Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

Blog 

ಇ.ಎಸ್.ಐ. ಅಧಿನಿಯಮ 1948 ರ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಘಟಕಗಳ ಆಡಳಿತ ಮಂಡಳಿ ಮುಖ್ಯವಾಗಿ ಗಮನಿಸಬೇಕಾದ ಮುಖ್ಯಾಂಶ

1/12/2022

0 Comments

 
Picture
ಪ್ರಶ್ನೆ: ನೀವೇ ಹೇಳಿದಂತೆ ಜನವರಿ 2017 ರಿಂದ ಇ.ಎಸ್.ಐ ವೇತನದ ಮಿತಿಯನ್ನು ಮಾಸಿಕ 21000-00 ರೂಪಾಯಿಗೆ ಹೆಚ್ಚಿಸಿದೆ. ಇಲ್ಲೊಂದು ಉಪ ಪ್ರಶ್ನೆ ನೌಕರನೊಬ್ಬ ಪಡೆಯುತ್ತಿರುವ ವೇತನವು ವೇತನ ವೃದ್ಧಿ, ಬೋನಸ್, ಅಧಿಕ ಕಾರ್ಯ ನಿರ್ವಹಿಸಿದುದಕ್ಕಾಗಿ ಪಡೆದ ಹಣವೂ ಸೇರಿ ತಿಂಗಳ ಒಂದರಲ್ಲಿ 21000-00 ರೂಪಾಯಿಗಿಂತ ಹೆಚ್ಚಾಗಿ ಬಿಟ್ಟರೆ, ಅಂತಹ ಸಂದರ್ಭದಲ್ಲಿ ವಿಮಾದಾರ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆಯೆ?
ಉತ್ತರ: ಅಂದರೆ, ವೇತನ ಮಿತಿಯನ್ನು ಮೀರಿದ ತಕ್ಷಣವೇ ನೌಕರ ವಿಮಾದಾರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ ಎಂಬುದು ನಿಮ್ಮ ಅನಿಸಿಕೆ. ಅದು ಹಾಗಲ್ಲ. ಇ.ಎಸ್.ಐ ಕಾನೂನಿನಂತೆ ವಂತಿಗೆ ಅವಧಿಯನ್ನು ವರ್ಷವೊಂದರಲ್ಲಿ ಎರಡು ಭಾಗವಾಗಿ ವಿಂಗಡಿಸಲಾಗಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಿಂದ ಮಾರ್ಚ್. ವಿಷಯ ಹೀಗಿರುವಾಗ ವಂತಿಗೆಯ ಅವಧಿಯ ಮಧ್ಯದಲ್ಲಿ ವೇತನವು ಹೆಚ್ಚಾದರೂ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯಲಾರರು. ವಂತಿಗೆಯ ಅವಧಿಯು ಮುಗಿಯುವವರೆಗೆ ಅವರು ಮುಂದುವರೆಯುತ್ತಾರೆ. ಅಷ್ಟೇ ಏಕೆ, ಹೆಚ್ಚಾದ ಮೊತ್ತಕ್ಕೂ ವಂತಿಗೆಯನ್ನು ಸಲ್ಲಿಸಬೇಕಾಗುತ್ತದೆ. ಉದಾಹರಣೆಗೆ: ವಂತಿಗೆಯ ಅವಧಿ ಏಪ್ರಿಲ್‌ನಿಂದ ಸೆಪ್ಟೆಂಬರ್ ಮಧ್ಯೆ ಜೂನ್ ತಿಂಗಳಿನಲ್ಲಿ ವೇತನ ವೃದ್ಧಿಯ ಪರಿಣಾಮವಾಗಿ ನೌಕರನೊಬ್ಬನ ವೇತನ ರೂಪಾಯಿ. 22000-00 ಆಗಿಬಿಟ್ಟರೆ, ವಂತಿಗೆಯನ್ನು 22000-00 ಕ್ಕೆ ಸಲ್ಲಿಸಬೇಕು. ಅದಕ್ಕಾಗಿ ವೇತನ ಮಿತಿಯಾದ ರೂಪಾಯಿ. 22000-00 ಗೆ ಮಾಡಲಾಗದು ಎನ್ನುವುದನ್ನು ಪ್ರಮುಖವಾಗಿ ಇಲ್ಲಿ ಗಮನಿಸಬೇಕು. ಮುಂದೆ ವಂತಿಗೆಯ ಅವಧಿ ಮುಗಿಯುತ್ತಲೆ ಆಗಲೂ 21000-00 ಕ್ಕೆ ಹೆಚ್ಚಾಗಿದ್ದರೆ, ಅನಾಯಾಸವಾಗಿ ಅಂತಹ ವಿಮಾದಾರರು ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ.
 
