Niruta Publications
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
  • Niruta Prints
    • Our Services
    • Designer Profile
  • Our Services
  • Leaders Talk
  • Social Work Blog
  • HR Blog
    • Blog
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಸಮಾಜಕಾರ್ಯ ಕ್ಷೇತ್ರದಲ್ಲಿ ಉತ್ತುಂಗ ಸಾಧನೆಗೈದ ಅನುಕರಣೀಯ ಮಹಿಳೆ - ಡಾ. ಕಲ್ಪನಾ ಸಂಪತ್

7/16/2017

0 Comments

 
Picture
1.         ನಿಮ್ಮ ಉದ್ಯೋಗ/ವೃತ್ತಿಯನ್ನು ವಿವರಿಸಿ?
ನಾನು ಅರ್ಪಿತ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಈಎಫ್ಐಎಲ್ ಎಜುಕೇಷನಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕಿಯಾಗಿದ್ದೇನೆ. ನಾನು ಲೇಖಕಿಯಾಗಿ, ಸಂಶೋಧಕಿಯಾಗಿ ಮತ್ತು ಸಾಂಸ್ಥಿಕ ಅಭಿವೃದ್ಧಿಯಲ್ಲಿ ಮಧ್ಯಸ್ಥಿಕೆ ವಹಿಸುವ ವಿಷಯದಲ್ಲಿ ತರಬೇತುದಾರಳಾಗಿ, ಭೋಧಕಿಯಾಗಿ, ವಿನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.
 
2.         ಈ ಉದ್ಯೋಗಕ್ಕೆ ಅವಶ್ಯಕವಿರುವ ವಿದ್ಯಾರ್ಹತೆ ಏನು?
ಪ್ರಕ್ರಿಯೆ ತರಬೇತಿ, ಮಾನವ ಸಂಪನ್ಮೂಲ ಕ್ಷೇತ್ರಗಳಲ್ಲಿ ಪ್ರಮಾಣೀಕರಣಗಳೊಂದಿಗೆ ಎಂ.ಎಸ್.ಡಬ್ಲ್ಯೂ ಮತ್ತು ಪಿಎಚ್.ಡಿ ಪದವಿ ಮತ್ತು ತಂತ್ರಜ್ಞಾನ ಮತ್ತು ಜನರ ನಿರ್ವಹಣೆಯಲ್ಲಿ ಹೆಚ್ಚುವರಿ ತರಬೇತಿ ಹೊಂದಿರಬೇಕು.
3.         ಈ ಉದ್ಯೋಗಕ್ಕೆ ಅಗತ್ಯವಿರುವ ವೈಯಕ್ತಿಕ ಗುಣಗಳು/ಕೌಶಲ್ಯಗಳೇನು?
ನಾಯಕತ್ವ, ಧೈರ್ಯ, ಆಡಳಿತ ನಡೆಸುವ ಸಾಮರ್ಥ್ಯ, ವಾಕ್ಚಾತುರ್ಯ, ಮಾಹಿತಿಯನ್ನು ಸಂಗ್ರಹಿಸುವ ಮತ್ತು ಅನುರೂಪತೆಗೊಳಿಸುವ ಸಾಮರ್ಥ್ಯ, ಅಂಕಿಅಂಶಗಳ ಮತ್ತು ಸಂಖ್ಯಾತ್ಮಕ ಪರಿಣತಿ, ಸವಾಲುಗಳನ್ನು ಎದುರಿಸಲು ಸಿದ್ಧವಾದ ಮನಸ್ಥಿತಿ.
 
4.         ಈ ಉದ್ಯೋಗದ ಉತ್ತಮ ಅಂಶಗಳಾವುವು?
  • ನಾನು ನಮ್ಮ ಸಂಸ್ಥೆಯ ಸಂಸ್ಥಾಪನಾ ಸದಸ್ಯೆ. ಇದು ನನಗೆ ಕಾರ್ಯನಿರ್ವಹಿಸಲು ಮತ್ತು ಯೋಜಿಸಲು ಅಗಾಧವಾದ ಸ್ವಾತಂತ್ರ್ಯವನ್ನು ನೀಡುತ್ತದೆ.
  • ಮಕ್ಕಳಿಂದ ಹಿರಿಯರವರೆಗೂ ನಾನು ಅನೇಕ ಜನರನ್ನು ಭೇಟಿ ಮಾಡುತ್ತೇನೆ.
  • ಕಲಿಯಲು ಮತ್ತು ಬೆಳೆಯಲು ಬಹಳಷ್ಟು ಅವಕಾಶಗಳಿವೆ.
  • ಬಹಳಷ್ಟು ಸೃಜನಶೀಲತೆ ಮತ್ತು ಶೀಘ್ರ ನಿಧರ್ಾರದ ಅವಶ್ಯಕತೆಯಿದೆ.
  • ಬಹಳಷ್ಟು ಸಂಶೋಧನೆ ಮತ್ತು ಬರವಣಿಗೆಯು ಉತ್ತೇಜಿಸುತ್ತದೆ.
  • ಕೆಲಸ ಮತ್ತು ಜೀವನದ ನಡುವಿನ ಉತ್ತಮ ಸಮತೋಲನವನ್ನು ಸಾಧಿಸಬಹುದು.
 
5.         ಈ ಉದ್ಯೋಗದ ಸವಾಲಿನ ಅಂಶಗಳು?
  • ನಾವು ಸಂಪೂರ್ಣವಾಗಿ ಸ್ವಯಂ ನಿದರ್ೇಶಿತವಾಗಬೇಕು.
  • ಹೆಚ್ಚಿನ ಜವಾಬ್ದಾರಿತನ ಮತ್ತು ಹೆಚ್ಚಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಅವಶ್ಯಕ.
  • ಹೊಸ ವಿಷಯಗಳನ್ನು ಕಲಿಯುವ ಸಾಮರ್ಥ್ಯ.
  • ಕೊನೆಯ ಕ್ಷಣಗಳಲ್ಲಿ ಯೋಜನೆಯ ದ್ವಂದ್ವಗಳನ್ನು ಮತ್ತು ಬದಲಾವಣೆಗಳನ್ನು ನಿಭಾಯಿಸುವ ಸಾಮರ್ಥ್ಯ.
  • ಪ್ರಬುದ್ಧ ಜನರನ್ನು ಮತ್ತು ವಿವಿಧ ದೃಷ್ಟಿಕೋನಗಳನ್ನು ನಿಭಾಯಿಸುವ ಸಾಮರ್ಥ್ಯ.
  • ಬರೆಯುವ ಮತ್ತು ದಾಖಲಿಸುವ ಮತ್ತು ತಂತ್ರಜ್ಞಾನವನ್ನು ಬಳಸುವ ಸಾಮರ್ಥ್ಯ. 

