ಎಲ್ಲವ ಓದಬಲ್ಲೆ, ಎಲ್ಲವ ಕೇಳಬಲ್ಲೆ
ಸಮಾಜಕ್ಕೆ ತಕ್ಕಂತೆ ನಟಿಸಬಲ್ಲೆ ಅಂತರಂಗವ ನೋಡಲೊಲ್ಲೆ ನಟಿಸು ನಿ ಅಂತರಂಗದ ತಾಳಕ್ಕೆ ಭಯ, ಹೆದರಿಕೆ ಏತಕೆ ರಮೇಶ ಎಂ.ಎಚ್. ನಿರಾತಂಕ ಜಗಳವಾಡಲು ಕೆಣಕಿದರೆ ನಾನು ಮೌನಿಯಾಗುವೆ.
ಅವಮಾನಿಸಿದರೆ ನಾನು ಅವಮಾನವ ನನ್ನೆದೆಗೆ ತಾಕಿಸಿದೆ ಕಸದಬುಟ್ಟಿಗೆ ಎಸೆವೆ. ದ್ವೇಷ ಎದೆಯಲ್ಲಿ ಇಣುಕಿದರೆ ನಾನು ವಿಷಕುಡಿದು ಬೇರೆಯವನ ಸಾವ ಬಯಸಿದಂತೆಂದು ದ್ವೇಷವ ನಂದಿಸುವೆ. ಗುರಾಯಿಸಿದರೆ ಮುಗುಳು ನಗೆ ಬೀರಿ ಗುರಾಯಿಸಿದವನ ಮರೆತುಬಿಡುವೆ. ಮೋಸಹೋದರೆ ನನ್ನ ಹಿಂದಿನ ಜನ್ಮದ ಕರ್ಮದ ಫಲವೆಂದುಕೊಳುವೆ. ಕೆಣಕಿದ, ಅವಮಾನಿಸಿದ, ದ್ವೇಷಿಸಿದ ಹಾಗೂ ಗುರಾಯಿಸಿದವರಿಗಾಗಿ ನನ್ನಲ್ಲಿ ಸಮಯವಿಲ್ಲ. ನಾನಾಯಿತು ನನ್ನ ಪಾಡಾಯಿತು ಎಂದು ನಲಿವೆ. ರಮೇಶ ಎಂ.ಎಚ್. ನಿರಾತಂಕ ಯೌವನದಲ್ಲಿ ಮತ್ತೆ ಮತ್ತೆ ನೆನಪಾಗುವುದು
ಹಳೆಯ ದ್ವೇಷ. ಮೆತ್ತಗಾದ ಮೇಲೆ ಗೊತ್ತಾಗುವುದು ದ್ವೇಷ ನನ್ನೆದೆಯಲ್ಲಿದ್ದು ನನ್ನನ್ನೆ ಸುಡುತ್ತಲಿರುವ ವಿಷ. ಕೆಲವರು ಮೆತ್ತಗಾದರೂ ವಿಷ ಹೊತ್ತು ತಿರುಗುವರು ದ್ವೇಷ ಹಾಗೂ ವಿಷದ ನಡುವೆ ಅಂತರ ಅರಿಯದ ಮೂಢರು ಸುಡುತ್ತಿದ್ದರೂ ಬೆಚ್ಚಗೆ ಮಜಕೊಡುತ್ತಿದೆ ಎಂದು ಮೈಮರೆಯುವರು ಸುಟ್ಟು ಸಾವು ಹತ್ತಿರ ಬಂದರೂ ಅರಿವಿನ ಮಟ್ಟ ಮುಟ್ಟದೆ ಕಣ್ಣು ಮುಚ್ಚುವರು. ರಮೇಶ ಎಂ.ಎಚ್. ನಿರಾತಂಕ ನಾನು ಸತ್ತಾಗ ಜನ ಕಂಬನಿ ಮಿಡಿಯಲಿ ಎಂದು ಬದುಕುವುದಿಲ್ಲ.
