ಒಮ್ಮೆ ಅಂತರರಾಷ್ಟ್ರೀಯ ಮಟ್ಟದ ಒಂದು ಸ್ವಯಂ ಸೇವಾ ಸಂಸ್ಥೆಯವರು ಹಿರಿಯ ನಾಗರೀಕರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಲು ನಿಧಿ ಸಂಗ್ರಹಣೆಯ ಅಭಿಯಾನವನ್ನು ಕೈಗೊಂಡರು. ಭಾರತದಾದ್ಯಂತ ಕಣ್ಣಿನ ಪೊರೆ ಸಮಸ್ಯೆಯ ಕುರಿತಾಗಿ ಸುಮಾರು ಐದು ಪುಟಗಳ ವರದಿಯನ್ನು ತಯಾರಿಸಿ ಹಲವಾರು ಜಾಹೀರಾತು ನೀಡಲಾಯಿತು. ಈ ವಿಸ್ತೃತ ವರದಿಯಲ್ಲಿ ಕಣ್ಣಿನ ಸಮಸ್ಯೆಯ ಕುರಿತು ಅಂಕಿ ಅಂಶಗಳು ಹಾಗೂ ಈ ಸಮಸ್ಯೆಯನ್ನು ಹೋಗಲಾಡಿಸಲು ಬೇಕಾದ ಅಪಾರವಾದ ಹಣವನ್ನು ದೇಣಿಗೆ ನೀಡಲು ಕೋರಲಾಗಿತ್ತು. ಜಾಹೀರಾತು ನೀಡಿ ಸುಮಾರು ದಿನಗಳು ಕಳೆದರೂ ಅಂದುಕೊಂಡ ಮಟ್ಟಿಗೆ ನಿಧಿ ಸಂಗ್ರಹಣೆ ಆಗಲಿಲ್ಲ. ನಂತರ ನಿಧಿ ಸಂಗ್ರಹಣೆ ಯಶಸ್ವಿಯಾಗಿ ಮಾಡಲು ಏನು ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಯಿತು. ಚರ್ಚೆಯಲ್ಲಿ ನಿಧಿ ಸಂಗ್ರಹಣೆಗಾಗಿ ಒಂದು ವಿನೂತನ ಪ್ರಯೋಗ ಮಾಡಲು ನಿರ್ಧರಿಸಿದರು.
0 Comments
ಕೊರೊನಾ-2 ಸೋಂಕು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಈ ವೈರಾಣು ಸೂಕ್ತ ವೈಜ್ಞಾನಿಕ ಪುರಾವೆಯಂತೆ ವೇಗವಾಗಿ ರೋಗಗ್ರಸ್ಥ ಮಾನವನಿಂದ ಇನ್ನೊಬ್ಬ ಮಾನವನಿಗೆ ಹರಡುವುದನ್ನು ತಡೆಗಟ್ಟಲು ಇರುವ ಏಕೈಕ ಮಾರ್ಗ ಪ್ರತೇಕ ವಾಸ. ಹೀಗಾಗಿ ಎಲ್ಲರೂ ಮನೆಯಲ್ಲಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡುವಿಕೆಯ ಸರಪಣಿಯನ್ನು ತುಂಡರಿಸಬೇಕು ಎಂಬ ಕಾರಣಕ್ಕೆ ಜಗತ್ತಿನಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಹೇರಲಾಗಿದ್ದು, ಇದರ ಅಪಾಯವನ್ನು ತಗ್ಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಆಯಾ ದೇಶದ ಸರ್ಕಾರಗಳು ಮುಂದಾಗಿವೆ. ನಮ್ಮ ದೇಶವು ಬಲವಂತದ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದೆ. ಅದರ ನಡುವೆಯೂ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದನ್ನು ಕಂಡ ಜನರಿಗೆ ರೋಗದ ಭಯ, ಸಾವಿನ ಭೀತಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಇತರೆ ಸಾಂಕ್ರಮಿಕ ರೋಗಗಳಂತೆ ಇದು ಸಂಪೂರ್ಣ ನಿರ್ಮೂಲನೆವಾಗುವಂತದ್ದೇ ಅಥವಾ ಸರ್ವನಾಶ ಮಾಡುವಂತದೇ? ಇದು ಮುಂದುವರೆದರೆ ತುತ್ತಿನ ಚೀಲ ತುಂಬಿಕೊಳ್ಳುವುದು ದುಸ್ಥರ. ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಬರಿಗೈಯಲ್ಲಿ ಕುಳಿತಿದ್ದಾರೆ, ಭವಿಷ್ಯದ ಬಗ್ಗೆ ಇರುವ ಅನಿಶ್ಚಿತತೆ, ಆಕಾರಣ ಭಯ, ಆತಂಕ, ಖಿನ್ನತೆ, ದುಃಸ್ವಪ್ನಗಳು ಬಡವರು, ಶ್ರೀಮಂತರು ಎಂಬ ಭೇದವಿಲ್ಲದೆ ಹಳಬರು, ಹೊಸಬರೆನ್ನದೇ ದೇವರು, ಧರ್ಮವೆನ್ನದೇ ಎಲ್ಲ ಜನತೆಯನ್ನು ಕಾಡತೊಡಗಿವೆ. ಸೋಂಕಿತರ ತಕ್ಷಣದ ಚಿಕಿತ್ಸೆಗಾಗಿ ಸ್ಥಳಾಂತರ, ವಲಸಿಗರು ತಮ್ಮ ಮೂಲ ನೆಲೆಗಳಿಗೆ ಇಲ್ಲವೇ ಆಶ್ರಯವೇ ಇಲ್ಲದ ನಿರಾಶ್ರಿತರಿಗೆ ತಾತ್ಕಾಲಿಕ ತಾಣಗಳಲ್ಲಿನ ಸಮಸ್ಯೆಗಳು. ಈಗಾಗಲೇ ಹಲವಾರು ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಮತ್ತು ಆರೈಕೆದಾರರ ಆಸ್ಪತ್ರೆಯಲ್ಲಿನ ಸಮಸ್ಯೆಗಳು ಇವೆಲ್ಲವುಗಳ ಮಧ್ಯೆ ಸಾಮಾಜಿಕ ಅಂತರ ಮತ್ತು ಶುಚಿತ್ವದ ಕಟ್ಟುಪಾಡು.
