ವೃತ್ತಿನಿರತ ಸಮಾಜಕಾರ್ಯಕರ್ತರು ರಾಜಕಾರಣದ ಬಗ್ಗೆ, ಪ್ರಸ್ತುತ ಸಮಾಜದಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡದೆ....4/6/2018 ಸಮಾಜದ ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುವ ವೃತ್ತಿನಿರತ ಸಮಾಜಕಾರ್ಯಕರ್ತರು ರಾಜಕಾರಣದ ಬಗ್ಗೆ ಹಾಗೂ ಪ್ರಸ್ತುತ ಸಮಾಜದಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡದೆ ಮೌನವಹಿಸಿದ್ದೇವೆ. ವೃತ್ತಿನಿರತ ಸಮಾಜಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಮನಸ್ಸು ಮಾಡಿದ್ದರೆ ಕನಿಷ್ಠ ಒಬ್ಬ ಶಾಸಕನನ್ನಾದರೂ 2018ರ ಚುನಾವಣೆಯಲ್ಲಿ ಆರಿಸಿ ವಿಧಾನಸಭೆಗೆ ಕಳುಹಿಸಬಹುದಾಗಿತ್ತು. ಕರ್ನಾಟಕದ ವೃತ್ತಿನಿರತ ಸಮಾಜಕಾರ್ಯಕರ್ತರೆಲ್ಲರೂ ಒಂದು ವೇದಿಕೆಗೆ ಕರೆತರುವ ಪ್ರಯತ್ನ ಇನ್ನಾದರೂ ಆಗಬೇಕಾಗಿದೆ.
ಈಗಲೂ ಸಮಾಜಕಾರ್ಯಕರ್ತರು ಮತದಾನದ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಯೋಗ್ಯ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿ ಬರುವಂತೆ ನೋಡಿಕೊಂಡರೆ ಸಮಾಜದ ಸಾವಿರಾರು ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಕ್ರೌಡ್ ಫಂಡಿಂಗ್ ಮಾಡುವ ಮೂಲಕ ಈ 2018 ರ ಚುನಾವಣೆಯಲ್ಲಿ ಒಬ್ಬ ವೃತ್ತಿನಿರತ ಸಮಾಜಕಾರ್ಯಕರ್ತನನ್ನು ಚುನಾವಣೆಗೆ ನಿಲ್ಲಿಸಿದರೆ ಒಳಿತು.......ಇದು ನನ್ನ ಅನಿಸಿಕೆ. ನಿಮ್ಮ ಅಭಿಪ್ರಾಯ, ಅನಿಸಿಕೆಗಳಿಗೆ ಸ್ವಾಗತ. ರಮೇಶ ಎಂ.ಎಚ್. ನಿರಾತಂಕ www.niratanka.org
0 Comments
Your comment will be posted after it is approved.
Leave a Reply. |
Categories
All
MHR LEARNING ACADEMYGet it on Google Play store
|
| Niruta Publications Books (Dec 2025) | |
| File Size: | 756 kb |
| File Type: | |
SITE MAP
SiteNIRATHANKA |
POSHOUR OTHER WEBSITESSubscribe |
RSS Feed