ನಾನು ಗೆದ್ದಾಗ ಜನ ನನ್ನ ಹೊಗಳಲಿ ಎಂಬ ಆಸೆಯಿಲ್ಲ. ನನ್ನ ಆಸ್ತಿ ನೋಡಿ ನನಗೆ ಮರ್ಯಾದೆ ಕೊಡಲಿ ಎಂಬ ಬಯಕೆಯಿಲ್ಲ. ನಾನು ಪ್ರಾಮಾಣಿಕತೆಯ ದಾರಿಯಲ್ಲಿ ನಡೆದು ಸೋತರೆ ನನಗೆ ಭಯವಿಲ್ಲ. ಎಲ್ಲರಿಗೂ ಒಳ್ಳೆಯವನಾಗಬೇಕು, ನನ್ನ ಕೆಟ್ಟವನೆಂದುಕೊಂಡಾರು ಎಂಬ ಸಂಕಟ ನನ್ನ ಮನದಲ್ಲಿಲ್ಲ. ನಾನು ನಾನೆ, ನನಗೆ ನಾನೆ, ಬಂದದ್ದು ಹೋದದ್ದುರ ನಡುವೆ ಪ್ರೀತಿ, ವಿಶ್ವಾಸ, ಮಮತೆ, ಕರುಣೆ ಬುದ್ಧನ ಮಾರ್ಗದ ನಡತೆ. ರಮೇಶ ಎಂ.ಎಚ್. ನಿರಾತಂಕ ಅದು ಅಕಸ್ಮಾತಾಗಿ ಆದ ಪರಿಚಯ, ಸಮಾಜಕಾರ್ಯ ಕ್ಷೇತ್ರದಲ್ಲಿ ಅವರಿಗೆ ಅಗಾಧವಾದ ಪಾಂಡಿತ್ಯ, ದೆಹಲಿ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಲ್ಲಿ ಸಿಂಹಗಾಂಭೀರ್ಯದಿಂದ ಬದುಕಿದ್ದವರು, ಅಮೇರಿಕಾದಲ್ಲಿ ಆಗಿನ ಕಾಲಕ್ಕೆ ಉನ್ನತ ವ್ಯಾಸಂಗಕ್ಕೆ ಹೋಗಿದ್ದರಂತೆ, ಹೆಂಡತಿ ಅಂತರರಾಷ್ಟ್ರೀಯ ಮಟ್ಟದ ಲೇಖಕಿ, ಅವರ ಪುಸ್ತಕ ಆಗಿನ ಕಾಲಕ್ಕೆ Macmillan ಪಬ್ಲಿಕೇಷನ್ ನಿಂದ ಪ್ರಕಟಣೆಯಾಗಿತ್ತು. ನಿವೃತ್ತಿಯ ನಂತರ ವಿಜಯನಗರದಲ್ಲಿ ವಾಸವಾಗಿದ್ದರು, ಸಮಾಜಕಾರ್ಯ ಶಾಲೆಯ ಯಾರಾದರು ಕರೆದರೆ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎಂಬುದು ಅವರ ಆಸೆ ಆದರೆ ಯಾರೂ ಅವರನ್ನು ಕರೆಯಲಿಲ್ಲ.
