Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ದ್ಯಾವ್ರೇ

2/28/2018

0 Comments

 
Picture
‘ದ್ಯಾವ್ರೇ’ ಎನ್ನುವುದು ಈ ಶೀರ್ಷಿಕೆಯಷ್ಟೇ ಅಲ್ಲ, ಅದೊಂದು ಆರ್ತನಾದ. ಮಾನವೀಯತೆಯ ಕರೆಯೂ ಹೌದು. ಬೇರೆ ಬೇರೆ ಕಾರಣಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಒಂದಿಷ್ಟು ಕೈದಿಗಳ ಬದುಕಿನ ಕಥೆಯನ್ನು ವಿಶಿಷ್ಟ ನಿರೂಪಣಾ ತಂತ್ರದ ಮೂಲಕ ಗಡ್ಡ ವಿಜಿ ಹೇಳಿದ್ದಾರೆ.

‘ಹಣ್ಣು ತಿಂದ್ರೆ ನೇಮು; ಸಿಪ್ಪೆ ತಿಂದ್ರೆ ಕ್ರೈಮು’

ಇದು ದ್ಯಾವ್ರೇ ಚಿತ್ರದ ಮೊದಲು ಮತ್ತು ಕೊನೆಯ ದೃಶ್ಯ ಎರಡರಲ್ಲಿಯೂ ಬರುವ ಮಾತು. ದೊಡ್ಡ ದೊಡ್ಡ ಅಪರಾಧಗಳನ್ನು ಕದ್ದುಮುಚ್ಚಿ ಮಾಡುವವರು ಜೈಲಿನ ಹೊರಗೆ ರಾಜಾರೋಷವಾಗಿರುತ್ತಾರೆ. ಆದರೆ ಬದುಕಿನ ಆಕಸ್ಮಿಕಗಳಿಗೆ ಸಿಲುಕಿ, ಆ ಕ್ಷಣದಲ್ಲಿ ಮೈಮರೆತವರು ಜೈಲಿನೊಳಗೆ ಕೊಳೆಯುತ್ತಿರುತ್ತಾರೆ. ಇಂಥದ್ದೊಂದು ಎಳೆ ಇಟ್ಟುಕೊಂಡು ಗಡ್ಡ ವಿಜಿ ಕಟ್ಟಿದ ಸಿನಿಮಾ ‘ದ್ಯಾವ್ರೇ’. 2013ರಲ್ಲಿ ಬಿಡುಗಡೆಯಾದ ಈ ಚಿತ್ರ ವಾಣಿಜ್ಯಾತ್ಮಕವಾಗಿ ಯಶಸ್ಸನ್ನೇನೂ ಕಂಡಿದ್ದಲ್ಲ. ಆದರೆ ವಸ್ತುವಿನಲ್ಲಿನ ಹೊಸತನ ಮತ್ತು ‘ಅಪರಾಧ’ದ ವ್ಯಾಖ್ಯಾನಗಳನ್ನು ಮುರಿದು ಕಟ್ಟುವ ಪ್ರಯತ್ನದ ಕಾರಣದಿಂದ ಗಮನಸೆಳಯುವಂಥ ಚಿತ್ರ.

‘ದ್ಯಾವ್ರೇ’ ಎನ್ನುವುದು ಈ ಶೀರ್ಷಿಕೆಯಷ್ಟೇ ಅಲ್ಲ, ಅದೊಂದು ಆರ್ತನಾದ. ಮಾನವೀಯತೆಯ ಕರೆಯೂ ಹೌದು. ಬೇರೆ ಬೇರೆ ಕಾರಣಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಒಂದಿಷ್ಟು ಕೈದಿಗಳ ಬದುಕಿನ ಕಥೆಯನ್ನು ವಿಶಿಷ್ಟ ನಿರೂಪಣಾ ತಂತ್ರದ ಮೂಲಕ ಗಡ್ಡ ವಿಜಿ ಹೇಳಿದ್ದಾರೆ. ಇವರೆಲ್ಲರೊಳಗಿನ ಮನುಷ್ಯತ್ವವನ್ನು ಉದ್ದೀಪಿಸುವ, ಮೇಲ್ನೋಟಕ್ಕೆ ವಿಕ್ಷಿಪ್ತ ಎನಿಸುವ, ಆದರೆ ಆಳದಲ್ಲಿ ಅಷ್ಟೇ ಸಹಾನುಭೂತಿ ಹೊಂದಿರುವ ಜೈಲರ್‌ ಪಾತ್ರದಲ್ಲಿ ನಿರ್ದೇಶಕ ಯೋಗರಾಜ್‌ ಭಟ್‌ ನಟಿಸಿದ್ದಾರೆ. ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ ಮೊದಲ ಸಿನಿಮಾ ಇದು ಎನ್ನುವುದೂ ಇದರ ವಿಶೇಷತೆಗಳಲ್ಲೊಂದು.

