Niruta Publications
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
Niruta Publications

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಪ್ರಾರಂಭಿಕ ಪರಿಚಯ

7/16/2017

0 Comments

 
ಪೀಠಿಕೆ:- 
ಈ ದೇಶದ ಕಡುಬಡವರು ಹಸಿವಿನ ಯಾತನೆ ಮತ್ತು ನರಳುವಿಕೆಯಿಂದ ಮುಕ್ತರಾದಾಗ ಮಾತ್ರ ಭಾರತ ನಿಜವಾದ ಸ್ವಾತಂತ್ರ್ಯವನ್ನು ಹೊಂದುತ್ತದೆ" ಎಂದು ಗಾಂಧೀಜಿಯವರು ಹೇಳಿದ ಮಾತಿನಂತೆ ಸಾದರಪಡಿಸಿ ನಿರುದ್ಯೋಗದ ಪ್ರಮಾಣವನ್ನು ಕಡಿಮೆ ಮಾಡಬೇಕು. ಅಂದರೆ ದುಡಿಯುವ ಶಕ್ತಿ ಇರುವ ಜನರಿಗೆ ದುಡಿದು ಸಂಪಾದಿಸುವ ಅವಕಾಶಗಳನ್ನು ಕಲ್ಪಿಸಿಕೊಡಬೇಕು.
ಭಾರತ ಒಂದು ಹಳ್ಳಿಗಳ ದೇಶ. ಇಲ್ಲಿ ಸುಮಾರು ಐದು ಲಕ್ಷಕ್ಕಿಂತಲೂ ಅಧಿಕ ಹಳ್ಳಿಗಳಿವೆ. 2001ರ ಜನಗಣತಿಯ ಪ್ರಕಾರ ಸುಮಾರು 742 ದಶಲಕ್ಷ ಜನರು ಅಂದರೆ, ಶೇ 72.2ಕ್ಕಿಂತಲೂ ಅಧಿಕ ಜನರು ಗ್ರಾಮಾಂತರ ಪ್ರದೇಶಗಳಲ್ಲಿ ವಾಸವಾಗಿದ್ದಾರೆ, ಕಳೆದ ಐದು ದಶಕಗಳ ಅಭಿವೃದ್ಧಿಯ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ನಿವಾರಿಸುವಲ್ಲಿ ವಿಫಲಗೊಂಡಿದ್ದು, ಗ್ರಾಮೀಣ ಭಾರತ ಹಲವು ಸಮಸ್ಯೆಗಳ ಆಗರವಾಗಿಯೇ ಉಳಿದುಕೊಂಡಿದೆ. ಬಡತನ, ನಿರುದ್ಯೋಗ, ಮೂಲಭೂತ ಸೌಕರ್ಯಗಳ ಅಜ್ಞಾನ, ಮುಂತಾದ ಸಮಸ್ಯೆಗಳು ಗ್ರಾಮೀಣ ಭಾರತ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಾಗಿವೆ. ಗ್ರಾಮೀಣ ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಬಡತನ ಬಹು ಮುಖ್ಯ ಪಾತ್ರ ವಹಿಸುತ್ತದೆ. ಬಡತನ ಎಂಬುದು ಜನರ ಭರವಸೆರಹಿತ ನಿಕೃಷ್ಠ ಜೀವನದ ಪರಿಸ್ಥಿತಿಯಾಗಿದೆ, ಸಮಾಜದ ಒಂದು ವರ್ಗದ ಜನರು ತಮ್ಮ ಮೂಲಾವಶ್ಯಕತೆಗಳನ್ನು ಈಡೇರಿಸಿಕೊಳ್ಳಲಾಗದಂತಹ ಪರಿಸ್ಥಿತಿಯನ್ನು ಬಡತನ ಎಂದು ಅರ್ಥೈಸಿಕೊಳ್ಳಬಹುದು. ಹಾಗೂ ಇದೊಂದು ಸಾಪೇಕ್ಷ ವಿಷಯವಾಗಿದ್ದು ಅದನ್ನು ಭೌತಿಕ ಅಂಶಗಳ ಆಧಾರದ ಮೇಲೆ ವ್ಯಕ್ತಪಡಿಸಲಾಗುತ್ತದೆ. ವಿಶ್ವ ಆಹಾರ ಮತ್ತು ಕೃಷಿ ಸಂಘಟನೆಯ ಮೊದಲ ಮಹಾ ನಿರ್ದೇಶಕ ಲಾರ್ಡ್ ಬಯಲಾರ್ ಅವರು 1940ರಲ್ಲಿ ಮೊದಲಬಾರಿಗೆ ಬಡತನ ರೇಖೆಯನ್ನು ವ್ಯಾಖ್ಯಾನಿಸಿದರು. ಅವರ ಪ್ರಕಾರ ಒಬ್ಬ ವ್ಯಕ್ತಿ ಒಂದು ದಿನಕ್ಕೆ 2300ಕ್ಕಿಂತಲೂ ಕಡಿಮೆ ಕ್ಯಾಲೊರಿ ಆಹಾರವನ್ನು ಸೇವಿಸುತ್ತಿದ್ದರೆ, ಆತ ಬಡತನದ ರೇಖೆಗಿಂತಲೂ ಕೆಳಗಿದ್ದಾನೆಂದು ಪರಿಗಣಿಸಬೇಕಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ಭಾರತದಂತಹ ರಾಷ್ಟ್ರದಲ್ಲಿ ಹವಾಮಾನ ಪರಿಸ್ಥಿತಿಗನುಗುಣವಾಗಿ ಹಳ್ಳಿಗಳಲ್ಲಿ ವರ್ಷದ ಎಲ್ಲಾ ಕಾಲಗಳಲ್ಲೂ ಎಲ್ಲಾ ವರ್ಗಕ್ಕೆ ಕೆಲಸ ಸಿಗುವುದಿಲ್ಲ, ಕೆಲಸ ಸಿಕ್ಕರೂ ಗಂಡು - ಹೆಣ್ಣೆಂಬ ತಾರತಮ್ಯ ಮಾಡುವುದು ಕಟುವಾಸ್ತವ ಸಂಗತಿಯಾಗಿದೆ. ಸ್ಥಳೀಯವಾಗಿ ಕೆಲಸವಿಲ್ಲದೆ ಇದ್ದಾಗ  ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ದುಡಿಯುವ ಸಾಮರ್ಥ್ಯ, ಅಗತ್ಯತೆ ಮತ್ತು ಗಂಡು-ಹೆಣ್ಣೆಂಬ ಲಿಂಗ ತಾರತಮ್ಯವಿಲ್ಲದೆ ದುಡಿಯುವ ಕೈಗಳಿಗೆ ಒಂದಿಷ್ಟು ಉದ್ಯೋಗ ಕಲ್ಪಿಸಿಕೊಡಬೇಕು.

