ನನಗೆ ನನ್ನದೆ ಮನಸ್ಸಿದೆ
ನನಗೆ ನನ್ನದೆ ಕನಸ್ಸಿದೆ ಮನಸ್ಸು ಕನಸ್ಸಿನ ನಡುವೆ ಅಡೆ ತಡೆ ಬಂದರೆ ನಾ ಕುರುಡನಾಗುವೆ ಸದಾ ಕೇಳುವ ಕಿವಿ, ತೆರೆದ ಮನದಿಂದಿರುವೆ ಕಸ, ಕೊಳೆ ಸದ್ದು ಗದ್ದಲಕ್ಕೆ ಕಿವುಡಾಗುವೆ ನಾ ನಡೆದದ್ದೆ ದಾರಿ ಕಲ್ಲು ಮುಳ್ಳಿದ್ದರೂ ಸರಿ ಅಡ್ಡ ದಾರಿ ಹಿಡಿಯದೆ ತಲುಪುವೆನು ಗುರಿ ರಮೇಶ ಎಂ.ಎಚ್. ನಿರಾತಂಕ
0 Comments
ಕಾಣದ ಕೈಗಿರಲಿ ನಮ್ಮ ನಮನ
ಕಂಡಕಂಡ ಕಡೆ ಏಕೆ ಬೇಕು ಗುಡಿ ಗೋಪುರಗಳೆ ಪ್ರದರ್ಶನ ಗುಡಿಸಲುಗಳೂ ಇಲ್ಲದಿರುವಾಗ ಗುಡಿಗಳು ಏಕೆ ಬೇಕೀಗ ಹೊಟ್ಟೆಗಳಿಗೆ ಹಿಟ್ಟಿಲ್ಲದಿರುವಾಗ ದೇವರುಗಳಿಗೇಕೆ ನೈವೇದ್ಯ ತಪ್ಪು ಮಾಡದಿದ್ದಲ್ಲಿ ಪಶ್ಚಾತ್ತಾಪ ಏಕೆ? ಪಾಪ ಮಾಡದಿದ್ದರೆ ಗುಡಿ ಸುತ್ತ ತಿರಗಲೇಕೆ? ರಮೇಶ ಎಂ.ಎಚ್. ನಿರಾತಂಕ ನನ್ನ ಗುರು
ಜೀವನದ ಉದ್ದ-ಅಗಲ ಅಳೆದು ತೋರಿದವ ಜ್ಞಾನದ ಭಂಡಾರದ ದಾರಿ ತೋರಿದವ ಜೀವನ ಮೌಲ್ಯಗಳ ಮನಕ್ಕೆ ಮೆತ್ತಿದವ ನನ್ನ ವ್ಯಕ್ತಿತ್ವವ ರೂಪಿಸಿದವ ಈ ನನ್ನ ಗುರು ಕಲಿಸಿದವ ಹಲವು ತರಹದ ವಿದ್ಯೆ ಸಮಯಪಾಲನೆ, ಶಿಸ್ತು, ಇಂಗ್ಲೀಷ್, ಕವಿತೆ ಮಾತು, ಶಬ್ದ, ಪ್ರೀತಿ, ಪ್ರೇಮ, ಹೀಗೆ ಅನೇಕ ಪ್ರೀತಿ ಕಣದ ಅವರ ಸಾನಿಧ್ಯ ಬಲು ಮೋಹಕ ಮೊದಲು ನಾನು
ಆಮೇಲೆ ನೀನು ಮನಸ್ಸಲ್ಲಿ ಮೊದಲು ನೀನು ಆಮೇಲೆ ಮಾತಲ್ಲಿ ನಾನು ಮನಸ್ಸಲ್ಲಿ ಮಸೆವ ಕತ್ತಿ ಹೊರಗಡೆ ಹಲ್ಲುಗಿಂಜುವ ಪ್ರವೃತ್ತಿ ರಮೇಶ ಎಂ.ಎಚ್. ನಿರಾತಂಕ ಅವನು ಕಪ್ಪು
ಇವಳು ಬಿಳುಪು ಸೇರಿದರಾಗುವರು ಕಪ್ಪು ಬಿಳುಪು ಅವನಿಗೆ ಅಳಕು ಇವಳಿಗೆ ಬಿಳುಕು ಅವನನ್ನು ಮುಟ್ಟಿ ಕೈ ತೊಳೆಯಬೇಕು ಇವಳನ್ನು ಕೈ ತೊಳೆದು ಮುಟ್ಟಬೇಕು. ಹಣದ ಬಲ ಇವನ ಕಡೆ ಸೌಂದರ್ಯದ ರಾಶಿ ಇವಳೆಡೆ ಹಂಚಿಕೊಳ್ಳಲು ಇಬ್ಬರೂ ರೆಡಿ ಇದ ನೋಡಿ ಮನೆಯವರು ಸಿಡಿ ಮಿಡಿ ಕೊನೆಗೆ ಪ್ರೇಮಿಗಳ ಪಟ್ಟು ನೋಡಿ ಮನೆಯವರೆಂದರು ಹಾಳಾಗಿ ಹೋಗಲಿ ಬಿಟ್ಟು ಬಿಡಿ. ರಮೇಶ ಎಂ.ಎಚ್. ನಿರಾತಂಕ ಆಸ್ತಿಕನೂ ಅಲ್ಲ !
ನಾಸ್ತಿಕನೂ ಅಲ್ಲ ! ಆಸ್ತಿಕನೆನ್ನಲು ಆಸ್ತಿ ಇಲ್ಲ ಆಸ್ತಿಕರೆಂದವರು ಆಸ್ತಿಕರಲ್ಲ ನಾಸ್ತಿಕರೆಂದವರು ನಾಸ್ತಿಕರಲ್ಲ ಆಸ್ತಿಕನಲ್ಲಿ ಪುರಾವೆ ಇಲ್ಲ ಪುರಾಣವಿದೆ ನಾಸ್ತಿಕನೆನಲು ಈ ನನ್ನ ಜ್ಞಾನ ಸಾಲದೆ ? ಇಲ್ಲದ್ದನ್ನು ಇದೆ ಎಂದು ಹೇಳುವುದು ಹೇಗೆ ಇರಬಹುದು ಎಂದರೆ ಕಾಣರೆ ಕಂಡದ್ದು ನಂಬಿ ಇರುವತನಕ ರಮೇಶ ಎಂ.ಎಚ್. ನಿರಾತಂಕ ಅಲ್ಲಿ ಚಪ್ಪಾಳೆ ಸತ್ಯಕ್ಕೆ
ಇಲ್ಲಿ ಚಪ್ಪಾಳೆ ಸುಳ್ಳಿಗೆ ಅಲ್ಲಿ ಹೊಗಳುವೆವು ನ್ಯಾಯಕ್ಕೆ ಇಲ್ಲಿ ಮಾಡುತಿಹೆವು ಅನ್ಯಾಯ ಬ್ರಹ್ಮಚಾರಿಯನು ಹೊಗಳುತ ಸಂಸಾರಿಯಾಗುತಲಿಹೆವು ವರದಕ್ಷಿಣೆಗೆ ಪ್ರತಿಭಟನೆ ವಧುವಿನೆಡೆ ಶೋಷಣೆ ರಮೇಶ ಎಂ.ಎಚ್. ನಿರಾತಂಕ ಅದೊಂದು ದಿನ ಹಿರಿಯ ಸಮಾಜಕಾರ್ಯಕರ್ತರೊಬ್ಬರು ಫೇಸ್ ಬುಕ್ ಮೂಲಕ ಪರಿಚಿತರಾದರು. ಪರಿಚಯ ಕೆಲವೇ ದಿನಗಳಲ್ಲಿ ಸ್ನೇಹವಾಯಿತು. ಸ್ನೇಹ ತಂದೆ ಮಗನ ರೀತಿಯ ಬಾಂಧವ್ಯವನ್ನು ಸೃಷ್ಟಿಸಿತು. ಆದರೆ ಒಮ್ಮೆಯೂ ಅವರನ್ನು ನಾನು ಭೇಟಿಯಾಗಿರಲಿಲ್ಲ.
ನನ್ನ ಜೀವನದ ಪ್ರತಿ ವಿಷಯದಲ್ಲಿ ಅವರಿಗೆ ಆಸಕ್ತಿ. ಅವರ ಜೀವನದ ಪ್ರತಿ ವಿಷಯವನ್ನು ಅವರು ನನಗೆ ಹೇಳುತ್ತಿದ್ದರು. ದಿನಕ್ಕೆ ಒಮ್ಮೊಮ್ಮೆ ಹಲವು ಬಾರಿ ದೂರವಾಣಿಯ ಮೂಲಕ ಮಾತನಾಡುತ್ತಿದ್ದೆವು. ಅವರ 3 ಪುಸ್ತಕಗಳನ್ನು ನನಗೆ ಪ್ರಕಟಿಸಲು ಅವಕಾಶ ಮಾಡಿಕೊಟ್ಟರು. ಈ ಒಡನಾಟ ಸುಮಾರು ಎರಡು ವರ್ಷ ನಿರಂತರವಾಗಿ ನಡೆಯಿತು. ಬೆಳಿಗ್ಗೆ 5.00 ಗಂಟೆಗೆ ಎಂದಿನಂತೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸುತ್ತು ಹೊಡೆಯುವ ಅಭ್ಯಾಸ.
