Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
    • Videos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
    • Videos
  • Join Our Online Groups
  • Contact Us
Niruta Publications

‘ಮನಸ್ಸು ಮತ್ತು ಅದರ ನಿಗ್ರಹ’ - ಸ್ವಾಮಿ ಬುಧಾನಂದ

4/28/2022

0 Comments

 
1. ಮನೋನಿಗ್ರಹವಿಲ್ಲದೆ ಯಾವ ಕೆಲಸವನ್ನು ಮಾಡಲಾಗುವುದಿಲ್ಲ. ವ್ಯಕ್ತಿಯ ಉದ್ಧಾರ, ಸಮಾಜದ ಉದ್ಧಾರ ಮನೋನಿಗ್ರಹದಿಂದ.
  • ಭಗವಂತನಲ್ಲಿ ಭಕ್ತಿ ಇದ್ದವರಿಗೆ ಮನೋನಿಗ್ರಹ ಸುಲಭ. ಸಮಸ್ಯೆಗಳು ಬೇಗ ಬಗೆಹರಿಯುತ್ತವೆ.
  • ಮನೋನಿಗ್ರಹ ಕಷ್ಟ, ಆದರೆ ಸಾಧ್ಯ.
  • ಮನೋನಿಗ್ರಹಕ್ಕೆ ಕುಶಲತೆ ಬೇಕು, ಎಚ್ಚರ ಬೇಕು, ವಿನೋದ ಪ್ರಜ್ಞೆ ಬೇಕು, ಹೃದಯವಂತಿಕೆ ಬೇಕು, ಚತುರತೆ ಬೇಕು, ತಾಳ್ಮೆ ಬೇಕು, ಸೋಲುಗಳ ಸಮ್ಮುಖದಲ್ಲಿಯೂ ಎದೆಗುಂದದ ಧೀರೋದಾತ್ತತೆ ಬೇಕು.
  • ಮನಸ್ಸನ್ನು ಅಭ್ಯಾಸ ಮತ್ತು ವೈರಾಗ್ಯದಿಂದ ನಿಗ್ರಹಿಸಬಹುದು ಗೀತೆ 6.35 ಇದೇ ಅಭ್ಯಾಸಯೋಗ.
  • ಬಂಧನ ಹಾಗೂ ಬಿಡುಗಡೆ ಮನಸ್ಸಿಗೆ ಸಂಬಂಧಿಸಿದ್ದು.
  • ಮನೋನಿಗ್ರಹವನ್ನು ಸಾಧಿಸುವುದು ಹೇಗೆ?
1. ದೃಢ ಸಂಕಲ್ಪ ಬೆಳೆಸಿಕೊಳ್ಳಿ.
2. ಮನಸ್ಸಿನ ಸ್ವರೂಪವನ್ನು ಅರ್ಥಮಾಡಿಕೊಳ್ಳಿ.
3. ತಂತ್ರಗಳನ್ನು ತಿಳಿದುಕೊಂಡು ಬಳಸುವುದನ್ನು ಕಲಿಯಿರಿ.​
2. ಸಂಕಲ್ಪ ಶಕ್ತಿಯನ್ನು ದೃಢಪಡಿಸಿಕೊಳ್ಳುವುದು ಹೇಗೆ.
  • ವಿಷಯ ಸುಖವನ್ನು ನಿಗ್ರಹಿಸಿ ಹಾಗೂ ತ್ಯಜಿಸಿ.
  • ಮಾನಸಿಕ ಧೈರ್ಯವನ್ನು ಗಳಿಸಿಕೊಳ್ಳಿ.
  • ಸಂಕಲ್ಪವನ್ನು ದುರ್ಬಲಗೊಳಿಸುವ ಕಾರಣಗಳನ್ನು ನಿವಾರಿಸಿಕೊಳ್ಳಿ. ಧೈರ್ಯವನ್ನು ತಂದುಕೊಳ್ಳಿ.
  • ಸೋಲುಗಳ ಬಗ್ಗೆ ಕಳವಳಪಡಬೇಡಿ.
  • ಮನಸ್ಸನ್ನು ಗೆಲ್ಲುವುದು ಅತ್ಯಂತ ದುಸ್ತರವಾದ ಕೆಲಸ.
 
3. ಮನೋನಿಗ್ರಹದ ಅಭಾವದಿಂದ ಸಂಭವಿಸುವ ಅಪಾಯಗಳು.
1. ಬುದ್ಧಿಭ್ರಮಣೆ ಮತ್ತು ಇತರೆ ದುರದೃಷ್ಟಕರ ಸಂಗತಿಗಳು.
2. ವ್ಯಕ್ತಿತ್ವದ ಸಮಗ್ರತೆಗೆ ಧಕ್ಕೆ ತರುತ್ತದೆ.
3. ಮಾನಸಿಕ ವಿಘಟನೆ, ಮನೋವಿಕಾರಗಳಿಗೆ ದಾರಿ. ಮನೋರೋಗ.
4. ಮನಶ್ಯಾಂತಿ ಇರುವುದಿಲ್ಲ. ಸುಖ ಇನ್ನೆಲ್ಲಿಯದು.
  • ಮನೋನಿಗ್ರಹದ ಪರಮಸ್ಥಿತಿ ಎಂದರೆ ಆಧ್ಯಾತ್ಮಸಿದ್ಧಿ.
  • ನಿಗ್ರಹಕ್ಕೆ ಬಂದ ಮನಸ್ಸನ್ನು ಸುಲಭವಾಗಿ ಏಕಾಗ್ರಗೊಳಿಸಬಹುದು. ಏಕಾಗ್ರತೆಯಿಂದ ಜ್ಞಾನೋದಯ ಮತ್ತು ಈ ಜ್ಞಾನವೇ ಶಕ್ತಿ.
  • ಮನೋನಿಗ್ರಹದಿಂದ ವ್ಯಕ್ತಿತ್ವಕ್ಕೆ ಸಮಗ್ರತೆ ಬರುತ್ತದೆ. ಅದರಿಂದ ಶಾಂತಿ, ಶಾಂತಿಯಿಂದ ಚಿತ್ತಸ್ವಾಸ್ಥ್ಯ, ಚಿತ್ತಸ್ವಾಸ್ಥ್ಯದಿಂದ ಸುಖ, ಗುಣಮಟ್ಟ ಸುಧಾರಣೆ ಮತ್ತು ಅಭಿವೃದ್ಧಿ. ಸುವ್ಯವಸ್ಥೆ, ಸಂತೋಷ, ಸಂಸ್ಕೃತಿ, ಮಾನವೀಯ ಸಂಬಂಧಗಳು.
  • ಮನೋನಿಗ್ರಹದಿಂದ ಮಾನಸಿಕ ಮತ್ತು ದೈಹಿಕ ಜಾಡ್ಯಗಳಿಂದ ಮುಕ್ತನಾಗುತ್ತಾನೆ.
5. ಉದಾತ್ತಭಾವನೆ ಸ್ಥಾಯಿಯಾಗುತ್ತವೆ.
6. ಸುಪ್ತ ಶಕ್ತಿಗಳು ಜಾಗೃತವಾಗುತ್ತವೆ.
7. ಉದಾತ್ತ ಸ್ಥಿತಿಗೆ ಏರಬಹುದು.
  • ಅಂಥಹ ವ್ಯಕ್ತಿಗೆ ಅಭ್ಯುದಯ ತಾನಾಗಿಯೇ ಒಲಿದುಬರುತ್ತದೆ.
  • ದೃಢವಾದ ಸಂಕಲ್ಪ ಮತ್ತು ಇಚ್ಛಾಶಕ್ತಿಯನ್ನು ಗಳಿಸಿಕೊಳ್ಳಬೇಕಾದರೆ, ಮತ್ತೆ ಮತ್ತೆ ಮನಸ್ಸನ್ನು ಆ ದಿಕ್ಕಿನಲ್ಲಿ ಪ್ರತಿಬೋಧಿಸಬೇಕಾಗುತ್ತದೆ.
 
4. ಸುಖಾಪೇಕ್ಷೆಗಳನ್ನು ಮೀರುವುದು ಹೇಗೆ?
  • ಮನಸ್ಸಿನ ನಿಗ್ರಹಕ್ಕೆ ವಿಷಯಾಪೇಕ್ಷೆಯನ್ನು ಮೀರಿನಿಲ್ಲಬೇಕು. ಅದನ್ನು ಅತಿಪ್ರಯಾಸದಿಂದ ಬಿಡಿಸಿಕೊಳ್ಳಬಹುದು.
  • ಸುಖಸಂತೋಷ ಬಯಸುವುದು ತಪ್ಪಲ್ಲ. ಧರ್ಮ ವಿರುದ್ಧವಾದ ಸಂತೋಷಗಳಿಗೆ ಆಶಿಸುವುದು ತಪ್ಪು.
  • ಸುಖಾಪೇಕ್ಷೆಯನ್ನು ನಿಗ್ರಹಿಸಲು ಮನಸ್ಸನ್ನು ಹಂತಹಂತವಾಗಿ ತಿದ್ದಬೇಕು. ಅಗತ್ಯವಿದ್ದಷ್ಟನ್ನು ಮಾತ್ರಾ ಅಪೇಕ್ಷಿಸಬೇಕು.
  • ಸುಖಾಪೇಕ್ಷೆ ನಿನ್ನ ಮಾನಸಿಕ ಹಾಗೂ ಶಾರೀರಿಕ ಸೌಖ್ಯವನ್ನು ಹಾಳು ಮಾಡುವಂತಿರಬಾರದು. ನಿನ್ನ ಉರ್ಧ್ವಗಮನಾಭಿಷೆಯನ್ನು ಕುಂಠಿತಗೊಳಿಸುವಂತಿರಬಾರದು.
  • ಸುಖಾಪೇಕ್ಷೆಯು ಆತ್ಮಹಾನಿಗೆ ದಾರಿಯಾಗಬಾರದು.
  • ಆನಂದದಲ್ಲಿ ಮೂರು ಬಗೆ, ವಿಷಯಾನಂದ, ಭಜನಾನಂದ, ಬ್ರಹ್ಮಾನಂದ, ಅದಕ್ಕೆ ಶ್ರದ್ಧೆ, ಸಾಧನೆ ಬೇಕು.
  • ವಿಷಯಸುಖ ನೈತಿಕ ಕಟ್ಟುಪಾಡನ್ನು ಮೀರಬಾರದು.
  • ಕ್ರಮಕ್ರಮವಾಗಿ ಅದನ್ನು ಮೀರಿ ಭಜನಾನಂದದ ಕಡೆಗೆ ತಿರುಗಿಸಬೇಕು.
  • ನಿರಂತರ, ಪ್ರಾಮಾಣಿಕ ಪ್ರಯತ್ನದಿಂದ ಮುಂದೆ ಅದು ಬ್ರಹ್ಮಾನಂದದ ಅನ್ವೇಷಣೆಯಲ್ಲಿ ಮುಂದುವರಿಯಬೇಕು.
  • ಬ್ರಹ್ಮಾನಂದದ ಸುಖದ ಅರಿವಾಯಿತೆಂದರೆ ಲೌಕಿಕ ಸುಖ ಬೇಕೆನಿಸುವುದಿಲ್ಲ.
  • ರಾಗ-ಭಾವಗಳು (ಅರಿಷಡ್ವರ್ಗಗಳು) ವಿಷಯಸುಖದ ಕಡೆಗೆ ತಿರುಗದೆ ದೇವರ ಕಡೆಗೆ ತಿರುಗಬೇಕು. ಇದು ರಾಗ-ಭಾವಗಳ ಸುಧಾರಣೆಯಲ್ಲ-ಪರಿವರ್ತನೆ.
  • ರಾಗ-ಭಾವಗಳನ್ನು ಶುದ್ಧಗೊಳಿಸಿ, ಅವುಗಳನ್ನು ಮೇಲ್ಮುಖವಾಗಿ ತಿರುಗಿಸಿದರೆ ನಾವೂ ಮೇಲಾದವರಾಗುತ್ತೇವೆ.
  • ಆಸೆಗಳು, ಉದ್ದೇಶಕ್ಕೆ ಅನುಸಾರವಾಗಿ, ಶತ್ರುಗಳೂ ಆಗಬಹುದು, ಮಿತ್ರರೂ ಆಗಬಹುದು. ಆಸೆಗಳು ಬಿಡುಗಡೆಯ ಸಾಧನೆಗಳಾದರೆ ಆನಂದ ಪ್ರಾಪ್ತವಾಗುತ್ತದೆ.
  • ದೇಹ ಮನಸ್ಸುಗಳೇ ತಾನಲ್ಲ. ಸ್ವಭಾವತಃ ಆನಂದವನ್ನು ಕೊಡುವ ಆತ್ಮವೇ ತಾನು. ಆನಂದ ಸುಖ-ದುಃಖಗಳ ಆಚೆ ಇದೆ. ಮನುಷ್ಯನ ಮೂಲಭೂತ ಅನ್ವೇಷಣೆಯೇ ಚಿರಸ್ಥಾಯಿ ಆನಂದಕ್ಕೆ.
  • ನಿಜವಾದ ಸುಖ ಲೌಕಿಕ ಸುಖಕ್ಕಿಂತ ಬೇರೆಯಾದದ್ದು. ಇದು ತಿಳಿಯಲು ಮನಸ್ಸು ಸಂಪೂರ್ಣವಾಗಿ ಹತೋಟಿಗೆ ಬರಬೇಕು.
 