1982ರಲ್ಲಿ ಲಾರ್ಡ್ ರಿಪ್ಪನ್ ಜಾರಿಗೆ ತಂದ ಸುಧಾರಣಾ ಕಾರ್ಯಕ್ರಮಗಳಿಂದ ಪ್ರೇರಿತರಾಗಿ ವಿಕೇಂದ್ರೀಕರಣಕ್ಕೆ ಪ್ರಯತ್ನ ದೊರಕಿಸಿಕೊಡುವ ಮೂಲಕ ಉದ್ಯೋಗ ಭರವಸೆ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯಸರ್ಕಾರಗಳೆರಡೂ ಪಾಂಚವಾರ್ಷಿಕ ಯೋಜನೆಗಳ ಮೂಲಕ ವಿವಿಧ ಕಾಲಘಟ್ಟಗಳಲ್ಲಿ ಗ್ರಾಮೀಣ ಬಡತನ ಮತ್ತು ನಿರುದ್ಯೋಗ ನಿವಾರಣೆಗಾಗಿ ಅನೇಕ ಯೋಜನೆಗಳನ್ನು ಸ್ವಾತಂತ್ರ್ಯಾ ನಂತರ ಜಾರಿಗೆ ತಂದರು. ಅವುಗಳಲ್ಲಿ ಪ್ರಮುಖವಾದ ಕಾರ್ಯಕ್ರಮಗಳೆಂದರೆ- ಗ್ರಾಮೀಣಾಭಿವೃದ್ದಿ ಕಾರ್ಯಕ್ರಮ, ಸ್ವರ್ಣಜಯಂತಿ ಗ್ರಾಮೋದ್ಯೋಗ ಯೋಜನೆ, ಗ್ರಾಮೀಣ ಉದ್ಯೋಗ ಸಮುಷ್ಟಿ ಯೋಜನೆ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ ಯೋಜನೆಯ ಅನುಷ್ಠಾನಗೊಳಿಸಲು ಹಲವಾರು ತೊಡಕುಗಳು ಎದುರಾದವು- ಮಾಹಿತಿಕೊರತೆ, ಜನರ ಪಾಲ್ಗೊಳ್ಳುವಿಕೆ ಕೊರತೆ, ಮೇಲ್ವಿಚಾರಣೆ ಕೊರತೆ, ಪಾರದರ್ಶಕತೆ ಇಲ್ಲದಿರುವುದು, ಹೀಗೆ ಹಲವು ತೊಡಕುಗಳು ಹಾಗೂ ವೈಫಲ್ಯಗಳ ಆಗರವಾಗಿದ್ದವು ಈ ಪಾಂಚವಾರ್ಷಿಕ ಯೋಜನೆಗಳು. ಈ ಎಲ್ಲಾ ಅಂಕಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯಂತೆಯೇ ಜನಪರವಾದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ - 2005ಯನ್ನು ಕಾಯ್ದೆ ರೂಪದಲ್ಲಿ ಜಾರಿಗೆ ತಂದಿತು.