ಮೂರ್ಖನ ಪ್ರಶ್ನೆಗಳಿಗೆ ಮೌನವೆ ಉತ್ತರವಾಗಬೇಕು
ಜಾಣನ ಪ್ರಶ್ನೆಗೆ ಜ್ಞಾನದ ಬೆಳಕು ಸಾಕು ಸ್ನೇಹಿತನ ಪ್ರಶ್ನೆಗಳಿಗೆ ಪ್ರೀತಿಯೆ ಸಾಕು ಅಜ್ಞಾನಿಯ ಪ್ರಶ್ನೆಗೆ ಮರು ಪ್ರಶ್ನೆಯು ಬೇಕು ನಿನ್ನ ಮನದ ಪ್ರಶ್ನೆಗಳಿಗೆ ಸದಾ ಉತ್ತರ ಹುಡುಕುತ್ತಿರಬೇಕು ಗೊಂದಲದ ಪ್ರಶ್ನೆಗೆ ಸುಮ್ಮನಿರಬೇಕು ಹುಡುಕುವಂತಿರಬೇಕು ಪ್ರಶ್ನೆ ಜ್ಞಾನವನು ಕೆಣಕುವಂತಿರಬಾರದು ಎದುರಾಳಿಯ ಕೋಪವನು. ರಮೇಶ ಎಂ.ಎಚ್. ನಿರಾತಂಕ ಇಷ್ಟ ಇಲ್ಲದಿರುವುದನ್ನು ಇಲ್ಲಾ ಎನಲು ನಿನಗೆ ಗೊತ್ತಿರಬೇಕು
ಸರಿ ಇರುವುದನ್ನು ಸರಿ ಎನಲು ಗುಂಡಿಗೆ ಇರಬೇಕು ಗೊತ್ತಿಲ್ಲದಿರುವುದನ್ನು ಗೊತ್ತಿಲ್ಲ ಎನಲು ನಾಚಿಕೆ ಬಿಡಬೇಕು ಒಮ್ಮೊಮ್ಮೆ ಇಲ್ಲಾ, ಹೌದು ಎನದೆ ಮೌನವಾಗಿರಲು ಬರಬೇಕು ವೈರಿಗಳನ್ನು ಕಣ್ಣಲ್ಲಿ ಕಣ್ಣನಿಟ್ಟು ಪ್ರೀತಿಯಿಂದಿರಲು ದ್ವೇಷ ಬಿಡಬೇಕು ಅವನು ಇವನು ಅಂದುಕೊಳ್ಳುವನೆಂದುಕೊಳ್ಳದೆ ಸ್ವಂತಿಕೆ ಇರಬೇಕು ಬೇಕೇಬೇಕು ಎನ್ನುವುದನು ಮಕ್ಕಳಂತೆ ಕೇಳಿ ಪಡೆಯಬೇಕು ತಪ್ಪು ಮಾಡಿ ಸಿಕ್ಕಿಹಾಕಿಕೊಂಡರೆ ಒಪ್ಪಿಕೊಳ್ಳಬೇಕು ಮುಂದುವರೆದು.... ರಮೇಶ ಎಂ.ಎಚ್. ನಿರಾತಂಕ ಬದುಕಬೇಕು ಪರರು ತಮ್ಮ ಎದೆಯ ನೋವನ್ನು ನಮ್ಮಲ್ಲಿ ಹಂಚಿಕೊಳ್ಳುವಂತೆ
ಸ್ನೇಹ ಇರಬೇಕು ಮುಖದ ಮುಖವಾಡ ಸರಿಸುವಂತೆ ಪ್ರೀತಿ ಇರಬೇಕು ಮನಸ್ಸಿನ ಕನ್ನಡಿಯಂತೆ ಎರಡು ದಿನದ ಬದುಕಿನಲ್ಲಿ ಬುದ್ಧಿವಂತಿಕೆಗಿಂತ ಹೃದಯವಂತಿಕೆ ಮೇಲು ಎಲ್ಲವನ್ನು ತಿಳಿದು ನಟಿಸಿ ಮೋಸಮಾಡಿ ಬದುಕು ಸಾಗಿಸಿದರೆ ಏನು ಫಲ ಇರುವುದ ಬರುವುದ ಒಪ್ಪಿ ನಡೆಯುವುದ ಕಲಿಯದಿದ್ದರೆ ಕತ್ತಲಲ್ಲಿ ಬಣ್ಣ ಹಚ್ಚಿ ಬಟ್ಟೆ ತೊಟ್ಟಂತೆ ರಮೇಶ ಎಂ.ಎಚ್. ನಿರಾತಂಕ ಪ್ರತಿ ವ್ಯಕ್ತಿ ಹುಡುಕುವನು