5. ಮನಸ್ಸಿನ ಸ್ವಭಾವ : ಹಿಂದೂ ದೃಷ್ಟಿಕೋನ
  • ಮನಸ್ಸು ಸ್ಥೂಲಶರೀರದ ಒಳಗೆ ಇರುವ ಸೂಕ್ಷ್ಮವಾದ ಅಂಗ.
  • ಮನಸ್ಸಿನ ಹಿಂದೆ ಆತ್ಮ ಇದೆ. ಅದೇ ವ್ಯಕ್ತಿಯ ನಿಜವಾದ ಅಸ್ತಿತ್ವ. ಆತ್ಮಕ್ಕೆ ಶರೀರ ಮತ್ತು ಮನಸ್ಸು ಮೂಲ ದ್ರವ್ಯಗಳು. ಮನಸ್ಸು ಆತ್ಮ ಅಲ್ಲ. ಶರೀರ ಮತ್ತು ಮನಸ್ಸು ಪೂರಕ-ಪ್ರೇರಕ. ಅನ್ನವೇ ಮನಸ್ಸಾಗುತ್ತದೆ. ಆದಕಾರಣ ಸಾತ್ವಿಕ ಆಹಾರವನ್ನೇ ಸೇವಿಸಬೇಕು.
  • ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ.
  • ಮನಸ್ಸು ಅನ್ನಮಯ, ಪ್ರಾಣವು ಅಪೋಮಯ, ವಾಕ್ಕು ತೇಜೋಮಯ.
  • ಆತ್ಮ ನಿತ್ಯಮುಕ್ತ, ಶಾಶ್ವತ, ಶುದ್ಧ ಚೈತನ್ಯ.
  • ಮನಸ್ಸು ನಿರಂತರ ಬದಲಾಗುತ್ತಿರುತ್ತದೆ. ಮನಸ್ಸಿಗೆ ಸ್ವತಂತ್ರ ಅಸ್ತಿತ್ವವಿಲ್ಲ ಆದರೆ ಅದರ ಸಾಮರ್ಥ್ಯ ಅಸಂಖ್ಯ.
  • ಮನಸ್ಸು ಅರಿವಿನ ಪರಿಣಾಮಕಾರಿಯಾದ ಒಂದು ಉಪಕರಣ. ಮನಸ್ಸಿಗೆ ಒಂದು ಪ್ರತ್ಯೇಕವಾದ ಅಸ್ತಿತ್ವವಿಲ್ಲ. ಅದಕ್ಕೆ ಅನೇಕ ಸಾಮರ್ಥ್ಯಗಳಿವೆ.
  • ಮನಸ್ಸಿಗೆ ಮೂರು ಸ್ಥರಗಳು-ಗುಣಗಳು-ಸತ್ತ್ವ, ರಜಸ್ಸು, ತಮಸ್ಸು.
* ಸತ್ತ್ವ ಎನ್ನುವುದು ನಮ್ಮನ್ನು ನಿರ್ಮಲತ್ವ, ಜ್ಞಾನ ಹಾಗೂ ಆನಂದಕ್ಕೆ ಕರೆದೊಯ್ಯುವ ಮನಸ್ಸಿನ ಒಂದು ಸಮತೂಕದ ಸ್ಥಿತಿ.
* ರಜಸ್ಸು ಚಟುವಟಿಕೆ, ಆಶೆ, ಅಶಾಂತತೆಗಳ ಕಡೆಗೊಯ್ಯುವ ಪ್ರೇರಕಶಕ್ತಿಯ ಹಿಂದಿರುವ ತತ್ತ್ವ.
* ತಮಸ್ಸು, ಮನಸ್ಸನ್ನು ನಿಷ್ಕ್ರಿಯೆ, ಆಲಸ್ಯ, ಭ್ರಮೆ ಇತ್ಯಾದಿಗಳಿಗೆ ಒಳಪಡಿಸುವ ಜಡಸ್ಥಿತಿಯ ಹಿಂದಿರುವ ತತ್ತ್ವ.
- ತಮಸ್ಸು ಮನಸ್ಸನ್ನು ಕೆಳಮುಖವಾಗಿ ಪ್ರವರ್ತಿಸುವಂತೆ ಮಾಡುತ್ತದೆ.
- ರಜಸ್ಸು ಮನಸ್ಸನ್ನು ಚದುರಿಸಿ ಚಂಚಲವನ್ನಾಗಿ ಮಾಡುತ್ತದೆ.
- ಸತ್ತ್ವವು ಮನಸ್ಸನ್ನು ಮೇಲಿನ ಹಂತಕ್ಕೆ ನಿರ್ದೇಶಿಸುತ್ತದೆ.
  • ಸಂಗತ್ವ, ಕ್ಷಮೆ, ಉದಾರತೆ ಸತ್ತ್ವದ ಪರಿಣಾಮಗಳು, ಆಸೆ, ಕೋಪ, ಲೋಭ ಇತ್ಯಾದಿಗಳು ರಜಸ್ಸಿನ ಪರಿಣಾಮಗಳು. ಜಡತೆ, ಗೊಂದಲ, ಮಂಪರು ತಮಸ್ಸಿನ ಪರಿಣಾಮಗಳು.
  • ಮನಸ್ಸಿನಲ್ಲಿ ಸತ್ತ್ವಗುಣವು ಪ್ರವರ್ತಿಸುವಾಗ ಸದ್ಗುಣಗಳು ಉದಯವಾಗುತ್ತವೆ. ರಜೋಗುಣವು ಪ್ರವರ್ತಿಸುವಾಗ ಅವಗುಣಗಳು ಹುಟ್ಟಿಕೊಳ್ಳುತ್ತವೆ. ತಮೋಗುಣವು ಪ್ರವರ್ತಿಸುವಾಗ ಗುಣಗಳಾಗಲಿ ಅವಗುಣಗಳಾಗಲಿ ಹುಟ್ಟಿಕೊಳ್ಳುವುದಿಲ್ಲ. ಅದರ ಬದಲು ಇಡೀ ಜೀವನವು ನಿರರ್ಥಕವಾಗುತ್ತದೆ.
  • ವ್ಯಕ್ತಿಯ ವರ್ತನೆ ಈ ಗುಣಗಳಿಂದ ನಿರ್ಣಯವಾಗುತ್ತವೆ.
  • ಮನಸ್ಸಿಗೆ ಮೂರು ಸ್ತರಗಳಿವೆ / ಹಂತಗಳಿವೆ.
            - ಪ್ರಜ್ಞೆ (Conscious), ಸುಪ್ತಪ್ರಜ್ಞೆ (Sub-Conscious), ಅಧಿಮಾನಸ ಪ್ರಜ್ಞೆ (Super-Consciousness).
  • ಪ್ರಜ್ಞೆಯ ಹಿಂದೆ `ಅಹಂ’ ಇರುತ್ತದೆ. ಸುಪ್ತಪ್ರಜ್ಞೆಯ ಹಿಂದೆ ಅಹಂ ಇರುವುದಿಲ್ಲ. ಅಧಿಮಾನಸ ಪ್ರಜ್ಞೆಯಲ್ಲಿಯೂ ಅಹಂ ಇರುವುದಿಲ್ಲ. ಮನಸ್ಸು ಮೇಲೇರಿದಂತೆ ಅದು ಅಧಿಮಾನಸ ಪ್ರಜ್ಞೆಯ ಸ್ಥಿತಿಯನ್ನು ತಲುಪುತ್ತದೆ. ಇದೇ ಸಮಾಧಿ ಸ್ಥಿತಿ.
  • ಶುದ್ಧ ಮನಸ್ಸು ಶುದ್ಧ ಬುದ್ಧಿಯೂ ಹೌದು, ಶುದ್ಧ ಆತ್ಮವೂ ಹೌದು.
  • ಯೋಗಶಿದ್ಧಿಯಿಂದ ಸುಪ್ತಪ್ರಜ್ಞೆಯನ್ನು ನಿಯಂತ್ರಿಸಬಹುದು. ಅಧಿಮಾನಸ ಪ್ರಜ್ಞೆಯ ಸ್ತರದಲ್ಲಿ ಮನೋನಿಗ್ರಹ ಸಮಸ್ಯೆಯೇ ಉದ್ಭವಿಸುವುದಿಲ್ಲ. ಪ್ರಜ್ಞೆ ಮತ್ತು ಸುಪ್ತಪ್ರಜ್ಞೆಯಲ್ಲಿ ಮನೋ ನಿಗ್ರಹವಾದರೆ ಅಧಿಮಾನಸ ಪ್ರಜ್ಞೆಯ ಹಂತವನ್ನು ತಲುಪಬಹುದು.
  • ಮನಸ್ಸು ಕ್ರಿಯಾಶೀಲವಾದಾಗ ನಾಲ್ಕು ವಿಧವಾಗಿ ಪ್ರವಹಿಸುತ್ತದೆ. ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ.
* ಮನಸ್ಸು ವಿಷಯದ ಆಗುಹೋಗುಗಳನ್ನು ಪರಿಶೀಲಿಸುವ ಅಂತಃಕರಣ ವೃತ್ತಿ.
* ಬುದ್ಧಿ ಅದೇ ಅಂತಃಕರಣದ ನಿರ್ಣಯಾತ್ಮಕ ಶಕ್ತಿಯ ಒಂದು ವೃತ್ತಿ.
* ಚಿತ್ತ ಅದೇ ಅಂತಃಕರಣದ ಸ್ಮೃತಿರೂಪದ ವೃತ್ತಿ.
* ಅಹಂಕಾರ ಸ್ವಪ್ರಜ್ಞೆಯ ವಿಶಿಷ್ಟ ಲಕ್ಷಣವನ್ನಾಗಿ ಉಳ್ಳ ಅಂತಃಕರಣದ ಒಂದು ವೃತ್ತಿ. ಇವುಗಳು ಕ್ಷಣಮಾತ್ರದಲ್ಲಿ ತಮಗೆ ತಾವೇ ನಡೆಯುವ ಕ್ರಿಯೆಗಳು.
  • ಮನಸ್ಸು ಐದು ಸ್ಥಿತಿಗಳ ಮೂಲಕ ತನ್ನನ್ನು ಪ್ರಕಟಪಡಿಸುತ್ತದೆ. ಕ್ಷಿಪ್ರ, ಮೂಢ, ವಿಕ್ಷಿಪ್ತ, ಏಕಾಗ್ರ ಮತ್ತು ನಿರುದ್ಧ.
  • ಕ್ಷಿಪ್ರ-ಈ ಸ್ಥಿತಿಯಲ್ಲಿ ಮನಸ್ಸು ಇಂದ್ರಿಯಗಳ ನಿಗ್ರಹದಲ್ಲಿರುತ್ತದೆ. ಮನುಷ್ಯ ಇಂದ್ರಿಯಗಳ ದಾಸನಾಗಿರುತ್ತಾನೆ. ಇಲ್ಲಿ ರಜೋಗುಣ ಜಾಸ್ತಿ. ನಿಯಮಿತ ಕೆಲಸ, ತೀವ್ರ ಅಧ್ಯಯನ, ಯೋಗಾಭ್ಯಾಸಗಳಿಂದ ಇದನ್ನು ನಿಗ್ರಹಿಸಬಹುದು.
  • ಮೂಢ-ಯಾವ ಚಟುವಟಿಕೆಗಳೂ ಇಲ್ಲದೆ ಮನಸ್ಸು ತಮೋಗುಣಕ್ಕೆ ಒಳಗಾಗಿರುತ್ತದೆ. ಹೊಯ್ದಾಟ, ಖಿನ್ನತೆ, ವಿಷಣ್ಣತೆ ಈ ಗುಂಪಿಗೆ ಸೇರಿವೆ. ಇದನ್ನು ಚರ್ಚೆ ಉಪಚಾರಗಳ ಮೂಲಕ ಪರಿಹರಿಸಿಕೊಳ್ಳಬಹುದು.
  • ವಿಕ್ಷಿಪ್ತ-ಸತ್ತ್ವ ಮತ್ತು ರಜೋಗುಣ ಸಮಪ್ರಮಾಣದಲ್ಲಿರುತ್ತವೆ. ತತ್ವಜ್ಞಾನಿಗಳು, ಪಂಡಿತರು, ವಿಜ್ಞಾನಿಗಳು, ಕಲಾವಿದರು, ಮುತ್ಸದ್ದಿಗಳು ಮುಂತಾದವರಲ್ಲಿ ಈ ಸ್ಥಿತಿ ಹೆಚ್ಚಿನ ಮಟ್ಟದಲ್ಲಿರುತ್ತದೆ. ಏಕಾಗ್ರತೆ ಸಾಧಿಸಲು ಇದು ಉತ್ತಮ ಸ್ಥಿತಿ. ನಿರಂತರ ಸಾಧನೆಗೆ ಇದು ಉತ್ತಮ ಹಂತ.
  • ಏಕಾಗ್ರ-ವಿಕ್ಷಿಪ್ತಕ್ಕಿಂತ ಉತ್ತಮ. ಆಸೆಗಳು ಇರುವುದಿಲ್ಲ. ಮನಸ್ಸು ಶಾಂತ, ಏಕಮುಖ, ಸತ್ವಗುಣ ಪ್ರಧಾನ. ಬ್ರಹ್ಮಚರ್ಯ ಮತ್ತು ನಿರಂತರ ಸಾಧನೆಯಿಂದ ಈ ಸ್ಥಿತಿ ತಲುಪಬಹುದು. ಆಧ್ಯಾತ್ಮಿಕ ಶಕ್ತಿ ವೃದ್ಧಿಸುತ್ತದೆ. ಮಿದುಳನ್ನು ಶಾಂತವಾಗಿಡುತ್ತದೆ. ಇದು ಸಾಮಾನ್ಯ ಏಕಾಗ್ರತೆ ಅಲ್ಲ. ಉನ್ನತ ಧ್ಯಾನ ಸ್ಥಿತಿ.
  • ನಿರುದ್ಧ-ನಿರಂತರ ಸಾಧನೆಯ ಫಲ. ನಿಗ್ರಹಿಸಿದ ಚಿತ್ತವೃತ್ತಿ. ಇದು ಅತೀತ ಪ್ರಜ್ಞೆಯನ್ನು ತಂದುಕೊಡುತ್ತದೆ. ಇಂದ್ರಿಯಗಳು ನಿಯಂತ್ರಣದಲ್ಲಿ ಇರುತ್ತವೆ. ಮನಸ್ಸು ತುಂಬಾ ಶಾಂತ. ಇದು ಅಸಂಪ್ರಜ್ಞಾತ ಸಮಾಧಿ ಎಂದು ಕರೆಯುತ್ತಾರೆ. ವೇದಾಂತಿಗಳು ಇದನ್ನು ನಿರ್ವಿಕಲ್ಪ ಸಮಾಧಿ ಎಂತಲೂ ಕರೆಯುತ್ತಾರೆ.
 