ಬಹುಶಃ ದ್ವಿತೀಯ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ವಿಶ್ವದ ಎಲ್ಲಾ ರಾಷ್ಟ್ರಗಳು ತಮ್ಮ ತಮ್ಮ ದೇಶಗಳ ನಾಗರಿಕರನ್ನು ಸಂರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿವೆ. ಎಲ್ಲೆಡೆ ಎಲ್ಲರ ಮನದಲ್ಲಿ ಭಯದ ಛಾಯೆ ಮನೆಮಾಡಿದೆ. ಮನೆಯಿಂದ ಹೊರ ಬರುವುದಕ್ಕೂ ಅಂಜುವಂತಹ ಭಯಾನಕ ಸನ್ನಿವೇಶದಲ್ಲಿ ನಾವಿದ್ದೇವೆ. ವೈದ್ಯರಾಧಿಯಾಗಿ, ಆರಕ್ಷಕ, ಮಿಲಿಟರಿ ಹಾಗೆಯೇ ಕೊಂಚ ಮಟ್ಟಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಬ್ಭಂಧಿಗಳೂ ಸಹ ಕೊರೋನವೆಂಬ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಸಲುವಾಗಿ ಪ್ರವರ್ಧಮಾನಕ್ಕೆ ಬಂದ ಸಮಾಜಕಾರ್ಯಕರ್ತರು ಮುನ್ನೆಲೆಗೆ ಬರಲೇ ಇಲ್ಲ. ಇದಾಗಲೇ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜಕಾರ್ಯಕರ್ತರನ್ನು ಹೊರತುಪಡಿಸಿದರೆ ಇತರೆ ಯಾರೂ ಸಹ ಸದರಿ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಉಪಶಮನ ಮಾಡುವ ನಿಟ್ಟಿನಲ್ಲಿ ಯಾವುದೇ ರೀತಿಯ ಗಮನಾರ್ಹ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದನ್ನು ನಾವು ಒಪ್ಪಲೇಬೇಕಾಗಿದೆ.
Friends we are in a crisis. Social Work education taught us to respond to crisis situations at individual, group and community level. We are also taught and trained to take action in collaboration with the local communities, Government and the other stakeholders and players. Although we specialize in various forms to work with rural, tribal and urban communities, women and child, correctional administration, medical and psychiatric social work, industrial relations and personnel management, etc., the common thread that binds us all is the first lesson that we learnt ‘helping people help themselves’. To realise this all of us are in the field with NGOs, Government, private sector and also in national & international agencies while applying our professional skills at various levels – field intervention, training and capacity building, advocacy, lobbying, research, publication, management, administration, policy formulation, etc.
ಎಲ್ಲಾ ವಿಷಯಗಳ ವಿದ್ಯಮಾನಗಳಿಗಾಗಿ ಈ ಕೆಳಕಂಡ ಗ್ರೂಪ್ ಗಳಿಗೆ ಸದಸ್ಯರಾಗಿ.
ವಾಟ್ಸ್ ಅಪ್ ಗ್ರೂಪ್ : https://chat.whatsapp.com/IzxHo6xxKIRD29gUzLx7la ಗೂಗಲ್ ಗ್ರೂಪ್ : https://groups.google.com/forum/#!forum/cspsw ಮೊ: 9980066890, ಇ-ಮೇಲ್ : karnatakakakc@gmail.com
All the ISPSW Members,
Indian Society of Professional Social Work (ISPSW) Respected Sir/ Madam, Greetings from Indian Society of Professional Social Work (ISPSW). We are glad to inform your kind self that our ISPSW Annual General Body Meeting (AGBM) has been scheduled to be held on 29-02-2020 (Saturday) 5-00 PM at the R.B.Davis Auditorium, Central Institute of Psychiatry, Kanke, Ranchi 834006 on the second day of the XXXVIII Annual National Conference of the ISPSW, scheduled to be held from 28th, 29th February and 1st March 2020. World Social Work Day is on the 17th March 2020. It is the key day in the year that social workers worldwide stand together to advance our common message globally.
This year, the 2020 World Social Day highlights ‘Promoting the Importance of Human Relationships’. This is the fourth and final theme of the 2010 to 2020 Global Agenda for Social Work and Social Development. Our senior in IR, Sri M G Vaidya passed away at Hubli on 4th August 2018, when he was around 81-82 years. He was with Mysore Kirloskar Harihar and then with Harihar Polyfibres and after retirement, he was practicing Industrial Law at Hubli and advising Organizations in around Hubli.When I was working for Davangere Cotton Mills during 1976 to 1980 where I started my career, he was guiding us in our profession. Very friendly in his approach, rich in his knowledge in IR, has groomed many young and budding IR Professionals in North Karnataka. Let us pray that his soul rest in eternal peace.
