Niruta Publications
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

BDA ಪ್ಲ್ಯಾನ್‍ನಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಬೇಕಾಗಿ ವಿನಂತಿ

9/18/2017

0 Comments

 
ಬಿಡಿಎ ಪ್ಲ್ಯಾನ್‍ನಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ದೂರು ನೀಡಲಾಗಿ ನಗರ ಯೋಜನಾ ವಿಭಾಗದವರು ಬಿಡಿಎ ಪ್ಲ್ಯಾನ್‍ನಲ್ಲಿರುವ ಲೋಪದೋಷಗಳನ್ನು ಒಪ್ಪಿಕೊಂಡು ಸರಿಪಡಿಸಲು ಸರ್ವೆ ಪ್ರಾಧಿಕಾರದ ಭೂಮಾಪಕರಿಗೆ ವಹಿಸಿರುತ್ತಾರೆ. ಸುಮಾರು 3 ತಿಂಗಳು ಕಳೆದರೂ ಈ ಕುರಿತು ಯಾವುದೇ ಕ್ರಮ ಭೂಮಾಪಕರು ತೆಗೆದುಕೊಂಡಿರುವುದಿಲ್ಲ. ಇನ್ನು ಎಷ್ಟು ದಿನ ಕಾಯಬೇಕು ? ಇಲ್ಲಿ ಅಧಿಕಾರಿಗಳ ಮಂದಗತಿಯ ಕೆಲಸ ಸಾರ್ವಜನಿಕರಿಗೆ ಆಗುವ ತೊಂದರೆ ಅರ್ಥೈಸಿಕೊಂಡು ಕೆಲಸ ನಿರ್ವಹಿಸಿದರೆ ಒಳಿತು.
Picture
Picture
                                                                                                                                          ದಿನಾಂಕ : 09-06-2016
ರವರಿಗೆ,
ನಗರ ಯೋಜನಾ ಅಧಿಕಾರಿ
TPM
ಬೆಂಗಳೂರು ಉತ್ತರ ತಾಲ್ಲೂಕು
ಬೆಂ.ಅ. ಪ್ರಾಧಿಕಾರ, ಬೆಂಗಳೂರು
 
 
ಇಂದ,
ಹನುಮಯ್ಯ S/o ಲೇ. ನಂಜಪ್ಪ
C/o ರಮೇಶ ಎಂ.ಎಚ್.
ಸಂಪಾದಕರು, ಸಮಾಜಕಾರ್ಯದ ಹೆಜ್ಜೆಗಳು
ನಂ. 326, 1ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಎದುರು,
ಡಾ. ಅಂಬೇಡ್ಕರ್ ಕಾಲೇಜು ಹತ್ತಿರ, ಕೆಂಗುಂಟೆ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ಮೊ : 9980066890, Web : www.socialworkfootprints.org
 
 
ವಿಷಯ : ಸರ್ವೆ ನಂ. 28/3, ವಿಶ್ವೇಶ್ವರಯ್ಯ ಮುಂದುವರಿದ ಬಡಾವಣೆ, 7ನೇ ಬ್ಲಾಕ್, ಗಿಡದಕೋನೇನಹಳ್ಳಿ ಗ್ರಾಮ, ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಬೆಂಗಳೂರು. ಏಕನಿವೇಶನ ಬಡಾವಣೆಯಲ್ಲಿ (ರೆಸಲ್ಯೂಷನ್ ನಂ. 1/2012 Dated. 25-02-2012, Work Order No. BQA/TPM/PRL-25/10-11/245/2012-13 Dated. 16-04-2013) ಆಗಿರುವ ಲೋಪದೋಷಗಳನ್ನು ಸರಿಪಡಿಸಬೇಕಾಗಿ ಹಾಗೂ ಹನುಮಯ್ಯನವರ ಭಾಗಾಂಶಕ್ಕೆ ಸೇರಿದ 0.2.2 ಗುಂಟೆ ಪ್ರದೇಶವನ್ನು ಸರ್ವೆ ನಕ್ಷೆಯಲ್ಲಿ ಗುರುತಿಸಿಕೊಡಬೇಕಾಗಿ ವಿನಂತಿ.
 
