ಉಬೂಂಟು
ಮದವಿಲ್ಲದ ಮನಸ್ಸಷ್ಟೇ ಮಧುರ ಮುದವಾದ ಮಾತುಗಳನ್ನು ಕೂಡಾ ಆಡಲಾಗುವುದು ಅಹಂಕಾರದ ಅತಿರೇಕವಿಲ್ಲದಿದ್ದರೆ ಮಾತ್ರವೇ ಇದಕ್ಕೆ ರೂಢಿಸಿಕೊಳ್ಳಬೇಕಾಗಿರುವುದು ಧೋರಣೆ. ಅಂತಹ ಧೋರಣೆಯ, ಸಂಕಲಿತ ಆಶಯದ ಒಂದು ಜೀವಂತ ಉದಾಹರಣೆ ನಮ್ಮ ಮುಂದಿದೆ. ದಕ್ಷಿಣ ಆಫ್ರಿಕಾದ ಕೆಲವು ಭಾಗಗಳಲ್ಲಿ ಉಬೂಂಟು ಎಂಬ ಬುಡಕಟ್ಟಿನ ಜನರಿದ್ದು ಅವರದೊಂದು ಸಕಾರಾತ್ಮಕ ಪದ್ಧತಿಯೊಂದು ಚಾಲ್ತಿಯಲ್ಲಿದೆ. ಅದೇನೆಂದರೆ ಯಾವುದೇ ವ್ಯಕ್ತಿಯು ಏನೇ ತಪ್ಪು ಮಾಡಿದರೂ ಅವನನ್ನು ಹಳ್ಳಿಯ ಮಧ್ಯಭಾಗಕ್ಕೆ ಕರೆದುಕೊಂಡು ಬರುತ್ತಾರೆ. ನಂತರ ಊರಿನ ಜನರೆಲ್ಲಾ ಸುತ್ತುವರೆದು, ಎರಡು ದಿನಗಳ ಕಾಲ ಅವನು ಮಾಡಿರುವ ಒಳ್ಳೆಯ ಕೆಲಸಗಳನ್ನೆಲ್ಲಾ ಹೇಳುತ್ತಿರುತ್ತಾರೆ. ಅವರ ಪ್ರಕಾರ ಯಾವುದೇ ವ್ಯಕ್ತಿಯು ಮೂಲದಲ್ಲಿ ಒಳ್ಳೆಯವನೇ ಆಗಿರುತ್ತಾನೆ. ಆದರೆ ಯಾವುದೋ ಒಂದು ಗಳಿಗೆಯಲ್ಲಿ ತಪ್ಪು ಮಾಡಿಬಿಡುತ್ತಾನೆ. ಆ ತಪ್ಪು ಮಾಡುವುದೆಂದರೆ ಅವನು ತನ್ನ ಒಳ್ಳೆಯತನವನ್ನು ಮರುಕಳಿಸೆಂಬ ಅವನ ಅಂತರಾಳದ ಕೂಗು ಅಥವಾ ಆತ್ಮದ ಅಳಲಾಗಿರುತ್ತದೆ. ಆದ್ದರಿಂದ ಹಾಡಿಯವರೆಲ್ಲಾ ಒಗ್ಗಟ್ಟಾಗಿ ತನ್ನ ಒಳ್ಳೆಯತನಕ್ಕಾಗಿ ಹಾತೊರೆಯುತ್ತಾ ಸಹಾಯ ಬೇಡುತ್ತಿರುವವನಿಗೆ ಸಹಕರಿಸಲೆಂದು ಅವನ ಒಳ್ಳೆಯ ಕೆಲಸಗಳನ್ನು, ಗುಣಗಳನ್ನು ಹೇಳುವಂತಹ ಕೆಲಸವನ್ನು ಮಾಡುತ್ತಾರೆ. ಈ ಆಚರಣೆಯ ಮೂಲಕ ತಪ್ಪು ಮಾಡಿರುವವನು ನಿಸರ್ಗದಿಂದ ಪಡೆದಿರುವ ಒಳ್ಳೆಯತನವನ್ನು ಮರಳಿಪಡೆಯುತ್ತಾನೆಂದು ಅವರ ನಂಬಿಕೆ.