SN Gopinath, Past Chairman NIPM Karnataka Chapter ಸಮಾಜಕಾರ್ಯ ಕ್ಷೇತ್ರದ ಎಲ್ಲರಿಗೂ ಸಮಾರಂಭಕ್ಕೆ ಆತ್ಮೀಯ ಸ್ವಾಗತ. ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಸಮಾರಂಭವನ್ನು ಯಶಸ್ವಿಯಾಗಿಸಬೇಕಾಗಿ ಈ ಮೂಲಕ ಕೋರಲಾಗಿದೆ.
ಸಮಾಜಕಾರ್ಯದಲ್ಲಿ ಶಿಕ್ಷಣ ಮಾಡುತ್ತಿದ್ದು ಇಲ್ಲವೇ ಪೂರ್ತಿಗೊಳಿಸಿದ್ದು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ವಿಶೇಷ ವಿದ್ಯಾರ್ಹತೆ ಹೊಂದಿರುವ ವಿದ್ಯಾರ್ಥಿಗಳಿಗೆ ಹಾಗೂ ಪ್ರಾರಂಭದ ಹಂತದಲ್ಲಿರುವ ವೃತ್ತಿಪರರಿಗೆ ಈ ವಿಷಯದಲ್ಲಿ ಅತಿ ಕಡಿಮೆ ಶುಲ್ಕದಲ್ಲಿ ಪರಿಣಿತರಿಂದ ತರಬೇತಿ ಕೊಟ್ಟು ಅವರ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಮಾರ್ಗದರ್ಶನ ನೀಡಿ ಉದ್ಯೋಗಾವಕಾಶ ಪಡೆಯಲು ಸೂಕ್ತ ವೇದಿಕೆ ನಿರ್ಮಿಸಿಕೊಡಲಾಗುವುದು. ಮೊದಲ ಹಂತದಲ್ಲಿ 50 ಪ್ರಶಿಕ್ಷಾರ್ಥಿಗಳಿಗೆ ಮಾತ್ರ ಅವಕಾಶವಿದ್ದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಸ್ಥಿತಿವಂತರಲ್ಲದ ವಿದ್ಯಾರ್ಥಿಗಳಿಗೆ ಶುಲ್ಕರಹಿತವಾಗಿ ಪ್ರವೇಶ ನೀಡುವ ಆಲೋಚನೆಯೂ ನಮ್ಮ ತಂಡದಲ್ಲಿದೆ. ಆದ್ದರಿಂದ ಆಸಕ್ತ ವಿದ್ಯಾರ್ಥಿಗಳು ಮತ್ತು ಪ್ರಾರಂಭದ ಹಂತದಲ್ಲಿರುವ ವೃತ್ತಿಪರರು ಹೆಚ್ಚಿನ ಮಾಹಿತಿಗಳಿಗಾಗಿ ನಿರಾತಂಕ ಸಂಸ್ಥೆಯನ್ನು ಸಂಪರ್ಕಿಸುವುದು.
ನಿರಾತಂಕ ತರಬೇತಿ ಕೇಂದ್ರ #326, 2ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಎದುರು, ಡಾ. ಅಂಬೇಡ್ಕರ್ ಕಾಲೇಜು ಹತ್ತಿರ, ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು-560056. ದೂ: 080-23213710, 9980066890 www.socialworkfootprints.org www.niratanka.org ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆ 2010 ರಲ್ಲಿ ಆರಂಭಗೊಂಡು ಸತತವಾಗಿ 8 ವರ್ಷಗಳಿಂದ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಈಗ ಪ್ರಸ್ತುತವಾಗಿ 3 ತಿಂಗಳಿಗೊಮ್ಮೆ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಲೇಖನಗಳನ್ನು ಆಹ್ವಾನಿಸಿ ಪ್ರಕಟಿಸಲಾಗುತ್ತಿದೆ. ಹಲವಾರು ಸಮಾಜಕಾರ್ಯ ಕ್ಷೇತ್ರದ ಸ್ನೇಹಿತರು ಆನ್ ಲೈನ್ ಪತ್ರಿಕೆಯನ್ನು ಹೊರತರಲು ಸಲಹೆ ನೀಡಿದ್ದಾರೆ. ಈ ಆನ್ ಲೈನ್ ಪತ್ರಿಕೆಯನ್ನು ಉಚಿತವಾಗಿ ಹಂಚಲು ಚಿಂತಿಸಲಾಗುತ್ತಿದೆ. ಮುದ್ರಣ ಮಾಧ್ಯಮದ ಮೂಲಕ ಎಲ್ಲ ಸಮಾಜಕಾರ್ಯ ವೃತ್ತಿನಿರತರನ್ನು ತಲುಪುವುದು ಕಷ್ಟವಾದ್ದರಿಂದ ಉಚಿತವಾಗಿ ಆನ್ ಲೈನ್ ಪತ್ರಿಕೆ ಶುರು ಮಾಡುವ ಆಲೋಚನೆ ನಮ್ಮದಾಗಿದೆ ಹಾಗೂ ವಸ್ತು ವಿಷಯಗಳಲ್ಲಿ ಸಮಾಜಕಾರ್ಯ ಕ್ಷೇತ್ರದ ದಿನನಿತ್ಯದ ವಿದ್ಯಮಾನಗಳನ್ನು ಗುರುತಿಸಿ 15 ದಿನಕ್ಕೊಮ್ಮೆ ಪತ್ರಿಕೆ ಹೊರತರಲಾಗುವುದು. ಈ ಪತ್ರಿಕೆಯಲ್ಲಿ ಈ ಕೆಳಕಂಡ ವಿಷಯಗಳಿರುತ್ತವೆ.