6.         ನಿಮ್ಮ ಸಾಧನೆಗಳನ್ನು ತಿಳಿಸಿ?
  • ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಿಂದ ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ. (ಚಿನ್ನದ ಪದಕ ವಿಜೇತರು)
  • ಫೀಲಿಂಗ್ ಆಫ್ ಬಿಲಾಂಗಿಂಗ್ನೆಸ್ ಅಂಡ್ ಇಟ್ಸ್ ವೇರಿಯಸ್ ಬಿಹೇವಿಯರಲ್ ಮ್ಯಾನಿಫೆಸ್ಟೇಶನ್ಸ್ ಇನ್ ದ ಆರ್ಗನೈಷೇಶನಲ್ ಕಾನ್ಟೆಕ್ಸ್ಟ್ (2000) ಕ್ಷೇತ್ರದಲ್ಲಿ ಡಾಕ್ಟರೇಟ್ ಮಹಾಪ್ರಬಂಧ.
  • ಭಾರತೀಯ ಶಾಸ್ತ್ರೀಯ ನೃತ್ಯದಲ್ಲಿ ಕರ್ನಾಟಕ ಸರ್ಕಾರದಿಂದ ಸ್ನಾತಕೋತ್ತರ ಪದವಿ. (ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದವರು)
  • ಕಳೆದ 25 ವರ್ಷದಿಂದ 5 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಪಿತಾ ಅಸೋಸಿಯೇಟ್ಸ್ನ ನಿರ್ದೇಶಕರು (www.arpitha.com)
  • ಈಎಫ್ಐಲ್ ಎಜುಕೇಷನಲ್ ಸರ್ವೀಸಸ್ನ ನಿದೇಶಕರು. ಈ ಸಂಸ್ಥೆಯು ವಿವಿಧ ಮಟ್ಟದಲ್ಲಿ ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ಜೀವನ ಶಿಕ್ಷಣವನ್ನು ಒದಗಿಸುತ್ತದೆ ಮತ್ತು ಕರ್ನಾಟಕ ಸರ್ಕಾರದೊಂದಿಗೆ ಆಡಳಿತದೊಂದಿಗೆ ಕೈ ಜೋಡಿಸಿದೆ. (www.efil.co.in)
  • ಇನ್ಸೈಟ್ ಪಬ್ಲೀಷರ್ಸ್ನ ನಿರ್ದೇಶಕರು, ಇದು ಒಂದು ಪ್ರಕಾಶನ ಸಂಸ್ಥೆಯಾಗಿದ್ದು ಶಿಕ್ಷಣ ನಾಯಕತ್ವ ವ್ಯವಸ್ಥೆಯ ಯೋಜನೆಯ ಸಾಮಾಜಿಕ ವ್ಯವಸ್ಥೆಯಲ್ಲಿ ಜಾಗೃತಿ ಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
  • ಪುನರ್ನವ ದ ನಿರ್ದೇಶಕರು, ಈ ಸಂಸ್ಥೆಯು ಆಯುರ್ವೇದದ ಮೂಲಕ ಜಾಗತಿಕ ಸಮುದಾಯದ ಆರೋಗ್ಯ ಮತ್ತು ಹಿತವನ್ನು ಕಾಪಾಡುವ ಗುರಿಯನ್ನು ಹೊಂದಿದೆ.
  • ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಅತಿಥಿ ಬೋಧಕರು.
  • ಅಜೀಂಪ್ರೇಮ್ಜೀ ಸಂಸ್ಥೆಯ ಸಹಯೋಗದೊಂದಿಗಿನ ಎಜುಕೇಷನ್ ಲೀಡರ್ಶಿಪ್ ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ನ ಯೋಜನಾ ಮುಖ್ಯಸ್ಥರು.
  • ಬೆಂಗಳೂರಿನ ಸಿಐಎಸ್ಎಂ ನ ಆಡಳಿತ ಮಂಡಳಿಯ ಸದಸ್ಯರು.
  • ಬೆಂಗಳೂರಿನ ಅಸೋಸಿಯೇಷನ್ ಫಾರ್ ಮೆಂಟಲಿ ಚಾಲೆಂಜ್ಡ್ ನ ಮಂಡಳಿ ಸದಸ್ಯರು (2015).
  • ‘Keys to Social Entrepreneurship’;  ‘People Connect – HR for social organizations’ ; ‘Performance Excellence –Efficient and Effective project management in social organizations’ ಈ ಮೂರು ಪುಸ್ತಕದ ಲೇಖಕರು, ಇನ್ಸೈಟ್ ಪಬ್ಲೀಷರ್ಸ್, ಬೆಂಗಳೂರು.
  •  AHRD, APERA, KAHRD, NHRD, AOM, TAHRD, NIPM, NHRD, IFTDO ಇತ್ಯಾದಿ ಸಮ್ಮೇಳನಗಳಲ್ಲಿ 30 ಹೆಚ್ಚು ಪ್ರಬಂಧಗಳನ್ನು ಮಂಡನೆ.
  • ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಸುದ್ದಿ ಪತ್ರಿಕೆಗಳಲ್ಲಿ 20ಕ್ಕೂ ಹೆಚ್ಚು ಲೇಖನಗಳ ಪ್ರಕಟಣೆ.
  • ಸಾಂಸ್ಥಿಕ ಬೆಳವಣಿಗೆಯ ವಿಧಾನಗಳು ಮತ್ತು ವಿಷನ್-ವ್ಯಾಲ್ಯೂ ಅಲೈನ್ಮೆಂಟ್ ನ ಪರಿಣಾಮದ ಮೇಲೆ ಸಂಶೋಧನೆಯನ್ನು ಕೈಗೊಂಡಿರುವುದು.
  • ಬೆಂಗಳೂರಿನ ರೋಟರಿ ಕ್ಲಬ್ನಿಂದ ಒಕೇಷನಲ್ ಎಕ್ಸಲೆನ್ಸ್ ಪ್ರಶಸ್ತಿಯನ್ನು (2005) ನೀಡಲಾಗಿದೆ.
  • ಸಿಎಸ್ಐಎಂ ಪತ್ರಿಕೆಗೆ 6 ವರ್ಷದ ಲೇಖನಗಳ ಕೊಡುಗೆ.
  • ಜ್ಞಾನಬೋಧಿನಿ ಇದು ಮೌಲ್ಯಗಳನ್ನು ತಿಳಿಸುವ ಒಂದು ಸಂಗೀತದ ಶ್ರೇಣಿಯಾಗಿದೆ. ಇದರ ಮೂಲಕ ಸಮುದಾಯಕ್ಕೆ ಮತ್ತು ಭಾರತದ ಸಂಸ್ಕೃತಿಗೆ ಕೊಡುಗೆ.
  • ರಾಷ್ಟ್ರೀಯ ದೂರದರ್ಶನ ಕೇಂದ್ರಕ್ಕೆ ನಾಟಕಗಳನ್ನು ನಿರ್ದೇಶನ, ಇದರ ಮೂಲಕ ವಿವಿಧ ಕಲೆಯ ರೂಪಗಳನ್ನು ಅನ್ವೇಷಣೆ.
  • ಕೆಲವು ಧಾರ್ಮಿಕ ಸಂಸ್ಥೆಗಳಿಗೆ ಸಹಾಯ ಮಾಡುವ ಮೂಲಕ ಸಮುದಾಯ ಬೆಳವಣಿಗೆಗಾಗಿ ದುಡಿಮೆ.
 