0 Comments
ಮುನ್ನುಡಿ
ಗೆದ್ದೇ ಬಿಡೋಣ... ಸೋತು ಸುಮ್ಮನಿರಲು ನಾವು ಈ ಜಗತ್ತಿನಲ್ಲಿ ಹುಟ್ಟಿಲ್ಲ! ನೆನಪಿರಲಿ, ಗೆಲುವುಗಳು ರಾತ್ರೋರಾತ್ರಿ ನಮ್ಮ ಮನೆ ಬಾಗಿಲು ಬಡಿಯುವುದಿಲ್ಲ. ಗೆಲುವುಗಳು ಅವಿರತ ಪರಿಶ್ರಮ, ಸಮರ್ಪಣೆ ಮತ್ತು ಛಲದ ಪ್ರತಿಫಲಗಳು ಪ್ರತಿಯೊಬ್ಬರೂ ಗೆಲುವುಗಳನ್ನು ಬೆನ್ನಟ್ಟಲು ಪ್ರಯತ್ನಿಸುತ್ತಾರೆ ಆದರೆ ಗೆಲುವುಗಳು ಮಾತ್ರ ಗೆಲ್ಲುವ ಛಲವಿರುವ ವ್ಯಕ್ತಿಗಳನ್ನು ಬಿಡದೆ ಬೆನ್ನಟ್ಟುತ್ತವೆ. ಇಕಿಗಾಯ್ ಪುಸ್ತಕದಲ್ಲಿ ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾಂಚೆಸ್ಕ್ ಮಿರಾಯೆ ರವರು ಪ್ರಸ್ತಾವನೆಯಲ್ಲಿ ಈ ಕೆಳಕಂಡಂತೆ ಹೇಳುತ್ತಾರೆ:-
ಪ್ರಪಂಚದಲ್ಲಿನ ಬೇರೆಲ್ಲರಿಗಿಂತ ದಕ್ಷಿಣ ಜಪಾನಿನ ಒಕಿನಾವಾ ದ್ವೀಪ ನಿವಾಸಿಗಳು ಹೆಚ್ಚು ದಿನಗಳ ಕಾಲ ಬದುಕುತ್ತಾರೆ. ಅವರು ಹೀಗೆ ಬದುಕಲು ಹಲವು ಕಾರಣಗಳನ್ನು ಇಕಿಗಾಯ್ ಪುಸ್ತಕದಲ್ಲಿ ಲೇಖಕರು ನೀಡುತ್ತಾರೆ. ಒಕಿನಾವಿಗಳು ‘ಇಚರಿಬ ಚೊಡೆ’ ಎಂಬ ತತ್ವಕ್ಕೆ ಬದ್ಧರಾಗಿ ಬದುಕುವುದು ಒಂದು ಕಾರಣ. ‘ಇಚರಿಬ ಚೊಡೆ’ ಅದೊಂದು ಸ್ಥಳೀಯವಾಗಿ ಬಳಕೆಯಲ್ಲಿರುವ ಒಂದು ಶಬ್ದ “ಅವನನ್ನು ನೀನು ಮೊದಲು ಒಮ್ಮೆಯೂ ಸಂಧಿಸಿಲ್ಲದಿದ್ದರೂ ಕೂಡ, ಪ್ರತಿಯೊಬ್ಬನನ್ನು ನಿನ್ನ ಸೋದರನಂತೆ ಸತ್ಕರಿಸು” ಎಂದು. ದೀರ್ಘಕಾಲ ಬದುಕಿ, ಜೀವನದಲ್ಲಿ ಅರ್ಥ ಕಂಡುಕೊಳ್ಳಬೇಕೆಂದರೆ ಸ್ನೇಹ-ಗೆಳೆತನವನ್ನು ಪೋಷಿಸುವುದು ಅತ್ಯಂತ ಪ್ರಮುಖ ಅಗತ್ಯ. ಯಾರೋ ಅಪರಿಚಿತರನ್ನು ನಮ್ಮ ಸೋದರನಂತೆ ಸತ್ಕರಿಸು ಎಂದು ಇಕಿಗಾಯ್ ಪುಸ್ತಕದ ಲೇಖಕರು ಹೇಳುತ್ತಾರೆ. ಹಾಗಾದರೆ ನಮ್ಮ ಸ್ನೇಹಿತರನ್ನು ನಾವು ಇನ್ನು ಹೆಚ್ಚಿನ ಮಟ್ಟದಲ್ಲಿ ಸತ್ಕರಿಸಿ, ಗೆಳೆತನವನ್ನು ಹಾಗೂ ಸ್ನೇಹವನ್ನು ಪೋಷಿಸಬೇಕು ಅಲ್ಲವೆ? ರಮೇಶ ಎಂ.ಎಚ್. ನಿರಾತಂಕ www.mhrspl.com www.niratanka.org 1. ಮನೋನಿಗ್ರಹವಿಲ್ಲದೆ ಯಾವ ಕೆಲಸವನ್ನು ಮಾಡಲಾಗುವುದಿಲ್ಲ. ವ್ಯಕ್ತಿಯ ಉದ್ಧಾರ, ಸಮಾಜದ ಉದ್ಧಾರ ಮನೋನಿಗ್ರಹದಿಂದ.
2. ಮನಸ್ಸಿನ ಸ್ವರೂಪವನ್ನು ಅರ್ಥಮಾಡಿಕೊಳ್ಳಿ. 3. ತಂತ್ರಗಳನ್ನು ತಿಳಿದುಕೊಂಡು ಬಳಸುವುದನ್ನು ಕಲಿಯಿರಿ.
ಪ್ರಶ್ನೆ: ನೀವೇ ಹೇಳಿದಂತೆ ಜನವರಿ 2017 ರಿಂದ ಇ.ಎಸ್.ಐ ವೇತನದ ಮಿತಿಯನ್ನು ಮಾಸಿಕ 21000-00 ರೂಪಾಯಿಗೆ ಹೆಚ್ಚಿಸಿದೆ. ಇಲ್ಲೊಂದು ಉಪ ಪ್ರಶ್ನೆ ನೌಕರನೊಬ್ಬ ಪಡೆಯುತ್ತಿರುವ ವೇತನವು ವೇತನ ವೃದ್ಧಿ, ಬೋನಸ್, ಅಧಿಕ ಕಾರ್ಯ ನಿರ್ವಹಿಸಿದುದಕ್ಕಾಗಿ ಪಡೆದ ಹಣವೂ ಸೇರಿ ತಿಂಗಳ ಒಂದರಲ್ಲಿ 21000-00 ರೂಪಾಯಿಗಿಂತ ಹೆಚ್ಚಾಗಿ ಬಿಟ್ಟರೆ, ಅಂತಹ ಸಂದರ್ಭದಲ್ಲಿ ವಿಮಾದಾರ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆಯೆ?