6. ಮನೋನಿಗ್ರಹವನ್ನು ಅನಗತ್ಯವಾಗಿ ಕಷ್ಟಕರವನ್ನಾಗಿ ಮಾಡಿಕೊಳ್ಳದಿರುವುದು ಹೇಗೆ.
  • ಮನೋನಿಗ್ರಹಕ್ಕೆ ಅಗತ್ಯವಾದದ್ದು ಒಂದು ದೃಢವಾದ ಸಂಕಲ್ಪ.
  • ಅನೈತಿಕ ಜೀವನಪದ್ಧತಿಯಿಂದ ಖಂಡಿತವಾಗಿಯೂ ಮನೋನಿಗ್ರಹ ಅಸಾಧ್ಯ ಮದ್ಯಪಾನ, ಧೂಮಪಾನ, ಹೆಚ್ಚು ತಿನ್ನುವ, ಮಲಗುವ, ನಿದ್ರೆಯನ್ನೇ ಮಾಡದಿರುವ, ಅಶಿಸ್ತಿನ ಜೀವನವನ್ನು ನಡೆಸುವ ವ್ಯಕ್ತಿಗೆ ಮನೋನಿಗ್ರಹ ಸಾಧ್ಯವಿಲ್ಲ.
  • ಅನಗತ್ಯ ದೇಹದಂಡನೆ, ಶಕ್ತಿಯ ದುರ್ವ್ಯಯ, ಬಲವಂತ ಮೌನವ್ರತ ಹಾಗೂ ಸ್ವಪ್ರತಿಷ್ಠಾನಿರತರಿಗೆ ಮನೋನಿಗ್ರಹ ಸುಲಭವಾಗುವುದಿಲ್ಲ.
  • ತಮ್ಮ ಮಿತಿಗಳನ್ನು ಅರಿಯದೆ ಕೇವಲ ಮಹತ್ವಾಕಾಂಕ್ಷೆ ಆಗಿರುತ್ತಾರೋ, ಯಾರು ಇನ್ನೊಬ್ಬರ ಏಳಿಗೆಯನ್ನು ಸಹಿಸುವುದಿಲ್ಲವೋ ಅವರು ಮನಸ್ಸನ್ನು ನಿಗ್ರಹಿಸಲು ಅಸಮರ್ಥರು. ಯಾರಿಗೆ ಪಾಪಪ್ರಜ್ಞೆ ಇದೆಯೋ ಅವರಿಗೂ ಮನೋನಿಯಂತ್ರಣ ಅಸಾಧ್ಯ.
  • ಮನೋನಿಗ್ರಹಕ್ಕೆ ದೃಢಸಂಕಲ್ಪದ ಜೊತೆಗೆ ಆತ್ಮವಿಶ್ವಾಸವೂ ಬೇಕು. ಮನಸ್ಸನ್ನು ಮನಸ್ಸಿನಿಂದಲೇ ನಿಗ್ರಹಿಸಬೇಕು. ತಾಳ್ಮೆ, ಬುದ್ಧಿವಂತಿಕೆ, ಉದ್ದೇಶಪೂರ್ವಕ ಶ್ರಮದಿಂದ ಮನೋನಿಗ್ರಹ ಸಾಧ್ಯ.
 
7. ಮಾಡಬೇಕಾದ ಕಾರ್ಯ ಸ್ಪಷ್ಟವಾದ ತಿಳುವಳಿಕೆ ಅಗತ್ಯ
  • ಮಾಡಬೇಕಾದ ಕೆಲಸಕಾರ್ಯಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು, ಹೃತ್ಪೂರ್ವಕ ಒಪ್ಪಿಕೊಳ್ಳಬೇಕು. ತಾಳ್ಮೆ ಬೇಕು. ನಿರಂತರ, ಪ್ರಾಮಾಣಿಕ ಪ್ರಯತ್ನ ಬೇಕು.
 
8. ಅನುಕೂಲಕರವಾದ ಒಂದು ಆಂತರಿಕ ವಾತಾವರಣದ ನಿರ್ಮಾಣ
  • ಮುಪ್ಪು, ರೋಗ, ಸಾವು, ಬದಲಾವಣೆ ಬಂದೇ ಬರುತ್ತವೆ / ಆಗುತ್ತವೆ. ಅವನ್ನು ತಡೆಯಲಾಗದು. ನಮ್ಮ ಹಿಂದಿನ ಕರ್ಮಗಳ ಪರಿಣಾಮ ಇವತ್ತಿನ ಜೀವನ.
  • ಯೌವನದ ಸೊಕ್ಕನ್ನು ಮುಪ್ಪಿನ ಬಗ್ಗೆ ಧ್ಯಾನಿಸುವುದರಿಂದ, ಆರೋಗ್ಯವಂತರೆಂಬ ಹೆಮ್ಮೆಯನ್ನು ರೋಗಗಳ ಬಗ್ಗೆ ಧ್ಯಾನಿಸುವುದರಿಂದ, ವ್ಯಾಮೋಹವನ್ನು ಪ್ರಿಯವಾದ ವಸ್ತುಗಳ ಬದಲಾವಣೆ, ಅಗಲಿಕೆಯ ಬಗ್ಗೆ ಧ್ಯಾನಿಸುವುದರಿಂದ, ಕಡಿಮೆ ಮಾಡಬಹುದು, ಇಲ್ಲವಾಗಿಸಬಹುದು.
 