7.         ನಿಮ್ಮ ವೃತ್ತಿಯಲ್ಲಿನ ಯಶಸ್ಸಿನ ಗುಟ್ಟೇನು?
  • ಸಂಪೂರ್ಣ ನಂಬಿಕೆ ಮತ್ತು ದೇವರಿಗೆ ಸಲ್ಲಿಕೆ/ಜಾಗತಿಕ ಜಾಗೃತಿ
  • ಕುಟುಂಬದವರಿಂದ ಬೆಂಬಲ,
  • ಯಾವುದೇ ಕಾರಣಕ್ಕೂ ಪ್ರಯತ್ನವನ್ನು ನಿಲ್ಲಿಸಬಾರದೆಂಬ ಮನೋಭಾವ,
  • ಬದ್ಧತೆಯಿಂದಿರುವುದು,
  • ನಿಷ್ಠೆ, ಪ್ರಾಮಾಣಿಕತೆ ಮತ್ತು ಪಟ್ಟು ಬಿಡದ ಪ್ರಯತ್ನ,
  • ಸಮರ್ಪಣೆ ಮತ್ತು ಕಲಿಯುವ ಹಂಬಲ,
  • ನೆಲೆಗಟ್ಟು ತಿಳಿದುಕೊಳ್ಳುವ ಸಾಮರ್ಥ್ಯ, ಟೀಕೆಗಳನ್ನು ಸ್ವೀಕರಿಸುವುದು ಮತ್ತು ಸಮಸ್ಯೆಗಳನ್ನು ಒಂದು ಕಲಿಕೆಯ ಅವಕಾಶಗಳಂತೆ ಕಾಣುವುದು,
  • ಪ್ರೀತಿ ಮತ್ತು ವಾತ್ಸಲ್ಯ - ಇದು ಎಲ್ಲವನ್ನೂ ಗೆಲ್ಲುತ್ತದೆ
 
8.         ನಿಮ್ಮ ಶೈಕ್ಷಣಿಕ ದಿನಗಳು ಕೆಲವು ಕುತೂಹಲಕಾರಿ ವಿಷಯಗಳನ್ನು ತಿಳಿಸಿ.
  • ಮದ್ಯಮ ವರ್ಗದ ಕುಟುಂಬದಿಂದ ಬಂದ ನನಗೆ ಸಮಾಜಕಾರ್ಯ, ಎಚ್ಆರ್ ಮತ್ತು ಇದರ ಕುರಿತಾದ ತರಬೇತಿಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿತ್ತು.
  • ಚಿನ್ನದ ಪದಕ ವಿಜೇತೆಯಾದ ನನಗೆ ಸ್ವತಃ ನನ್ನ ಕಡೆಯಿಂದ ಮತ್ತು  ಕುಟುಂಬ/ಸ್ನೇಹಿತರ ಕಡೆಯಿಂದ ನಿರೀಕ್ಷೆಯು ಹೆಚ್ಚಾಗಿದ್ದವು. ಆ ನಿರೀಕ್ಷೆಗಳ ಗುರಿ ಮುಟ್ಟುವ ಕಾರ್ಯವು ಸುಲಭದ್ದಾಗಿರಲಿಲ್ಲ.
  • ನಾನು ನನ್ನ ಪದವಿಪೂರ್ವ ಶಿಕ್ಷಣವನ್ನು ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಪೂರೈಸಿದೆ. ಕಾಲೇಜಿನಲ್ಲಿ ಸಾಂಸ್ಕೃತಿಕ ದಿನಾಚರಣೆ ಮುಂದಾಳತ್ವವನ್ನು ನಾವು ತೆಗೆದುಕೊಂಡಿದ್ದೆವು ಮತ್ತು ಸಂಸ್ಕೃತದಲ್ಲಿ ಅನೇಕ ಕಾರ್ಯಕ್ರಮಗಳನ್ನು - ನಾಟಕ, ಯಕ್ಷಗಾನ, ನೃತ್ಯ ಮತ್ತು ಜಿ.ವಿ ಅಯ್ಯರ್ರವರ ಶಂಕರಾಚಾರ್ಯ ಚಿತ್ರವನ್ನು ಪ್ರಸ್ತುತ ಪಡಿಸಿದ್ದೆವು (1985-86).
  • ನಾನು ಡೆಲ್ಲಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ನೃತ್ಯ ಹಬ್ಬದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದೆನು (1984-88).
  • ಪ್ರೊ. ಮರಳುಸಿದ್ಧಯ್ಯನವರು ನಮ್ಮ ಪ್ರಾಂಶುಪಾಲರಾಗಿದ್ದರು, ಅವರು ಸಮ್ಮೇಳನಗಳಲ್ಲಿ ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸಲು ಬಹಳಷ್ಟು ಅವಕಾಶಗಳನ್ನು ನೀಡಿದ್ದರು. ಅವರು ನಮಗೆ ಪ್ರೋತ್ಸಾಹವನ್ನು ನೀಡಿದರು ಮತ್ತು ನಮ್ಮ ಎರಡು ವರ್ಷದ ಸ್ನಾತಕೋತರ ಪದವಿಯ ಕಲಿಕೆಯ ಸಮಯದಲ್ಲಿ ನಮ್ಮ ನಿಷ್ಠೆ ಮತ್ತು ಪರಿಶ್ರಮವನ್ನು ಮನಗಂಡಿದ್ದರು.
  • ಸಮಾಜಕಾರ್ಯ ಶಿಕ್ಷಣದ ಸಮ್ಮೇಳನವಾದ ಪ್ರೇರಣ ವನ್ನು ಆಯೋಜಿಸಿದ ಸದಸ್ಯರಲ್ಲಿ ನಾನೂ ಒಬ್ಬಳು. ನಾನು ಸಮಿತಿಯ ಸದಸ್ಯೆಯಾಗಿದ್ದೆ.
  • ನಾನು ಪಠ್ಯೇತರ ಚಟುವಟಿಕೆಗಳಲ್ಲಿ  ಭಾಗವಹಿಸಲು ಬಹಳ ಉತ್ಸುಕಳಾಗಿದ್ದೆ ಮತ್ತು ನಮ್ಮ ಸ್ನೇಹಿತರ ಬಳಗ ಬಹಳ ದೊಡ್ಡದಿತ್ತು. ನಾನು ಬಹಿರ್ಮುಖಿಯಾಗಿದ್ದು ಎಲ್ಲರೊಂದಿಗೂ ಬೆರೆಯುತ್ತಿದ್ದೆ ಮತ್ತು ಕಾಲೇಜಿನಲ್ಲಿ ಯಾವುದಾದರೊಂದು ಹೊಸ ವಿಷಯವನ್ನು ಕಲಿಯುತ್ತಿದ್ದೆ.
  • ನಾನು ಎಂ.ಎಸ್.ಡಬ್ಲ್ಯೂನ ನನ್ನ ಅಂತಿಮ ವರ್ಷದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ ಮೌಲ್ಯಗಳ ಸ್ಪಷ್ಟೀಕರಣ ವಿಷಯದ ಮೇಲಿನ ಕಾರ್ಯಾಗಾರದಲ್ಲಿ ನನ್ನ ಗಂಡನನ್ನು ಮೊದಲು ಭೇಟಿಯಾದೆ ಮತ್ತು ನಂತರ ಅವರನ್ನು ಮದುವೆಯಾದೆ.
  • 1991-92ರಲ್ಲಿ ಐಐಎಂಎ ನಲ್ಲಿ ಪ್ರೊ. ಟಿವಿ ರಾವ್ರವರಿಗೆ ಸಂಶೋಧನಾ ಸಹಾಯಕಳಾಗಿ ಕಾರ್ಯನಿರ್ವಹಿಸುವ ಅವಕಾಶ ದೊರಕಿತ್ತು.
  • ಡಾ. ಗಾಂಧಿ ದಾಸ್ ರವರೊಂದಿಗೆ ನಾನು ಪಿ.ಎಚ್.ಡಿ ಯನ್ನು ಮಾಡಿದೆ ಇದು ನನಗೆ ಡಾಕ್ಟರೇಟ್ ಪ್ರಕ್ರಿಯೆಯನ್ನು ಮತ್ತು ಇದರ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಅನೇಕ ಹೊಸ ದೃಷ್ಟಿಕೋನಗಳನ್ನು ನೀಡಿತು.
 