ಉತ್ತರ: ಅಂದರೆ, ವೇತನ ಮಿತಿಯನ್ನು ಮೀರಿದ ತಕ್ಷಣವೇ ನೌಕರ ವಿಮಾದಾರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ ಎಂಬುದು ನಿಮ್ಮ ಅನಿಸಿಕೆ. ಅದು ಹಾಗಲ್ಲ. ಇ.ಎಸ್.ಐ ಕಾನೂನಿನಂತೆ ವಂತಿಗೆ ಅವಧಿಯನ್ನು ವರ್ಷವೊಂದರಲ್ಲಿ ಎರಡು ಭಾಗವಾಗಿ ವಿಂಗಡಿಸಲಾಗಿದೆ. ಏಪ್ರಿಲ್ನಿಂದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ನಿಂದ ಮಾರ್ಚ್. ವಿಷಯ ಹೀಗಿರುವಾಗ ವಂತಿಗೆಯ ಅವಧಿಯ ಮಧ್ಯದಲ್ಲಿ ವೇತನವು ಹೆಚ್ಚಾದರೂ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯಲಾರರು. ವಂತಿಗೆಯ ಅವಧಿಯು ಮುಗಿಯುವವರೆಗೆ ಅವರು ಮುಂದುವರೆಯುತ್ತಾರೆ. ಅಷ್ಟೇ ಏಕೆ, ಹೆಚ್ಚಾದ ಮೊತ್ತಕ್ಕೂ ವಂತಿಗೆಯನ್ನು ಸಲ್ಲಿಸಬೇಕಾಗುತ್ತದೆ. ಉದಾಹರಣೆಗೆ: ವಂತಿಗೆಯ ಅವಧಿ ಏಪ್ರಿಲ್ನಿಂದ ಸೆಪ್ಟೆಂಬರ್ ಮಧ್ಯೆ ಜೂನ್ ತಿಂಗಳಿನಲ್ಲಿ ವೇತನ ವೃದ್ಧಿಯ ಪರಿಣಾಮವಾಗಿ ನೌಕರನೊಬ್ಬನ ವೇತನ ರೂಪಾಯಿ. 22000-00 ಆಗಿಬಿಟ್ಟರೆ, ವಂತಿಗೆಯನ್ನು 22000-00 ಕ್ಕೆ ಸಲ್ಲಿಸಬೇಕು. ಅದಕ್ಕಾಗಿ ವೇತನ ಮಿತಿಯಾದ ರೂಪಾಯಿ. 22000-00 ಗೆ ಮಾಡಲಾಗದು ಎನ್ನುವುದನ್ನು ಪ್ರಮುಖವಾಗಿ ಇಲ್ಲಿ ಗಮನಿಸಬೇಕು. ಮುಂದೆ ವಂತಿಗೆಯ ಅವಧಿ ಮುಗಿಯುತ್ತಲೆ ಆಗಲೂ 21000-00 ಕ್ಕೆ ಹೆಚ್ಚಾಗಿದ್ದರೆ, ಅನಾಯಾಸವಾಗಿ ಅಂತಹ ವಿಮಾದಾರರು ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ. ಪುಸ್ತಕಗಳ ಸಂಗ ಬಿಡದ ಡೈನಮಿಕ್ ನಾಯಕಿ ಜೆಸಿಂದಾ ಕಳೆದ ವರ್ಷ ತಾವು ಮೆಚ್ಚಿದ ಪುಸ್ತಕಗಳ ಪಟ್ಟಿ ಕೊಟ್ಟರು. ನ್ಯೂಜಿಲೆಂಡಿನಲ್ಲಿ ರಾಜಕಾರಣಿಗಳಿಗೆ ಒಳ್ಳೆಯ ಪುಸ್ತಕಗಳನ್ನು ಕೊಡುವ ಸಂಸ್ಥೆಗಳೇ ಇವೆ. ಜೆಸಿಂದಾ ಪಟ್ಟಿಯ ಜೊತೆಗೇ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕಾಲಕಾಲಕ್ಕೆ ಕೊಟ್ಟ ನೂರು ಪುಸ್ತಕಗಳ ಪಟ್ಟಿ ಗಮನಿಸಿದೆ. ಜೆಸಿಂದಾರಂತೆ ಒಬಾಮ ಕೂಡ ತಮ್ಮ ಆಯ್ಕೆಯ ಪುಸ್ತಕಗಳನ್ನು ಓದಿದ್ದಾರೆ. ಕೊರೊನಾ ಕಾಲದಲ್ಲಿ ಪುಸ್ತಕ, ಸಂಗೀತ ತಮ್ಮನ್ನು ಪೊರೆದಿದ್ದನ್ನು ನೆನೆದಿದ್ದಾರೆ. ಒಬಾಮರ ಪ್ರಿಯ ಪುಸ್ತಕಗಳ ಪಟ್ಟಿಯಲ್ಲಿ ಚಿನುವ ಅಚಿಬೆ, ಟೋನಿ ಮಾರಿಸನ್, ಅಡಿಚಿಯರ ಕಾದಂಬರಿಗಳು, ಆರ್ಥಿಕ, ರಾಜಕೀಯ ಲೋಕದ ಪುಸ್ತಕಗಳಿವೆ. ಪುಸ್ತಕ ಓದಿ ಹುಟ್ಟಿದ ಸೂಕ್ಷ್ಮತೆ ಜೆಸಿಂದಾ, ಒಬಾಮರ ಮಾತು, ನಡವಳಿಕೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಲಿಂಕನ್, ಫಿಡೆಲ್ ಕ್ಯಾಸ್ಟ್ರೊ, ನೆಹರೂ ಸೇರಿದಂತೆ ಪುಸ್ತಕಗಳ ಸಖ್ಯದಲ್ಲಿದ್ದ ದೊಡ್ಡ ನಾಯಕರುಗಳ ಎದುರು ಯಾವ ಪುಸ್ತಕಗಳನ್ನೂ ಓದದೆ ಪಶುಗಳಂತೆ ವರ್ತಿಸುವ ಲೀಡರುಗಳನ್ನು ಹೋಲಿಸಿ: ಒಳ್ಳೆಯ ಪುಸ್ತಕಗಳ ಸಂಗದಲ್ಲಿರುವ ರಾಜಕಾರಣಿಗಳು ದೇಶದ ಆರೋಗ್ಯಕ್ಕೆ ಎಷ್ಟು ಅತ್ಯಗತ್ಯ ಎನ್ನುವುದು ತಂತಾನೇ ಹೊಳೆಯುತ್ತದೆ.