ಮಾನ್ಯರೆ,

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಗಿಡದಕೋನೇನಹಳ್ಳಿ ಗ್ರಾಮದ ಸರ್ವೆ ನಂ. 28/2 ವಿಶ್ವೇಶ್ವರಯ್ಯ ಮುಂದುವರಿದ ಬಡಾವಣೆ, 7ನೇ ಬ್ಲಾಕ್ ನಲ್ಲಿ ಒಂದು ಎಕರೆ ಇಪ್ಪತ್ನಾಲ್ಕು ಗುಂಟೆ ಜಮೀನು ಶ್ರೀ ಚಿಕ್ಕಹನುಮಯ್ಯ ಹಾಗೂ ಶ್ರೀ ಹನುಮಯ್ಯ ಆದ ನಮ್ಮ ಪಿತ್ರಾರ್ಜಿತ ಆಸ್ತಿಯಾಗಿರುತ್ತದೆ. ಚಿಕ್ಕಹನುಮಯ್ಯನವರ ಭಾಗಾಂಶಕ್ಕೆ ಸೇರಿದ 1 ಎಕರೆ 21.8 ಹಾಗೂ ಹನುಮಯ್ಯನವರ ಭಾಗಾಂಶಕ್ಕೆ 0.2.2 ಗುಂಟೆ ಜಮೀನು ಪಿತ್ರಾರ್ಜಿತವಾಗಿ ಬಂದಿರುತ್ತದೆ (ಪಂಚಾಯಿತಿ ಪಾರಿಖತ್ ದಿನಾಂಕ : 22-8-1997). ಶ್ರೀ ಚಿಕ್ಕಹನುಮಯ್ಯನವರ ಭಾಗಾಂಶಕ್ಕೆ ಸರ್ವೆ ನಂ. 28/2 ರಲ್ಲಿ 1 ಎಕರೆ 21.8 ಗುಂಟೆ ಪ್ರದೇಶವಿರುತ್ತದೆ. ಶ್ರೀ ಚಿಕ್ಕಹನುಮಯ್ಯನವರು 20 ಗುಂಟೆ ಪ್ರದೇಶವನ್ನು ದಿನಾಂಕ : 24-5-1999 ರಲ್ಲಿ ಕ್ರಯಪತ್ರ ಮಾಡಿ ಮಾರಾಟ ಮಾಡಿರುತ್ತಾರೆ. ಹಾಗೆಯೇ 6 ಗುಂಟೆ ಪ್ರದೇಶವನ್ನು ದಿನಾಂಕ : 12-5-2003 ರಂದು ಕ್ರಯಪತ್ರದ ಮೂಲಕ ಮಾರಾಟ ಮಾಡಿರುತ್ತಾರೆ. ಹಾಗಾಗಿ ಅವರ ಉಳಿಕೆ ಜಮೀನು 0.35.8 ಗುಂಟೆಯಾಗಿರುತ್ತದೆ. ಶ್ರೀಯುತ ಚಿಕ್ಕಹನುಮಯ್ಯನವರು 28/2 ಸರ್ವೆ ನಂ. ಅನ್ನು ಪೋಡಿ ಮಾಡಿಸಿ ತಮ್ಮ ಸರ್ವೆ ನಂ. ಅನ್ನು 28/3 ಎಂದು ಬದಲಾವಣೆ ಮಾಡಿ ಬಿಡಿಎ ಇಂದ ಏಕನಿವೇಶನ ಬಡಾವಣೆಗೆ ಅನುಮೋದನೆ ಪಡೆದುಕೊಂಡಿರುತ್ತಾರೆ. (ರೆಸಲ್ಯೂಷನ್ ನಂ. 1/2012 Dated. 25-02-2012, Work Order No. BQA/TPM/PRL-25/10-11/245/2012-13 Dated. 16-04-2013) ಈ ರೀತಿ ಅನುಮೋದನೆ ಪಡೆದುಕೊಳ್ಳುವಾಗ ಹನುಮಯ್ಯ ಆದ ನಮ್ಮ ಭಾಗಾಂಶಕ್ಕೆ ಸೇರಿದ 0.2.2 ಗುಂಟೆ ಪ್ರದೇಶವನ್ನು ಚಿಕ್ಕಹನುಮಯ್ಯನವರು ಒತ್ತುವರಿ ಮಾಡಿಕೊಂಡು ಹಾಗೂ ತಮ್ಮ ಏಕನಿವೇಶನ ಬಡಾವಣೆಯನ್ನು ಬಿಡಿಎ ನಿಂದ ತಮ್ಮ ಪ್ರಭಾವ ಬೀರಿ ಅನುಮೋದಿಸಿಕೊಂಡಿರುತ್ತಾರೆ. ಆದುದರಿಂದ ತಾವು ಅನುಮೋದಿಸಿರುವ ಏಕನಿವೇಶನ ಬಡಾವಣೆ ಈ ಕೆಳಕಂಡ ಕಾರಣಗಳಿಂದಾಗಿ ಸರಿಯಾಗಿರುವುದಿಲ್ಲ.
 