ಹಲವಾರು ವರ್ಷಗಳ ಹಿಂದೆಯೇ ಅಪ್ರತಿಮ ಅರ್ಥಶಾಸ್ತ್ರಜ್ಞ ಜಾನ್ ಮೇವಾರ್ಡ್ ಕೇನ್ಸ್ ಪ್ರತಿಪಾದಿಸಿದ ಸಾರ್ವಜನಿಕರ ಹೂಡಿಕೆ'ಯ ಆಧಾರದಲ್ಲಿ ಸರ್ಕಾರವು ಹೊಸ-ಹೊಸ ಉದ್ಯೋಗ ಸೃಷ್ಟಿಸಲು ಸಾಧ್ಯವಾಗದಿದ್ದಲ್ಲಿ ಸೂಕ್ತ ಪ್ರದೇಶದಲ್ಲಿ ಕೆರೆ ಕಾಲುವೆಗಳನ್ನು ತೋಡಿಸಿ, ಅಗತ್ಯವಾದವುಗಳನ್ನು ಮುಚ್ಚಿಸಿ'. ಆಗ ತಾನಾಗಿಯೇ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂಬುದನ್ನು ಪ್ರತಿಪಾದಿಸಿದನು. ಇವರಂತೆ  ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ರಾಗ್ನರ್ವರ್ಕ್ಸ್ ಕೂಡ  ಹಿಂದುಳಿದ ಪ್ರದೇಶದಲ್ಲಿರುವ ಆಹಾರ ಕ್ರಮ ಸಂಪನ್ಮೂಲವನ್ನು ಬಳಸಿ ಸಾಮೂಹಿಕ ಬಂಡವಾಳವನ್ನು ಸೃಷ್ಟಿಸಲು ಸಾಧ್ಯವೆಂದು ಪ್ರತಿಪಾದಿಸಿದರು.

ಈ ತಜ್ಞರ ಆರ್ಥಿಕ ಚಿಂತನೆಯ ತಳಹದಿಯ ಮೇಲೆ ನಿಂತಿರುವ ಯೋಜನೆಯೇ ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಾಗಿದೆ. ಅಪಾರ ಪ್ರಮಾಣದಲ್ಲಿ ವ್ಯರ್ಥವಾಗುತ್ತಿರುವ ಶ್ರಮವನ್ನು ಬಳಸಿ ಇಡೀ ರಾಷ್ಟ್ರವೇ ಬಳಸಬಹುದಾದ ಆಸ್ತಿಯನ್ನು ಸೃಷ್ಟಿಸಬಹುದೆಂಬುದನ್ನು ಹತ್ತಾರು ಜನರ ಉದ್ಯೋಗ ಬೇಡಿಕೆಯನ್ನು ಆರ್ಥಿಕ ಅಭಿವೃದ್ದಿಗಾಗಿ ಬಳಸಲು ಸಾಧ್ಯ ಎಂಬುದನ್ನು ಉದ್ಯೋಗ ಖಾತ್ರಿ ಯೋಜನೆ ಮನದಟ್ಟು ಮಾಡಿಕೊಡುತ್ತದೆ.