9. ಆಂತರಿಕ ಶಿಸ್ತಿನ ಎರಡು ಪ್ರಕಾರಗಳು
1. ಸ್ಥಿರವಾದ ಮೂಲಭೂತ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳುವುದು.
2. ಅತ್ಯಂತ ಪ್ರಬಲವಾದ ವಿರೋಧಕಗಳನ್ನು ಅಣಿಗೊಳಿಸಿಕೊಳ್ಳುವುದು, ತಯಾರು ಮಾಡಿಕೊಳ್ಳುವುದು.
  • ಬದುಕನ್ನು ಒಂದು ಶಿಸ್ತುಬದ್ಧ, ರಚನಾತ್ಮಕ ಚಿಂತನೆಯ ಚೌಕಟ್ಟಿನೊಳಗೆ ತಂದುಕೊಳ್ಳುವುದು. ಉತ್ತಮ ವ್ಯವಸ್ಥೆ, ನೈತಿಕ ಹೊಣೆಗಾರಿಕೆ ಇರುವ ಜೀವನವನ್ನು ರೂಢಿಸಿಕೊಳ್ಳಬೇಕು. ಬದುಕಿಗೆ ಸಾಮಂಜಸ್ಯ (ಛಂದೋಬದ್ಧತೆ) ಬೇಕು.
  • ಮನಸ್ಸನ್ನು ಸ್ವಾಧೀನಕ್ಕೆ ತಂದುಕೊಳ್ಳಬೇಕಾದರೆ ಮನಸ್ಸಿನ ಚಾಂಚಲ್ಯವನ್ನು ತಡೆಗಟ್ಟಬೇಕು.
  • ಮನಸ್ಸಿಗೆ ಆಶೆಯ ಹೆಂಡ ಕುಡಿಸಬೇಡಿ. ಈರ್ಷೆ ಎಂಬ ಚೇಳು ಕಡಿಯಲು ಬಿಡಬೇಡಿ. ಅಹಂಕಾರ ಎಂಬ ದೆವ್ವ ಮೆಟ್ಟಿಕೊಳ್ಳಲು ಬಿಡಬೇಡಿ. ಆಗ ಮನಸ್ಸನ್ನು ನಿಗ್ರಹಿಸಬಹುದು.
  • ಮನಸ್ಸಿನ ಚಾಂಚಲ್ಯವೇ ಅದರ ಮಾಲಿನ್ಯ.
 
10. ಮನಸ್ಸು ಪರಿಶುದ್ಧವಾದಷ್ಟೂ ಅದರ ನಿಗ್ರಹ ಸುಲಭ.
  • ಮನಸ್ಸಿನ ಪರಿಶುದ್ಧತೆಗೆ ಆದ್ಯತೆಯನ್ನು ಕೊಡಿ. ಮನಸ್ಸಿನ ಮಾಲಿನ್ಯವನ್ನು ಶಿಸ್ತುಗಳ ಅನುಸರಣೆಯಿಂದ ನಿಗ್ರಹಿಸಬಹುದು.
  • ಅಸೂಯೆ, ದ್ವೇಷ, ಕ್ರೋಧ, ಭಯ, ಈರ್ಷೆ, ಕಾಮ, ಲೋಭ, ಕಾಪಟ್ಯ, ಪ್ರಲೋಭನೆಗಳ ಪ್ರೇರಣೆ, ಆವೇಗ, ಭಾವನೆಗಳೇ ಮಾಲಿನ್ಯಗಳು.
 
11. ಮನಃಪ್ರವೃತ್ತಿಯನ್ನು ಬದಲಾಯಿಸುವ ಕ್ರಮ.
  • ಮನಸ್ಸಿಗೆ ಆರೋಗ್ಯಕರವಾದ ಆಹಾರವನ್ನು ಒದಗಿಸುವುದರ ಮೂಲಕ ಮನಸ್ಸಿನ ಮಾಲಿನ್ಯವನ್ನು ಕ್ರಮೇಣ ಕಡಿಮೆ ಮಾಡಬಹುದು.
  • ರಜ, ತಮೋಗುಣಗಳನ್ನು ದೂರವಿರಿಸಿ ಸತ್ವ ಪ್ರಕಾಶಿಸುವಂತೆ ಪ್ರಯತ್ನಿಸಬೇಕು. ಕೊನೆಗೆ ಸತ್ವವನ್ನೂ ಮೀರಿ ಸ್ಥಿತಪ್ರಜ್ಞತೆಯನ್ನು ಸಾಧಿಸಬೇಕು.
  • ತಿನ್ನುವ ಅನ್ನ ಮೂರು ವಿಧವಾಗಿ ಪರಿವರ್ತನೆಗೊಳ್ಳುತ್ತದೆ. ಸ್ಥೂಲ ಮಲವಾಗುತ್ತದೆ. ಮಧ್ಯಮ ಧಾತು ಮಾಂಸವಾಗುತ್ತದೆ. ಸೂಕ್ಷ್ಮಧಾತು ಮನಸ್ಸಾಗುತ್ತದೆ. ಆದಕಾರಣ ಸಾತ್ವಿಕ ಆಹಾರವನ್ನು ಉಣ್ಣಬೇಕು.
  • ಆಸಕ್ತಿ, ಜಿಗುಪ್ಸೆ, ಭ್ರಾಂತಿ ಹುಟ್ಟಿಸುವ, ರಜೋ-ತಮ ಗುಣಗಳ ಆಹಾರವನ್ನು ತ್ಯಜಿಸಬೇಕು. ಆಹಾರ ಪಾನೀಯಗಳ ಬಗ್ಗೆ ಎಚ್ಚರ ವಹಿಸಬೇಕು.
  • ಹಾಗೆಯೇ ಇತರ ಇಂದ್ರಿಯಗಳ ಮೂಲಕ ಸೇವಿಸುವ ಆಹಾರದ ಬಗ್ಗೆಯೂ ಜಾಗ್ರತೆಯಿಂದಿರಬೇಕು.
  • ಆಹಾರದ ಗುಣಧರ್ಮದ ಮೇಲೆ ಅವರ ಮನೋಧರ್ಮ ವೃದ್ಧಿಯಾಗುತ್ತದೆ. ದೈಹಿಕ ಮತ್ತು ಮಾನಸಿಕ ಪ್ರವೃತ್ತಿ / ಸ್ವಭಾವವನ್ನು ಖಂಡಿತವಾಗಿ ಬದಲಾಯಿಸಿಕೊಳ್ಳಬೇಕು.
  • ರಜಸ್ಸು ಮತ್ತು ತಮಸ್ಸು ಆಧಿಪತ್ಯ ಸ್ಥಾಪಿಸಲು ಬಿಡಬಾರದು. ಅರಿಷಡ್ವರ್ಗಗಳನ್ನು ನಿಗ್ರಹಿಸಬೇಕು.
  • ಪ್ರಸನ್ನತೆ, ಆತ್ಮಾನುಭವ, ಶಾಂತಿ, ಆಹ್ಲಾದ, ಆನಂದ ತಂದುಕೊಡುವ ದೈವನಿಷ್ಠೆ ವಿಶುದ್ಧ ಸತ್ತ್ವದ ಲಕ್ಷಣಗಳು.
  • ಮನಸ್ಸನ್ನು ನಿಗ್ರಹಿಸುವ ಸಾಮರ್ಥ್ಯವೂ ನಮ್ಮೊಳಗೇ ಸ್ವಭಾವಸಿದ್ಧವಾಗಿದೆ.
  • ಈ ಗುಣಗಳು ಮನಸ್ಸಿಗೆ ಸಂಬಂಧಿಸಿವೆ, ಆತ್ಮಕ್ಕಲ್ಲ. ಸತ್ವದಿಂದ ಉಳಿದ ಎರಡನ್ನೂ ಕಡಿಮೆ ಮಾಡಬಹುದು.
  • ಶಾಸ್ತ್ರಗಳು, ನೀರು, ಜನ, ಸ್ಥಳ, ಕಾಲ, ಕಾರ್ಯ, ಹುಟ್ಟು, ಧ್ಯಾನ, ಮಂತ್ರ ಮತ್ತು ಶುದ್ಧೀಕರಣ, ಇವು ಹತ್ತು ಕಾರಣಗಳು-ಇವುಗಳಿಂದ ಸತ್ತ್ವವನ್ನು ವೃದ್ಧಿಸಿಕೊಳ್ಳಬೇಕು.
  • ಸತ್ತ್ವ ಕೂಡಾ ಬ್ರಹ್ಮಜ್ಞಾನವನ್ನು ತಂದುಕೊಡುವುದಿಲ್ಲ, ಸಾಧಕನು ಸತ್ತ್ವವನ್ನೂ ಮೀರಿ ದೈವ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸಬೇಕು, ಸ್ಥಿತಪ್ರಜ್ಞನಾಗಬೇಕು.
 
12. ಮನೋನಿಗ್ರಹದಲ್ಲಿ ಸಾಧುಸಂತರ ಸಂಗ ತುಂಬಾ ಸಹಾಯಕಾರಿ.
  • ಮೇಲೆ ಹೇಳಿದ ಮಾರ್ಗ ಕಷ್ಟಕರ. ಇನ್ನೊಂದು ಸುಲಭ ಮಾರ್ಗ ಇದೆ. ಅದೇ ಸಾಧುಸಂತರ ಸಂಗ.
  • ಯೋಗ, ವಿವೇಚನೆ, ದೈವಭಕ್ತಿ, ವೇದಾಭ್ಯಾಸ, ಕಠಿಣವ್ರತ, ವಿರಕ್ತಿ, ಅಗ್ನಿಹೋತ್ರದಂಥ ಆಚರಣೆಗಳು, ಲೋಕ ಸಂಗ್ರಹಕಾರ್ಯಗಳು, ದಾನಧರ್ಮಗಳು, ರಹಸ್ಯಮಂತ್ರಗಳು, ತೀರ್ಥಕ್ಷೇತ್ರಗಳು, ನಿರ್ದಿಷ್ಟ ಹಾಗೂ ನೀತಿನಿಯಮಗಳು; ಇವುಗಳನ್ನೂ ಮೀರಿದ್ದು ಸಾಧು ಸಂಗ. ಏಕೆಂದರೆ ಸಾಧು ಸಂಗದಿಂದ ಎಲ್ಲಾ ಆಸಕ್ತಿಗಳು ವಿಮೋಚನೆಗೊಳ್ಳುತ್ತವೆ.
  • ಸಾಧುಗಳ ಪಾವಿತ್ರ್ಯದ ಭಾವತರಂಗಗಳು ವ್ಯಕ್ತಿಗಳ ವ್ಯಕ್ತಿತ್ವವನ್ನು ಪರಿವರ್ತಿಸುತ್ತದೆ.
  • ಸಾಧುಸಂತರ ಸಹವಾಸದಿಂದ ಮನೋನಿಗ್ರಹ ಸುಲಭಸಾಧ್ಯ.
  • ಸಾಧು ಸಂತರ ಸಹವಾಸ ಸಿಗದಿದ್ದರೆ ಕಠಿಣ ವಿಧಾನಗಳಿಂದ ಮನೋನಿಗ್ರಹ ಸಾಧಿಸಬೇಕು.
 
