರುವ ಶ್ರೀ ಪೆಟ್ಟೆರಾಯ ಸ್ವಾಮಿಯ ಧಾರ್ಮಿಕ ಹಿನ್ನಲೆ, ಟಿ. ಕುರುಬರಹಳ್ಳಿ, ತಿಪ್ಪದೊಡ್ಡಿ ಗ್ರಾಮದ-ಸಮಾಜೋ-ಮಾನವಶಾಸ್ತ್ರೀಯ ಅಧ್ಯಯನ. ಇದು ಒಂದು ಉತ್ತಮ ವಿದ್ಯಾರ್ಥಿ ಸಂಶೋಧನಾ ಕೃತಿಯಾಗಿದ್ದು, ಒಂದು ಗ್ರಾಮವೊಂದನ್ನು ಆಯ್ಕೆ ಮಾಡಿಕೊಂಡು ಹಲವಾರು ಮಾಹಿತಿಗಳನ್ನು ಸಂಗ್ರಹಿಸಿ, ಐದು ಅಧ್ಯಾಯಗಳ ಮೂಲಕ ವಿಶ್ಲೇಷಿಸಿರುವುದು, ಆತನ ಶೈಕ್ಷಣಿಕ ಆಸಕ್ತಿ ಹಾಗೂ ಸೃಜನಶೀಲ ಸಾಧನೆಯ ಹಾದಿಯಾಗಿದೆ, ಇಂತಹ ಸಾಧನೆಯು ಮುಂದಿನ ಉನ್ನತ ಶಿಕ್ಷಣಕ್ಕೆ ಹಾಗೂ ಸಂಶೋಧನೆಗೆ ಒಂದು ದಾರಿದೀಪವಾಗಿದೆ.

Read More
0 Comments
<<Previous

    Niruta Publications

    Social Workers- Karnataka

    Leaders Talk

    Ramesha Niratanka

    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Picture
    WhatsApp Group

    Social Work Foot Prints
    Follow me on Academia.edu

    Archives

    July 2022
    January 2022
    August 2020
    June 2020
    May 2020
    December 2019
    December 2018
    August 2018
    July 2018
    January 2018
    August 2017
    July 2017
    January 2017
    December 2016
    November 2016
    June 2016
    December 2015

    Categories

    All
    Academic Books
    Conference Books
    English Books
    HR Books
    Kannada Books
    Social Work Books


    ​List Your Product on Our Website 


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com