ರಾಜ್ಯ ಗ್ರಾಮೀಣ ಉದ್ಯೋಗ ಭರವಸೆ ಕರಡು ಮಸೂದೆ  2005:-
ಸ್ವಾತಂತ್ರ್ಯಾನಂತರ ದೇಶದಲ್ಲಿ ಈವರೆಗೆ ಒಳಗೊಂಡ ಗ್ರಾಮೀಣ ಉದ್ಯೋಗ ಭರವಸೆ ಕಾರ್ಯಕ್ರಮಗಳ ಸಾಧಕಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ - 2005" ನ್ನು ದಿನಾಂಕ 07-09-2005ರಂದು ಭಾರತದ ರಾಷ್ಟ್ರ ಪತ್ರದಲ್ಲಿ ಪ್ರಕಟಿಸಿದ ಆರಂಭದಲ್ಲಿ ದೇಶದ 200 ಜಿಲ್ಲೆಗಳಲ್ಲಿ, ಪ್ರಸಕ್ತ ಆರ್ಥಿಕ ವರ್ಷದಿಂದ ದೇಶದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗಿದ್ದು ಮೊದಲಿಗೆ ಆಂದ್ರಪ್ರದೇಶದ ಕುಗ್ರಾಮ ಬಂಗಾಲಪಲ್ಲಿಯಲ್ಲಿ ಪ್ರಾಯೋಗಿಕವಾಗಿ ಮನಮೋಹನ್ ಸಿಂಗ್ ಮತ್ತು ಸೋನಿಯಾಗಾಂಧಿ ಅಧಿಕೃತವಾಗಿ ಚಾಲನೆ ನೀಡಿದರು.

ಮೊದಲ ಹಂತದಲ್ಲಿ, ರಾಜ್ಯದ 5 ಜಿಲ್ಲೆಗಳಲ್ಲಿ 32 ತಾಲ್ಲೂಕುಗಳನ್ನು  ಡಾ|| ನಂಜುಂಡಪ್ಪನವರ ವರದಿಯ ಸೂಚ್ಯಾಂಕದ ಆಧಾರದಂತೆ ಆಯ್ಕೆ ಮಾಡಲಾಗಿದೆ. ಈ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳು ಅನುಷ್ಠಾನಗೊಳಿಸುತ್ತಿದ್ದು, ಪ್ರಾದೇಶಿಕ ಭಿನ್ನತೆ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಧಿನಿಯಮಕ್ಕೆ ಪೂರಕವಾಗಿ ನಿಯಮಗಳನ್ನು ರೂಪಿಸಿಕೊಂಡಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕರ್ನಾಟಕ' ಎಂಬ ಹೆಸರಿನಲ್ಲಿ ದಿನಾಂಕ 08-02-2007ರಲ್ಲಿ ಕರ್ನಾಟಕ ರಾಜ್ಯ ಪತ್ರದಲ್ಲಿ ಸ್ಪಷ್ಟಪಡಿಸಿದೆ. ಅಂದಿನಿಂದ ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕರ್ನಾಟಕ ಜಾರಿಗೆ ಬಂದಿದೆ.
 
ಉದ್ದೇಶಗಳು:-
ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮುಖ್ಯ ಉದ್ದೇಶಗಳೆಂದರೆ:
ಸ್ವ ಇಚ್ಛೆಯಿಂದ ಅರ್ಜಿ ಸಲ್ಲಿಸುವ ಕರಕುಶಲ ದೈಹಿಕ ಕೆಲಸ ಬಯಸುವ ಗ್ರಾಮೀಣ ಪ್ರದೇಶದ ಸದಸ್ಯರಿಗೆ ಪ್ರತಿ ಕುಟುಂಬದ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 100 ಮಾನವ ದಿನಗಳ ಉದ್ಯೋಗವನ್ನು ನೀಡಿ ಅವರ ಜೀವನಕ್ಕೆ ಭದ್ರತೆ ಒದಗಿಸುವುದು.
ಗ್ರಾಮೀಣ ಜನರಿಗೆ ದೀರ್ಘ ಕಾಲದ ಜೀವನ ಸಾಗಿಸಲು ಮಾರ್ಗಗಳನ್ನು ತಿಳಿಯಪಡಿಸುವುದು.
 
ಹಕ್ಕುಗಳು ಮತ್ತು ಅಧಿಕಾರಗಳು:

  • ಈ ಯೋಜನೆಯಡಿ ತೊಡಗಿಸಿಕೊಳ್ಳುವ ಕಾರ್ಮಿಕರಿಗೆ ಈ ಕೆಳಕಂಡ ಹಕ್ಕುಗಳು ಮತ್ತು ಅಧಿಕಾರಗಳನ್ನು ನೀಡಲಾಗಿದೆ.
  • ಕುಟುಂಬ ಉದ್ಯೋಗ ಚೀಟಿಯಲ್ಲಿ ಹೆಸರಿರುವ ಕುಟುಂಬದ  ಎಲ್ಲಾ ವಯಸ್ಕರು, ಕರಕುಶಲ ದೈಹಿಕ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಹಕ್ಕು ಹೊಂದಿರುತ್ತಾರೆ.
  • ಉದ್ಯೋಗ ಕೋರಿಕೆ 15 ದಿನಗಳಲ್ಲಿ ಉದ್ಯೋಗ ಒದಗಿಸದಿದ್ದಲ್ಲಿ ಅರ್ಜಿದಾರರು ಆರ್ಥಿಕ ವರ್ಷದ ಮೊದಲ 30 ದಿನಗಳಿಗೆ ಕೂಲಿಯ 25% ರಷ್ಟು ಮಾತ್ರ ಉಳಿದ ಅವಧಿಗೆ ಶೇ30% ರಷ್ಟನ್ನು ನಿರುದ್ಯೋಗ ಭತ್ಯೆಯಾಗಿ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.
  • ಸಾಧ್ಯವಾದಷ್ಟರ ಮಟ್ಟಿಗೆ ಕೆಲಸವನ್ನು ಆ ಗ್ರಾಮದ ವ್ಯಾಪ್ತಿಯಲ್ಲಿ ಒದಗಿಸಬೇಕು. ಅವರು ವಾಸವಿರುವ ಗ್ರಾಮದಿಂದ 5ಕಿ.ಮೀ ಗಿಂತ ಹೆಚ್ಚಿನ ದೂರದಲ್ಲಿ ಕೆಲಸವನ್ನು ಒದಗಿಸಿದ್ದೇ ಆದರೆ ಕೂಲಿಯ ಶೇ.10 ರಷ್ಟನ್ನು ಹೆಚ್ಚುವರಿಯಾಗಿ ಮತ್ತು ಜೀವನ ವೆಚ್ಚಕ್ಕಾಗಿ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.
  • ಕೆಲಸ ಕೋರುವ ನೋಂದಾಯಿತ ಅರ್ಜಿದಾರರ ಪೈಕಿ ಕನಿಷ್ಠ 1/3 ರಷ್ಟಿರುವಂತೆ ಮಹಿಳೆಯರಿಗೆ ಆದ್ಯತೆ ಮೇರೆಗೆ ಉದ್ಯೋಗ ಒದಗಿಸಬೇಕು.
  • ಪಾವತಿಗೆ ಉಳಿದ 15 ದಿನಗೊಳಗಾಗಿ ಕೂಲಿಯನ್ನು ಪಾವತಿಸದಿದ್ದಲ್ಲಿ, ಉದ್ಯೋಗಿಯು ಕೂಲಿ ಪಾವತಿ ಅಧಿನಿಯಮ 1936(4/1936)ರ ಅನ್ವಯ ಪರಿಹಾರ ಪಡೆಯಲು ಹಕ್ಕುಳ್ಳವರಾಗಿರುತ್ತಾನೆ.
  • ಸಮಾನ ವೇತನ ಅಧಿನಿಯಮ 1976(25/1976)ರನ್ವಯ ಲಿಂಗಾಧಾರಿತ ತಾರತಮ್ಯ ಮಾಡತಕ್ಕದ್ದಲ್ಲ.
  • ಕಾಮಗಾರಿಯ ಸ್ಥಳದ ಸಮೀಪ ಕೂಲಿ ಕಾರ್ಮಿಕರು ಹಾಗೂ ಮಕ್ಕಳಿಗೆ ವಿಶ್ರಾಂತಿ ಪಡೆಯಲು ನೆರಳು ಮತ್ತು ಸ್ವಚ್ಚವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು.