13. ಸತ್ತ್ವಗುಣದ ಶುದ್ಧೀಕರಣ ಹೇಗೆ?
  • ಮಿಥ್ಯೆಯನ್ನು ವರ್ಜಿಸುತ್ತಾ, ಆತ್ಮನ ಸತ್ಯ ಸ್ವರೂಪವನ್ನು ಕುರಿತ ಗಾಢವಾದ ಧ್ಯಾನದಿಂದ (ಭಗವಂತನ ಧ್ಯಾನದಿಂದ) ಸತ್ತ್ವವು ಶುದ್ಧೀಕರಣಗೊಳ್ಳುತ್ತದೆ.
  • ಮನಸ್ಸು ಭಗವಂತನಲ್ಲಿ ನೆಲೆಗೊಂಡರೆ, ವಾಸನೆಗಳು ಕಡಿಮೆಯಾಗುತ್ತವೆ.
  • ಮನಸ್ಸಿನ ವಿನಾಶ ಎಂದರೆ, ಮನಸ್ಸಿನ ನಷ್ಟವಲ್ಲ, ಆದರೆ ಅದರ ಶುದ್ಧೀಕರಣ. ಬಯಕೆಗಳನ್ನು ಇರಿಸಿಕೊಂಡರೆ ಮನೋನಿಗ್ರಹ ಅಸಾಧ್ಯ.
  • ನಾನು, ನನ್ನದು ಎಂಬ ಭಾವನೆಯನ್ನು ಆತ್ಮನಿಷ್ಠೆ (ಭಗವನ್ನಿಷ್ಠೆ)ಯ ಮೂಲಕ ತೊಲಗಿಸಬೇಕು.
 
14. ಮನೋನಿಗ್ರಹಕ್ಕೆ ತಳಹದಿ ಯಾದ ಯೋಗಾಭ್ಯಾಸಗಳು
  • ಅಷ್ಟಾಂಗ ಯೋಗದಲ್ಲಿ ಎಂಟು ಅಂಗಗಳು-ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ.
  • ಯಮ-ಅಹಿಂಸಾ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ-ನೈತಿಕ ಸೂತ್ರಗಳು.
  • ನಿಯಮ-ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣೀಧಾನ-ವೈಯಕ್ತಿಕ ನಡುವಳಿಕೆಗೆ ಸೂತ್ರಗಳು.
  • ಆಸನ-180 ಆಸನಗಳು 600 ಭಂಗಿಗಳು-ಲಘುತ್ವಕ್ಕಾಗಿ.
  • ಪ್ರಾಣಾಯಾಮ-ಮೂರು ಹಂತಗಳು-ಪೂರಕ, ರೇಚಕ, ಕುಂಭಕ, ಹತ್ತಾರು ವಿಧಾನಗಳು.
  • ಪ್ರತ್ಯಾಹಾರ-ಇಂದ್ರಿಗಳ ನಿಗ್ರಹ.
  • ಧಾರಣ-ಒಂದೇ ವಿಷಯದ ಮೇಲೆ ಗಮನವನ್ನು ಕೇಂದ್ರೀಕರಿಸುವುದು.
  • ಧ್ಯಾನ-ಮನಸ್ಸನ್ನು ಏಕಾಗ್ರಗೊಳಿಸಿ ಭಗವಂತನನ್ನು ಧ್ಯಾನಿಸುವುದು. ಧ್ಯಾನದಲ್ಲಿ ಎರಡು ಬಗೆ-ಸಾಕಾರ, ನಿರಾಕಾರ.
  • ಸಮಾಧಿ-ಧ್ಯಾನಾವಸ್ಥೆಯ ತುಟ್ಟ ತುದಿಯನ್ನು ಮುಟ್ಟಿ ಆನಂದವನ್ನು ಅನುಭವಿಸುವುದು, ಜೀವನ್ಮುಕ್ತಿ ಪಡೆಯುವುದು, ಸಾಕ್ಷಾತ್ಕಾರವನ್ನು ಗಳಿಸುವುದು. ಸಮಾಧಿಯಲ್ಲಿ ಎರಡು ಬಗೆ-ಸಂಪ್ರಜ್ಞಾತ ಮತ್ತು ಅಸಂಪ್ರಜ್ಞಾತ ಅಥವಾ ವಿಕಲ್ಪ ಮತ್ತು ನಿರ್ವಿಕಲ್ಪ.
  • ಮನಸ್ಸಿನ ಪ್ರಶಾಂತಸ್ಥಿತಿಗೆ ಹೀಗೆ ಮಾಡಬೇಕು.
  • ಸುಖವನ್ನು ಅನುಭವಿಸುತ್ತಿರುವ ಸಮಸ್ತ ಪ್ರಾಣಿಗಳೊಂದಿಗೂ ಮೈತ್ರಿಯನ್ನು ಬೆಳೆಸಿಕೊಳ್ಳಬೇಕು.
  • ದುಃಖಿಗಳ ವಿಚಾರದಲ್ಲಿ ಕರುಣೆಯನ್ನು ತಾಳಬೇಕು.
  • ಪುಣ್ಯಾತ್ಮರಲ್ಲಿ ಹರ್ಷವನ್ನು ಬೆಳೆಸಿಕೊಳ್ಳಬೇಕು.
  • ಪಾಪಾತ್ಮರಲ್ಲಿ ಉದಾಸೀನತೆಯನ್ನು ತಾಳಬೇಕು.
  • ಹೃದಯ ವೈಶಾಲ್ಯದ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು.
  • ಕೆಟ್ಟಜನರ ಸಹವಾಸದಿಂದ ದೂರವಿರಬೇಕು. ದುರ್ಜನರ ಸಂಗದಿಂದ ದೂರವಿರುವುದು ಮನೋನಿಗ್ರಹಕ್ಕೆ ಅನುಕೂಲಕರ.
  • ಸಾಧುಸಂತರ ಸಂಗ ಅತ್ಯಂತ ಪ್ರಯೋಜನಕಾರಿ. ಅವರ ಸಂಗ ಬಂಧನವನ್ನು ಕಳಚುತ್ತದೆ.
 
15. ವಿವೇಚನಾಶೀಲತೆಯಿಂದ ಆಗುವ ಪ್ರಯೋಜನ.
  • ಯಾವುದು ಸರಿ ಯಾವುದು ತಪ್ಪು, ಯಾವುದು ಒಳ್ಳೆಯದು, ಯಾವುದು ಕೆಟ್ಟದು, ಯಾವುದು ಸತ್ಯ ಯಾವುದು ಮಿಥ್ಯ ಎಂಬ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು. ಇದು ಆತ್ಮ ವಿಮರ್ಶೆಯೂ ಆಗಿರುತ್ತದೆ.
  • ಲೋಕವಿಷಯಗಳ ಅನಿತ್ಯತೆಯನ್ನು ಗುರುತಿಸುತ್ತಾ ನಿತ್ಯವೂ, ಸತ್ಯವೂ ಹಾಗೂ ಅನಂತವೂ ಆದ ಭಗವಂತನನ್ನು ಧ್ಯಾನಿಸುತ್ತಾ ಇರಬೇಕು.
 
16. ಮನಸ್ಸನ್ನು ಸರಿಯಾಗಿ ವರ್ತಿಸುವಂತೆ ಸಜ್ಜುಗೊಳಿಸುವ ಕ್ರಮ.
  • “ನಾನು ಈ ಮನಸ್ಸಲ್ಲ. ಆದರೆ ಮನಸ್ಸು ಯೋಚಿಸುವ ಕ್ರಿಯೆಯನ್ನು ಅದು ವರ್ತಿಸುವ ಕ್ರಮವನ್ನು ನೋಡುವ ಸಾಕ್ಷಿ ನಾನು”, ಎಂದು ಗ್ರಹಿಸಬೇಕು. ಮನಸ್ಸು ಹೇಳಿದಂತೆ ಕುಣಿಯದೆ, ಬುದ್ಧಿಪೂರ್ವಕವಾಗಿ ನಡೆಯಬೇಕು. ದಿನದಿಂದ ದಿನಕ್ಕೆ ನಿನ್ನ ಆಲೋಚನೆ ಹಾಗೂ ಭಾವನೆಗಳೊಂದಿಗೆ ನಿನಗಿರುವ ಅವಿನಾಭಾವವು ಕಡಿಮೆಯಾಗುತ್ತಾ, ಕೊನೆಗೆ ನಿನ್ನ ಮನಸ್ಸಿನಿಂದ ನಿನ್ನನ್ನು ಸಂಪೂರ್ಣವಾಗಿ ಬೇರ್ಪಡಿಸಿಕೊಂಡು, ವಾಸ್ತವದಲ್ಲಿ ನೀನು ಮನಸ್ಸಿಗಿಂತ ಬೇರೆಯೇ ಆದ ಅಸ್ತಿತ್ವ ಉಳ್ಳವನೆಂದು ಅರಿತುಕೊಳ್ಳುತ್ತೀಯ.
  • ನಾವು ಪ್ರತಿದಿನವೂ ಈ ನಮ್ಮ ಮನಸ್ಸನ್ನು ಕಣ್ಣಿಟ್ಟು ಕಾಯ್ದುಕೊಳ್ಳಬೇಕು.
 
17. ಪ್ರಾಣಾಯಾಮದ ಅಭ್ಯಾಸ
  • ಪ್ರಾಣಾಯಾಮ ಅಥವಾ ಶ್ವಾಸೋಚ್ಚ್ವಾಸವನ್ನು ನಿಯಂತ್ರಿಸುವುದು ಮನೋನಿಗ್ರಹಕ್ಕೆ ಅತ್ಯಂತ ಅಗತ್ಯ. ಪ್ರಾಣಾಯಾಮ ಮನಸ್ಸನ್ನು ನಿಗ್ರಹಿಸುತ್ತದೆ.
  • ಪ್ರಾಣಾಯಾಮವನ್ನು ಗುರುವಿನಿಂದ ಕಲಿತು, ಸ್ವಚ್ಛ ವಾತಾವರಣದಲ್ಲಿ ಅದರ ಅಭ್ಯಾಸ ಮಾಡಬೇಕು.
 
18. ಪ್ರತ್ಯಾಹಾರದ ಅಭ್ಯಾಸ
  • ಮನಸ್ಸನ್ನು ಒಂದು ವಸ್ತುವಿನ ಮೇಲೆ ಕೇಂದ್ರೀಕರಿಸುವುದು ಪ್ರತ್ಯಾಹಾರ.
  • ಮನಸ್ಸು ಸದಾ ಇಂದ್ರಿಯಗಳ ಕಡೆಗೆ ಧಾವಿಸುತ್ತಿರುತ್ತದೆ. ಮನಸ್ಸನ್ನು ವಿಷಯಗಳ ಸಂಪರ್ಕದಿಂದ ವಿಮುಖಗೊಳಿಸಬೇಕು. ಮನಸ್ಸು ನಿಯಂತ್ರಣಕ್ಕೆ ಒಳಪಟ್ಟರೆ ಇಂದ್ರಿಯಗಳೂ ನಿಯಂತ್ರಿಸಲ್ಪಡುತ್ತವೆ.
  • ಪ್ರತ್ಯಾಹಾರದ ಇಡೀ ರಹಸ್ಯವಿರುವುದು ಮನಸ್ಸಿನ ಸಂಕಲ್ಪಶಕ್ತಿಯಲ್ಲಿ. ಪ್ರತ್ಯಾಹಾರದಿಂದ ಸಂಕಲ್ಪಶಕ್ತಿಯೂ, ಸಂಕಲ್ಪಶಕ್ತಿಯಿಂದು ಪ್ರತ್ಯಾಹಾರವೂ ಪರಸ್ಪರ ವೃದ್ಧಿಗೊಳ್ಳುತ್ತವೆ.
 