ಪ್ರಶ್ನೆ: ಇ.ಎಸ್.ಐ ಅಧಿನಿಯಮದ ಅಡಿಯಲ್ಲಿ ನೋಂದಾಯಿಸಿಕೊಂಡ ಸಂಸ್ಥೆಯು ಆವಧಿಕವಾಗಿ ಯಾವುದಾದರೂ ವಿವರಗಳನ್ನು ಸಲ್ಲಿಸಬೇಕೆ ?
ಉತ್ತರ: ಹೌದು.
  1. ಪ್ರತಿ ವರ್ಷ 31 ನೆಯ ಜನವರಿಯ ಒಳಗೆ ಕಳೆದ ಕ್ಯಾಲೆಂಡರ್ ವರ್ಷದಲ್ಲಿ ಘಟಕದ ವಿಳಾಸ ಬದಲಾವಣೆಯಾಗಿದ್ದರೆ ಅದರ ಉಲ್ಲೇಖದೊಂದಿಗೆ ಪ್ರಪತ್ರ 01 ‘ಎ’ ಭರ್ತಿಮಾಡಿ ಸಂಬಂಧಪಟ್ಟ ಪ್ರಾದೇಶಿಕ ಅಥವಾ ಉಪ ಪ್ರಾದೇಶಿಕ ಕಾರ್ಯಾಲಯಕ್ಕೆ ಕಳುಹಿಸಿ ಕೊಡಬೇಕು.
  2. ವರ್ಷದ 2 ವಂತಿಗೆಯ ಅವಧಿಗಳಾದ ಏಪ್ರಿಲ್‌ನಿಂದ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಿಂದ ಮಾರ್ಚ್ ಅವಧಿಯ ನಂತರ ಅವಧಿಯು ಮುಕ್ತಾಯವಾದ 42  ದಿನಗಳ ಒಳಗಾಗಿ ಹಣ ಸಂದಾಯ ಮಾಡಿದ ಚಲನ್ ಪ್ರತಿಗಳನ್ನು ಲಗತ್ತಿಸಿ ಸಂಬಂಧಪಟ್ಟ ಶಾಖಾ ಕಛೇರಿಗೆ ಕಳುಹಿಸಿಕೊಡಬೇಕು. ನಿಯಮಗಳು ಹೀಗಿದ್ದರೂ ಇತ್ತೀಚಿನ ದಿನಗಳಲ್ಲಿ ವಂತಿಗೆಯನ್ನು ಆನ್‌ಲೈನ್ ಮುಖಾಂತರ ಸಲ್ಲಿಸುವುದರಿಂದ ಸಂದಾಯದ ವಿವರ ಸಿಸ್ಟಂನಲ್ಲಿ ಗೊತ್ತಾಗಿಬಿಡುತ್ತದೆ. ಹೀಗಾಗಿ ಈ ವ್ಯವಸ್ಥೆ ಈಗ ಮಹತ್ವವನ್ನು ಕಳೆದುಕೊಂಡಿದೆ.
  3. ಇ.ಎಸ್.ಐ ಅಧಿನಿಯಮ 1948 ರ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಘಟಕವು ದುರ್ಘಟನಾ ರಿಜಿಸ್ಟರ್ ಅಂದರೆ ಪ್ರಪತ್ರ 11ನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ಘಟಕ ಅಥವಾ ಸಂಸ್ಥೆಯ ಪರಿಸರವೂ ಸೇರಿದಂತೆ ವಿಮಾದಾರರು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ದುರ್ಘಟನೆಗೆ ತುತ್ತಾದರೆ ಅದರ ವಿವರವನ್ನು ಪ್ರಪತ್ರ 11ರಲ್ಲಿ ಭರ್ತಿಮಾಡಿ 24 ಘಂಟೆಯ ಒಳಗಾಗಿ ಸಂಬಂಧಪಟ್ಟ ಶಾಖಾ ಕಚೇರಿಗೆ ಹಾಗೂ ಅದರ ಒಂದು ಪ್ರತಿಯನ್ನು ಸಂಬಂಧಪಟ್ಟ ಇ.ಎಸ್.ಐ ಚಿಕಿತ್ಸಾಲಯಕ್ಕೂ ಕಳುಹಿಸಿಕೊಡಬೇಕು. ದುರ್ಘಟನೆಯ ವಿವರಗಳನ್ನು ಸುರಕ್ಷಿತವಾಗಿ ಇಟ್ಟುಕೊಂಡಿದ್ದು ಇ.ಎಸ್.ಐ ಇಲಾಖೆಯ ಅಧಿಕಾರಿಗಳು ಪರಿವೀಕ್ಷಣೆಗೆ ಬಂದಾಗ ಪ್ರಸ್ತುತ ಪಡಿಸಬೇಕು. ಅಂದರೆ, ಮುಂದೊಮ್ಮೆ ದುರ್ಘಟನೆಯಿಂದ ವಿಮಾದಾರ ತೀರಿಕೊಂಡರೆ ಅಥವಾ ದುರ್ಘಟನೆಯ ನಂತರ ವಿಕಲಾಂಗನಾದರೆ ಫಲಾನುಭವಗಳಿಗೆ ಈ ದಾಖಲೆಗಳು ಸಹಕಾರಿಯಾಗುತ್ತವೆ. ಇನ್ನೊಂದು ಮಾತಿನಲ್ಲಿ ಹೇಳಬೇಕೆಂದರೆ, ಫಲಾನುಭವಗಳಿಗೆ ಈ ದಾಖಲೆಗಳೇ ಮೂಲ ಆಧಾರಗಳು.
ಈ ವಿವರಗಳನ್ನು ಲಿಖಿತದಲ್ಲಿ ಕಳುಹಿಸಿಕೊಡುವ ಅವಶ್ಯಕತೆ ಇಲ್ಲ. ಯಾಕೆಂದರೆ, ಈಗ ಎಲ್ಲಾ ವಿವರವನ್ನು ಆನ್‌ಲೈನ್ ನಲ್ಲಿ ಕಳುಹಿಸಿಕೊಡುವ ವ್ಯವಸ್ಥೆ ಇದೆ. ಹಾಗೂ ಸಂಪೂರ್ಣ ವಿವರಗಳು ಸಿಸ್ಟಮ್‌ನಲ್ಲಿ ಲಭ್ಯವಿರುವುದರಿಂದ ಮೊದಲಿನಂತೆ ಆವಧಿಕವಾಗಿ ಕಳುಹಿಸಿಕೊಡಲೇಬೇಕು ಎಂಬ ನಿಯಮವಿಲ್ಲ. ಸುಲಭ ಸಂದರ್ಭಕ್ಕಾಗಿ ಇ.ಎಸ್.ಐ. ಇಲಾಖೆಯು ದಾಖಲೆಗಳ ವಿವರಗಳನ್ನು ಪರಿವೀಕ್ಷಿಸಿಕೊಳ್ಳುವುದು.
 