- ಪುಸ್ತಕಗಳ ಪರಿಚಯ - ಸಮಾಜಕಾರ್ಯ ಕ್ಷೇತ್ರದ ಸುದ್ದಿ - ಕ್ಷೇತ್ರ ಕಾರ್ಯ ಮತ್ತು ಬ್ಲಾಕ್ ಪ್ಲೇಸ್ಮೆಂಟ್ ಅವಕಾಶಗಳು - ಉದ್ಯೋಗ ಸುದ್ದಿ - ಟ್ರೈನಿಂಗ್, ಕಾನ್ಫರೆನ್ಸ್, ಸೆಮಿನಾರ್ - ಕಿರುಚಿತ್ರಗಳ ಮಾಹಿತಿ - ಉನ್ನತ ಶಿಕ್ಷಣ - ಸಂಶೋಧನೆಯಲ್ಲಿ ಅವಕಾಶಗಳು - ವಿದ್ಯಾರ್ಥಿ ವೇತನ ಮತ್ತು ಫೆಲೋಶಿಪ್ - ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕಥೆ, ಕವನ, ನಗೆಹನಿ - ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಯಶಸ್ವಿ ಪ್ರಯೋಗಗಳು - ಗ್ರಾಮೀಣ ಅಭಿವೃದ್ಧಿ - ಸರ್ಕಾರದ ವಿವಿಧ ಯೋಜನೆಗಳು - ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪ್ರಶ್ನೋತ್ತರ ಮಾಲಿಕೆ ಉಚಿತವಾಗಿ ಪತ್ರಿಕೆಯು 50000 ಕ್ಕೂ ಹೆಚ್ಚು ಜನರಿಗೆ ತಲುಪಬೇಕೆಂಬ ಆಶಯದೊಂದಿಗೆ ಪ್ರಥಮ ಸಂಚಿಕೆಗೆ ಸುದ್ದಿ ಕಳುಹಿಸಿಕೊಡುವವರು 25-09-2018ರ ಒಳಗೆ ಕಳುಹಿಸಿಕೊಡಬೇಕು. ನಿಮ್ಮ ಸಲಹೆ, ಸೂಚನೆ, ಸುದ್ದಿಗಳನ್ನು ವಾಟ್ಸ್ಅಪ್ ನಂ. 8310241136 ಹಾಗೂ editorsocialwork@gmail.comಗೆ ಕಳುಹಿಸಿಕೊಡಬಹುದು. www.socialworkfootprints.org www.niratanka.org ಶ್ರೀ ಯೋಗೇಶ್ ಮಾಸ್ಟರ್ ರವರು ಕ್ರೌಡ್ ಫಂಡಿಂಗ್ ಮೂಲಕ ‘ಅಮ್ಮು’ ಎಂಬ ಚಲನಚಿತ್ರ ನಿರ್ಮಿಸುತ್ತಿದ್ದಾರೆ. ಈ ಚಲನಚಿತ್ರವು ಮಕ್ಕಳಿಗೆ ಬರುವ ಕ್ಯಾನ್ಸರ್ ಕುರಿತ ಚಲನಚಿತ್ರವಾಗಿದೆ. ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ಚಲನಚಿತ್ರ ನಿರ್ಮಿಸಲಾಗುತ್ತಿದೆ. ಈ ರೀತಿಯ ಸದಭಿರುಚಿಯ ಚಲನಚಿತ್ರಗಳು ಸಮಾಜದ ಒಳಿತಿಗೆ ಪೂರಕವಾಗಿವೆ. ನಿರಾತಂಕ ತಂಡದ ಹಲವಾರು ಸ್ನೇಹಿತರು ಒಟ್ಟುಗೂಡಿ ಈ ಒಂದು ಚಲನಚಿತ್ರಕ್ಕೆ ಹಣಕಾಸಿನ ಹೂಡಿಕೆ ಮಾಡಲು ಮುಂದಾಗುತ್ತಿದ್ದೇವೆ. ಈ ಚಲನಚಿತ್ರದ ಸುಮಾರು 30 ಪ್ರತಿಶತ ಪೂರ್ಣವಾಗಿದೆ. ದಯಮಾಡಿ ಈ ರೀತಿಯ ಅರ್ಥಪೂರ್ಣ ಕಾರ್ಯಗಳಿಗೆ ನೀವೂ ಕೈಜೋಡಿಸಿ ಈ ಚಲನಚಿತ್ರ ಪೂರ್ಣಗೊಳಿಸಲು ಸಹಕರಿಸಬೇಕಾಗಿ ಕೋರಲಾಗಿದೆ. ಆಸಕ್ತರು ಸಂಪರ್ಕಿಸಿ : 080-23213710 ಯೋಗೇಶ್ ಮಾಸ್ಟರ್ ರವರು ಈಗಾಗಲೇ 'ಮರಳಿ ಮನೆಗೆ' ಎಂಬ ಚಲನಚಿತ್ರವನ್ನು ನಿರ್ಮಿಸಿ ಸುಮಾರು 80 ಲಕ್ಷ ರೂ.ಗಳ ಹೂಡಿಕೆ ಮಾಡಿ ಯಶಸ್ವಿಯಾಗಿ ಹೂಡಿದ ಹಣ ಹಿಂತಿರುಗುವಂತೆ ನೋಡಿಕೊಂಡಿದ್ದಾರೆ. 'ಮರಳಿ ಮನೆಗೆ' ಚಿತ್ರದ Trailer ಅನ್ನು ಇಲ್ಲಿ ಕಾಣಬಹುದು. ರಮೇಶ ಎಂ.ಎಚ್. ನಿರಾತಂಕ Dear All,
We are proud to announce that the eminent HR professional, Mr. P.R. Basavaraju has been unanimously elected as Chairman of NIPM – Karnataka Chapter with effect from June 23, 2018. Mr. Basavaraju is an extremely ambitious, and having exceptional charisma in creating unique milestones. We are confident that with his leadership, we are going to set the Chapter’s sights high with excellence. On behalf of Nirathanka, and Samajakaryada Hejjegalu, we express our profound and heartfelt congratulations to him. Best wishes for his continued success. Sincerely, Ramesha M.H Founder Secretary, Nirathanka Editor, Samajakaryada Hejjegalu Namasthe. This is Vasudeva Sharma N.V. from CRT-Child Rights Trust.