19. ಮಾನವೀಯ ಸಂಬಂಧಗಳ ಸಾಮರಸ್ಯದ ಮಹತ್ವ
  • ಮನೋನಿಗ್ರಹವನ್ನು ಸಾಧಿಸಲು ಬಯಸುವವರು, ಘನವಾದ ಉದ್ದೇಶಗಳಿಗೆ ಬಳಸಬೇಕಾದ ಮನಸ್ಸಿನ ತುಂಬ, ದುರ್ಭಾವನೆಗಳನ್ನು, ಕುಂದುಕೊರತೆಗಳನ್ನು ತಪ್ಪು ಆವೇಗಗಳನ್ನು ತುಂಬಿಕೊಳ್ಳಬಾರದು. ಇತರರ ಬಗ್ಗೆ ನಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ, ಅಸಂಗತ್ವವನ್ನೂ, ಕ್ಷಮೆಯನ್ನೂ, ವಿನಯವನ್ನೂ, ರೂಢಿಸಿಕೊಳ್ಳುತ್ತಾ, ಮಾನವೀಯ ಸಂಬಂಧಗಳನ್ನು ವೃದ್ಧಿಸಿಕೊಳ್ಳಬೇಕು.
  • ಛಿದ್ರವಾದ ಮನಸ್ಸನ್ನು ನಿಗ್ರಹಿಸುವುದು ಕಷ್ಟ. ಆರೋಗ್ಯಕರ ಮನಸ್ಸನ್ನು ನಿಯಂತ್ರಿಸುವುದು ಸುಲಭ. ಕ್ಷಮಾಗುಣವೇ ತಪಸ್ಸು.
 
20. ಮನಸ್ಸಿನ ಆರೋಗ್ಯಕ್ಕೆ ಅಗತ್ಯವಾದ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು.
  • ಆಲಸ್ಯ ಮನಸ್ಸು ದೆವ್ವದ ಕಾರಸ್ಥಾನ. ನಾವು ಮನಸ್ಸನ್ನು ಸದಾ ಆರೋಗ್ಯಕರವಾದ ಮತ್ತು ಸೃಜನಾತ್ಮಕವಾದ ಚಟುವಟಿಕೆಗಳಲ್ಲಿ ತೊಡಗಿಸಬೇಕು.
  • ವಿವೇಕಿಯಾದವನು ತನ್ನ ಆಲೋಚನೆಯನ್ನೂ ಕಾಯ್ದುಕೊಳ್ಳಬೇಕು.
  • ವಿಶೇಷಾಭಿಮುಖಿಯಾದವನನ್ನೂ, ಅವನು ಎಷ್ಟೇ ವಿದ್ವಾಂಸನಾಗಿದ್ದರೂ, ಕ್ಲೇಶಕ್ಕೆ ಗುರಿಮಾಡುತ್ತದೆ.
  • ಮನಸ್ಸು ಆರೋಗ್ಯಪೂರ್ಣವಾದ ಹವ್ಯಾಸಗಳಲ್ಲಿ ತೊಡಗಿಸುವುದು ಎಂದೂ ಬೇಸರದ ಸಂಗತಿಯಾಗಬಾರದು.
  • ದಾನ, ಕರ್ತವ್ಯಪರತೆ, ನಿರ್ದಿಷ್ಟವಾದ ಮತ್ತು ಸಾರ್ವತ್ರಿಕವಾದ ವ್ರತಗಳ ಆಚರಣೆ, ಶಾಸ್ತ್ರಶ್ರವಣ, ಸತ್ಕಾರ್ಯನಿರ್ವಹಣೆ ಮನೋನಿಗ್ರಹಕ್ಕೆ ನೆರವಾಗುತ್ತವೆ. ಮನೋನಿಗ್ರಹವೇ ಯೋಗದ ಮೂಲ ಆಶಯ.
 
21. ಕಲ್ಪನಾಶಕ್ತಿಯ ಉಚಿತವಾದ ಬಳಕೆಯ ಮಹತ್ವ
  • ಕಲ್ಪನಾಶಕ್ತಿ ಎಂಬುದು ಮನುಷ್ಯನಿಗೆ ದೇವರಿತ್ತ ವರ. ಅದರ ಸದ್ಬಳಕೆ ಆಗಬೇಕು. ಕಲ್ಪನಾಶಕ್ತಿಯಿಂದ ಇಲ್ಲದಿರುವ ಸಮಸ್ಯೆಗಳನ್ನು ಊಹಿಸಿಕೊಂಡು ಒದ್ದಾಡುತ್ತೇವೆ. ನಮ್ಮ ನಿರೀಕ್ಷೆ ಕಾಲ್ಪನಿಕ ಆಗಿರಬಹುದು. ಆದರೆ ಅವುಗಳು ಉಂಟು ಮಾಡುವ ತಲ್ಲಣಗಳು ಮಾತ್ರಾ ನಿಜವಾಗಿರುತ್ತವೆ.
  • ಕಲ್ಪನಾಶಕ್ತಿಯನ್ನು ಸರಿಯಾಗಿ ಬಳಸಿದರೆ, ಅದು ತುಂಬಾ ಆಪ್ತವಾಗುತ್ತದೆ.
  • ಭಗವಂತನ ಚಿಂತೆಯೇ ಅತ್ಯಂತ ಪರಿಶುದ್ಧವಾದ ಕಲ್ಪನೆ. ಅದು ನಮ್ಮ ಮನಸ್ಸಿನ ತಲ್ಲಣಗಳನ್ನು ಕಡಿಮೆ ಮಾಡುತ್ತದೆ.
 
22. ಧ್ಯಾನದ ಮಹತ್ವ
  • ಭಗವಂತನನ್ನು ಕುರಿತ ಧ್ಯಾನವೇ ಮನೋನಿಗ್ರಹಕ್ಕೆ ಅತ್ಯಂತ ಪರಿಣಾಮಕಾರಿಯಾದ ಮಾರ್ಗ. ಯಾರು ಯಾವುದನ್ನು ಕುರಿತು ಧ್ಯಾನಿಸುತ್ತಾರೋ, ಅವರು ಅದೇ ಆಗುತ್ತಾರೆ. (ಇದು ಐಕ್ಯ ಚಿಂತನೆ. ಇದನ್ನು ಕೆಲವು ಮತಾಚಾರ್ಯರು ಒಪ್ಪುವುದಿಲ್ಲ. ಅವರ ಪ್ರಕಾರ ನಾವು ಭಗವಂತನನ್ನು ಕುರಿತು ಧ್ಯಾನಿಸಿದರೆ, ಅವನ ಅನುಗ್ರಹಕ್ಕೆ ಪಾತ್ರರಾಗುತ್ತೇವೆ.)
  • ಮನೋನಿಗ್ರಹ ಮತ್ತು ಧ್ಯಾನ ಒಟ್ಟೊಟ್ಟಿಗೇ ಆಗಬೇಕು. ಮನೋನಿಗ್ರಹ ಮಾಡಿಕೊಂಡು ನಂತರ ಧ್ಯಾನ ಪ್ರಾರಂಭಿಸುತ್ತೇನೆಂದರೆ ಆಗದು. ಮನಸ್ಸಿನಲ್ಲಿ ಭಗವಂತನನ್ನು ತುಂಬಿಕೊಳ್ಳಿ. ಅವನನ್ನು ಕುರಿತು ಧ್ಯಾನಿಸಿ. ಮನಸ್ಸು ಶುದ್ಧವಾಗುತ್ತದೆ ಮತ್ತು ವಶಕ್ಕೆ ಬರುತ್ತದೆ.
 
23. ನೈರಾಶ್ಯದಿಂದ ಪಾರಾಗುವ ಬಗೆ
  • ಮೇಲಿನ ಸೂತ್ರಗಳನ್ನು ಸಾಧಕನು ನಿರಂತರವಾಗಿ ಅಭ್ಯಾಸ ಮಾಡಬೇಕು. ನಿರಾಶೆ ಆಧ್ಯಾತ್ಮದ ಪರಮಶತ್ರು.
  • ಮಾನಸಿಕ ದಾರುಣ ಸ್ಥಿತಿಯಲ್ಲಿ, ನಾವು ನಮ್ಮ ಮನಸ್ಸಿನಿಂದಾಚೆ ಒಬ್ಬ ಪ್ರೇಕ್ಷಕನಂತೆ ನಿಂತು, ಅದನ್ನು ಕಣ್ಣಿಟ್ಟು ಗಮನಿಸಬೇಕು. ಮನಸ್ಸಿನ ಅವಸ್ಥೆಯೊಂದಿಗೆ ನಮ್ಮನ್ನು ಸಮೀಕರಿಸಿಕೊಳ್ಳಬಾರದು. ನಮ್ಮ ನಿಜವಾದ ಅಸ್ತಿತ್ವ, ನಮ್ಮ ಆತ್ಮವೇ ಹೊರತು ಮನಸ್ಸಲ್ಲ.
  • ನಾವು ಕುಗ್ಗಿದ ಸ್ಥಿತಿಯಲ್ಲಿದ್ದಾಗ, ನಕಾರಾತ್ಮಕ ಭಾವನೆಗಳನ್ನು ನಮ್ಮ ಎಲ್ಲಾ ಶಕ್ತಿಯನ್ನು ಬಳಸಿ ಹೊಡೆದೋಡಿಸಬೇಕು.
 
24. ತುರ್ತು ನಿಯಂತ್ರಣದ ವಿಧಾನಗಳು
  • ಮನೋನಿಗ್ರಹಕ್ಕೆ ತೊಡಕುಂಟುಮಾಡುವ ಪ್ರತಿಕೂಲ ಭಾವನೆಗಳು ಉದ್ಭವಿಸಿದಾಗ, ಅವುಗಳಿಗೆ ಪ್ರತಿಪಕ್ಷವಾಗುವಂತಹ ಆಲೋಚನೆಗಳನ್ನು ಎದುರಾಗಿ ಸಂಯೋಜಿಸಬೇಕು.
  • ವಿಷಯಸುಖದ ದಾಳ ನಮ್ಮ ಮೇಲೆ ಆಗುವಾಗ, ಅದಕ್ಕೆ ಪ್ರತಿಯಾಗಿ ಪರಿಶುದ್ಧ ಅಲೆಯೊಂದನ್ನು ಎಬ್ಬಿಸಬೇಕು. ನಾವು ನಮ್ಮ ಮನಸ್ಸಿನ ಆಲೋಚನೆ ಹಾಗೂ ಭಾವನೆಗಳ ಮೇಲೆ ಸದಾ ಒಂದು ಕಣ್ಣಿಟ್ಟಿರಬೇಕು.
  • ನೀವು ಮನಸ್ಸಿಗೆ ಏನನ್ನು ಕಲಿಸುತ್ತೀಯೋ, ಅದನ್ನು ಅದು ಕಲಿಯುತ್ತದೆ. ಮನಸ್ಸನ್ನು ಸದ್ಭಾವನೆಗಳಿಂದ ತುಂಬಿಕೊಳ್ಳಬೇಕು.
  • ನಾನು, ನನ್ನದು ಎಂಬ ಅಹಂಕಾರದಿಂದ ಬೇರ್ಪಡಿಸಿಕೊ. ಚಂಚಲವಾದ ಮನಸ್ಸನ್ನು ನಿಗ್ರಹಿಸಬಹುದು.
 