9.         ನಿಮ್ಮ ವೃತ್ತಿಯನ್ನು ನೀವು ಹೇಗೆ ಯೋಜಿಸಿದ್ದಿರಿ?
ನಾನು ಅತ್ಯಂತ ಯೋಜಿತಳು ಮತ್ತು ಕ್ರಮ ಆಧಾರಿತಳು. ನಾನು ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ಡಾಕ್ಟರೇಟ್ ಪದವಿಯನ್ನು ಪಡೆಯಬೇಕು ಅಥವಾ ವೈದ್ಯೆಯಾಗಬೇಕೆಂದುಕೊಂಡಿದ್ದೆ. ನಾನು ಇದಕ್ಕಾಗಿ ಬಹಳ ಪರಿಶ್ರಮಿಸಿದೆ. ಪದವಿಯಲ್ಲಿ ನಾನು ಮನಃಶಾಸ್ತ್ರ, ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರವನ್ನು ಆರಿಸಿಕೊಂಡೆ. ನಾನು ಎಚ್ಆರ್ ಆಗಲು ಎಂ.ಎಸ್.ಡಬ್ಲ್ಯೂ ಅನ್ನು ಆರಿಸಿಕೊಂಡೆ. ಆಗಲೇ ನಾನು ಜಾನಪದ ನೃತ್ಯ, ನಾಟ್ಯ ಶಾಸ್ತ್ರಗಳಲ್ಲಿ ತರಬೇತಿಯನ್ನು ಪಡೆಯುತ್ತಿದ್ದೆ. ಆದುದರಿಂದ ಎಚ್ಆರ್ ನಲ್ಲಿ ಜನರೊಂದಿಗೆ ಕಾರ್ಯನಿರ್ವಹಿಸುವುದನ್ನು ಆರಿಸಿಕೊಂಡೆ. ನಾನು ನನ್ನ 30 ವಯಸ್ಸಿನೊಳಗೆ ನನ್ನ ಪಿಎಚ್.ಡಿ ಮತ್ತು ಸಂಶೋಧನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದೆ. ಜೆ.ಎಂ. ಸಂಪತ್ ರವರು ನನ್ನ ಬಾಳಲ್ಲಿ ಬಂದ ಮೇಲೆ ನಾನು ನನ್ನ ವೃತ್ತಿಯಲ್ಲಿ ವೇಗವನ್ನು ಕಂಡೆ.
 
10.       ನಿಮ್ಮ ಮೊದಲ ಉದ್ಯೋಗದ ಮೊದಲ ದಿನದ ಅನುಭವವನ್ನು ವಿವರಿಸಿ?
ನಾನು ಮೊದಲು ಟೈಟಾನ್ ಕಂಪನಿಯಲ್ಲಿ ಕೆಲಸವನ್ನು ಆರಂಭಿಸಿದೆ ಅಲ್ಲಿ ಹೊಸಬರಿಗೆ ಹೆಚ್ಚು ಪ್ರೋತ್ಸಾಹ ದೊರೆಯುತ್ತಿತ್ತು. ನಾನು ಅಲ್ಲಿಗೆ ಬ್ಲಾಕ್ ಪ್ಲೇಸ್ಮೆಂಟ್ಗಾಗಿ ತೆರಳಿದೆ ಮತ್ತು ಹೆಚ್ಚುವರಿಯಾಗಿ 6 ತಿಂಗಳುಗಳ ಕಾಲ ಅಲ್ಲೇ ಉಳಿದುಕೊಂಡೆ. ಅಲ್ಲಿ ನನಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲು ಮತ್ತು ಪ್ರತಿಭೆಯ ಅನಾವರಣದ ವೇದಿಕೆಯನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ನೀಡಿದರು. ಇದು ನನ್ನ ನೆಚ್ಚಿನ ಕ್ಷೇತ್ರವಾಗಿದ್ದರಿಂದ ನಾನು ಇದರಲ್ಲಿ ಸಂತೋಷದಿಂದ ಪಾಲ್ಗೊಂಡೆ ಮತ್ತು  ಕೇವಲ ಒಂದು ತಿಂಗಳ ಅವಧಿಯಲ್ಲಿ 70 ಭಾಗದಷ್ಟು ನೌಕರರ ಹೆಸರು ಮತ್ತು ಹುದ್ದೆಯನ್ನು ತಿಳಿದುಕೊಂಡೆ.
 
11.       ನಿಮ್ಮ ಪ್ರಮುಖ ಸಾಧನೆಗಳು ಮತ್ತು ಯಾವ ಅವಕಾಶಗಳು ನಿಮ್ಮನ್ನು ಈ ಹಾದಿಯಲ್ಲಿ ಮುನ್ನಡೆಸಿದೆ?

ನಿರ್ದಿಷ್ಟವಾಗಿ ಅವಕಾಶವನ್ನು ಹೇಳುವುದು ಕಷ್ಟ. ಅನೇಕ ಅಂಶಗಳು ಮತ್ತು ಅನೇಕ ಉತ್ತಮ ಗುರುಗಳು, ಹಿರಿಯ ವೃತ್ತಿಪರರು ನನ್ನನ್ನು ಬೆಂಬಲಿಸಿದ್ದಾರೆ ಮತ್ತು ಮೌಲ್ಯಗಳ ಮತ್ತು ಸಂಸ್ಥೆಯ ಬೆಳವಣಿಗೆಯ ಕ್ಷೇತ್ರದಲ್ಲಿ ನನ್ನ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟಿದ್ದಾರೆ.
 