ಪ್ರತಿ ದಿನ ನನಗೆ ಪರಿಚಿತರಲ್ಲದ ಅಪ್ಪ ಮಗ ನನ್ನಂತೆಯೆ ನಸುಕಿನಲ್ಲಿ ಸುತ್ತಲು ಬರುತ್ತಿದ್ದರು. ನನಗೆ ತಿಳಿದವರೊಬ್ಬರು ನೋಡಿ ಸಾರ್ ಅಪ್ಪ ಮಗ ಇಬ್ಬರೂ ಒಂದೇ ಸಾರಿ ಬೆಳಿಗ್ಗೆ ಬರುತ್ತಾರೆ. ಆದರೆ ಮಗನಿಗೆ ಸ್ವಲ್ಪ ಮಂದ ಬುದ್ದಿ, ಆದರೆ ಅಪ್ಪ ಕೋಟ್ಯಾಧೀಶ್ವರ ಅಂದರು. ಸರಿ ಎಂದು ಸುಮ್ಮನಾದೆ. ಸ್ವಲ್ಪ ಸಮಯದ ನಂತರ ಮಗನ ಶೂಗಳನ್ನು ಗಮನಿಸಿದೆ. ಇನ್ನೇನು ಕಿತ್ತುಹೋಗುವ, ತುಂಬಾ ಹಳೆಯದಾದ ಹಾಗೆ ಕಾಣಿಸುತ್ತಿದ್ದವು. ಮನಸ್ಸಿನಲ್ಲಿ "ಕೋಟ್ಯಾಧಿಪತಿ ಆದರೇನು ಅಪ್ಪ ಮಗನಿಗೆ ಸರಿಯಾದ ಒಂದು ಜೊತೆ ಜೋಡು ಕೊಡಿಸಿಲ್ಲವಲ್ಲ ಅಂದುಕೊಂಡೆ." ಅಪ್ಪನ ಬಗ್ಗೆ ನನ್ನ ತಲೆಯಲ್ಲಿ ಕೊಳಕು ಭಾವನೆ ಬಂತು. ಅಷ್ಟರಲ್ಲಿ ಅವರ ಸ್ನೇಹಿತರೊಬ್ಬರು ನಿಮ್ಮ ಮಗನ ಶೂ ಹರಿದಿದೆ ಬೇರೆಯದು ಕೊಡಿಸಿಲ್ಲವೇಕೆ ಎಂದರು? ಇಲ್ಲ ಸಾರ್, ಆರ್ಡರ್ ಮಾಡಿ ಆರು ತಿಂಗಳಾಯಿತು. ಇನ್ನೂ ಬಂದಿಲ್ಲ ಎಂದರು. ನಾನು ಥಟ್ಟನೆ ಅವರೆಡೆಗೆ ತಿರುಗಿ ಕಿವಿಗೊಟ್ಟೆ. ಆಗ ಅವರು "ನನ್ನ ಮಗನ ಕಾಲಿನಲ್ಲಿ ಆರು ಬೆರಳುಗಳಿವೆ. ಸಾಮಾನ್ಯವಾದ ಅಂಗಡಿಗಳಲ್ಲಿ ಸಿಗುವ ಶೂಗಳು ಅವನಿಗೆ ಹೊಂದುವುದಿಲ್ಲ, ಅವನಿಗೆ ವಿಶೇಷವಾಗಿ ತಮಿಳುನಾಡಿನಿಂದ ನನ್ನ ಮಗನ ಕಾಲಿನ ಅಳತೆಗೆ ಶೂ ಆರ್ಡರ್ ಕೊಟ್ಟು ಮಾಡಿಸಬೇಕು" ಎಂದರು. ನಗುತ ಹಲ್ಲು ಕಿರಿಯುವೆ, ಮನದಲ್ಲಿ ನಗುವಿರುವುದಿಲ್ಲ.
ದಯೆ ತೋರುವೆ, ಮನದಲ್ಲಿ ಕರುಣೆ ಇರುವುದಿಲ್ಲ. ಸಂತಸದಲ್ಲಿ ಸಂಭ್ರಮ ಆಚರಿಸುವೆ, ಮನದಲ್ಲಿ ಸಂತಸದ ಭಾವನೆ ಚಿಮ್ಮುವುದಿಲ್ಲ. ಅಳುವಂತೆ ನಟಿಸುವೆ, ಮರುಕ್ಷಣ ಸಂತಸದ ನಗು ಚೆಲ್ಲುವೆ. ಎಲ್ಲವೂ ಅನಿವಾರ್ಯ ಎನ್ನುವೆ, ತಲೆ ಹೋಗುವಂತಹದೇನಿರುವುದಿಲ್ಲ. ಭ್ರಮೆ, ನಶೆಯ ಬದುಕಿನಲ್ಲಿ ತೇಲುತ ಸಮಯ ಕಳೆಯುತಲಿರುವ ಹುಚ್ಚು ಬದುಕಿನ ಬೆನ್ನು ಹತ್ತಿ ಸವಾರಿ ಹೊರಟಿರುವೆ. ರಮೇಶ ಎಂ.ಎಚ್. ನಿರಾತಂಕ #ನಿರಾತಂಕಕವನ ನಾಲ್ಕು ಜನ ಸ್ನೇಹಿತರಿರಬೇಕು
ಕೇಳಿದಾಗ ಕೇಳಿದಷ್ಟು ಹಣ ಕೊಡುವಂತಿರಬೇಕು ಸಿನಿಮಾಗೆ ಕರೆದರೆ ಬರುವಂತಿರಬೇಕು ತಪ್ಪು ಮಾಡಿದರೆ ಮುಖಕ್ಕೆ ಹೊಡೆದು ತಿದ್ದುವಂತಿರಬೇಕು ನಾಲಗೆಯ ಮಾತಿಗೂ, ಹೃದಯಕ್ಕೆ ಸಂಬಂಧ ಹೊಂದಿರಬೇಕು ಸ್ನೇಹಿತನಿಗೆ ಲಾಟರಿ ಹೊಡೆದರೆ ಹೊಟ್ಟೆಹುರಿದು ಸಾಯದಂತಿರಬೇಕು ಸ್ನೇಹಿತನ ಸಂಬಳ ಜಾಸ್ತಿಯಾದಾಗ ಕುಣಿದು ಕುಪ್ಪಳಿಸುವಂತಿರಬೇಕು ಯಾವುದಾದರೂ ಕೆಲಸಕ್ಕೆ ಕೈಹಾಕಿದರೆ ಸಹಕರಿಸುವಂತಿರಬೇಕು ಎಣ್ಣೆ ಹೊಡಿಯಲು ಕೂತರೆ ಬಲವಂತಪಡಿಸಿ ಕುಡಿಸದಂತಿರಬೇಕು ಎಲ್ಲದಕ್ಕೂ ಹೂ ಎನುತ ತಿಪ್ಪೆ ಸಾರಿಸದಂಗಿರಬೇಕು ನೋವನ್ನು ಹಂಚಿಕೊಳ್ಳುವಂತಿರಬೇಕು ತಪ್ಪನ್ನು ಕ್ಷಮಿಸುವಂತಿರಬೇಕು ಹಾಕಿದ ಗೆರೆಯನ್ನು ದಾಟದಂತಿರಬೇಕು ಮನದ ಮಾತುಗಳಿಗೆ ಬೆಲೆ ಕೊಡುವಂತಿರಬೇಕು ಕಣ್ಣ ಭಾಷೆ ಅರ್ಥ ಮಾಡಿಕೊಳ್ಳುವಂತಿರಬೇಕು ಸ್ನೇಹಿತರು ಕಚ್ಚಾಡಿದರೆ ಕೂಡಿಸಿ ಹೊಲಿಸುವಂತಿರಬೆಕು ನಾಚಿಕೆಯ ಬಿಟ್ಟು ಎಲ್ಲವನ್ನು ಮಾತನಾಡುವಂತಿರಬೇಕು ಈ ರೀತಿಯ ಪದ್ಯವನ್ನು ಬರೆದಾಗ ಮುಂದುವರಿಸುವಂತಿರಬೇಕು ಸಾಧ್ಯವಾದರೆ ಮುಂದುವರೆಸಿ ನಿಮ್ಮ ಸಲಹೆ ನೀಡಿ. ರಮೇಶ ಎಂ.ಎಚ್. ನಿರಾತಂಕ #ನಿರಾತಂಕಕವನ |
RAMESHA NIRATANKA NATIONAL ASSOCIATION OF PROFESSIONAL SOCIAL WORKERS IN INDIA Ramesha for Ullal Ward |
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|