  • ಕೆಲಸದ ಅವಧಿಯಲ್ಲಿ ಉಂಟಾಗಬಹುದಾದ ಸಣ್ಣಪುಟ್ಟ ಗಾಯಗಳಿಗಾಗಿ ಚಿಕಿತ್ಸೆ ನೀಡಲು ಪ್ರಥಮ ಚಿಕಿತ್ಸೆ ಪೆಟ್ಟಿಗೆ ಒದಗಿಸಬೇಕು.
  • ಕಾಮಗಾರಿಯ ಸ್ಥಳಕ್ಕೆ 5 ವರ್ಷಕ್ಕೂ ಕಡಿಮೆ ವಯಸ್ಸಿನ 5 ಕ್ಕಿಂತ ಹೆಚ್ಚಿನ ಮಕ್ಕಳು ಕಾರ್ಮಿಕರೊಂದಿಗೆ ಬಂದಲ್ಲಿ ಅವರನ್ನು ನೋಡಿಕೊಳ್ಳುವುದು ಕಾರ್ಮಿಕರ ಪೈಕಿ ಒಬ್ಬ ಮಹಿಳೆಯನ್ನು ನೇಮಿಸಬೇಕು ಮತ್ತು ದಿನದ ಕನಿಷ್ಠ ಕೂಲಿಯನ್ನು ಆ ಮಹಿಳೆಗೆ ಪಾವತಿಸಬೇಕು.
  • ಕಾಮಗಾರಿಯ ಸ್ಥಳದಲ್ಲಿ ಕಾಮಗಾರಿಗೆ ಸಂಬಂಧಿಸಿದಂತೆ ಕಾರ್ಮಿಕರಿಗೆ ಗಾಯಗಳಾದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಬೇಕು.
  • ಕಾಮಗಾರಿ ಸಂಬಂಧ ಯಾವುದೇ ಕಾರ್ಮಿಕರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯ ಕಂಡುಬಂದಲ್ಲಿ ಅವರು ಔಷಧಿ, ವೈದ್ಯಕೀಯ ಚಿಕಿತ್ಸೆ, ವಸತಿ, ಇತ್ಯಾದಿ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.
  • ಕಾಮಗಾರಿಯ ಕಾರಣದಿಂದಾಗಿ ಕಾರ್ಮಿಕರು ಶಾಶ್ವತವಾಗಿ ಅಂಗವಿಕಲರಾದರೆ ಅಥವಾ ಮೃತಪಟ್ಟರೆ ಸಂದರ್ಭಕ್ಕೆ ತಕ್ಕಂತೆ ಅವರು ಮತ್ತು ಅವರ ವಾರಸುದಾರರು 25,000/- ಅಥವಾ ಕೇಂದ್ರ ಸರ್ಕಾರ ನಿಗದಿಪಡಿಸಬಹುದಾದ ಪರಿಹಾರ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.
  • ಕಾಮಗಾರಿಯ ಸ್ಥಳದಲ್ಲಿ ಇರುವ ಮಕ್ಕಳಿಗೆ ಗಾಯಗಳಾದಲ್ಲಿ, ಶಾಶ್ವತ ಅಂಗವಿಕಲತೆಯಾದಲ್ಲಿ ಅಥವಾ ಮೃತಪಟ್ಟಲ್ಲಿ ಅವರೂ ಮೇಲಿನಂತೆ ಚಿಕಿತ್ಸೆ ಮತ್ತು ಪರಿಹಾರ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.
 