12.       ನಾಯಕಿ/ಸಾಮಾಜಿಕ ಕಾರ್ಯಕರ್ತೆಯಾಗಿ ನೀವು ಬೇರೆ ನಾಯಕರು/ಸಾಮಾಜಿಕ ಕಾರ್ಯಕರ್ತರಿಂದ ನಿಮ್ಮನ್ನು ಹೇಗೆ ಪ್ರತ್ಯೇಕಿಸಬಹುದು?
  • ನಾನು ಕುರುಡು ಕಾರ್ಯಕರ್ತಳಲ್ಲ, ನಿರ್ಧಾರಗಳನ್ನು ಮತ್ತು ಆಯ್ಕೆಗಳನ್ನು ಕ್ರಮಬದ್ಧವಾಗಿ ತೆಗೆದುಕೊಳ್ಳುತ್ತೇನೆ.
  • ನನಗೆ ಪ್ರತ್ಯೇಕವಾದ ಚಿಕಿತ್ಸಾ ಶೈಲಿಯಲ್ಲಿ ನಂಬಿಕೆಯಿಲ್ಲ ಮತ್ತು ನಾನು ಒಳಗೊಳ್ಳುವಿಕೆಯನ್ನು ಅಭ್ಯಸಿಸುತ್ತೇನೆ.
  • ನಾನು ಹೆಚ್ಚಿನ ವಿಶ್ವಾಸಾರ್ಹತೆಯನ್ನು ಗಳಿಸಲು ಶ್ರಮಿಸಿದ್ದೇನೆ ಮತ್ತು ಬದ್ಧತೆಯನ್ನು ರೂಢಿಸಿಕೊಂಡಿದ್ದೇನೆ.
  • ಸುದೀರ್ಘವಾದ ನನ್ನ ಸೇವಾವಧಿಯಲ್ಲಿ 5ನೇ ವಯಸ್ಸಿನ ಮಕ್ಕಳಿಂದ 70 ವರ್ಷದ ಮೇಲ್ಪಟ್ಟ ಹಿರಿಯ ನಾಗರೀಕರ ತನಕ ಎಲ್ಲರೊಂದಿಗೆ ಕಾರ್ಯನಿರ್ವಹಿಸಿದ್ದೇನೆ; ಅನೇಕ ಕಾರ್ಯವಿಧಾನಗಳ ಮೂಲಕ ಅವರ ಅರಿವಿನ ಪ್ರಕ್ರಿಯೆಗಳನ್ನು ಮತ್ತು ಭಾವನಾತ್ಮಕ ಪ್ರಕ್ರಿಯೆಗಳನ್ನು ಸಂಪರ್ಕಿಸಿದ್ದೇನೆ.
  • ನನ್ನನ್ನು ನಾನು ವೈಭವಿಕರಿಸಿಕೊಳ್ಳುವ ಅಗತ್ಯತೆ ನನಗಿಲ್ಲ, ಆದರೆ ನಾನು ಮಾಡುವ ಕೆಲಸವು ಪರಂಪರೆಗಳುರುಳಿದರೂ ಜನಮಾನಸದಲ್ಲಿ ಸದಾ ಹಸಿರಾಗಿರಬೇಕೆಂಬ ಬಯಕೆ ನನ್ನದು.
  • ಜನರು ತಮಗೆ ತಾವೇ ಸಹಾಯ ಮಾಡಿಕೊಳ್ಳುವಂತೆ ನಾನು ಅವರಿಗೆ ಪ್ರಾಮಾಣಿಕವಾಗಿ ಸಹಾಯ ಮಾಡಿದ್ದೇನೆ.
  • ಅನೇಕ ಯುವ ಜನರನ್ನು ಸಾಧ್ಯವಾದಷ್ಟು ಸಾಮಾಜಿಕ ಉದ್ಯಮಿಗಳಾಗಿ ಅಭಿವೃದ್ಧಿ ಪಡಿಸಿದ್ದೇನೆ.
  • ಉದ್ಯೋಗದಾತಳಾಗಿ, ಸಲಹೆಗಾರಳಾಗಿ ಮತ್ತು ನೌಕರಳಾಗಿ ಅನೇಕ ದೃಷ್ಟಿಕೋನಗಳಿಂದ ಕಂಡಿದ್ದೇನೆ.
  • ನನ್ನಲ್ಲಿ ನವ್ಯವಾದ ಅವಧಾನವಿದೆ ಮತ್ತು ಅನ್ವೇಷಿಸಲು, ಪ್ರಯೋಗ ಮಾಡಲು, ವಿಫಲವಾಗಲು ಮತ್ತು ನಿರ್ಮಿಸಲು ಹಿಂಜರಿಯುವುದಿಲ್ಲ.
 
13.       ನಾಯಕಳಾಗಿ/ಸಾಮಾಜಿಕ ಕಾರ್ಯಕರ್ತಳಾಗಿ ನೀವು ಇಂದು ಹೇಗೆ ಬೆಳೆಯುತ್ತಿರುವಿರಿ?
ನಾನು ನಿರಂತರವಾಗಿ ಓದುತ್ತಿದ್ದೇನೆ, ಕಲಿಯುತ್ತಿದ್ದೇನೆ ಮತ್ತು ನಾನು ಭೇಟಿ ಮಾಡುವ ಜನರೊಂದಿಗೆ ಚಚರ್ಿಸುತ್ತೇನೆ, ಯುವಜನರೊಂದಿಗೆ ಬೆರೆಯುತ್ತೇನೆ ಮತ್ತು ಅವರ ಯೋಚನಾ ಲಹರಿಗೆ ಇಳಿದು ಅವರಲ್ಲಿ ನಾನೂ ಒಬ್ಬಳಾಗುತ್ತೇನೆ; ಅನೇಕ ಆಧ್ಯಾತ್ಮಿಕ ಪ್ರಯಾಣ, ಪಠಣ, ಧ್ಯಾನ, ಯೋಗ, ನೃತ್ಯ, ನಾಟಕ ಮತ್ತು ಚಲನಚಿತ್ರಗಳು ಸಾರ್ವಜನಿಕರಿಗೆ ಸಾಮಾಜಿಕ ಆಯಾಮಗಳನ್ನು ತೆರೆದಿಡುತ್ತದೆ.
 
14.       ಯಾವುದು ನಿಮ್ಮನ್ನು ಸಮಾಜಕಾರ್ಯದಲ್ಲಿ ಕಾರ್ಯನಿರ್ವಹಿಸಲು ಸದಾ ಉತ್ಸಾಹಿಯನ್ನಾಗಿ ಮಾಡಿರುವುದು?
ಸಮಾಜಕಾರ್ಯ ಎಂದರೆ ವೈಯಕ್ತಿಕ ವಿಕಾಸ ಮತ್ತು ಇದು ಒಂದು ದೂರದೃಷ್ಟಿ ಮತ್ತು ಜೀವನದ ಒಂದು ಮಾರ್ಗವಾಗಿದೆ. ನಾವು ಯಾವಾಗಲೂ ವಿಕಾಸ ಹೊಂದುವ ಅವಕಾಶಗಳಿಗಾಗಿ ಎದುರು ನೋಡುತ್ತಿರುತ್ತೇವೆ. ಈ ವಿಕಸನದ ಪ್ರಕ್ರಿಯೆಯಲ್ಲಿ ನಮ್ಮ ಇರುವಿಕೆ, ಕ್ರಿಯೆ ಮತ್ತು ಕೊಡುಗೆಯು ಧನಾತ್ಮಕವಾಗುತ್ತದೆ. ಈ ಧನಾತ್ಮಕತೆಯು ಇತರರಿಂದ ನಮ್ಮನ್ನು ಪ್ರತ್ಯೇಕಿಸುತ್ತದೆ. ಸಮಾಜಕಾರ್ಯವು ಕೇವಲ ಒಂದು ವೃತ್ತಿಯಲ್ಲ ಅದು ಒಂದು ಜೀವನ ವಿಧಾನ.
 
15.       ನಿಮ್ಮ ಮುಂದಿನ ಹಂತದ ಜೀವನ/ವೃತ್ತಿಗೆ ನಿಮ್ಮ ಪ್ರಸ್ತುತ ಮಹತ್ವಾಕಾಂಕ್ಷೆಗಳೇನು?
ನಾನು ಮಾಡಬೇಕಾಗಿರುವುದು ಸಾಕಷ್ಟಿದೆ.
  • ನಾನು ಕಾರ್ಯ ನಿರ್ವಹಿಸುತ್ತಿರುವ ಜೀವನ ಶಿಕ್ಷಣ ಪ್ರಕ್ರಿಯೆಯು ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ.
  • 5 ಪುಸ್ತಕಗಳನ್ನು ಪೂರ್ಣಗೊಳಿಸಿದ್ದೇನೆ ಮತ್ತು ಪೂರ್ಣಗೊಳಿಸಬೇಕಾದದ್ದು ಸಾಕಷ್ಟಿದೆ.
  • ನನ್ನ ಮಗಳ ಮೂಲಕ ಕಲಾ ಕ್ಷೇತ್ರದಲ್ಲೂ ಸಹ ಕೆಲವು ಕಾರ್ಯಕ್ರಮಗಳನ್ನು ಆರಂಭಿಸಬೇಕೆಂದಿದ್ದೇನೆ.
  • ಬಹಳಷ್ಟು ಹೆಚ್ಚಿನ ಬೋಧನೆ ಮತ್ತು ತರಬೇತಿ ಕಾರ್ಯಯೋಜನೆಗಳ ಮೂಲಕ ಶಿಕ್ಷಣ ವಲಯದಲ್ಲಿ ಸೇವೆ ಮಾಡಬೇಕೆಂದಿದ್ದೇನೆ.
  • ಇನ್ನು ಹೆಚ್ಚಿನ ರೀತಿಯಲ್ಲಿ ಸಮುದಾಯಕ್ಕೆ, ಧಾರ್ಮಿಕ ಸಂಸ್ಥೆಗಳಿಗೆ ಸಹಾಯ ಮಾಡುವುದು.
 