ಮತ್ತೊಬ್ಬರಲಿ ಇಲ್ಲದಿರುವುದನು ಸಂಬಂಧ ಹಾಳಾಗುವುದು ಸಮಸ್ಯೆ ಉದ್ಭವಿಸುವುದು ಇರುವುದನ್ನು ಹುಡುಕು ಸಾವಿರಾರು ಜನರಿಗೆ ಸಿಗಲು ಇಲ್ಲದಿರುವುದು ಹುಡುಕಿದರೆ ಸಿಗುವುದೇನು ಇರುವುದನ್ನು ಇರುವಂತೆಯೆ ಅಪ್ಪಿಕೊ ಬರುವುದನ್ನು ಬರುವಂತೆಯೆ ಒಪ್ಪಿಕೊ ಇಲ್ಲದ ದೇವರ ಹುಡುಕುವೆವು ಪ್ರೀತಿ ಸ್ನೇಹಗಳ ಮರೆವೆವು ಒಂದೆ ಕೋಣೆಯಲ್ಲಿ ಜೀವಿಸಿದರೂ ನಾವು ಮನಸ್ಸಿನಲ್ಲಿ ಸಾವಿರಾರು ಮೈಲಿಗಳ ದೂರನಿಲ್ಲುವೆವು ರಮೇಶ ಎಂ.ಎಚ್. ನಿರಾತಂಕ ಮುಂದೆ ಬಂದರೆ ಹಾಯದ
ಹಿಂದೆ ಬಂದರೆ ಒದೆಯದ ಮುಖ ಮನಸ್ಸಿನ ಕನ್ನಡಿಯಂತಿರದ ನರಿಯ ಬುದ್ಧಿಯ ಜನರು ಇರುವ ಜಗವಿದು ಜೊತೆಯಲ್ಲಿ ಇದ್ದವರು ಒಟ್ಟಿಗೆ ಉಂಡವರು ಸಂತಸದಿಂದ ಜೊತೆಗೆ ನಲಿದವರು ಕತ್ತಿ ಮಸೆವರು ಮನದಲ್ಲಿ ಎಂದು ಚುಚ್ಚುವರೊ ಗೊತ್ತಾಗುವುದಿಲ್ಲ ಸತ್ತ ಮೇಲೆ ಮೊಸಳೆ ಕಣ್ಣೀರ ಸುರಿಸುವರು ನರಿಯ ಬುದ್ಧಿಯ ಜನರು ರಮೇಶ ಎಂ.ಎಚ್. ನಿರಾತಂಕ ನನಗೆ ನನ್ನದೆ ಮನಸ್ಸಿದೆ
ನನಗೆ ನನ್ನದೆ ಕನಸ್ಸಿದೆ ಮನಸ್ಸು ಕನಸ್ಸಿನ ನಡುವೆ ಅಡೆ ತಡೆ ಬಂದರೆ ನಾ ಕುರುಡನಾಗುವೆ ಸದಾ ಕೇಳುವ ಕಿವಿ, ತೆರೆದ ಮನದಿಂದಿರುವೆ ಕಸ, ಕೊಳೆ ಸದ್ದು ಗದ್ದಲಕೆ ಕಿವುಡಾಗುವೆ ನಾ ನಡೆದದ್ದೆ ದಾರಿ ಕಲ್ಲು, ಮುಳ್ಳಿದ್ದರೂ ಸರಿ ಅಡ್ಡ ದಾರಿ ಹಿಡಿಯದೆ ತಲುಪುವೆನು ಗುರಿ ರಮೇಶ ಎಂ.ಎಚ್. ನಿರಾತಂಕ ಆಲೋಚನೆಗಳಿಗೆ ವೇದಿಕೆ