ಹಿಂದಿನ ಉದ್ಯೋಗ ಖಾತ್ರಿ ಯೋಜನೆಗಳಿಗೆ ಹೋಲಿಸಿದಾಗ ಈ ಯೋಜನೆಯಲ್ಲಿ ಕಂಡು ಬರುವ ಭಿನ್ನ ಅಂಶಗಳು:-
ಈ ಯೋಜನೆಯು ಕೂಲಿ ಕೆಲಸಕ್ಕೆ ಶಾಸನಬದ್ಧವಾದ ಖಾತ್ರಿಯನ್ನು ನೀಡುತ್ತದೆ.

  • ಈ ಯೋಜನೆಯ ಹಕ್ಕುಗಳ ಆಧಾರದ ಮೇಲೆ ಕೂಲಿ ಕೆಲಸವನ್ನು ಒದಗಿಸುತ್ತದೆ ಮತ್ತು ಉದ್ಯೋಗಾವಕಾಶ ಇಚ್ಛೆಯ ಮೇರೆಗೆ ಅವನ್ನು ತನ್ನ ಅನುಕೂಲಕರ ಸಮಯದಲ್ಲಿ ಪಡೆಯುವ ಸೌಲಭ್ಯ ಒದಗಿಸುತ್ತದೆ.
  • ಈ ಕಾಯ್ದೆಯು ಕೆಲಸಗಾರನಿಗೆ 15 ದಿನಗಳ ಒಳಗೆ ಕೆಲಸ ನೀಡಬೇಕೆಂದು ಶಾಸನಬದ್ಧವಾಗಿ ಹೇಳುತ್ತದೆ.
  • ಉದ್ಯೋಗವನ್ನು ನಿರ್ದಿಷ್ಟ ಅಥವಾ ನಿಗದಿತ ಸಮಯದಲ್ಲಿ ನೀಡಬೇಕೆಂದು ಕಾಯ್ದೆ ಬದ್ಧವಾಗಿ ಸೂಚಿಸುತ್ತದೆ ಮತ್ತು ನಿರುದ್ಯೋಗ ಭತ್ಯೆಯನ್ನು ಸೂಚಿಸುತ್ತದೆ.
  • ಈ ಯೋಜನೆಯು ರಾಜ್ಯಗಳಿಗೆ ಉದ್ಯೋಗವನ್ನು ಒದಗಿಸಲು ಪ್ರೇರಕ ಶಕ್ತಿಯನ್ನು ನೀಡುತ್ತದೆ ಮತ್ತು ಈ ಯೋಜನೆಗೆ ಹೆಚ್ಚಿಸಲಾಗುವ ಹಣದಲ್ಲಿ ಶೇ.90%ರಷ್ಟು ಕೇಂದ್ರವೇ ಭರಿಸಲಿದೆ. ಅದರ ಜೊತೆಯಲ್ಲಿ ರಾಜ್ಯವು ಉದ್ಯೋಗ ಒದಗಿಸುವಲ್ಲಿ ವಿಫಲವಾದರೆ ನಿರುದ್ಯೋಗ ಭತ್ಯೆಯನ್ನು ನೀಡುತ್ತದೆ.
  • ಈ ಹಿಂದೆ ಕೈಗೊಂಡ ಯೋಜನೆಗಳು ಕೆಲಸದ ಹಂಚಿಕೆಯ ಮೇಲೆ ನಿಗದಿಯಾಗಿದ್ದವು. ಆದರೆ ಈ ಯೋಜನೆ ಬೇಡಿಕೆ ಮೇಲೆ ಆಧಾರಿತವಾಗಿದೆ ಮತ್ತು ಬೇಡಿಕೆ ಆಧಾರದ ಮೇಲೆ ಸಂಪನ್ಮೂಲಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಅಂಶವು ರಾಜ್ಯಗಳಿಗೆ ಮೀಸಲಾತ್ಮಕವಾಗಿ ಪ್ರೇರಕ ಅಂಶವಾಗಿ ಬಡಜನರಿಗೆ ಉದ್ಯೋಗವನ್ನು ಕಲ್ಪಿಸಲು ಅವಕಾಶ ಮಾಡಿಕೊಡುತ್ತದೆ.
  • ಈ ಯೋಜನೆಯು ವಿಶಾಲವಾದ ಮತ್ತು ಪಾರದರ್ಶಕವಾದ ರಕ್ಷಣಾಪೂರಕಗಳನ್ನು ಒಳಗೊಂಡಿದೆ.
  • ಕರ್ನಾಟಕದಲ್ಲಿ ಈ ಯೋಜನೆಯಲ್ಲಿ ಮೊದಲನೆಯ ಹಂತದಲ್ಲಿ ಬೀದರ್, ಗುಲ್ಬರ್ಗಾ, ರಾಯಚೂರು,  ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹಾಗೂ 2ನೆಯ ಹಂತದಲ್ಲಿ ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿತ್ತು.  

ಹೀಗೆ ಹಲವು ಹಂತಗಳಲ್ಲಿ ಯೋಜನೆಯ ಅನುಷ್ಠಾನ ಮಾರ್ಗಗಳ ಮೂಲಕ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ವ್ಯಾಪಕಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾಗವಹಿಸಿರುವುದು ಕಾಣಬಹುದು. ಜೊತೆಗೆ ದೇಶದ ಆರ್ಥಿಕ ಪ್ರಗತಿ ಹೆಚ್ಚಿದಂತೆ ಇಲ್ಲಿನ ಅಸಮಾನತೆ ಕೂಡ ಹೆಚ್ಚುತ್ತಿರುವುದರ ಹಿನ್ನೆಲೆಯಲ್ಲಿ ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸೃಷ್ಟಿ ಮಾತ್ರವಲ್ಲದೇ ಮಹಿಳೆಯರ ಸಬಲೀಕರಣ ಸಾಮಾಜಿಕ ಮತ್ತು ಆರ್ಥಿಕವಾಗಿ ಬಲಪಡಿಸಲು ಕೇಂದ್ರದ ಹಣಕಾಸು (ವಿತ್ತ ಸಚಿವ ) ಮಂತ್ರಿ ಪ್ರಣಾಬ್ ಮುಖರ್ಜಿಯವರು 2009-10ರ ಕೇಂದ್ರ ಬಜೆಟ್ನಲ್ಲಿ 39.100 ಕೋಟಿ ಹಣವನ್ನು ಈ ಯೋಜನೆಗೆ  ಮೀಸಲಿಟ್ಟಿರುವುದು ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಕೊಟ್ಟ ಮಹತ್ವವಾಗಿದೆ. ಉಲ್ಬಣಗೊಳ್ಳುವ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಸೂಚಿಸುವುದು ಎಷ್ಟು ಅಗತ್ಯದ ಕೆಲಸವೊ ಹಾಗೆಯೇ ಪ್ರಗತಿಯತ್ತ ಸಾಗುತ್ತಿರುವ ಯೋಜನೆಯ ಜಾಡು-ವೈಫಲ್ಯಗಳನ್ನು ಗುರುತಿಸಿ, ಓರೆ-ಕೋರೆಗಳನ್ನು ತಿದ್ದುವುದು ಅಷ್ಟೇ ಮಹತ್ವದ ಕೆಲಸ.