25. ನಿರ್ದೇಶಿತ ಆಲೋಚನೆ
  • ಪ್ರಲೋಭನೆ, ಕಾಮ, ಕ್ರೋಧ, ಲೋಭ, ಮುಂತಾದವುಗಳನ್ನು ಎದುರಿಸಲು ಪರಿಣಾಮಕಾರಿಯಾದ ಉಪಾಯಗಳಿವೆ.
1. ಮಾನಸಿಕ ತುರ್ತು ಪರಿಸ್ಥಿತಿಯಲ್ಲಿ ನೀವು ದೇವರ ಕಡೆ ಧಾವಿಸಿರಿ. ಆತನ ಕರುಣೆ, ಆಶ್ರಯಕ್ಕಾಗಿ ಪ್ರಾರ್ಥಿಸಿರಿ.
2. ಪ್ರಲೋಭನೆಗಳನ್ನು ನಿರಾಕರಿಸಿ, ಪ್ರತಿಭಟನೆಯನ್ನು ಮುಂದುವರಿಸಿ.
3. ಪ್ರಲೋಭನೆಗಳಿಗೆ ಮುಖಾಮುಖಿಯಾಗಬಾರದು ಭಗವಂತನ ಕಡೆಗೆ ಮುಖ ಮಾಡಿ.
4. ನಿಮ್ಮ ಮನಸ್ಸನ್ನು ಒಳ್ಳೆಯ ಹಾಗೂ ಪ್ರಶಂಸನೀಯವಾದ ಸಂಗತಿಗಳ ಕಡೆ ತಿರುಗಿಸಿರಿ. ಮನಸ್ಸನ್ನು ಸದ್ಭಾವನೆಗಳೊಂದಿಗೆ ಸಮೀಕರಿಸಿ. ದುರಾಲೋಚನೆಗಳನ್ನು ಓಡಿಸಿ.
5. ಮನಸ್ಸಿನ ಸೂಕ್ಷ್ಮಾತಿಸೂಕ್ಷ್ಮ ಸೂಚನೆಗಳನ್ನೂ, ಭಾವನೆಗಳನ್ನೂ, ತುಮುಲಗಳನ್ನೂ ಗುರುವಿನೊಂದಿಗೆ (ಆತ್ಮೀಯರೊಂದಿಗೆ) ಹಂಚಿಕೊಳ್ಳಿ.
6. ಆಸೆ-ಆಮಿಷಗಳು ಮುಂದುವರಿದರೆ, ವಿರೋಧವನ್ನು ತೀವ್ರಗೊಳಿಸಿ. ಭಗವಂತನನ್ನು ಮೊರೆಹೋಗಿ. ಭಜನೆ, ನಾಮ ಜಪ ಮಾಡಿ. ದೇವರು ರಕ್ಷಿಸುತ್ತಾನೆಂಬ ನಂಬಿಕೆ ಇರಲಿ.
ಭಗವಂತನಲ್ಲಿ ನಂಬಿಕೆ ಇಲ್ಲದವನು, ತಾನು ಮನಸ್ಸಿನಿಂದ ಬೇರ್ಪಡಿಸಿಕೊಳ್ಳಲಿ, ಮನಸ್ಸಿನಲ್ಲಿ ಉತ್ತಮವಾದ, ಉದಾತ್ತವಾದ ಭಾವನೆಗಳನ್ನು ತಂದುಕೊಂಡು, ಪ್ರಲೋಭನೆಗಳನ್ನು ಎದುರಿಸಲಿ. ಆತ್ಮೀಯರೊಂದಿಗೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಲಿ.
  • ಮನೋನಿಗ್ರಹವನ್ನು ಸಾಧಿಸಬೇಕೆನ್ನುವವನು, ಮನಸ್ಸನ್ನು ಜ್ಯೋತಿಯ ಮೇಲೆ, ವಿಷಯಗಳಿಂದ ವಿಮುಖವಾದ ಚಿತ್ತದ ಮೇಲೆ, ದೇವರ ಮೂರ್ತಿಯ ಮೇಲೆ ನಿಲ್ಲಿಸಿ.
 
26. ನಮ್ಮ ಆಲೋಚನೆಗಳ ನಿಯಂತ್ರಣ-ಒಂದು ರಹಸ್ಯ
  • ಮನೋನಿಗ್ರಹಕ್ಕೆ ಎರಡು ಬಗೆಯ ಶಿಸ್ತು ಬೇಕು.
1. ಅದರಲ್ಲಿ ಮುಖ್ಯವಾದುದೆಂದರೆ ಆಲೋಚನೆಗಳ ನಿಯಂತ್ರಣ.
ನಿಯಂತ್ರಣವೆಂದರೆ ಕೆಟ್ಟ ಅಥವಾ ತಪ್ಪು ವಿಚಾರಗಳನ್ನು ಯೋಚಿಸದಿರುವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದು ಮತ್ತು ಒಳ್ಳೆಯ ವಿಚಾರಗಳನ್ನು ಯೋಚಿಸುವುದು. ಮನಸ್ಸಿನ ಸ್ತರಗಳನ್ನು ಮತ್ತೆ ಮತ್ತೆ ಪರಿಶೀಲಿಸಿ. ಒಳ್ಳೆಯ ವಿಚಾರಗಳನ್ನು ಉತ್ಪಾದಿಸುವುದು ಹೇಗೆ ಎಂದು ತಿಳಿದುಕೊಳ್ಳಬೇಕು. ಆಹಾರ ಶುದ್ಧವಾಗಿರಬೇಕು. ದೈಹಿಕ ಆಹಾರ ಸಾತ್ವಿಕವಾಗಿರಬೇಕು. ಮನಸ್ಸಿಗೆ ಉದಾತ್ತ ಚಿಂತನೆಗಳನ್ನು ತುಂಬಿಕೊಳ್ಳಬೇಕು. ಇಂದ್ರಿಯಗಳನ್ನು ನಿಗ್ರಹಿಸಬೇಕು.
2. ಅಹಂ ಅನ್ನು ತೊರೆಯಿರಿ. ಪ್ರಾಣಾಯಾಮವನ್ನು ದಿನವೂ ತಪ್ಪದೇ ಮಾಡಿಸಿ. ಭಗವಂತನನ್ನು ಧ್ಯಾನಿಸಿರಿ. ನಾವು ಬೇರೆ, ನಮ್ಮ ಮನಸ್ಸು ಮತ್ತು ಆಲೋಚನೆಗಳೇ ಬೇರೆ ಎಂದು ತಿಳಿಯಬೇಕು. ಒಳ್ಳೆಯ ವಿಚಾರ ಮತ್ತು ನಡತೆಯಿಂದ ಒಳ್ಳೆಯರಾಗುತ್ತೀರಿ. ಕೆಟ್ಟ ವಿಚಾರಗಳಿಂದ ಮತ್ತು ಕೆಟ್ಟ ನಡತೆಯಿಂದ ಕೆಟ್ಟವರಾಗುತ್ತೀರಿ.
ದೇವರ ನಾಮಸ್ಮರಣೆ ಮಾಡಿರಿ. (ಓಂ ನಮೋ ನಾರಾಯಣಾಯ / ಓಂ ನಮಃ ಶಿವಾಯ), ಗಾಯತ್ರಿ ಮಂತ್ರ ಜಪ ಮಾಡಿರಿ. `ಓಂ’ಕಾರ ಜಪ ಮಾಡಿರಿ.
ಮನೋನಿಗ್ರಹದಿಂದ ಅಂತರ್ಮುಖತೆ ಮತ್ತು ಏಕಾಗ್ರತೆಗಳು ಸಿದ್ಧಿಸುತ್ತವೆ.
 
27. ಸುಪ್ತಪ್ರಜ್ಞೆಯ ನಿಯಂತ್ರಣ
  • ಮನಸ್ಸಿನ, ಪ್ರಜ್ಞೆ ಮತ್ತು ಸುಪ್ತಪ್ರಜ್ಞೆಯ ವ್ಯತ್ಯಾಸವನ್ನು ತಿಳಿದುಕೊಳ್ಳಿ. ಮೇಲೆ ಹೇಳಿರುವುದೆಲ್ಲಾ ಪ್ರಜ್ಞೆಯ ವಿಚಾರಗಳು.
  • ಪ್ರತಿಯೊಬ್ಬ ವ್ಯಕ್ತಿ ತನ್ನ ಶೈಕ್ಷಣಿಕ ಹಿನ್ನೆಲೆಯಲ್ಲಿ ವರ್ತಿಸುವುದಿಲ್ಲ. ಆದರೆ ಅವನ ಮಾನಸಿಕ ಹಿನ್ನೆಲೆ, ಆಶೆ, ಆಕಾಂಕ್ಷೆಗಳ ಹಿನ್ನೆಲೆಯಲ್ಲಿ ಪ್ರವಹಿಸುತ್ತಾನೆ.
  • ನಮಗೆ ಯಾವುದು ಸರಿ ಎಂದು ಗೊತ್ತಿದ್ದರೂ ಅದರಂತೆ ನಡೆಯುವುದಿಲ್ಲ. ಯಾವುದು ಸರಿಯಲ್ಲ ಎಂದು ಗೊತ್ತಿದ್ದರೂ ಅದರಂತೆ ನಡೆಯುತ್ತೇವೆ. ಪ್ರಜ್ಞೆಯ ಸ್ತರದಲ್ಲಿ ಒಳ್ಳೆಯದೆಂದು ಗೊತ್ತಿದ್ದರೂ, ಸುಪ್ತಪ್ರಜ್ಞೆಯ ಪ್ರಚೋದನೆಯಿಂದ ನಮ್ಮ ನಿರ್ಣಯ / ಅನುಷ್ಠಾನ ದಾರಿ ತಪ್ಪುತ್ತವೆ.
  • ಸುಪ್ತಪ್ರಜ್ಞೆಯನ್ನು ಶುದ್ಧಿಗೊಳಿಸುವ ವಿಧಾನ-ಮನಸ್ಸಿನೊಳಕ್ಕೆ ಶುದ್ಧವೂ, ಪವಿತ್ರವೂ ಆದ ವಿಚಾರಗಳನ್ನು ನಿರಂತರವಾಗಿ ತುಂಬಿಕೊಳ್ಳುತ್ತಿರಬೇಕು. ಅವು ಸುಪ್ತಪ್ರಜ್ಞೆಗೆ ಇಳಿಯುವಂತೆ ನೋಡಿಕೊಳ್ಳಬೇಕು. ಈ ಪ್ರಯತ್ನ ಸತತವಾದರೆ ಮನಸ್ಸನ್ನು ನಿಯಂತ್ರಿಸುವುದು ಕಷ್ಟವಾಗಲಾರದು.
  • ಮನೋನಿಗ್ರಹಕ್ಕೆ ಅನಾನುಕೂಲವಾದವುಗಳನ್ನು ಕಡಿಮೆ ಮಾಡಿಕೊಳ್ಳುತ್ತಾ, ಅನುಕೂಲವಾದ ಪ್ರವೃತ್ತಿಗಳನ್ನು ಹೆಚ್ಚು ಮಾಡಿಕೊಳ್ಳಬೇಕು.
  • ಅಧಿಮಾನಸ ಪ್ರಜ್ಞೆಯ ಬಗ್ಗೆ ತಿಳಿದುಕೊಂಡು, ಪ್ರಾಣಾಯಾಮ, ಧ್ಯಾನಗಳಿಂದ ಇದು ಸಾಧ್ಯ. ಭಗವಂತನನ್ನು ನಿರಂತರವಾಗಿ ಚಿಂತಿಸಿ, ಪ್ರೀತಿಸಿ.
  • ಮನುಷ್ಯ ತನ್ನ ಮೇಲೆ ತನ್ನ ಪ್ರಭುತ್ವವನ್ನು ಗಳಿಸಿಕೊಳ್ಳಬೇಕು. ವ್ಯಕ್ತಿತ್ವವನ್ನು ಪುನಶ್ಚೇತನಗೊಳಿಸಿಕೊಳ್ಳಬೇಕು.
  • ಭಕ್ತಿ ಮಾರ್ಗದಿಂದಲೂ (ಜಪ, ಧ್ಯಾನ) ಮನೋನಿಗ್ರಹ ಸಾಧ್ಯ.
 