Appeal to support a cause to uphold child rights! (Kindly read this message fully.) We are in a global fund raising competition and the goal is to raise a minimum of $ 5000 or ₹ 3,50,000/- from a minimum of 40 persons within the next 15 days! We are happy to share with you that on GlobalGiving platform, as of now, CRT has raised $ 635 and on ImpactGuru platform Rs. 53,500/- in the last 3 days! Thanks to well wishing friends and relatives. We have to get support from 40+ individual donors on GlobalGiving to get some bonus points too and get a permanent membership on GlobalGiving platform and get support from people to continue the work in the community. This special fund raising drive is for TRAINING FIELD ACTIVISTS on Child Rights in 6 districts of Karnataka in the next 6 months. We are looking forward to your support too. Foreign donors donating on GlobalGiving get tax exemption as per US law. Indian donors donating in ₹ on ImpactGuru get 80G facilities. We request you to not only donate to us but also to share the appeal page on your social network platforms and also discuss about this in your groups and motivate your colleagues, friends, in-laws and children to support the cause. Indian donors can donate using their debit and/or credit cards by following the link: http://impactgu.ru/2vmTzs Donors outside India can follow the link: https://www.globalgiving.org/projects/help-protect-5000-children-through-180-activists/ Indians also can donate on the GlobalGiving platform by using CREDIT Cards only. Kindly choose Child Rights Trust while donating. Kindly find a request letter in the following link. https://drive.google.com/open?id=1RktgsAaXlzJcmCgHcHJ_oQDa-S3Jn4Qq Any amount ₹200 or more on ImpactGuru and $10 and more on GlobalGuru is accepted. We need to reach the target within a short period and request you to act today! ಹನಿಹನಿಗೂಡಿದರೆ ಹಳ್ಳ ಹರಿಯುವುದು, ತೆನೆತೆನೆಗೂಡಿದರೆ ಬಳ್ಳ. ಒಳಿತಾಗುವುದು. With regards, Vasudeva Sharma N.V. Child Rights Trust Bengaluru ವೃತ್ತಿನಿರತ ಸಮಾಜಕಾರ್ಯಕರ್ತರು ರಾಜಕಾರಣದ ಬಗ್ಗೆ, ಪ್ರಸ್ತುತ ಸಮಾಜದಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡದೆ....4/6/2018 ಸಮಾಜದ ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುವ ವೃತ್ತಿನಿರತ ಸಮಾಜಕಾರ್ಯಕರ್ತರು ರಾಜಕಾರಣದ ಬಗ್ಗೆ ಹಾಗೂ ಪ್ರಸ್ತುತ ಸಮಾಜದಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡದೆ ಮೌನವಹಿಸಿದ್ದೇವೆ. ವೃತ್ತಿನಿರತ ಸಮಾಜಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಮನಸ್ಸು ಮಾಡಿದ್ದರೆ ಕನಿಷ್ಠ ಒಬ್ಬ ಶಾಸಕನನ್ನಾದರೂ 2018ರ ಚುನಾವಣೆಯಲ್ಲಿ ಆರಿಸಿ ವಿಧಾನಸಭೆಗೆ ಕಳುಹಿಸಬಹುದಾಗಿತ್ತು. ಕರ್ನಾಟಕದ ವೃತ್ತಿನಿರತ ಸಮಾಜಕಾರ್ಯಕರ್ತರೆಲ್ಲರೂ ಒಂದು ವೇದಿಕೆಗೆ ಕರೆತರುವ ಪ್ರಯತ್ನ ಇನ್ನಾದರೂ ಆಗಬೇಕಾಗಿದೆ.