ಹೀಗಾಗಿ ಯೋಜನೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಗ್ರಾಮೀಣ ಬಡತನ ನಿವಾರಿಸಿ ಗ್ರಾಮೀಣಾಭಿವೃದ್ಧಿಯನ್ನು ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ, ರಾಜ್ಯ ಸರ್ಕಾರದ ಜೊತೆ-ಜೊತೆಗೆ ವಿವಿಧ ಸರ್ಕಾರೇತರ ಸಂಸ್ಥೆ, ಸ್ಥಳೀಯ  ಸಂಸ್ಥೆಗಳಾದ - ಗ್ರಾಮಪಂಚಾಯ್ತಿಗಳು, ಗ್ರಾಮ ಸಭೆಗಳು, ಸ್ವ-ಸಹಾಯ ಗುಂಪುಗಳು, ಸ್ಥಳೀಯ ಮೇಲ್ವಿಚಾರಣಾ ಸಂಸ್ಥೆಗಳು, ಸಮಿತಿಗಳು, ಎನ್.ಜಿ.ಓಗಳು ಸಮಾಜಕಾರ್ಯಕರ್ತರು ಈ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಬಹು ಮುಖ್ಯ ಪಾತ್ರ ನಿರ್ವಹಿಸಬೇಕಾಗಿದೆ.
​
1946ರಷ್ಟು ಹಿಂದೆಯೇ ರಾಷ್ಟ್ರಪಿತ ಗಾಂಧೀಜಿಯವರು ಕಂಡಿದ್ದ `ರಾಮರಾಜ್ಯದ ಕನಸು ಅಂದರೆ `ಗ್ರಾಮೀಣ ಪಂಚಾಯತಿಗಳಿಗೆ ಪೂರ್ಣ ಅಧಿಕಾರಿ ನಿಯಮದ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಒಂದು ಮಹತ್ವದ ಮೈಲುಗಲ್ಲು. ಈ ಮಧ್ಯೆ ವಿರೋಧಪಕ್ಷದ ಆಡಳಿತವಿರುವ ಹಲವು ರಾಜ್ಯಗಳು `ಯುಪಿಎ' ಸರ್ಕಾರ ಜಾರಿಗೊಳಿಸಿದ ಈ ಕ್ರಾಂತಿಕಾರಿ ಯೋಜನೆಯ ಹೆಸರಿನ ಲಾಭ ಪಡೆಯುತ್ತವೆ ಎಂಬ ವರದಿಯ ಹಿನ್ನೆಲೆಯಲ್ಲಿ ಸದರಿ ಯೋಜನೆಗೆ ಕೇಂದ್ರ ಸರ್ಕಾರ `ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ` ಎಂದು ರಾಷ್ಟ್ರಪಿತನ 140ನೇ ಜನ್ಮ ದಿನಾಚರಣೆಯ ದಿನದಂದು ಅಕ್ಟೋಬರ್-02,2009ನೇ ಶುಕ್ರವಾರದಂದು ನಾಮಕರಣ ಮಾಡಿದೆ. ರಾ(ಗ್ರಾ)ಮ ರಾಜ್ಯದ ಕನಸು ಕಂಡಿದ್ದ ಬಾಪೂಜಿಯವರ ಹೆಸರಿನೊಂದಿಗೆ ಈ ಯೋಜನೆ ಅರ್ಥಪೂರ್ಣವಾಗಿದೆ. 
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9



    Six-Days
    Labour Laws & Labour Codes Certification Program

    Know More

    Picture
    Know More

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    Social Work Foot Prints


    RSS Feed


SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • CERTIFICATE TRAINING COURSES
  • TRAINING PROGRAMMES

nIRATHANKA cLUB hOUSE

  • NIRATHANKA CLUB HOUSE

JOB

  • CURRENT JOB OPENINGS
  • FIND FREELANCE JOBS​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe



JOIN OUR ONLINE GROUPS


JOIN WHATSAPP BROADCAST


ONLINE STORE


Copyright Niruta Publications 2021,    Website Designing & Developed by: www.mhrspl.com