ದಿನವೂ ಎಡವುತ್ತಿದ್ದರೆ ಕಲಿಕೆ ಯಾರಾದರೂ ಬನ್ನಿ ನಿಮ್ಮ ಆಲೋಚನೆ ಹೊತ್ತು ತನ್ನಿ ಒಂಟಿಯಲ್ಲ ನಾವು ನೀವು ಜಗದಲ್ಲಿ ಜಗವ ಬೆಳಗಬೇಕು ಎಂಬ ಭಾವ ಮನದಲ್ಲಿ ರಮೇಶ ಎಂ.ಎಚ್. ನಿರಾತಂಕ ಟೀಕೆಗೆ ಅಂತರಂಗದ ಕದ ತಟ್ಟುವೆ
ಟೀಕೆ ಸರಿ ಎಂಬುದ ಅರಿತರೆ ನಮಿಸುವೆ ಸರಿಯಲ್ಲವೆಂದೆನಿಸಿದರೆ ಕ್ಷಮಿಸಿ ಮರೆವೆ ಟೀಕಿಸಲಿ, ಕೆಣಕಲಿ, ಗುರಾಯಿಸಲಿ ಅಳೆದು ತೂಗು ಅಂತರಂಗದಲಿ ರಮೇಶ ಎಂ.ಎಚ್. ನಿರಾತಂಕ ಅಳುವವರ ಮುಂದೆ ಅತ್ತು ನಟಿಸಿದೆ
ನಗುವವರ ಮುಂದೆ ನಕ್ಕು ನಟಿಸಿದೆ ನಗಬೇಕೆಂದಾಗ ನಗುವುದು ಮರೆತುಹೋಗಿದೆ ಅಳುಬಂದಾಗ ಅಳು ಬಾರದೆ ನನ್ನನೆ ನಾ ಮರೆತೆ ಜಗದ ಜಂಗಡದಲ್ಲಿ ನನ್ನತನವ ತೊರೆದೆ ಜನರ ಸಂಗಡದಲ್ಲಿ ಮನವ ಮರೆತೆ, ಮಾನವೀಯತೆ ಮರೆತೆ ಹಣವ ಅರಸುತ ಒಂಟಿ ನಿಂತೆ ನನ್ನವರು ದೂರ ಸರಿದುದ ದೊಡ್ಡಸ್ತಿಕೆ ಅಂದುಕೊಂಡೆ ಕೊನೆಗಳಿಗೆ ನನ್ನ ಜೀವನದ ಕದವ ತಟ್ಟಲು ಹೆದರಿಕೊಂಡೆ ಹತ್ತಿರವಿದ್ದು ದೂರ ನಿಂತ ನನ್ನತನವ ಶಪಿಸಿಕೊಂಡೆ ನಾ ಮಾಡಿದ ತಪ್ಪ ನೀ ಮಾಡಬೇಡ ಎಂದು ಹಂಚಿಕೊಂಡೆ ರಮೇಶ ಎಂ.ಎಚ್. ನಿರಾತಂಕ ಮಗನಿಗೆ ಬೇಕಿರುವುದೆಲ್ಲವ ಕೊಡಿಸಿ ಕೊಬ್ಬಿಸಿ
ಮನಸ್ಸಿಗೆ ಮೂಗುದಾರವ ತೊಡಿಸದೆ ಸಡಿಲಿಸಿ ಮಡದಿಯ ಮಾತೆಲ್ಲ ಕೇಳುತ ನಟಿಸಿ ತಂದೆ ತಾಯಿ ಕೊಡುವ ಸಲಹೆಗಳ ಧಿಕ್ಕರಿಸಿ ನನದೊಂದು ಜೀವನವೆಂದು ಜೀವಿಸಿ ಸಮಾಜ ಕೆಟ್ಟುಹಾಳಾಗಿ ಹೋಯಿತು ಎಂದು ಶಪಿಸಿ ಎಲ್ಲದರ ಸಹವಾಸವೇ ಬೇಡ ಎಂದು ಗುರಾಯಿಸಿ ನನಗೆ ನಾನೇ ಅರ್ಥವಾಗದೆ ಚಿಂತಿಸಿ ನಾನೊಬ್ಬ ಚಿಂತಕ ಎಂದು ಅನಿಸಿ ಅರಿವಿನ ಕದ ತಟ್ಟದೆ ಶವವಾಗಿ ಯಾತ್ರೆ ಮುಗಿಸಿ. ರಮೇಶ ಎಂ.ಎಚ್. ನಿರಾತಂಕ ಮಾಗಿದವರು ಆಗಿದ್ದು ಆಗಲಿ ಎಲ್ಲವನು ಸಹಿಸಿಕೊಂಡು,