  1. ಚಿಕ್ಕಹನುಮಯ್ಯನವರ ಭಾಗಾಂಶಕ್ಕೆ ಸೇರಿದ ಪ್ರದೇಶದ ಸರ್ವೆ ಕಾರ್ಯ ನಡೆಸುವಾಗ ನಮಗೆ ಯಾವುದೇ ನೋಟೀಸ್ ಜಾರಿ ಮಾಡಿರುವುದಿಲ್ಲ.
  2. ಸ್ವಾಮಿ ಯಾವ ದಾಖಲೆಗಳ ಆಧಾರದ ಮೇಲೆ ಹನುಮಯ್ಯ ಆದ ನಮ್ಮ ಭಾಗಕ್ಕೆ ಸೇರಿದ 0.2.2 ಗುಂಟೆ ಪ್ರದೇಶದ ಬದಲು ನಮ್ಮ ಭಾಗಾಂಶಕ್ಕೆ ಕೇವಲ 0.1 ಗುಂಟೆ ಎಂದು ಏಕನಿವೇಶನ ಬಡಾವಣೆಯಲ್ಲಿ ಅನುಮೋದಿಸಿ ಗುರುತು ಹಾಕಿಕೊಡಲಾಗಿದೆ.
  3. ಶ್ರೀ ಚಿಕ್ಕಹನುಮಯ್ಯನವರ ಭಾಗಾಂಶಕ್ಕೆ ಸೇರಿದ 0.36 ಗುಂಟೆ ಬದಲಾಗಿ ಚಿಕ್ಕಹನುಮಯ್ಯನವರಿಗೆ 0.39 ಗುಂಟೆ ಎಂದು ಏಕನಿವೇಶನ ಬಡಾವಣೆ ಅನುಮೋದನೆ ಮಾಡಿರುವುದು ಸಮಂಜಸವೇ ? ಆದುದರಿಂದ ಹನುಮಯ್ಯ ಆದ ನಮ್ಮ ಭಾಗಾಂಶಕ್ಕೆ ಸೇರಿದ 1 ಗುಂಟೆಯನ್ನು ಚಿಕ್ಕಹನುಮಯ್ಯನವರಿಗೆ ಒತ್ತುವರಿ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
 
ಚಿಕ್ಕಹನುಮಯ್ಯನವರಿಗೆ 0.36 ಗುಂಟೆ ಎಂದು ಏಕನಿವೇಶನ ಬಡಾವಣೆ ಅನುಮೋದಿಸಿದಾಗ 0.36 ಗುಂಟೆಯನ್ನು ಅಡಿಗಳಿಗೆ ಬದಲಾಯಿಸಿದಾಗ 39,204 ಅಡಿಗಳಾಗಬೇಕು. ಆದರೆ ಚಿಕ್ಕಹನುಮಯ್ಯನವರಿಗೆ ತಾವು 41,766 ಅಡಿಗಳನ್ನು 0.36 ಗುಂಟೆ ಎಂದು ಅಳೆದು ಏಕನಿವೇಶನ ಬಡಾವಣೆ ಅನುಮೋದಿಸಿರುವುದು ಸುಮಾರು 2562 ಅಡಿಗಳು ಹೆಚ್ಚುವರಿಯಾಗಿ ಸೇರಿಸಿರುವುದು ಸಮಂಜಸವೇ?
 
ಚಿಕ್ಕಹನುಮಯ್ಯನವರಿಗೆ ವಾಸ್ತವವಾಗಿ 0.35.8 ಗುಂಟೆ ಇರುತ್ತದೆ. ಇವರು 0.36 ಗುಂಟೆ ಎಂದು ಪಹಣಿಯಲ್ಲಿ ತಪ್ಪಾಗಿ ನಮೂದಿಸಿಕೊಂಡಿರುತ್ತಾರೆ. 0.0.2 ಗುಂಟೆ (216 ಅಡಿಗಳು) ಹೆಚ್ಚುವರಿಯಾಗಿ ಸೇರಿಕೊಂಡಿದೆ. ಅಂದರೆ 2562 ಅಡಿ ಮತ್ತು 216 ಅಡಿ, ಒಟ್ಟಾಗಿ 2778 ಅಡಿಗಳು ಚಿಕ್ಕಹನುಮಯ್ಯನವರು ಒತ್ತುವರಿ ಮಾಡಿಕೊಂಡಿರುತ್ತಾರೆ. ಇದಕ್ಕೆ ಬಿಡಿಎ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಿ ಯಾವುದೇ ದಾಖಲೆಗಳನ್ನು ಪರಿಶೀಲಿಸದೆ ಚಿಕ್ಕಹನುಮಯ್ಯನವರಿಗೆ ಸಹಾಯ ಮಾಡಿರುತ್ತಾರೆ.
 