ಈಗಲೂ ಸಮಾಜಕಾರ್ಯಕರ್ತರು ಮತದಾನದ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಯೋಗ್ಯ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿ ಬರುವಂತೆ ನೋಡಿಕೊಂಡರೆ ಸಮಾಜದ ಸಾವಿರಾರು ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಕ್ರೌಡ್ ಫಂಡಿಂಗ್ ಮಾಡುವ ಮೂಲಕ ಈ 2018 ರ ಚುನಾವಣೆಯಲ್ಲಿ ಒಬ್ಬ ವೃತ್ತಿನಿರತ ಸಮಾಜಕಾರ್ಯಕರ್ತನನ್ನು ಚುನಾವಣೆಗೆ ನಿಲ್ಲಿಸಿದರೆ ಒಳಿತು.......ಇದು ನನ್ನ ಅನಿಸಿಕೆ. ನಿಮ್ಮ ಅಭಿಪ್ರಾಯ, ಅನಿಸಿಕೆಗಳಿಗೆ ಸ್ವಾಗತ. ರಮೇಶ ಎಂ.ಎಚ್. ನಿರಾತಂಕ www.niratanka.org ‘ಈ ರೂಲ್ಸು, ಲಾ, ಭಯ ಇವೆಲ್ಲ ಸಂವಿಧಾನ ಬದಲಾಗುವ ತನಕ ಮಾತ್ರ. ಈ ಮನುಷ್ಯತ್ವ ಎನ್ನುವುದು...?’
‘ಹರಿವು’ ಚಿತ್ರದ ಪಾತ್ರವೊಂದು ಹೇಳುವ ಈ ಸಾಲುಗಳು ಇಡೀ ಕಥನ ನಮ್ಮ ಮನಸ್ಸಿನಲ್ಲಿ ಎಬ್ಬಿಸುವ ಕಂಪನಗಳಿಗೆ ಕೊಟ್ಟ ಅಕ್ಷರರೂಪವೂ ಹೌದು. ಇದನ್ನು ಪ್ರಶ್ನೆಯನ್ನಾಗಿಯೂ, ಉತ್ತರವನ್ನಾಗಿಯೂ ಓದಿಕೊಳ್ಳುವುದು ಸಾಧ್ಯವಿದೆ. ಈ ಸಾಧ್ಯತೆಯಲ್ಲಿಯೇ ‘ಹರಿವು’ ಚಿತ್ರದ ಆತ್ಮವಿದೆ. 2014ನೇ ಸಾಲಿನ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡ ಮಂನ್ಸೋರೆ (ಮಂಜುನಾಥ ಸೋಮಕೇಶವ ರೆಡ್ಡಿ) ನಿರ್ದೇಶನದ ಈ ಸಿನಿಮಾ ಸಾವಿನ ಸಮ್ಮುಖದಲ್ಲಿ ಕೂತು ಮಾನವೀಯತೆಯ ವ್ಯಾಖ್ಯಾನಗಳನ್ನು ಶೋಧಿಸುತ್ತದೆ. ಹೊಸಪೇಟೆಯ ಸಮೀಪದ ವೆಂಕಾಪುರ ಎಂಬ ಹಳ್ಳಿಯಿಂದ ಕಾಯಿಲೆಯಿಂದ ಬಳಲುತ್ತಿರುವ ಮಗನನ್ನು ಗುಣಮುಖ ಮಾಡುವ ಆಸೆಯಿಂದ ಬಡ ರೈತನೊಬ್ಬ ಬೆಂಗಳೂರಿಗೆ ಬಂದಿದ್ದಾನೆ. ಆದರೆ ಮಗನನ್ನು ಉಳಿಸಿಕೊಳ್ಳುವುದು ಅತ್ತಲಿರಲಿ, ಅವನ ಹೆಣವನ್ನು ಗೌರವಯುತವಾಗಿ ಮರಳಿ ಊರಿಗೆ ಕರೆದೊಯ್ಯುವುದೂ ದುಸ್ತರವಾಗುತ್ತದೆ. ಮಗನ ಹೆಣವನ್ನು ಒಂದು ಟ್ರಂಕ್ನಲ್ಲಿ ಹಾಕಿಕೊಂಡು ತಲೆಯ ಮೇಲೆ ಹೊತ್ತು ಹೊರಡುತ್ತಾನೆ. ಈ ಎಳೆಗೆ ಪರ್ಯಾಯವಾಗಿ ಆಸ್ಪತ್ರೆಯಲ್ಲಿರುವ ತಂದೆಯನ್ನು ತೊರೆದು ಕರ್ತವ್ಯನಿಮಿತ್ತ ವಿಜಯಪುರಕ್ಕೆ ಹೋಗುತ್ತಿರುವ ಪತ್ರಕರ್ತನ ಬದುಕಿದೆ. ಅವರಿಬ್ಬರೂ ಒಟ್ಟೊಟ್ಟಿಗೇ ಪ್ರಯಾಣಿಸುತ್ತಾರೆ. ಈ ಪ್ರಯಾಣದಲ್ಲಿ ಅವರವರ ಬದುಕಿನ ಕಳೆದುಹೋದ ನೆನಪಿನ ಸುರುಳಿಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಮನುಷ್ಯತ್ವವನ್ನು ಕಳೆದುಕೊಂಡ ಭ್ರಷ್ಟ ವ್ಯವಸ್ಥೆ ಬಡಪಾಯಿಗಳ ರಕ್ತವನ್ನು ಹೇಗೆಲ್ಲ ಹೀರಿಕೊಂಡು ಕೊಬ್ಬುತ್ತದೆ ಎನ್ನುವುದನ್ನು ತುಂಬ ಸಂಯಮದಿಂದ ನಿರೂಪಿಸುತ್ತಾ ಹೋಗುತ್ತಾರೆ ನಿರ್ದೇಶಕರು. ಇದು ಡಾ. ಆಶಾ ಬೆನಕಪ್ಪ ಅವರು ‘ಪ್ರಜಾವಾಣಿ’ಯ ಅಂಕಣದಲ್ಲಿ ಬರೆದ ನೈಜ ಘಟನೆಯೊಂದನ್ನು ಆಧರಿಸಿ ರೂಪಿಸಿದ ಸಿನಿಮಾ. ಈ ಚಿತ್ರದಲ್ಲಿ ಎರಡು ಜೀವಗಳು ಸಾವಿನ ದವಡೆಯಲ್ಲಿ ಸಿಲುಕಿರುತ್ತವೆ. ಒಂದು ಪತ್ರಕರ್ತನ ತಂದೆ. ಇನ್ನೊಂದು ಬಡರೈತನ ಮಗ. ಆ ಎರಡೂ ಸಾವುಗಳು ಮಾಡುವ ಪರಿಣಾಮ ಬೇರೆಯದೇ... ಹಾಗಾದರೆ ಸಾವಿಗೆ ಅರ್ಥಕೊಡುವುದು ಕಾಲವೇ? ಮನುಷ್ಯ ಅದಕ್ಕೆ ಕೊಡಬೇಕಾದ ಘನತೆಯನ್ನೂ ಕೊಡಲಾರದಷ್ಟು ಕ್ರೂರಿಯೇ? ಇಂಥ ಹಲವು ಪ್ರಶ್ನೆಗಳನ್ನು ಹುಟ್ಟಿಸಿ ಹೃದಯವನ್ನು ಆರ್ದ್ರಗೊಳಿಸುತ್ತದೆ. ಹೆತ್ತಮಗನ ಹೆಣವನ್ನು ಟ್ರಂಕಿನಲ್ಲಿ ತುಂಬಿ ಕದ್ದುಮುಚ್ಚಿ ಸಾಗಿಸಬೇಕಾದ ಅಸಹಾಯಕ ತಂದೆಯ ಪಾತ್ರದಲ್ಲಿ ಸಂಚಾರಿ ವಿಜಯ್ ನಟನೆ ಮನಕಲುಕುತ್ತದೆ. ವೃತ್ತಿ ಮತ್ತು ಚರಣ್ರಾಜ್ ಸಂಯೋಜನೆಯ ಒಂದು ಹಾಡು ಬಹುಕಾಲ ಕಾಡುವ ಹಾಗಿದೆ. ಇತ್ತೀಚೆಗಷ್ಟೇ ಈ ಚಿತ್ರವನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಲಾಗಿದೆ. https://youtu.be/f4D3aOsAgvo ಕೊಂಡಿ ಬಳಸಿ ಈ ಸಿನಿಮಾ ನೋಡಬಹುದು. ಕೃಪೆ ಪ್ರಜಾವಾಣಿ 1, ಫೆಬ್ರವರಿ, 2018 ಸಮಾಜಕಾರ್ಯ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖವಾಗಿ ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯ ಸೃಷ್ಟಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿರುವ ನಿರುತ ಪ್ರಕಾಶನ ಡಾ. ಸಿ.ಆರ್. ಗೋಪಾಲ್ ವಿರಚಿತ ಸಮುದಾಯ ಸಂಘಟನೆ ಪುಸ್ತಕ ಆವಿಷ್ಕರಣೆ ಕಾರ್ಯಕ್ರಮವನ್ನು ನಿರಾತಂಕ ಸಂಸ್ಥೆ ಮತ್ತು ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. 2018ರ ಮೇ ಮಾಹೆಯಲ್ಲಿ ಆಯೋಜಿಸಲು ಉದ್ದೇಶಿಸಿರುವ ಸದರಿ ಕಾರ್ಯಕ್ರಮದಲ್ಲಿ ಅಭಿವೃದ್ಧಿ / ಸಮುದಾಯ ಸಂಘಟನೆ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಭೂತಪೂರ್ವ ಸಾಧನೆಗೈದ ಸಮಾಜಕಾರ್ಯಕರ್ತರನ್ನು ಗುರುತಿಸಿ, ಸನ್ಮಾನಿಸುವ ಆಲೋಚನೆ ಇದೆ. ಸಾಮಾಜಿಕ ಅಭಿವೃದ್ಧಿ ಅಥವಾ ಸಮುದಾಯ ಸಂಘಟನೆಯ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ಆಹ್ವಾನಿಸಿ, ಅತ್ಯುತ್ತಮ ಬರಹಗಳನ್ನು ಗುರುತಿಸಿ, ಪುರಸ್ಕರಿಸುವುದರ ಜೊತೆಗೆ ಪುಸ್ತಕ (ಐ.ಎಸ್.ಬಿ.ಎನ್. ಸಂಖ್ಯೆ ಹೊಂದಿದ) ರೂಪದಲ್ಲಿ ಎಲ್ಲ ಲೇಖನಗಳನ್ನು ಪ್ರಕಟಿಸಲು ಯೋಜಿಸಲಾಗಿದೆ. ಇದು ನಿರುತ ಪ್ರಕಾಶನ ಮತ್ತು ನಿರಾತಂಕ ಸಂಸ್ಥೆಯ ಜೊತೆಗಿರುವ ಸಮಾನ ಮನಸ್ಕ ವೃತ್ತಿಪರ ಸಮಾಜಕಾರ್ಯಕರ್ತರ ಕಲ್ಪನೆಯಾಗಿದ್ದು, ಸದರಿ ಕಾರ್ಯಕ್ರಮವನ್ನು ಕರ್ನಾಟಕದ ಯಾವುದಾದರೊಂದು ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಆಸಕ್ತ ಸಮಾಜಕಾರ್ಯಕರ್ತರು