ಹೊಟ್ಟೆಗೆ ಹಾಕಿಕೊಂಡು ತಣ್ಣಗಾಗುತ್ತಾರೆ ಮಾಗುತ್ತಿರುವವರು ಆಗಿಹೋಗಿದ್ದರ ಬಗ್ಗೆ ಸಹಿಸದೆ ಗೊಣಗುತ್ತಾರೆ ಎಳೆಕಾಯಿಗಳು ಯಾವುದನ್ನು ಆಲೋಚಿಸದೆ ತಾವಾಯಿತು ತಮ್ಮ ಕೆಲಸವಾಯಿತೆಂದು ಹಾಗೂ ಏನಾಯಿತು ಎಂಬುದರ ಬಗ್ಗೆ ಅರಿವಿರದೆ ಬದುಕುತ್ತಾರೆ ಮಾಗಿದವರ, ಮಾಗುತ್ತಿರುವವರ ಮತ್ತು ಎಳೆಕಾಯಿಗಳಲ್ಲಿ ನಾನ್ಯಾರು ಎಂದು ಕಂಡುಕೊಳ್ಳಬೇಕು ಮಾಗಿದ ನಿಮ್ಮತನವ ನೋಡಿ ಅನಿಸಿದ್ದು ನಾನು ಎಳೆಕಾಯಿ ಎಂದು ರಮೇಶ ಎಂ.ಎಚ್. ನಿರಾತಂಕ ನಡೆವ ದಾರಿಯಲ್ಲಿ
ಬರುವವರು ಬರಲಿ ದೂರ ಸರಿವವರು ಸರಿಯಲಿ ಬಿಟ್ಟು ಹೋದವರು ಮತ್ತೆ ಬಂದು ಸೇರಲಿ ಬಾಗಿಲು ಸದಾ ತೆರೆದಿದೆ ಅಪ್ಪಿ ಕಳುಹಿಸಲು ಮನವು ಸದಾ ತೆರೆದಿದೆ ಬರುವವರ ಅಪ್ಪಿಕೊಳ್ಳಲು ಸದಾ ಪ್ರೀತಿ, ಸ್ನೇಹ ಜೊತೆಯಿರಲಿ, ಅಗಲಲಿ ಗುರಿ ಒಂದೇ ನಮ್ಮ ಮುಂದೆ ನಮ್ಮ ಹೃದಯದಲ್ಲಿ ಸದಾ ನಾ ಹರಿವ ನದಿ ಹರಿದು ಹರಿದು ಸೇರುವೆ ಶರಧಿ ರಮೇಶ ಎಂ.ಎಚ್. ನಿರಾತಂಕ ಕೆಲವರಿಗೆ ಮನವ ಬಿಚ್ಚಿಡುತ್ತೇವೆ
ಕೆಲವರಿಂದ ಮನವ ಮುಚ್ಚಿಡುತ್ತೇವೆ ಅಪ್ಪ ಮಗನ ಮುಂದೆ ಆಸ್ತಿಯ ಬಿಚ್ಚಿಡುತ್ತಾನೆ ತನ್ನ ಮನವ ಬಚ್ಚಿಡುತ್ತಾನೆ ಪ್ರೇಯಸಿಗೆ ದೇಹವನ್ನು ಬಿಚ್ಚಿಡುತ್ತಾನೆ ಅವನ ಮನವ ಮುಚ್ಚಿಡುತ್ತಾನೆ ಮನವ ಬಿಚ್ಚಿಟ್ಟರೆ ಸಿಹಿ, ಬಚ್ಚಿಟ್ಟರೆ ಕಹಿ ನನಗೆ ಮನವ ಬಿಚ್ಚಿಡುವ ಎಷ್ಟು ಜನರಿದ್ದಾರೆ? ಎಷ್ಟು ಜನ ನನ್ನ ಮುಂದೆ ಮನವ ಮುಚ್ಚಿಡುತ್ತಾರೆ? ಜೀವನ ಮನವ ಬಿಚ್ಚಿಡುವ, ಮನವ ಬಚ್ಚಿಡುವ ಆಟ ಬಚ್ಚಿಟ್ಟ ಕಹಿಯ ಬಿಚ್ಚಿಟ್ಟು ಸಿಹಿಯಾಗಿಸಿ ಆಡಿ ಕೊನೆಗೆ ಎಲ್ಲವನು ಬಿಟ್ಟು ಓಡುವ ರಹಸ್ಯವಾದ ಓಟ ರಮೇಶ ಎಂ.ಎಚ್. ನಿರಾತಂಕ ಅವಳ ನೋವು ಮನವ ಕಾಡುವುದಿಲ್ಲ