ಶ್ರೀ ಚಿಕ್ಕಹನುಮಯ್ಯನವರಿಗೆ ಬಿಡಿಎ ಇಂದ ಏಕನಿವೇಶನ ಬಡಾವಣೆ ಅನುಮೋದಿಸಿರುವ (ರೆಸಲ್ಯೂಷನ್ ನಂ. 1/2012 Dated. 25-02-2012, Work Order No. BQA/TPM/PRL-25/10-11/245/2012-13 Dated. 16-04-2013) ಜಾಗವನ್ನು ಮೀಟರ್‍ಗಳಿಂದ ಅಡಿಗಳಿಗೆ ಬದಲಾಯಿಸಿದಾಗ ಈ ಕೆಳಕಂಡಂತೆ ಹೆಚ್ಚುವರಿಯಾಗಿ 2778 ಅಡಿಗಳು ಬರುವುದು ಕಂಡುಬರುತ್ತದೆ.
 
ಬಿಡಿಎ ಏಕನಿವೇಶನ ಬಡಾವಣೆಗೆ ಅನುಮೋದಿಸಿರುವ ಜಮೀನಿನ ಚೆಕ್‍ಬಂದಿ ಈ ಕೆಳಕಂಡಂತಿದೆ.
Picture
ಒಬ್ಬ ಸಾಮಾನ್ಯ ನಾಗರಿಕನಿಗೆ ತಿಳಿಯುವ ಲೆಕ್ಕ ಬಿಡಿಎ ಅಧಿಕಾರಿಗಳಿಗೆ ಕಾಣದಿರುವುದು ಅತ್ಯಂತ ದುರಂತದ ಸಂಗತಿ.

ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣಿಸಿ ಸರ್ವೆ ನಂ. 28/2 ರಲ್ಲಿ ಚಿಕ್ಕಹನುಮಯ್ಯ ಹಾಗೂ ನಮಗೆ ಸೇರಿದ 1 ಎಕರೆ 24 ಗುಂಟೆ ಪ್ರದೇಶದಲ್ಲಿ ಹನುಮಯ್ಯ ಆದ ನಮ್ಮ ಭಾಗಾಂಶಕ್ಕೆ ಸೇರಿದ 0.2.2 ಗುಂಟೆಯ ಪ್ರದೇಶದ ಅಳತೆ ಮಾಡಿ ಸ್ಥಳವನ್ನು ಸ್ಪಷ್ಟವಾಗಿ ಸರ್ವೆ ನಕ್ಷೆಯನ್ನು ತಯಾರಿಸಿ ಗುರುತಿಸಿಕೊಡಬೇಕೆಂದು ಹಾಗೂ ಈಗಾಗಲೇ ಅನುಮೋದಿಸಿರುವ ಶ್ರೀ ಚಿಕ್ಕಹನುಮಯ್ಯನವರ ಏಕನಿವೇಶನ ಬಡಾವಣೆಯ ನಕ್ಷೆಯಲ್ಲಿ (ರೆಸಲ್ಯೂಷನ್ ನಂ. 1/2012 Dated. 25-02-2012, Work Order No. BQA/TPM/PRL-25/10-11/245/2012-13 Dated. 16-04-2013) ಸೂಕ್ತ ತಿದ್ದುಪಡಿ ತರಬೇಕೆಂದು ಕೇಳಿಕೊಳ್ಳುತ್ತೇವೆ.
 
ಗೌರವಗಳೊಂದಿಗೆ                                                                                                                   ಇಂತಿ ತಮ್ಮ ವಿಶ್ವಾಸಿ
 
                                                                                                                                                   (ಹನುಮಯ್ಯ)
ಅಡಕಗಳು :
1.         ಚಿಕ್ಕಹನುಮಯ್ಯನವರಿಗೆ ಅನುಮೋದಿಸಿರುವ ಏಕನಿವೇಶನ ಬಡಾವಣೆಯ ನಕ್ಷೆಯ ನಕಲು
2.         ಹನುಮಯ್ಯನವರ ಭಾಗಾಂಶಕ್ಕೆ ಸೇರಿದ 0.2.2 ಗುಂಟೆಯ ಪಹಣಿಯ ನಕಲು
 
ಪ್ರತಿಗಳನ್ನು :
1)         ತಹಶೀಲ್ದಾರ್

ಕಂದಾಯ ಭವನ, ಬೆಂಗಳೂರು
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com