ರಾಜಕಾರಣಿಗಳಿರಲಿ, ಲಕ್ಷಗಟ್ಟಲೆ ಸಂಬಳ ಪಡೆಯುವ ಅಧ್ಯಾಪಕರು ಕೂಡ ತಂತಮ್ಮ ವಿಷಯಗಳಿಗೆ ಸಂಬಂಧಿಸಿದ ಒಂದೆರಡು ಹೊಸ ಪುಸ್ತಕಗಳನ್ನಾದರೂ ಪ್ರತೀ ತಿಂಗಳು ಕೊಳ್ಳದಿರುವ ಬೇಜವಾಬ್ದಾರಿತನ ಕೂಡ ಇಲ್ಲಿದೆ. ಡಿಜಿಟಲ್ ಮಂದಿ ಕಿಂಡಲ್, ಇ-ಪುಸ್ತಕ, ಕೇಳು ಪುಸ್ತಕಗಳಲ್ಲಿ ಮುಳುಗಿದ್ದಾರೆ. ಆದರೂ ಕೈಯಲ್ಲಿ ಪುಸ್ತಕ ಹಿಡಿಯುವ ಪುಳಕ, ಪುಸ್ತಕಗಳೊಡನೆ ಗಂಟೆಗಟ್ಟಲೆ ಬದುಕುವ ಸುಖ ಇತರ ಬಗೆಯ ಓದಿನಲ್ಲಿರುವಂತಿಲ್ಲ. ಶ್ರೇಷ್ಠ ಪುಸ್ತಕಗಳ ಒಡನಾಟದಲ್ಲಿರುವುದೆಂದರೆ ನಮ್ಮೊಳಗಿನ ವಿಕಾರಗಳನ್ನು ಮೀರಿ ಇತರರನ್ನು, ಲೋಕದ ಕಷ್ಟಗಳನ್ನು ಅರಿಯುವುದು. ಹೊಸ ವರ್ಷದಲ್ಲಾದರೂ ಈ ಸರಳ ಸುಂದರ ದಿನಚರಿ ಎಲ್ಲರ ಬದುಕಿನ ಭಾಗವಾಗಲಿ. ಒಳ್ಳೆಯ ಪುಸ್ತಕಗಳ ಪಟ್ಟಿ ಸಿದ್ಧವಾಗಲಿ! ಚಿಯರ್ಸ್!ಪುಸ್ತಕಗಳ ಸಂಗ ಬಿಡದ ಡೈನಮಿಕ್ ನಾಯಕಿ ಜೆಸಿಂದಾ ಕಳೆದ ವರ್ಷ ತಾವು ಮೆಚ್ಚಿದ ಪುಸ್ತಕಗಳ ಪಟ್ಟಿ ಕೊಟ್ಟರು. ನ್ಯೂಜಿಲೆಂಡಿನಲ್ಲಿ ರಾಜಕಾರಣಿಗಳಿಗೆ ಒಳ್ಳೆಯ ಪುಸ್ತಕಗಳನ್ನು ಕೊಡುವ ಸಂಸ್ಥೆಗಳೇ ಇವೆ. ಜೆಸಿಂದಾ ಪಟ್ಟಿಯ ಜೊತೆಗೇ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕಾಲಕಾಲಕ್ಕೆ ಕೊಟ್ಟ ನೂರು ಪುಸ್ತಕಗಳ ಪಟ್ಟಿ ಗಮನಿಸಿದೆ. ಜೆಸಿಂದಾರಂತೆ ಒಬಾಮ ಕೂಡ ತಮ್ಮ ಆಯ್ಕೆಯ ಪುಸ್ತಕಗಳನ್ನು ಓದಿದ್ದಾರೆ. ಕೊರೊನಾ ಕಾಲದಲ್ಲಿ ಪುಸ್ತಕ, ಸಂಗೀತ ತಮ್ಮನ್ನು ಪೊರೆದಿದ್ದನ್ನು ನೆನೆದಿದ್ದಾರೆ. ಒಬಾಮರ ಪ್ರಿಯ ಪುಸ್ತಕಗಳ ಪಟ್ಟಿಯಲ್ಲಿ ಚಿನುವ ಅಚಿಬೆ, ಟೋನಿ ಮಾರಿಸನ್, ಅಡಿಚಿಯರ ಕಾದಂಬರಿಗಳು, ಆರ್ಥಿಕ, ರಾಜಕೀಯ ಲೋಕದ ಪುಸ್ತಕಗಳಿವೆ. ಪುಸ್ತಕ ಓದಿ ಹುಟ್ಟಿದ ಸೂಕ್ಷ್ಮತೆ ಜೆಸಿಂದಾ, ಒಬಾಮರ ಮಾತು, ನಡವಳಿಕೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಲಿಂಕನ್, ಫಿಡೆಲ್ ಕ್ಯಾಸ್ಟ್ರೊ, ನೆಹರೂ ಸೇರಿದಂತೆ ಪುಸ್ತಕಗಳ ಸಖ್ಯದಲ್ಲಿದ್ದ ದೊಡ್ಡ ನಾಯಕರುಗಳ ಎದುರು ಯಾವ ಪುಸ್ತಕಗಳನ್ನೂ ಓದದೆ ಪಶುಗಳಂತೆ ವರ್ತಿಸುವ ಲೀಡರುಗಳನ್ನು ಹೋಲಿಸಿ: ಒಳ್ಳೆಯ ಪುಸ್ತಕಗಳ ಸಂಗದಲ್ಲಿರುವ ರಾಜಕಾರಣಿಗಳು ದೇಶದ ಆರೋಗ್ಯಕ್ಕೆ ಎಷ್ಟು ಅತ್ಯಗತ್ಯ ಎನ್ನುವುದು ತಂತಾನೇ ಹೊಳೆಯುತ್ತದೆ. ರಾಜಕಾರಣಿಗಳಿರಲಿ, ಲಕ್ಷಗಟ್ಟಲೆ ಸಂಬಳ ಪಡೆಯುವ ಅಧ್ಯಾಪಕರು ಕೂಡ ತಂತಮ್ಮ ವಿಷಯಗಳಿಗೆ ಸಂಬಂಧಿಸಿದ ಒಂದೆರಡು ಹೊಸ ಪುಸ್ತಕಗಳನ್ನಾದರೂ ಪ್ರತೀ ತಿಂಗಳು ಕೊಳ್ಳದಿರುವ ಬೇಜವಾಬ್ದಾರಿತನ ಕೂಡ ಇಲ್ಲಿದೆ. ಡಿಜಿಟಲ್ ಮಂದಿ ಕಿಂಡಲ್, ಇ-ಪುಸ್ತಕ, ಕೇಳು ಪುಸ್ತಕಗಳಲ್ಲಿ ಮುಳುಗಿದ್ದಾರೆ. ಆದರೂ ಕೈಯಲ್ಲಿ ಪುಸ್ತಕ ಹಿಡಿಯುವ ಪುಳಕ, ಪುಸ್ತಕಗಳೊಡನೆ ಗಂಟೆಗಟ್ಟಲೆ ಬದುಕುವ ಸುಖ ಇತರ ಬಗೆಯ ಓದಿನಲ್ಲಿರುವಂತಿಲ್ಲ. ಶ್ರೇಷ್ಠ ಪುಸ್ತಕಗಳ ಒಡನಾಟದಲ್ಲಿರುವುದೆಂದರೆ ನಮ್ಮೊಳಗಿನ ವಿಕಾರಗಳನ್ನು ಮೀರಿ ಇತರರನ್ನು, ಲೋಕದ ಕಷ್ಟಗಳನ್ನು ಅರಿಯುವುದು. ಹೊಸ ವರ್ಷದಲ್ಲಾದರೂ ಈ ಸರಳ ಸುಂದರ ದಿನಚರಿ ಎಲ್ಲರ ಬದುಕಿನ ಭಾಗವಾಗಲಿ. ಒಳ್ಳೆಯ ಪುಸ್ತಕಗಳ ಪಟ್ಟಿ ಸಿದ್ಧವಾಗಲಿ! ಚಿಯರ್ಸ್! https://www.prajavani.net/columns/nataraj-huliyar-column-new-book-for-the-new-year-897910.html?fbclid=IwAR1RxdFkBzf2nfvk3p8bwlpnWlLkZNNZZuSGI9ZbL5-uTjFYAxNnUcfbX9A ಇತ್ತೀಚೆಗೆ ಪ್ರೊ. ವೆಂಕಟ್ ಪುಲ್ಲಾ ಭಾರತದಲ್ಲಿ ಸಮಾಜಕಾರ್ಯ ವಿಷಯದಲ್ಲಿ ಡಾಕ್ಟರೇಟ್ ಪಡೆದರು. ಆಸ್ಟ್ರೇಲಿಯಾದಲ್ಲಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಹಲವು ವರ್ಷಗಳ ಹಿಂದೆ (ಸುಮಾರು 90ರ ದಶಕದಲ್ಲಿ) TISS (Tata Institute of Social Science) ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಒಬ್ಬ ಅರ್ಹ ವಿದ್ಯಾರ್ಥಿಗೆ 500/- ಗಳ ಸಹಾಯವನ್ನು ನೀಡಿದ್ದರಂತೆ. ಪ್ರೊ. ವೆಂಕಟ್ ಪುಲ್ಲಾ ರವರಿಗೂ ಬರುತ್ತಿದ್ದ ಸಂಬಳ ಐದಾರು ಸಾವಿರವಿದ್ದಿರಬಹುದು. ಆ 500/- ರೂ.ಗಳು ಸಹಾಯ ಪಡೆದ ವಿದ್ಯಾರ್ಥಿ ಮುಂದೊಂದು ದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಪಡೆದ ನಂತರ ಪ್ರೊ. ವೆಂಕಟ್ ಪುಲ್ಲಾ ರವರಿಗೆ ತಾನು ಪಡೆದ ಸಹಾಯಧನವನ್ನು ಹಿಂತಿರುಗಿಸಲು ಭೇಟಿಯಾದರು. ಆಗ ಪ್ರೊ. ವೆಂಕಟ್ ಪುಲ್ಲಾ ರವರು ನಾನು ನಿನಗೆ ಸಹಾಯ ಮಾಡಿದಂತೆ ನೀನು ಒಬ್ಬ ಅರ್ಹ ವಿದ್ಯಾರ್ಥಿಯನ್ನು ಹುಡುಕಿ ಅವನಿಗೆ ನಿನ್ನ ಕೈಲಾದ ಮಟ್ಟಿಗೆ ಸಹಾಯ ಮಾಡು ಎಂದು ಸಲಹೆ ಇತ್ತರಂತೆ. ಈ ರೀತಿಯಾಗಿ ಸಹಾಯ ಪಡೆದವರು ಇಂದು ವಿಶ್ವದಾದ್ಯಂತ ಸುಮಾರು 400ಕ್ಕೂ ಹೆಚ್ಚು ಮಂದಿ ಇದ್ದಾರಂತೆ. ಪ್ರೊ. ವೆಂಕಟ್ ಪುಲ್ಲಾ ರವರಿಂದ ಮೊದಲು ಸಹಾಯ ಪಡೆದ ವ್ಯಕ್ತಿ ತಾನು ಸಹಾಯ ನೀಡಿದ ವ್ಯಕ್ತಿಯೊಂದಿಗೆ ಮಾತನಾಡಿ ಅದೇ ರೀತಿ ಒಬ್ಬರಿಂದ ಒಬ್ಬರು ಮಾತನಾಡಿಕೊಂಡು ಎಲ್ಲರೂ ಇತ್ತೀಚಿಗೊಮ್ಮೆ ಪ್ರೊ. ವೆಂಕಟ್ ಪುಲ್ಲಾ ರವರನ್ನು ಆಹ್ವಾನಿಸಿದರಂತೆ. ಆಗ ಪ್ರೊ. ವೆಂಕಟ್ ಪುಲ್ಲಾ ರವರಿಗೆ ತಾನು ಸಹಾಯ ನೀಡಿದ ತನ್ನ ಶಿಷ್ಯ ಮಾತ್ರ ಗೊತ್ತಿತ್ತು. ಅದೇ ರೀತಿ ಅಲ್ಲಿದ್ದ ಎಲ್ಲರಿಗೂ ಅವರವರು ಸಹಾಯ ನೀಡಿದ ವ್ಯಕ್ತಿಗಳು ಮಾತ್ರ ಗೊತ್ತಿತ್ತು. ಆದರೆ ಅಲ್ಲಿ ಒಟ್ಟಿಗೆ ಸೇರಿದ್ದು 300 ಕ್ಕೂ ಹೆಚ್ಚು ಜನರು ಇದ್ದರು. ಪ್ರೊ. ವೆಂಕಟ್ ಪುಲ್ಲಾ ರವರು ಅವರೆಲ್ಲರನ್ನೂ ಉದ್ದೇಶಿಸಿ ಮಾತನಾಡಿದರಂತೆ. ಒಂದು ಪುಟ್ಟ ಸಹಾಯ ಯಾವ ರೀತಿ ಇತರರ ಬದುಕನ್ನು ಬದಲಾಯಿಸಬಲ್ಲದು ಎಂಬುದು ಇದಕ್ಕೆ ನಿದರ್ಶನವಾಗಿದೆ. ಹಾಗಾಗಿ ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಒಂದು ಪುಟ್ಟ ಸಹಾಯದಿಂದ ಸುಮಾರು 400 ಕ್ಕೂ ಹೆಚ್ಚು ಜನರು ಪ್ರೊ. ವೆಂಕಟ್ ಪುಲ್ಲಾ ರವರ ವ್ಯಕ್ತಿತ್ವಕ್ಕೆ ಮಾರುಹೋದರು. ಹಾಗೆಯೇ ಇಂದು ಪ್ರೊ. ವೆಂಕಟ್ ಪುಲ್ಲಾ ರವರು ಸಮಾಜಕಾರ್ಯ ವಿಶ್ವವಿದ್ಯಾಲಯ ಮಾಡಬೇಕೆಂದು ಹೊರಟರೆ ಇಂತಹ ಮಹತ್ವದ ಕೆಲಸಕ್ಕೆ 400 ಜನರು ಪ್ರೊ. ವೆಂಕಟ್ ಪುಲ್ಲಾ ರವರ ಬೆಂಬಲಕ್ಕೆ ನಿಲ್ಲುವುದರಲ್ಲಿ ಆಶ್ಚರ್ಯವೇನಿಲ್ಲವಲ್ಲ.
ರಮೇಶ ಎಂ.ಎಚ್. ನಿರಾತಂಕ www.mhrspl.com www.nirutapublications.org
K.Vittala Rao
Management Consultant & Trainer, Bangalore
I happened to see an analysis by Deloitte’s 12th Annual Tech Trends Report about the new norms towards HR –Professionals challenge in the light of HR Digitalization. The following are the new norms that the Professionals need to carry out as indicated in the Report.