ಜೈಲರ್‌ ಈಗ ತನ್ನದಲ್ಲದ ತಪ್ಪಿಗೆ ಕೈದಿಯಾಗಿ, ಕಂಬಿಗಳ ಹಿಂದೆ ಬದುಕ ಸವೆಸುತ್ತಿದ್ದಾನೆ. ಅವನು ತನ್ನ ವೃತ್ತಿಬದುಕಿನಲ್ಲಿ ಕಂಡ ಅನುಭವಗಳನ್ನು ಒಂದು ಕಾದಂಬರಿಯಾಗಿ ಬರೆಯುತ್ತಿದ್ದಾನೆ. ಆ ಕಾದಂಬರಿಯೇ ಈ ಸಿನಿಮಾ.

ಖಾಕಿಯೊಳಗಿನ ಅಪರಾಧಿಗಳು, ಕೈದಿಯೊಳಗಿನ ಸಜ್ಜನರು, ಸಜ್ಜನರ ಮುಖವಾಡದೊಳಗಿನ ಪಾತಕಿಗಳು, ಪಾತಕ ದಿರಿಸಿನಲ್ಲಿನ ಮುಗ್ಧರು ಹೀಗೆ ಸಮಾಜದ ರೂಢಿಗತ ನಂಬಿಕೆಯನ್ನು ಮುರಿಯುತ್ತಲೇ ಹೋಗುತ್ತದೆ ಈ ಸಿನಿಮಾ. ಹಾಡುಗಳ ಕಾರಣಕ್ಕೂ ದ್ಯಾವ್ರೇ ಚಿತ್ರ ಮನಸ್ಸಿನಲ್ಲಿ ಉಳಿಯುತ್ತದೆ. ಯೋಗರಾಜ್‌ ಭಟ್‌ ಮತ್ತು ಜಯಂತ ಕಾಯ್ಕಿಣಿ ಬರೆದ ಹಾಡುಗಳು ಈ ಚಿತ್ರದಲ್ಲಿ ಒಂದು ಕ್ಯಾರೆಕ್ಟರ್‌ ಆಗಿಯೇ ಜೀವತಳೆದಿವೆ. ಸಿನಿಮಾದ ಹೊರತಾಗಿಯೂ ಮನಸ್ಸಿನಲ್ಲಿ ನೆಲೆನಿಂತು ಕಾಡುವ ಹಾಗಿವೆ. ಅವುಗಳಿಗೆ ವೀರ್‌ ಸಮರ್ಥ್‌ ಸಮರ್ಥ ಸಂಗೀತ ಸಂಯೋಜಿಸಿದ್ದಾರೆ.

ಅರಸು, ಸೋನುಗೌಡ, ಯೋಗರಾಜ್‌ ಭಟ್‌, ನೀನಾಸಂ ಸತೀಶ್‌, ರಾಜೇಶ್‌ ನಟರಂಗ, ಶ್ರುತಿ ಹರಿಹರನ್‌ ಎಲ್ಲರ ನಟನೆಯೂ ಅಚ್ಚುಕಟ್ಟಾಗಿದೆ.

ಈ ಚಿತ್ರವನ್ನು ನೀವು ಯೂ ಟ್ಯೂಬ್‌ನಲ್ಲಿ https://goo.gl/HKcNYz ಕೊಂಡಿ ಬಳಸಿ ನೋಡಬಹುದು.
 
ಕೃಪೆ
ಪ್ರಜಾವಾಣಿ
01-03-2018

0 Comments

ವಾಟರ್‌

2/21/2018

0 Comments

 
Picture
ವಾರಾಣಸಿಯಲ್ಲಿ ನಡೆಯುವ ಈ ಕಥನ ವಿಧವೆಯರ ಬದುಕಿನ ದಾರುಣತೆಯನ್ನೂ, ಅವರ ಮೇಲೆ ಶಾಸ್ತ್ರಗಳ ಸಂಕೋಲೆಗಳ ಹಿಂದೆ ನಡೆಯುವ ಶೋಷಣೆಯನ್ನು ದಿಟ್ಟವಾಗಿ ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ.