ನಾನು ಕೊಡುವತನವ ತೋರುವುದಿಲ್ಲ ನನ್ನ ತಾಯಿಯಂತೆ ಅವಳು ಎನಿಸುವುದಿಲ್ಲ ಮಾನವೀಯತೆ ನನ್ನ ಕೆಣಕುವುದಿಲ್ಲ ಸತ್ತಂತೆ ಬದುಕುತಿರುವೆ ಅನಿಸುವುದಿಲ್ಲ ನನ್ನ ಸಂತಸ, ಜೀವನಕ್ಕೆ ಆಕೆಯ ನೋವು ಕಾಣುವುದಿಲ್ಲ ಕಣ್ಣಿದ್ದು ಕುರುಡರು ನಾವು ಅನಿಸುವುದಿಲ್ಲ ನಮ್ಮದೆ ವೇದಾಂತ, ನಮ್ಮದೆ ಸಿದ್ದಾಂತಗಳೆಲ್ಲ ರಮೇಶ ಎಂ.ಎಚ್. ನಿರಾತಂಕ ಗೆಳೆಯನ ಮುಂದೆ ಸೋಲು
ಗೆಳೆಯನ ಮನಸ್ಸನ್ನು ಗೆಲ್ಲು ಗೆಳೆಯನ ಮನಸ್ಸು ನೋಯಿಸಿ ಗೆದ್ದೆ ಎಂಬ ಗೆಲುವು ಸಾಧಿಸಿ ನಗುವ ನಗುವಿಗೆ ಅರ್ಥವಿಲ್ಲ ಕಂದ ಗೆಳೆಯನಿಗಾಗಿ ಸೋತೆ ಎಂಬ ಖುಷಿಯ ಮುಂದ ಗೆಲುವು, ಸೋಲು ಎರಡರಾಗು ಉಂಟು ಸುಖ ಮನಸ್ಸು ಮಾಗಿ, ವಯಸ್ಸು ಆದ ಮೇಲೆ ಮರೆಯಬೇಕು ದುಃಖ ಜಗದ ನಂಟು, ಕಳಚಿ ಬೀಳುವುದು ಕಣ್ಣ ಮುಂದೆ ಗೆಲುವು, ಸೋಲು ಎಲ್ಲಾ ಮರೆಯಾಗುವುವು ನಮ್ಮ ಮುಂದೆ ರಮೇಶ ಎಂ.ಎಚ್. ನಿರಾತಂಕ ಸ್ನೇಹಿತ ಬೆನ್ನಿಗೆ ಚೂರಿ ಹಾಕಲು ಬಂದ
ಗೊತ್ತಾದರೂ ನೋಡಿ ಸುಮ್ಮನಾದೆ ಚೂರಿ ಚುಚ್ಚಿ ಗಾಯವಾಯಿತು ಸಾಯಲಿಲ್ಲ ನಾನು ಚೂರಿ ಹಾಕಿದ್ದು ಗೆಳೆಯನಿಗೆ ಗೊತ್ತಾಗಲಿಲ್ಲ ಎಂದುಕೊಂಡ ಅವನು ಆಸ್ಪತ್ರೆಗೆ ಬಂದು ಬಂಧುವಿನಂತೆ ಮಾತನಾಡಿಸಿದ ಮಾತನಾಡಿಸಿದೆ ಚೂರಿ ಚುಚ್ಚಿದ ಎಂಬ ದ್ವೇಷವಿಲ್ಲದೆ ಆಕಾಶದೆತ್ತರಕ್ಕೆ ಹಾರಿ