HR Departments focus on optimizing employee productivity, Engagement, Teamwork and Career Growth HR Builds Innovative, Company-specific programs, Develop Apps and leverage the platform for scale HR Technology Team moves beyond ERP to develop digital capabilities and mobile apps with a focus on “Productivity at Work” HR Center of Excellence leverage AI, chat, apps, and other advanced technologies to scale and empower employees
ಡಾ. ಎಸ್. ಸಿದ್ಧರಾಮಣ್ಣ, ಜಿಲ್ಲಾ ನಿರೂಪಣಾ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು, ರವರು 1995 ರ ಬೆಂ.ವಿ.ವಿ ಯಿಂದ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಸಮಾಜಕಾರ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಹಾಗೂ ಹಲವು ಪ್ರಶಸ್ತಿ ಪಡೆದು ನಮ್ಮೆಲ್ಲರಿಗೂ ಹೆಮ್ಮೆಯ ತಂದವರು.
This book explores discrimination against Northeast Indians, who have been frequently stereotyped as backwards, anti-national, anti-assimilationist, immoral, and relegated to low paying positions across retail, hospitality, telecommunications and wellness industries.
The contributions draw on interviews with individuals who have migrated to other Indian cities and towns to find jobs and escape from native poverty, and provide a critical examination of the intersections between power, privilege and racial hierarchy in India today. The chapters cover a variety of perspectives including social movements and activism, history, policy, youth studies and gender studies. With a focus on marginalised communities, and the effects and persistence of racial inequality in a South Asian context, this collection will be an important contribution to critical race studies, public policy, human rights discourse, and social work https://www.palgrave.com/gp/book/9783030462505
Venkat Pulla is Senior Research Fellow (Adjunct), Institute of Land, Water and Society, Charles Sturt University, and Foundation Professor at the Brisbane Institute of Strengths-based Practice, Australia.
Rituparna Bhattacharyya is an independent research consultant, and Editor-in-Chief of the Journal Space and Culture, India. Sanjai Bhatt is Professor of Social Work at the University of Delhi, and President of the National Association of Professional Social Workers in India.
Niratanka & Niruta Publications, Bangalore are inviting you to a scheduled Zoom meeting.