ಮತ್ತು ಸಂಸ್ಥೆಗಳಿಗಳ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಆಸಕ್ತ ವ್ಯಕ್ತಿ ಹಾಗೂ ಸಂಸ್ಥೆಗಳು ಈ ಕೂಡಲೇ ಸಂಪರ್ಕಿಸಲು ಕೋರಿದೆ. ಆದರದ ಸ್ವಾಗತ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಲಹೆ ಹಾಗೂ ಸೂಚನೆಗಳಿಗೆ ಆದರದ ಸ್ವಾಗತ. ಆರೋಗ್ಯಕರ, ರಚನಾತ್ಮಕ ಹಾಗೂ ಪಾರದರ್ಶಕ ಚರ್ಚೆಗಳನ್ನು ನಾವು ಗೌರವಿಸುತ್ತೇವೆ. ಸದರಿ ಕಾರ್ಯಕ್ರಮ ಆಯೋಜನೆಯಲ್ಲಿ ಪಾಲ್ಗೊಳ್ಳುವವರು ತಮ್ಮ ಸಂಪರ್ಕ ಮಾಹಿತಿಯನ್ನು ರವಾನಿಸಿ, ಅನಿವಾರ್ಯ ಸಂದರ್ಭದಲ್ಲಿ ಸಂಬಂಧಿಸಿದವರ ಸೇವೆಯನ್ನು ಪಡೆಯಲಾಗುವುದು. ವಂದನೆಗಳೊಂದಿಗೆ ರಮೇಶ ಎಂ.ಎಚ್. ನಿರಾತಂಕ ಡಾ. ಸಿ.ಆರ್. ಗೋಪಾಲ್ ಡಾ. ಸಿ.ಆರ್. ಗೋಪಾಲ್ 1953 ರಲ್ಲಿ ಜನನ, ಎಂ.ಎ., ರಾಜ್ಯಶಾಸ್ತ್ರ ಕರ್ನಾಟಕ ವಿಶ್ವವಿದ್ಯಾಲಯ 1974: ಎಂ.ಎಸ್.ಡಬ್ಲ್ಯೂ (ರೋಶನಿ ನಿಲಯ, ಸಮಾಜಕಾರ್ಯ ಶಾಲೆ, ಮಂಗಳೂರು) ಮೈಸೂರು ವಿಶ್ವವಿದ್ಯಾಲಯ, 1977: ಗ್ರಾಮಾಂತರ ಸಾಮಾಜಿಕ ನಾಯಕತ್ವ ಡಿಪ್ಲೋಮ - ಸಿಯರ್ಸೋಲಿನ್, ಪಿಲಿಪೈನ್ಸ್, 1978: ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಡಿಪ್ಲೋಮ-ಅಣ್ಣಾಮಲೈ ವಿಶ್ವವಿದ್ಯಾಲಯ, 2001, ಡಾಕ್ಟರೇಟ್ ಪದವಿ-ಬೆಂಗಳೂರು ವಿಶ್ವವಿದ್ಯಾಲಯ 2002, ಮಾರ್ಗದರ್ಶನ ಪ್ರೊ. ಎಚ್.ಎಂ. ಮರುಳಸಿದ್ಧಯ್ಯ. ಅನುಭವ: ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಒಂದು ವರ್ಷ ಬೋಧನೆ ಮತ್ತು ಕ್ಷೇತ್ರಕಾರ್ಯ ಮಾರ್ಗದರ್ಶನ. ದಿ ಸೊಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ಸ್ ಲಿಮಿಟೆಡ್ನಲ್ಲಿ ಸಿಬ್ಬಂದಿ ಆಡಳಿತ, ಕಾರ್ಮಿಕ ಕಲ್ಯಾಣ, ಸಾರ್ವಜನಿಕ ಸಂಪರ್ಕ, ಸಾಮಾನ್ಯ ಆಡಳಿತ, ಸಮುದಾಯ ಅಭಿವೃದ್ಧಿ, ಸಹಕಾರ, ಕುಶಲ ಕಲೆ, ಶಿಕ್ಷಣ, ವಯಸ್ಕರ ಶಿಕ್ಷಣ, ಸಂಪೂರ್ಣ ಸಾಕ್ಷರತಾ ಆಂದೋಲನ (ಜಿಲ್ಲಾ ಕಾರ್ಯದರ್ಶಿಯಾಗಿ) ಮತ್ತು ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ 33 ವರ್ಷಗಳ ಅನುಭವ, ಒಟ್ಟು 34 ವರ್ಷಗಳು. ಡಿಸೆಂಬರ್ 2012ರಲ್ಲಿ ನಿವೃತ್ತಿ. ಡಾ. ಸಿ.ಆರ್. ಗೋಪಾಲ್ ರವರ ಇತರೆ ಕೃತಿಗಳು
https://www.socialworkfootprints.org/our-books/11 https://www.socialworkfootprints.org/3250327132223240322332513265/-2 |
Categories
All
Social Work Learning AcademyInviting ArticlesMHR LEARNING ACADEMYGet it on Google Play store
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|