ಪ್ರಶ್ನೆ: ವಿಮಾದರ ಎಷ್ಟು ದಿನಗಳ ನಂತರ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಅರ್ಹನಾಗುತ್ತಾನೆ ?
ಉತ್ತರ: ಇ.ಎಸ್.ಐ ವಿಮಾದಾರನಾಗಿದ್ದು ಕನಿಷ್ಟ 2 ವರ್ಷಗಳವರೆಗೆ ಸೇವೆ ಸಲ್ಲಿಸಿ 156 ದಿನಗಳ ವಂತಿಗೆಯನ್ನು ಸಲ್ಲಿಸಿದ್ದರೆ ಸಾಕು. ಮುಂದುವರೆದ ಕಾಯಿಲೆಯ ನಿಯಮದನ್ವಯ 34 ಕಾಯಿಲೆಗಳಿಗೆ ಗುಣಮುಖವಾಗುವವರೆಗೆ ಅಥವಾ ಗರಿಷ್ಟ 3 ವರ್ಷಗಳವರೆಗೆ ವಿಮಾದಾರರು ಸೇರಿ ಅವಲಂಬಿತ ಕುಟುಂಬದ ಸದಸ್ಯರುಗಳು ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಆಸ್ಪತ್ರೆಗೆ ದಾಖಲಾಗದೇ ಸಾಮಾನ್ಯ ರೋಗಿಯಾಗಿ ಇ.ಎಸ್.ಐ. ಚಿಕಿತ್ಸಾಲಯ ಹಾಗೂ ಆಸ್ಪತ್ರೆಯಲ್ಲಿ ಔಷಧಿ ಪಡೆಯುವುದು ವಿಮಾದಾರನಾದ ದಿನದಿಂದಲೇ ಆರಂಭವಾಗುತ್ತದೆ. ವಿಶೇಷ ಶುಶ್ರೂಷೆಯ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳುವುದಕ್ಕೆ ಮಾತ್ರ ಎರಡು ವರ್ಷ ಕಾಯಬೇಕು.
ಇ.ಎಸ್.ಐ. ಅಧಿನಿಯಮ 1948 ರ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಘಟಕಗಳ ಆಡಳಿತ ಮಂಡಳಿಯು ಪ್ರಮುಖವಾಗಿ ಗಮನಿಸಬೇಕಾದ ಮುಖ್ಯಾಂಶಗಳು
  • ಇ.ಎಸ್.ಐ. ಅಧಿನಿಯಮ ಅನ್ವಯವಾದ 15 ದಿನದ ಒಳಗಾಗಿ ಸಂಬಂಧಪಟ್ಟ ಸಂಸ್ಥೆಯನ್ನು ಆನ್‌ಲೈನ್ ಮುಖಾಂತರ ನೋಂದಾಯಿಸಿಕೊಳ್ಳಬೇಕು.
  • ಮಾಸಿಕ 21,000-00 ರೂಪಾಯಿಯವರೆಗೆ ಸಂಬಳ ಪಡೆಯುತ್ತಿರುವ ಸಿಬ್ಬಂದಿಯನ್ನು ಅವರು ಕೆಲಸಕ್ಕೆ ಸೇರಿದ 10 ದಿನಗಳ ಒಳಗಾಗಿ ಘೋಷಣಾ ಪತ್ರ ಭರ್ತಿ ಮಾಡಿ ಆನ್‌ಲೈನ್ ಮುಖಾಂತರ ದ್ವಿ ಪ್ರತಿಯಲ್ಲಿ ಇ-ಪೆಹಚಾನ ಕಾರ್ಡ್ ಜಾರಿಗೊಳಿಸಬೇಕು. ಕಚೇರಿಯ ದಾಖಲೆಯಾಗಿ ಸುಲಭ ಸಂದರ್ಭಕ್ಕಾಗಿ ಒಂದು ಪ್ರತಿಯನ್ನು ಕಚೇರಿಯಲ್ಲಿ ಇರಿಸಿಕೊಂಡಿರಬೇಕು.
  • ಆಡಳಿತ ಮಂಡಳಿಯು ನೌಕರರ ಸಂಬಳದ 4.75% ನ್ನು ತನ್ನ ಪಾಲಿನ ಹಾಗೂ ನೌಕರರ 1.75% ನ್ನು ಎರಡೂ ಸೇರಿ ಒಟ್ಟು 6.5% ವಂತಿಗೆಯನ್ನು ಆನ್‌ಲೈನ್ ಮುಖಾಂತರ ಆಯಾ ತಿಂಗಳ ಮುಂದಿನ ತಿಂಗಳು 15 ನೆಯ ತಾರೀಖಿನ ಒಳಗಾಗಿ ಸಂದಾಯ ಮಾಡಬೇಕು ವಿಳಂಬವಾದರೆ, ಮುಂದೊಮ್ಮೆ ಬಡ್ಡಿ ಸಮೇತ ದಂಡವನ್ನು ಸಂದಾಯ ಮಾಡಬೇಕಾಗುತ್ತದೆ.