Topic: Niratanka: ವ್ಯಕ್ತಿಗತ ಸಮಾಜಕಾರ್ಯದ ಪರಿಚಯ ಪುಸ್ತಕದ ಕುರಿತು ಒಂದು ತುಲನಾತ್ಮಕ ಸಂವಾದ: 6-Sept-2020, Sunday @ 4pm Time: Sept 6, 2020 04:00 PM India Join Zoom Meeting https://us02web.zoom.us/j/85355007186?pwd=SUgwdjYzQzlLYitJakxIdTQ2bW1tZz09 Meeting ID: 853 5500 7186 Passcode: 933078 ಆತ್ಮೀಯರೆ…ಓಡುತ್ತಿರುವ ಈ ಕಾಲದಲ್ಲಿ ಕಾಡುತ್ತಿರುವ ಸಮಸ್ಯೆಗಳ ಸಂಖ್ಯೆಯೇ ಹೆಚ್ಚು. ಜವಾಬ್ದಾರಿಗಳ ಮೂಟೆ ಹೊತ್ತು ಕಂಡ ಕನಸ್ಸುಗಳನ್ನು ನನಸಾಗಿಸಲು ಮನುಷ್ಯ ಸೆಣಸುತ್ತಾನೆ. ಜೀವನದಲ್ಲಿ ಉದ್ಭವಿಸಿದ ಭಾಧೆಗಳನ್ನು ಬದಿಗೊತ್ತಿ ಜೀವನ ನಿರ್ವಹಣೆಯ ಉದ್ದೇಶದಿಂದ ಕೈಗೆ ಸಿಕ್ಕ ಉದ್ಯೋಗವನ್ನು ಮಾಡುತ್ತಾ ಜೀವನ ಸಾಗಿಸುವಂತಹ ಜನಸಾಮಾನ್ಯರ ಜೀವನದಲ್ಲಿ ಎಂದೂ ಕಾಣದ ಕೇಳದ ಕೊರೋನಾ ವೈರಸ್ ಎಂಬ ಮಹಾಮಾರಿ ದುತ್ ಎಂದು ಉದ್ಬವಿಸಿ ಕಂಡ ಕನಸುಗಳನ್ನ ದಿಕ್ಕಾಪಾಲಾಗಿಸಿ ಪ್ರತಿಯೊಬ್ಬರ ಜೀವನದಲ್ಲೂ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿರುವುದು ಎಲ್ಲರೂ ತಿಳಿದಿರುವ ಸತ್ಯಸಂಗತಿ ಅದು ಅವರವರ ಅನುಭವಕ್ಕೆ ಬಂದಿರುತ್ತದೆ.
Dear sir/madam,
The following survey aims at capturing the impact of Covid-19 lockdown on families. I invite you to kindly fill the online questionnaire. Also, I request you to forward the link to whomever you think will be interested in participating in the survey. Your participation will be helpful in generating valuable information to understand families better. https://forms.gle/5uTM2CdW4aeNFo1u8 P.S: Pl note that the survey will close by 18 May 2020 midnight. B. Devi Prasad Former Professor of Social Work, TISS, Mumbai., Andhra University, Visakhapatnam, A.P., India Mob:9702871115 deviprasadb2@gmail.com (use this mail ID only) Hi all, SA-MUDRA FOUNDATION Bangalore, an NGO working for youth wellness & Empowerment (with a core commitment to prevent suicides) calls for members to its Governing Board (Honorary) Interested persons ( preferably from Bangalore) please mail profile to bharathi.samudra@gmail.com
2020ರ ವರ್ಷ ಹಲವು ಸವಾಲುಗಳನ್ನು ಮತ್ತು ಬದಲಾವಣೆಗಳನ್ನು ಈ ಜಗತ್ತಿನಲ್ಲಿ ಸೃಷ್ಟಿಸಿದೆ. ಪದವಿ, ಹಣ, ಆಸ್ತಿ, ಹೊನ್ನು, ಮಣ್ಣು, ಅಧಿಕಾರ ಮೊದಲಾದವುಗಳ ಬೆನ್ನು ಹತ್ತಿ ಹೊರಟ ಮನುಷ್ಯನನ್ನು ಕಣ್ಣಿಗೆ ಕಾಣದ ವೈರಸ್ ಒಂದು ಅಲುಗಾಡದಂತೆ ತಡೆದು ನಿಲ್ಲಿಸಿದೆ. ಪೂರ್ತಿ ಜಗತ್ತನ್ನೇ ತಲ್ಲಣಗೊಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಅನ್ನು 2020 ಮಾರ್ಚ 11 ರಂದು 'ಜಾಗತಿಕ ಪಿಡುಗು' ಎಂದು ಘೋಷಿಸಿದೆ. ಈ ರೀತಿಯ ಸಾಂಕ್ರಾಮಿಕ ಮಹಾಮಾರಿ ಮೊದಲನೆಯದೇನಲ್ಲ. ಮನುಕುಲದ ವಿಕಾಸದೊಟ್ಟಿಗೆ ಅವುಗಳ ತಾಂಡವ ಮಿಳಿತಗೊಂಡಿದೆ. ಆರನೇ ಶತಮಾನದ ಜಗತ್ತಿನ ಅತ್ಯಂತ ಭೀಕರ ಜಸ್ಟೀನಿಯನ್ ಪ್ಲೇಗ್ನಿಂದ ಹಿಡಿದು ಕಳೆದ ಶತಮಾನದ ಸ್ಪ್ಯಾನಿಷ್ ಫ್ಲ್ಯೂವರೆಗೂ ಮಾರಣಾಂತಿಕ ಪಿಡುಗುಗಳು ಮಾನವನ ಅಹಂಕಾರಕ್ಕೆ ಸರಿಯಾದ ಸವಾಲುಗಳನ್ನೇ ಒಡ್ಡಿವೆ.