16.       ನಿಮ್ಮ ಓದು ನಿಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ಹೇಗೆ ಸಹಾಯ ಮಾಡುತ್ತದೆ?
ಓದುವುದರಿಂದ ನಾನು ಸದಾ ಅಪ್ಡೇಟ್ ಆಗಿರುತ್ತೇನೆ ಮತ್ತು ಪ್ರತಿನಿತ್ಯ ನಾನು ಹೊಸತನ್ನು ಕಲಿಯುತ್ತಿರುತ್ತೇನೆ. ಇದು ನನಗೆ ತಿಳಿಯದಿರುವುದೇನೆಂದು ತಿಳಿಸುತ್ತದೆ ಮತ್ತು ತಿಳಿದುಕೊಳ್ಳಬೇಕಾದ್ದು ಎಷ್ಟಿದೆ ಎಂದು ತಿಳಿಸುತ್ತದೆ.
 
17.       ನಿಮ್ಮ ಆಸಕ್ತಿ/ಹವ್ಯಾಸಗಳಾವುವು?
ನೃತ್ಯ, ನೃತ್ಯ ನಿರ್ದೇಶನ, ಅಡುಗೆ, ಕಾರ್ಯಕ್ರಮ ಆಯೋಜನೆ, ಮಹಿಳಾ ಗುಂಪುಗಳೊಂದಿಗೆ ಕೆಲಸ, ಆಯುರ್ವೇದದ ಉತ್ತೇಜನ, ದೇವಸ್ಥಾನ ಕಾರ್ಯ ಚಟುವಟಿಕೆಗಳ ನಿರ್ವಹಣೆ, ನಡಿಗೆ, ಯೋಗ, ಧ್ಯಾನ ಮತ್ತು ಆಧ್ಯಾತ್ಮಿಕ ಪಯಣಗಳು.
 
18.       ನಿಮ್ಮ ಕುಟುಂಬದ ಬಾಂಧವ್ಯದ ಅನುಭವ............?
ನಮ್ಮದು ಉತ್ತಮ ಬಾಂಧವ್ಯ ತುಂಬಿದ ಕುಟುಂಬ. ನನಗೆ ಇಬ್ಬರು ಮಕ್ಕಳಿದ್ದಾರೆ ಅವರು ಯುಎಸ್ಎಯಲ್ಲಿ ಓದುತ್ತಿದ್ದಾರೆ. ಅವರು ನಮ್ಮ ಎಲ್ಲಾ ಕೆಲಸದಲ್ಲಿ ಮತ್ತು ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತಿ ಭಾನುವಾರದ ಸ್ಕೈಪ್ ಕಾಲ್, ವರ್ಷದಲ್ಲಿನ ಎರಡು ಬಾರಿಯ ರಜೆ ಕಾಲ, ಪ್ರಮುಖವಾದ ಕಾರ್ಯಕ್ರಮಗಳು ಮತ್ತು ಹಬ್ಬಗಳು ನಮ್ಮ ಸಂತಸದ ಬಾಂಧವ್ಯದ ಕ್ಷಣಗಳು. ನಮ್ಮ ಇಡೀ ಕಛೇರಿಯ ಸಹೋದ್ಯೋಗಿಗಳು ನಮ್ಮ ಕುಟುಂಬವಿದ್ದಂತೆ, ಇದರಿಂದ ಪ್ರತಿದಿನವೂ ಒಂದು ಬಾಂಧವ್ಯದ ಅನುಭವವೇ ಆಗಿದೆ. ಪ್ರತಿ ವಿಮರ್ಶಾ ಸಭೆಯು ಒಂದು ಅತ್ಯುತ್ತಮ ಬಾಂಧವ್ಯದ ಅನುಭವವೇ ಆಗಿದೆ.
 
19. ಮಹತ್ವಾಕಾಂಕ್ಷಿ ವೃತ್ತಿಪರ ಸಾಮಾಜಿಕ ಕಾರ್ಯಕರ್ತರಿಗೆ ನಿಮ್ಮ ಸಲಹೆಗಳು?
  • ನಿಮ್ಮ ಜೀವನದ ಗುರಿ ಮತ್ತು ಉದ್ದೇಶಗಳನ್ನು ಸಾಧ್ಯವಾದಷ್ಟು ಬೇಗ ತಿಳಿದುಕೊಳ್ಳಿ. ಈ ಗುರಿಯನ್ನು ಸಾಧಿಸಲು ವೃತ್ತಿಯು ಸಾಧನವಿದ್ದಂತೆ,
  • ನಿಮ್ಮನ್ನು ಮತ್ತು ನಿಮ್ಮ ಸಾಮಥ್ರ್ಯವನ್ನು ನಂಬಿ,
  • ಅಂತರ್ಗತ ಸಂಸ್ಕೃತಿಯಲ್ಲಿ ಕಾರ್ಯನಿರ್ವಹಿಸಿ ಮತ್ತು ನೀವು ಏನನ್ನು ಬೋಧನೆ ಮಾಡುವಿರೋ ಅದನ್ನು ಆಚರಿಸಿ,
  • ಕಾಲಕ್ಕೆ ತಕ್ಕಂತೆ ನೀವೇ ಬದಲಾಗಿ, ಜಗತ್ತು ನಿಮಗೆ ಬದಲಾಗಲು ಸೂಚಿಸುವವರೆಗೂ ಕಾಯಬೇಡಿ. ಬದಲಾವಣೆಯನ್ನು ಸೃಷ್ಟಿಸುವವರಾಗಿ,
  • ನಿಷ್ಠೆ, ಪ್ರಾಮಾಣಿಕತೆ, ನಿಷ್ಕಪಟತೆ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.
 
20. ನಿಮ್ಮ ವೃತ್ತಿಯಲ್ಲಿ ನಿಮಗಾದ ಕಹಿ ಅನುಭವ ಯಾವುದು?