  • ಆಡಳಿತ ಮಂಡಳಿಯು ತನ್ನ ಕಚೇರಿಯಲ್ಲಿ ಒಂದು ದುರ್ಘಟನಾ ರಿಜಿಸ್ಟರನ್ನು ಅನುರಕ್ಷಿಸಬೇಕು. ಕಾರ್ಯ ಕ್ಷೇತ್ರವೂ ಸೇರಿದಂತೆ ಮನೆಯಿಂದ ಬರುವಾಗ ಹಾಗೂ ಕೆಲಸದಿಂದ ಮನೆಗೆ ಮರಳುವಾಗ ದುರ್ದೈವದಿಂದ ದುರ್ಘಟನೆ ನಡೆದರೆ, ಅದರ ವಿವರಗಳನ್ನು ಅನುರಕ್ಷಿತ ರಿಜಿಸ್ಟರ್‌ನಲ್ಲಿ ನಮೂದಿಸಿ ದುರ್ಘಟನೆಯ ವಿವರವನ್ನು ಸಂಬಂಧಪಟ್ಟ ಇಎಸ್‌ಐ ಶಾಖಾ ಕಚೇರಿ ಹಾಗೂ ಅದರ ಒಂದು ಪ್ರತಿಯನ್ನು ಮಾಹಿತಿಗಾಗಿ ಸಂಬಂಧಪಟ್ಟ ಇ.ಎಸ್.ಐ. ಚಿಕಿತ್ಸಾಲಯಕ್ಕೆ ಕಳುಹಿಸಿ ಕೊಡಬೇಕು.
  • ಆಡಳಿತ ಮಂಡಳಿಯು ತನ್ನ ಸಿಬ್ಬಂದಿಯ ಹಾಜರಿ ಪುಸ್ತಕ, ಸಂಬಳ ಬಟವಾಡೆಯ ವಿವರಗಳೂ ಸೇರಿದಂತೆ ತನ್ನೆಲ್ಲ ಹಣಕಾಸಿನ ವಿವರಗಳ ದಾಖಲೆಗಳನ್ನು  ಇ.ಎಸ್.ಐ. ಇಲಾಖೆಯ ಅಧಿಕಾರಿಗಳು ಪರಿವೀಕ್ಷಣೆಗೆ ಬಂದಾಗ ಪ್ರಸ್ತುತಪಡಿಸಿ ಸಹಕರಿಸಬೇಕು.
  • ಆಡಳಿತ ಮಂಡಳಿಯು ತನಗಾಗಿ ನೀಡಿದ ಕೋಡ್ ನಂಬರನ್ನು ನಮೂದಿಸಿಯೇ ಇ.ಎಸ್.ಐ. ಕಚೇರಿಗಳೊಂದಿಗೆ ಪತ್ರ ವ್ಯವಹಾರ ಮಾಡಬೇಕು.
  • ಇ.ಎಸ್.ಐ. ಅಧಿನಿಯಮ 1948 ರ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಸಂಸ್ಥೆಯು ಅಕಸ್ಮಾತ ನಿಂತು ಹೋದರೆ, ದಾಖಲೆಗಳೊಂದಿಗೆ 7 ದಿನಗಳ ಒಳಗಾಗಿ ಸಂಬಂಧಪಟ್ಟ ಶಾಖಾ ಕಚೇರಿ ಹಾಗೂ ಪ್ರಾದೇಶಿಕ ಕಚೇರಿಗೆ ಅದರ ಸೂಚನೆ ನೀಡಬೇಕು. ಇಲ್ಲದೇ ಹೋದರೆ ಮುಂದೊಮ್ಮೆ ಹಿಂದಿನ ಬಾಕಿ ವಸೂಲಿಗಾಗಿ ಸೋಕಾಸ್ ನೋಟೀಸ್ ಜಾರಿಯಾಗುವ ಸಂಭವವಿದೆ.
  • ಇ.ಎಸ್.ಐ. ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಕಾರಿ ಮಂಡಳಿ ಬದಲಾವಣೆಯಾದರೆ, ಸಂಸ್ಥೆಯ ಕಚೇರಿ ಸ್ಥಳಾಂತರಗೊಂಡರೆ, ಉತ್ಪಾದನೆಯ ಪ್ರಕೃತಿ ಹಾಗೂ ಕಾರ್ಯಚಟುವಟಿಕೆಯಲ್ಲಿ ಪರಿವರ್ತನೆಯಾದರೆ ತಕ್ಷಣವೇ ಅದರ ಸೂಚನೆಯನ್ನು ಸಂಬಂಧಪಟ್ಟ ಇ.ಎಸ್.ಐ. ಕಚೇರಿಗೆ ಸೂಚಿಸಬೇಕು.
  • ಇ.ಎಸ್.ಐ. ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಸಂಸ್ಥೆಯು ಬೇರೆಯವರಿಗೆ ಮಾರಾಟವಾದರೆ, ದೇಣಿಗೆಯ ರೂಪದಲ್ಲಿ ಅನ್ಯತ್ರ ಹಸ್ತಾಂತರಗೊಂಡರೆ, ಮಾಲೀಕತ್ವದಲ್ಲಿ ಬದಲಾವಣೆಯಾದರೆ ಅದರ ವಿವರವನ್ನು ಇ.ಎಸ್.ಐ ಕಚೇರಿಗೆ ಸೂಚಿಸಬೇಕು. ಕಾರಣ, ಮುಂದಿನ ಎಲ್ಲ ಆಗು-ಹೋಗುಗಳಿಗೆ ಮುಂದಿನ ಮಾಲೀಕರೆ ಜವಾಬ್ದಾರರಾಗಿರುತ್ತಾರೆ. ಹಿಂದಿನ ಮಾಲೀಕರ ಹೆಸರನ್ನು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು.
  • ಇ.ಎಸ್.ಐ. ವೈದ್ಯಾಧಿಕಾರಿಗಳ ಶಿಫಾರಸಿನ ಅವಧಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಗೂ ಹೆರಿಗೆಯ ರಜೆಯ ಮೇಲಿರುವ ಮಹಿಳಾ ವಿಮಾದಾರರನ್ನು ಕೆಲಸದಿಂದ ತೆಗೆದು ಹಾಕುವ ಅಥವಾ ಅವರ ಸಂಬಳವನ್ನು ಕಡಿತಗೊಳಿಸುವ ಕಾರ್ಯವನ್ನು ಮಾಡಲಾಗದು. ಇದು ಕಾನೂನಿಗೆ ವಿರೋಧವಾದ ಅಂಶವೆಂದು ಪರಿಗಣಿಸಲಾಗುವುದು.
  • ಇ.ಎಸ್.ಐ. ವ್ಯಾಪ್ತಿಗೆ ಒಳಪಟ್ಟ ವಿಮಾದಾರರ ವಂತಿಗೆಯ ಭಾಗವನ್ನು ಮಾತ್ರ ಅವರ ಸಂಬಳದಿಂದ ಕಡಿತಗೊಳಿಸಬೇಕೇ ವಿನಃ ಆಡಳಿತ ಮಂಡಳಿಯು ತನ್ನ ಪಾಲಿನ ವಂತಿಗೆಯ ಭಾಗವನ್ನು ನೌಕರರ ಸಂಬಳದಿಂದ ಪ್ರತ್ಯಕ್ಷ ಅಥವಾ ಪರೋಕ್ಷ ರೂಪದಲ್ಲಿ ಕಡಿತಗೊಳಿಸಲಾಗದು.
ಹೆಚ್ಚಿನ ಮಾಹಿತಿಗಾಗಿ ಈ ಪುಸ್ತಕವನ್ನು ಓದಿ.
ಪುಸ್ತಕವನ್ನು ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:

https://cutt.ly/lIie4YS
Picture
0 Comments

Your comment will be posted after it is approved.


Leave a Reply.

    Categories

    All
    Conference
    Kannada Articles
    Kannada Books
    Others
    Registration
    Social Work
    SWFP
    Women


    Picture

    Inviting Articles

    More details

    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com