ಒಮ್ಮೆ ಅಂತರರಾಷ್ಟ್ರೀಯ ಮಟ್ಟದ ಒಂದು ಸ್ವಯಂ ಸೇವಾ ಸಂಸ್ಥೆಯವರು ಹಿರಿಯ ನಾಗರೀಕರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಲು ನಿಧಿ ಸಂಗ್ರಹಣೆಯ ಅಭಿಯಾನವನ್ನು ಕೈಗೊಂಡರು. ಭಾರತದಾದ್ಯಂತ ಕಣ್ಣಿನ ಪೊರೆ ಸಮಸ್ಯೆಯ ಕುರಿತಾಗಿ ಸುಮಾರು ಐದು ಪುಟಗಳ ವರದಿಯನ್ನು ತಯಾರಿಸಿ ಹಲವಾರು ಜಾಹೀರಾತು ನೀಡಲಾಯಿತು. ಈ ವಿಸ್ತೃತ ವರದಿಯಲ್ಲಿ ಕಣ್ಣಿನ ಸಮಸ್ಯೆಯ ಕುರಿತು ಅಂಕಿ ಅಂಶಗಳು ಹಾಗೂ ಈ ಸಮಸ್ಯೆಯನ್ನು ಹೋಗಲಾಡಿಸಲು ಬೇಕಾದ ಅಪಾರವಾದ ಹಣವನ್ನು ದೇಣಿಗೆ ನೀಡಲು ಕೋರಲಾಗಿತ್ತು. ಜಾಹೀರಾತು ನೀಡಿ ಸುಮಾರು ದಿನಗಳು ಕಳೆದರೂ ಅಂದುಕೊಂಡ ಮಟ್ಟಿಗೆ ನಿಧಿ ಸಂಗ್ರಹಣೆ ಆಗಲಿಲ್ಲ. ನಂತರ ನಿಧಿ ಸಂಗ್ರಹಣೆ ಯಶಸ್ವಿಯಾಗಿ ಮಾಡಲು ಏನು ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಯಿತು. ಚರ್ಚೆಯಲ್ಲಿ ನಿಧಿ ಸಂಗ್ರಹಣೆಗಾಗಿ ಒಂದು ವಿನೂತನ ಪ್ರಯೋಗ ಮಾಡಲು ನಿರ್ಧರಿಸಿದರು.
ಕೊರೊನಾ-2 ಸೋಂಕು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಈ ವೈರಾಣು ಸೂಕ್ತ ವೈಜ್ಞಾನಿಕ ಪುರಾವೆಯಂತೆ ವೇಗವಾಗಿ ರೋಗಗ್ರಸ್ಥ ಮಾನವನಿಂದ ಇನ್ನೊಬ್ಬ ಮಾನವನಿಗೆ ಹರಡುವುದನ್ನು ತಡೆಗಟ್ಟಲು ಇರುವ ಏಕೈಕ ಮಾರ್ಗ ಪ್ರತೇಕ ವಾಸ. ಹೀಗಾಗಿ ಎಲ್ಲರೂ ಮನೆಯಲ್ಲಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡುವಿಕೆಯ ಸರಪಣಿಯನ್ನು ತುಂಡರಿಸಬೇಕು ಎಂಬ ಕಾರಣಕ್ಕೆ ಜಗತ್ತಿನಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಹೇರಲಾಗಿದ್ದು, ಇದರ ಅಪಾಯವನ್ನು ತಗ್ಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಆಯಾ ದೇಶದ ಸರ್ಕಾರಗಳು ಮುಂದಾಗಿವೆ. ನಮ್ಮ ದೇಶವು ಬಲವಂತದ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದೆ. ಅದರ ನಡುವೆಯೂ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದನ್ನು ಕಂಡ ಜನರಿಗೆ ರೋಗದ ಭಯ, ಸಾವಿನ ಭೀತಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಇತರೆ ಸಾಂಕ್ರಮಿಕ ರೋಗಗಳಂತೆ ಇದು ಸಂಪೂರ್ಣ ನಿರ್ಮೂಲನೆವಾಗುವಂತದ್ದೇ ಅಥವಾ ಸರ್ವನಾಶ ಮಾಡುವಂತದೇ? ಇದು ಮುಂದುವರೆದರೆ ತುತ್ತಿನ ಚೀಲ ತುಂಬಿಕೊಳ್ಳುವುದು ದುಸ್ಥರ. ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಬರಿಗೈಯಲ್ಲಿ ಕುಳಿತಿದ್ದಾರೆ, ಭವಿಷ್ಯದ ಬಗ್ಗೆ ಇರುವ ಅನಿಶ್ಚಿತತೆ, ಆಕಾರಣ ಭಯ, ಆತಂಕ, ಖಿನ್ನತೆ, ದುಃಸ್ವಪ್ನಗಳು ಬಡವರು, ಶ್ರೀಮಂತರು ಎಂಬ ಭೇದವಿಲ್ಲದೆ ಹಳಬರು, ಹೊಸಬರೆನ್ನದೇ ದೇವರು, ಧರ್ಮವೆನ್ನದೇ ಎಲ್ಲ ಜನತೆಯನ್ನು ಕಾಡತೊಡಗಿವೆ. ಸೋಂಕಿತರ ತಕ್ಷಣದ ಚಿಕಿತ್ಸೆಗಾಗಿ ಸ್ಥಳಾಂತರ, ವಲಸಿಗರು ತಮ್ಮ ಮೂಲ ನೆಲೆಗಳಿಗೆ ಇಲ್ಲವೇ ಆಶ್ರಯವೇ ಇಲ್ಲದ ನಿರಾಶ್ರಿತರಿಗೆ ತಾತ್ಕಾಲಿಕ ತಾಣಗಳಲ್ಲಿನ ಸಮಸ್ಯೆಗಳು. ಈಗಾಗಲೇ ಹಲವಾರು ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಮತ್ತು ಆರೈಕೆದಾರರ ಆಸ್ಪತ್ರೆಯಲ್ಲಿನ ಸಮಸ್ಯೆಗಳು ಇವೆಲ್ಲವುಗಳ ಮಧ್ಯೆ ಸಾಮಾಜಿಕ ಅಂತರ ಮತ್ತು ಶುಚಿತ್ವದ ಕಟ್ಟುಪಾಡು.
|
Categories
All
Social Work Learning AcademyInviting ArticlesMHR LEARNING ACADEMYGet it on Google Play store
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |
30,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|