ಪ್ರಶಸ್ತಿ ಪದಕ ಪಡೆದು ನಿನ್ನ ಮನವ ನೀ ನೋಡದಿದ್ದರೆ ಎಚ್ಚರಿಕೆ ನೀ ಕನಸ ಕಾಣುತಿರುವೆ ರಮೇಶ ಎಂ.ಎಚ್. ನಿರಾತಂಕ ಮುಖದಲ್ಲಿ ನಗುವ ತೋರುತ
ಮನದಲ್ಲಿ ಕತ್ತಿ ಮಸೆಯಬಲ್ಲವರು ಜಾಸ್ತಿಯಾಗುತ್ತಿದ್ದಾರೆ ಮನದಲ್ಲಿ ಪ್ರೀತಿ ಬೆಸೆಯುವರು ಮಾಯವಾಗುತ್ತಿದ್ದಾರೆ ಕತ್ತಿಮಸೆದು ಕಳ್ಳನಗೆ ಬೀರಿ ಮೋಸ ಮಾಡಲು ಶಕ್ತಿ ಬೇಕು ಸಾಧಿಸುವುದೆಂತು ದ್ವೇಷ ಬಿತ್ತಿ ಎದೆಯಲ್ಲಿ ಗುಂಪಿನಲ್ಲಿ ಪ್ರೀತಿಯ ಮಾತು ಮನದಲ್ಲಿ ದ್ವೇಷದ ಪಿಸುಮಾತು ಸತ್ಯಕ್ಕೆ ಸಾವಿರ ಮುಖಗಳು
ನನ್ನ ಪಾಲಿನ ಸತ್ಯ ಇನ್ನೊಬ್ಬನ ಪಾಲಿನ ಸುಳ್ಳು ಹಸಿದವ ರೊಟ್ಟಿ ಕದ್ದದ್ದು ಸತ್ಯ ಹಸಿದವನ ಹಸಿವು ನೋಡಲು ಸಿಗದಿರುವ ಸತ್ಯ ತಾಯಿ ರೊಟ್ಟಿ ಕದ್ದ ಹಸಿದ ಕಂದನನು ಕಳ್ಳ ಅನ್ನದಿರುವುದು ಸತ್ಯ ಜಗವು ರೊಟ್ಟಿ ಕದ್ದವನು ಸಿಕ್ಕಿ ಬಿದ್ದರೆ ಸಾಯುವಂತೆ ಬಡಿಯುವುದು ಸತ್ಯ ಲಂಚದ ಹಣವ ಲೂಟಿ ಮಾಡಿ ಸತ್ಯಸಂಧರಂತೆ ನಟಿಸುವುದು ಸತ್ಯ ಕಷ್ಟಪಟ್ಟು ದುಡಿದು ಒಪ್ಪೊತ್ತಿನ ಊಟ ಸಿಗದಿರುವುದು ಸತ್ಯ ಕಣ್ಣಿಗೆ ಕಾಣದಿರುವ ಹಲವಾರು ಸತ್ಯ ಸ್ನೇಹಿತ ಪರೀಕ್ಷೆಯಲ್ಲಿ ಫೇಲಾದದ್ದು ಜಗತ್ತಿಗೆ ಬೇಡದ ಸತ್ಯ ಬಡತನ, ಹೊಟ್ಟೆಗೆ ಇಟ್ಟಿಲ್ಲದೆ ಓದಲು ಕಷ್ಟವಾದದ್ದು ಸತ್ಯ ರಮೇಶ ಎಂ.ಎಚ್. ನಿರಾತಂಕ |
RAMESHA NIRATANKA NATIONAL ASSOCIATION OF PROFESSIONAL SOCIAL WORKERS IN INDIA Ramesha for Ullal Ward |
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |
30,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|