28. ಮನಸ್ಸಿನ ಈ ಕುಟಿಲೋಪಾಯದ ಬಗ್ಗೆ ಎಚ್ಚರವಾಗಿರು.
  • ಮನಸ್ಸು ಏನೇನೋ ತಂತ್ರಗಳನ್ನು ಹೂಡುತ್ತದೆ. ಸುಪ್ತಪ್ರಜ್ಞೆಯ ಜಾಗ್ರತ ಪ್ರಜ್ಞೆಯನ್ನು ಪ್ರವರ್ತಿಸುತ್ತದೆ. ಹಾಗಾಗಿ ಪ್ರಲೋಭನೆಗಳಿಗೆ, ದೌರ್ಬಲ್ಯಗಳಿಗೆ ಸಿಕ್ಕು ಒದ್ದಾಡುತ್ತೇವೆ, ತಳಮಳಗೊಳ್ಳುತ್ತೇವೆ.
  • ಇದಕ್ಕೆ ಇರುವ ದಾರಿ - `ಈ ಒಂದು ಕ್ಷಯದ ಹೃದಯದಲ್ಲಿ ಅನಂತ ಕಾಲವಿದೆ’ ಎಂದು ತಿಳಿದುಕೊಳ್ಳುವುದು (ಜರ್ಮನ್ ಅನುಭಾವಿ ಮೆಂಯಿಸ್ಚರ್ ಎಕ್‌ಹಾರ್ಟ್). ಪ್ರಸ್ತುತ ಕ್ಷಣವನ್ನು ನಾವು ನಮ್ಮದಾಗಿಸಿಕೊಳ್ಳುವುದಾದರೆ ನಾವು ನಮ್ಮ ಇಡೀ ಭವಿಷ್ಯವನ್ನು ಸ್ವಾಧೀನಕ್ಕೆ ತೆಗೆದುಕೊಂಡಂತೆಯೇ.
  • ಒಳ್ಳೆಯವನಾಗಿರು, ನಿಜವಾಗಿಯೂ ನೈತಿಕವಾಗಿರು, ತತ್‌ಕ್ಷಣದಲ್ಲಿ ನಮ್ಮ ಮೇಲೆ ನಾವು ಪ್ರಭುತ್ವವನ್ನು ಗಳಿಸಿಕೊಳ್ಳಬೇಕು.
 
29. ದೈವಶ್ರದ್ಧೆಯುಳ್ಳವರಿಗೆ ಮನೋನಿಗ್ರಹ ಸುಲಭ.
  • ದೇವರಲ್ಲಿ ಗಾಢವಾದ ಹಾಗೂ ಪ್ರಾಮಾಣಿಕವಾದ ಶ್ರದ್ಧೆಯನ್ನು ಬೆಳೆಸಿಕೊಂಡರೆ ಮನೋನಿಗ್ರಹಕ್ಕೆ ನೆರವು ಒದಗಿಬರುತ್ತದೆ.
  • ಯಾವಾಗ ಕಾಮಕ್ರೋಧಾದಿಗಳು ಇಲ್ಲವಾಗುತ್ತವೆಯೋ ಆಗ ಮನಸ್ಸು ಪರಿಶುದ್ಧ ಆಗುತ್ತದೆ. ಶುದ್ಧವಾದ ಮನಸ್ಸನ್ನು ನಿಯಂತ್ರಣಕ್ಕೆ ತರುವುದು ಸುಲಭ.
  • ದೈವೀಶ್ರದ್ಧೆಯಿಂದ ಚಿತ್ತಶುದ್ಧಿ, ಇಂದ್ರಿಯನಿಗ್ರಹ, ಕ್ರೋಧರಾಹಿತ್ಯ, ಶ್ರಮ, ನಿಶ್ಚಲತೆಗಳು ಸುಲಭವಾಗುತ್ತವೆ.
 
30. ಮನಸ್ಸನ್ನು ನಿಗ್ರಹಿಸಲು ಇರುವ ಅತ್ಯಂತ ಸರಳ ಹಾಗೂ ಖಚಿತವಾದ ವಿಧಾನ.
  • ವಿಷಯಸುಖವನ್ನು ದೂರೀಕರಿಸಿ, ದೈವೀಪ್ರೇಮ ವೃದ್ಧಿಸಲು ನಾಮಜಪಮಾಡಿ, ಪ್ರಾರಂಭದ ಹಂತದಲ್ಲಿ ಸ್ವಲ್ಪ ಜಪ ಮಾಡಿ ದಿನಕಳೆದಂತೆ ಹೆಚ್ಚಿಸಿ.
  • ಮನಸ್ಸು ನಿರ್ಮಲವಾದರೆ, ನಿಯತ ವೇಳೆಗಳಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರೆ, ಅದು ಮನೋನಿಗ್ರಹಕ್ಕೆ ಸಹಕಾರಿಯಾಗುತ್ತದೆ.
  • ಸಾಧು ಸಂಗ, ನಾಮಜಪ, ಮಹಾಪುರುಷರ ಜೀವನ ಮತ್ತು ಸಾಧನೆಗಳ ಅಧ್ಯಯನ, ಶ್ರವಣ, ಧಾರ್ಮಿಕ ಆಚರಣೆಗಳು, ಆರಾಧನೆ, ಭಜನೆ ಇತ್ಯಾದಿಗಳ ಮೂಲಕ ಭಗವತ್ ಪ್ರೇಮವನ್ನು ಹೆಚ್ಚಿಸಿಕೊಳ್ಳಬೇಕು.
  • ಮನಸ್ಸು ನಿಶ್ಚಲವಾಗಿ ನಿಂತಾಗ, ಆನಂದದ ಅನುಭವವಾಗುತ್ತದೆ.
  • ಮನೋನಿಗ್ರಹಕ್ಕೆ ಸುಲಭವಾದ ಮಾರ್ಗವೆಂದರೆ ಭಗವತ್ ಪ್ರೀತಿ.
 
ಸಾರಾಂಶ
  • ಮನೋನಿಗ್ರಹ ಕಷ್ಟದ ಕೆಲಸ, ಆದರೆ ಅಸಾಧ್ಯವಾದುದೇನೂ ಅಲ್ಲ.
  • ಮನೋನಿಗ್ರಹದ ರಹಸ್ಯ-ಅಭ್ಯಾಸ ಮತ್ತು ವೈರಾಗ್ಯ.
  • ಮನೋನಿಗ್ರಹಕ್ಕೆ ಸಂಕಲ್ಪಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು.
  • ಸುಖಾಪೇಕ್ಷೆಗಳನ್ನು ತ್ಯಜಿಸಿ, ಮನೋನಿಗ್ರಹದ ವಿಧಾನಗಳನ್ನು ತಿಳಿದುಕೊಳ್ಳಬೇಕು.
  • ಮನೋನಿಗ್ರಹಕ್ಕೆ ಎರಡು ಬಗೆಯ ಶಿಸ್ತು ಬೇಕು.
1. ಮನಸ್ಸನ್ನು ಸರಿಯಾದ ದಾರಿಯಲ್ಲಿ ನಿರ್ದೇಶಿಸುವುದು.
2. ಎಂತಹ ತುರ್ತು ಪರಿಸ್ಥಿತಿಯಲ್ಲಿಯೂ ನಮ್ಮನ್ನು ನಾವು ಕಾಯ್ದುಕೊಳ್ಳುವುದು.
  • ಮನಸ್ಸು ಶುದ್ಧವಾದಷ್ಟೂ ನಿಯಂತ್ರಣ ಸುಲಭ.
  • ಸುಲಭ ಉಪಾಯವೆಂದರೆ ಸತ್ಸಂಗ.
  • ಪತಂಜಲಿಯ ಯೋಗಸೂತ್ರಗಳನ್ನು ತಿಳಿದುಕೊಂಡು ಅಭ್ಯಾಸ ಮಾಡಬೇಕು.
  • ಮನಸ್ಸನ್ನು ಆರೋಗ್ಯಕರವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು.
  • ಧ್ಯಾನದಿಂದ ನಿಗ್ರಹ ಸುಲಭ. ನಿರಂತರ ನಾಮಜಪ ಮತ್ತು ಶರಣು.
  • ಹಾನಿಕಾರಕ ಚಿಂತನೆಗಳನ್ನು ಮನಸ್ಸಿನಲ್ಲಿ ತಂದುಕೊಳ್ಳಬಾರದು.
  • ದೇವರಲ್ಲಿ ನಂಬಿಕೆ ಇದ್ದರೆ ನಿಗ್ರಹ ಸುಲಭ.
  • ಮನಸ್ಸನ್ನು ನಿಗ್ರಹಿಸುವ ಸರಳ ಮತ್ತು ಖಚಿತ ವಿಧಾನವೆಂದರೆ ಭಗವತ್ ಪ್ರೇಮ.
 
ಸಾರಾಂಶ- ಡಾ. ಸಿ.ಆರ್. ಗೋಪಾಲ್
0 Comments

Your comment will be posted after it is approved.


Leave a Reply.

    Categories

    All
    Conference
    English Books
    Kannada Articles
    Kannada Books
    Niruta Books
    Others
    Registration
    Social Work
    SWFP
    Women


    Picture

    Social Work Learning Academy

    Join WhatsApp Channel

    Niruta Publications

    Social Workers- Karnataka

    Leaders Talk

    Ramesha Niratanka

    More Details

    Picture

    MHR LEARNING ACADEMY

    Get it on Google Play store
    Download App
    Online Courses

    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups



    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com