ಕಹಿ ಅನುಭವಗಳ ಬಗ್ಗೆ ಹೇಳುವುದು ಸ್ವಲ್ಪ ಕಷ್ಟವಾಗುತ್ತದೆ. ನಾನು ಇಲ್ಲಿಯವರೆಗೂ ಕಹಿಯ ಅನುಭವಗಳನ್ನು ಕಲಿಕೆಯ ಅವಕಾಶಗಳೆಂದು ಭಾವಿಸಿದ್ದೇನೆ. ಸಾಮಾನ್ಯವಾಗಿ ಜನರು ಯಾವಾಗ ತಮ್ಮ ಕೆಲಸದಲ್ಲಿ ಬದ್ಧತೆಯಿಂದಿರುವುದಿಲ್ಲವೋ; ಪರಿಸ್ಥಿತಿಯನ್ನು ನಿಭಾಯಿಸಲು ಸುಳ್ಳನ್ನು ಹೇಳಿದಾಗ; ಕಪಟತನವಿದ್ದಾಗ; ತಮ್ಮ ತಪ್ಪನ್ನು ಮರೆಮಾಚಲೆತ್ನಿಸಿದಾಗ ಕಹಿಯ ಅನುಭವಗಳು ಆಗುತ್ತದೆ; ಅದೃಷ್ಟವಶಾತ್ ನಾವು ನೇರ ನುಡಿಯ ಸ್ವಭಾವದವರಾದ್ದರಿಂದ ಇಂಥಹ ಅನುಭವಗಳು ತುಂಬಾ ಸಾಮಾನ್ಯವಾಗಿಲ್ಲ. ಆದಾಗ್ಯೂ ನಮ್ಮ ಬದ್ಧತೆಗಳಿಗೆ ತೊಂದರೆಯಾದಲ್ಲಿ ನಾವು ಪರ್ಯಾಯವನ್ನು ಏರ್ಪಾಟು ಮಾಡಿಕೊಂಡಿರುತ್ತೇವೆ. ಇಂತಹ ಅನುಭವಗಳು ನಮಗಾಗಿದೆ, ಕೆಲವೊಮ್ಮೆ ಇದರಿಂದ ಹಣ ಮತ್ತು ಸಮಯ ಎರಡೂ ಪೋಲಾಗಿದೆ. ಆದರೆ ಇದರಿಂದ ನಮ್ಮ ಉತ್ಸಾಹ ಮತ್ತು ಕಲಿಕೆಗೆ ಯಾವತ್ತೂ ಭಂಗ ಬಂದಿಲ್ಲ.
 
21. ಇತರ ವೃತ್ತಿಗಳೊಂದಿಗೆ ಮತ್ತು ವೃತ್ತಿಪರರೊಂದಿಗಿನ ನಿಮ್ಮ ಸಂಬಂಧದ ತಿಳಿಸಿ?
ನಾವು ಸಮಾಲೋಚನಾ ವೃತ್ತಿಯಲ್ಲಿರುವುದರಿಂದ ಪರಸ್ಪರ ಸಂವಹನದ ಕ್ರಿಯೆಯು ಅನಿವಾರ್ಯ. ಆದರೆ ಕಳೆದು ಒಂದು ವರ್ಷದಿಂದ ನಾನು ಹೆಚ್ಚಾಗಿ ಶಿಕ್ಷಣ ಮತ್ತು ಬರವಣಿಗೆಯಲ್ಲಿ ತೊಡಗಿಕೊಂಡಿರುವುದರಿಂದ ಇತರ ವೃತ್ತಿಪರರೊಂದಿಗೆ ಹೆಚ್ಚು ಬೆರೆಯಲಾಗಲಿಲ್ಲ.
 
22. ಸಾಮಾಜಿಕ ಕಾರ್ಯಕರ್ತರ ಸಂಘಟನೆಯ ಅವಶ್ಯಕತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಸಂಘಟನೆಯು ಪ್ರಭಾವ ಬೀರಲು ಮತ್ತು ಮಾರ್ಗದರ್ಶನ ನೀಡಲು ಶಕ್ತಿಶಾಲಿ ವೇದಿಕೆ ಮತ್ತು ಆಡಳಿತಕ್ಕೆ ಬೆಂಬಲ ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಂಘಟನೆಯು ಕಾರ್ಯನಿರ್ವಹಿಸಲು ಸ್ವಷ್ಟವಾದ ಗುರಿ ಮತ್ತು ಕೆಲವು ಸ್ಪಷ್ಟವಾದ ತತ್ತ್ವಗಳ ಅವಶ್ಯಕತೆಯಿದೆ. ನಾವು ತಂತ್ರಜ್ಞಾನ ಬಳಸಿಕೊಂಡ ಅಭಿವೃದ್ಧಿಯತ್ತ ದಾಪುಗಾಲನ್ನು ಇಡಬೇಕಾಗುತ್ತದೆ. ಹಿರಿಯ ಸದಸ್ಯರು ತೊಡಗಿಗೊಂಡಾಗ ನಮಗೆ ಪಾತ್ರಗಳ ಸ್ಪಷ್ಟತೆಯಿರಬೇಕಾಗುತ್ತದೆ, ದೊಡ್ಡ ಪ್ರಮಾಣದ ಪ್ರಭಾವ ಬೀರುವಿಕೆಯು ಆಗಬೇಕಾಗುತ್ತದೆ. ಸಂಘಟನೆಯು ವ್ಯಕ್ತಿಗಳನ್ನು ಮೀರಿ ಬೆಳೆಯಬೇಕು ಮತ್ತು ವ್ಯಕ್ತಿ ಕೇಂದ್ರಿತಕ್ಕಿಂತ ಹೆಚ್ಚು ಪ್ರಕ್ರಿಯೆ ಕೇಂದ್ರಿತವಾಗಬೇಕಾಗುತ್ತದೆ.
 
23. ಎಲ್ಲಾ ಸಾಮಾಜಿಕ ಕಾರ್ಯಕರ್ತರು ತಮ್ಮ ವೃತ್ತಿಯಲ್ಲಿನ ಅನುಭವಗಳನ್ನು ದಾಖಲಿಸುತ್ತಿಲ್ಲ, ಇದರ ಬಗ್ಗೆ ತಿಳಿಸಿ?
ಸಂವಹನ ಸಾಮರ್ಥ್ಯ, ಬರೆಯುವ ಮತ್ತು ಕ್ಷೇತ್ರ ಅಧ್ಯಯನದ ದಾಖಲಿಕೆಯು ಕಾಲೇಜಿನ ಮೊದಲ ವರ್ಷದಿಂದ ಕಡ್ಡಾಯವಾಗಬೇಕು. ಇದು ತಮ್ಮ ವೃತ್ತಿಯ ಭಾಗವೆಂದು ಅವರು ಮನಗಾಣಬೇಕು, ವೈದ್ಯರು ವೈದ್ಯಕೀಯ ದಾಖಲೆಗಳನ್ನು ನಿರ್ವಹಣೆ ಮಾಡುವ ಹಾಗೆ ಇಲ್ಲೂ ಆಗಬೇಕು. ವಿದ್ಯಾರ್ಥಿಗಳಿಗೆ ಸಾಕ್ಷ್ಯ ಸಂಕಲನ ಮತ್ತು ವಿಷಯಗಳ ದಾಖಲಿಕೆಯಂತಹ ವಿಧಾನಶಾಸ್ತ್ರವನ್ನು ಬೋಧಿಸುವ ಸರಿಯಾದ ಶಿಕ್ಷಣವು ನಮ್ಮಲ್ಲಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ತಿಳುವಳಿಕೆಯನ್ನು ಪಡೆದುಕೊಳ್ಳಬೇಕು. ಇದನ್ನು ನಾವು ನಮ್ಮ ಪ್ರಾಥಮಿಕ ಶಾಲೆಯಿಂದಲೇ ಕಲಿತುಕೊಳ್ಳಬೇಕು.
 
24. ನಿಮ್ಮ ಉದ್ಯೋಗ/ವೃತ್ತಿಯ ಅತಿ ಸವಾಲಿನ ಅಂಶಗಳಾವುವು?

ಸೂಕ್ಷ್ಮವಾಗಿ ಬದಲಾಗುವುದು, ಉತ್ಸಾಹಿ ವಿದ್ಯಾರ್ಥಿಯಾಗಿರುವುದು, ಯಾವಾಗಲೂ, ಎಲ್ಲಾ ಸಮಯದಲ್ಲೂ ಹೊಂದಿಕೊಳ್ಳುವಂತಿರುವುದು, ಪ್ರತಿಕ್ರಿಯಾಶೀಲರಾಗಿರುವುದು ಮತ್ತು ಪ್ರಸಕ್ತವಾಗಿರುವುದು.
 
25. ವೃತ್ತಿ ಮತ್ತು ನಿಮ್ಮ ಜೀವನದ ಇತರೇ ಅಂಶಗಳನ್ನು ಸಮತೋಲನದಿಂದ ನೀವು ಹೇಗೆ ಸಂಬಾಳಿಸಿದ್ದೀರಿ?
ಜನರು ನಮಗೆ ವೈಯಕ್ತಿಕ ಜೀವನ, ವೃತ್ತಿ ಜೀವನ, ಸಾಮಾಜಿಕ ಜೀವನದಂತಹ ವಿವಿಧ ಜೀವನಗಳಿರುತ್ತದೆ ಎಂದು ಭಾವಿಸಿದ್ದಾರೆ! ಇದನ್ನು ನಾನು ಎಂದಿಗೂ ಒಪ್ಪುವುದಿಲ್ಲ. ನನ್ನ ಪ್ರಕಾರ ನಮಗೆ ಒಂದೇ ಜೀವನವಿರುತ್ತದೆ - ಅದರಲ್ಲಿ ನಮಗೆ ವೈಯಕ್ತಿಕ ಸಮಯ, ವೃತ್ತಿ ಸಮಯ, ಸಾಮಾಜಿಕ ಸಮಯ ಮತ್ತು ಸಮುದಾಯ ಸಮಯ ಹೀಗೆ ಹಲವಾರು ಸಮಯವಿರುತ್ತದೆ. ಆದುದರಿಂದ ನಾನು ಒಂದು ವೇಳಾಪಟ್ಟಿಯನ್ನು ನಿಗದಿಪಡಿಸಿಕೊಂಡಿದ್ದೇನೆ. ಅದರಲ್ಲಿ ನಾನು ನನ್ನ ಮನೆಯಲ್ಲಿ, ಕಛೇರಿಯಲ್ಲಿ, ಕುಟುಂಬದಲ್ಲಿ, ಸಮುದಾಯದಲ್ಲಿ, ಸ್ನೇಹಿತರಲ್ಲಿ, ಕಳೆಯುವ ಸಮಯವು ನಿಗದಿಯಾಗಿರುತ್ತದೆ. ಇದು ನನ್ನನ್ನು ಶಾಲಾ ದಿನಗಳಿಂದಲೂ ಶಿಸ್ತುಬದ್ಧವಾಗಿರುವಂತೆ ಮಾಡಿದೆ ಮತ್ತು ಯಾವ ಸಮಯದಲ್ಲಿ ಯಾವುದಕ್ಕೆ ಒತ್ತು ನೀಡಬೇಕೆಂದು ಪೂರ್ವಭಾವಿಯಾಗಿ ನಿರ್ಧರಿಸಿರುತ್ತೇನೆ.
 
26. ಸಮಾಜಕಾರ್ಯದಲ್ಲಿ ವೃತ್ತಿಯನ್ನು ಪ್ರಾರಂಭಿಸಬೇಕೆಂದಿರುವವರಿಗೆ ನಿಮ್ಮ ಸಲಹೆಗಳೇನು?
ದೀರ್ಘಾವಧಿಯ ಗುರಿಯನ್ನು ಹೊಂದಿರಬೇಕು ಮತ್ತು ಸ್ಪಷ್ಟವಾದ ಅರಿವಿರಬೇಕು ಮತ್ತು ನಿಮ್ಮ ಗುರಿಯ ಮಾರ್ಗದ ಮೇಲೆ ಕೇಂದ್ರೀಕೃತವಾಗಿರಬೇಕು. ಇದನ್ನು ನಿಮ್ಮ ಜೀವನದ ಧ್ಯೇಯ ಎಂದು ಭಾವಿಸಿ ಮತ್ತು ನಿಮ್ಮನ್ನು ನಿಮ್ಮ ಗುರಿ ಸಾಧನೆಗೆ ಅರ್ಪಿಸಿಕೊಳ್ಳಿ. ನೀವು ನಿಮ್ಮ ಗುರಿಯೆಡೆಗೆ ದೃಢವಾದ ಹೆಜ್ಜೆಯನ್ನಿಡುತ್ತಿರುವುದನ್ನು ಜಗತ್ತು ಒಮ್ಮೆ ಮನಗಂಡರೆ ಎಲ್ಲಾ ಅವಕಾಶಗಳನ್ನು ಮತ್ತು ಸಾಧ್ಯತೆಗಳನ್ನು ನಿಮಗೆ ನೀಡುತ್ತದೆ. ನಿಮ್ಮ ವೃತ್ತಿಯನ್ನು ಪ್ರೀತಿಸಿ ಮತ್ತು ಪ್ರಾಮಾಣಿಕರಾಗಿರಿ.
 
27. ನಿಮ್ಮ ವೃತ್ತಿಯಿಂದ ನಿಮಗೆ ಸಿಕ್ಕಿದ್ದು ಏನೇನು?
ಪ್ರೀತಿ, ವಾತ್ಸಲ್ಯ, ಉತ್ತಮ ನಾಯಕತ್ವ ಗುಣ, ಸಂತೃಪ್ತಿ, ಉತ್ತಮ ಕಲಿಕೆ ಮತ್ತು ನಿರಂತರ ವಿಕಾಸದ ಪ್ರಕ್ರಿಯೆಗಳು - 49 ವರ್ಷ ವಯಸ್ಸಿನ ದೇಹದಲ್ಲಿ 20 ವರ್ಷ ವಯಸ್ಸಿನ ಶಕ್ತಿ; ಇದಿಷ್ಟು ಸಾಕಲ್ಲವೇ.
 
28. ಈ ವೃತ್ತಿಗೆ ನೀವು ಬರಲು ಆಸಕ್ತಿ ಮೊದಲು ಹೇಗೆ ಬಂದಿತು?
ನಿಜವಾಗಿ ನನಗೆ ಅದು ತಿಳಿಯದು. ನನಗೆ ಮೊದಲು ಕೇವಲ ಸಮಾಜಕಾರ್ಯ ಪದದ ಅರ್ಥ ಒಂದೇ ತಿಳಿದಿದ್ದು, ಅದಕ್ಕಿಂತ ಹೆಚ್ಚು ನನಗೇನು ತಿಳಿದಿರಲಿಲ್ಲ. ಆದರೆ ಸಮಾಜಕಾರ್ಯ ಬೇರೆ ವಿಷಯಕ್ಕಿಂತ ಹೆಚ್ಚು ಮಾನವೀಯ ವಿಷಯವೆಂದು ನಂತರ ನನಗೆ ತಿಳಿಯಿತು. ನನಗೆ ಹೆಚ್ಆರ್ ಆಗಬೇಕೆಂದು ಮತ್ತು ಪಿ.ಎಚ್‍ಡಿ ಮಾಡಬೇಕೆಂಬ ಗುರಿಯಿತ್ತು.
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Picture
    For more details

    Social Work Books


    HR Books


    Niruta Publications

    Social Work Foot Prints

    Leaders Talk

    Ramesha Niratanka


    Picture

    MHR LEARNING ACADEMY

    Get it on Google Play store
    Download App
    Online Courses


    RSS Feed

Niruta Publications Books
File Size: 741 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG​
  • HR BLOG
  • PUBLICATION WITH US
  • NIRUTA PRINTS
  • ONLINE STORE
  • JOIN OUR ONLINE GROUPS
  • VIDEOS​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
For More Details
Picture
More Details

Copyright Niruta Publications 2021,    Website Designing & Developed by: www.mhrspl.com