ಅವಳು ವಿಧವೆ. ಅವನಿಗೆ ಅವಳ ಶ್ವೇತವಸ್ತ್ರಕ್ಕಿಂತ ಮನಸ್ಸಿನ ಬಣ್ಣಗಳೇ ಕಾಣುತ್ತಿವೆ. ಗಂಗೆಯ ದಡದ ನಡುರಾತ್ರಿಯದು. ಅವನು ಹೇಳುತ್ತಾನೆ. ‘ಸಮಯ ಬದಲಾಗುತ್ತಿದೆ. ಹಳೆಯ ಪರಂಪರೆ, ಮೂಢನಂಬಿಕೆಗಳು ಎಲ್ಲವೂ ನಾಶವಾಗುತ್ತಿವೆ’ ‘ಇಡೀ ಪರಂಪರೆಯೇ ನಾಶವಾಗಬೇಕೇ? ಅದರಲ್ಲಿ ಒಳ್ಳೆಯ ಅಂಶಗಳೂ ಇವೆಯಲ್ಲ, ಅವನ್ನಾದರೂ ಉಳಿಸಿ ಕೊಳ್ಳಬೇಕಲ್ಲವೇ?’ ಹೀಗೆ ಪರಂಪರೆಯ ಕ್ರೌರ್ಯ ಮತ್ತು ಅದರಿಂದ ಬಿಡುಗಡೆಗೊಳ್ಳುವ ದಾರಿಯಲ್ಲಿನ ಅಡೆತಡೆಗಳನ್ನು ತೋರಿಸುವ ಸಿನಿಮಾ ದೀಪಾ ಮೆಹ್ತಾ ಅವರ ‘ವಾಟರ್‌’. ದೀಪಾ ಮೆಹ್ತಾ ಅವರ ತ್ರಿವಳಿ ಸಿನಿಮಾಗಳ ಮೂರನೇ ಸಿನಿಮಾ ಇದು (ಮತ್ತೆರಡು ‘ಅರ್ಥ್‌’ ಮತ್ತು ‘ಫೈರ್‌’).

ವಾರಾಣಸಿಯಲ್ಲಿ ನಡೆಯುವ ಈ ಕಥನ ವಿಧವೆಯರ ಬದುಕಿನ ದಾರುಣತೆಯನ್ನೂ, ಅವರ ಮೇಲೆ ಶಾಸ್ತ್ರಗಳ ಸಂಕೋಲೆಗಳ ಹಿಂದೆ ನಡೆಯುವ ಶೋಷಣೆಯನ್ನು ದಿಟ್ಟವಾಗಿ ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ.

ಬ್ರಿಟಿಷರ ಕಾಲಘಟ್ಟದ ನಾಲ್ಕು ವಿಧವೆಯರನ್ನು ಇಟ್ಟುಕೊಂಡು ಕಥೆಯನ್ನು ಹೇಳುತ್ತ ಹೋಗಿದ್ದಾರೆ ದೀಪಾ.  ಮಧುಮತಿ ವಿಧವೆಯರ ಆಶ್ರಮದ ಹಿರಿಯೆ. ಹಣ್ಣು ಹಣ್ಣು ಮುದುಕಿಯಾಗಿರುವ ಅವಳಿಗೆ ಕಟ್ಟುಪಾಡುಗಳಲ್ಲಿ ಅದಮ್ಯ ನಂಬಿಕೆ. ವಿಧವೆಯರು ಜೀವನಪರ್ಯಂತ ಜಪತಪಗಳಲ್ಲಿ ಕಳೆಯಬೇಕು. ಮದುವೆಯಾದರೆ ನರಕ ಖಂಡಿತ ಎನ್ನುವುದರಲ್ಲಿ ಅವಳಿಗೆ ಸಂದೇಹವಿಲ್ಲ. ಆದರೆ ಅವಳೇ ಊರಿನ ಶ್ರೀಮಂತರ ಕಾಮತೃಷೆಗಾಗಿ ವಿಧವೆಯರನ್ನು ಕಳಿಸುವ ದಂಧೆಯನ್ನೂ ಮಾಡುತ್ತಾಳೆ. ಶಕುಂತಲಾ ನಡುವಯಸ್ಸಿನ ವಿಧವೆ. ಅವಳು ವಿಧವಾಜೀವನವನ್ನು ಪರಂಪರಾ ನಿಷ್ಠಳಾಗಿಯೇ ಸಾಗಿಸುತ್ತಿದ್ದರೂ ಅವಳೊಳಗೆ ಗೊಂದಲವೂ ಇದೆ. ‌

‘ವಿಧವೆಯರು ವಿವಾಹ ಆಗಲೇಬಾರದೇ?’ ಎಂದು ಅವಳು ಪಂಡಿತರನ್ನು ಕೇಳಬಲ್ಲಳು. ಇನ್ನು ಕಲ್ಯಾಣಿ ಬಾಲವಿಧವೆಯಾಗಿ ಆಶ್ರಮ ಸೇರಿದವಳು. ಈಗವಳಿಗೆ ಯೌವನ. ಊರಿನ ಹಿರಿಯ ಸೇಠ್‌ ಮಗನ ಜತೆ ಪ್ರೇಮವಾಗುತ್ತದೆ. ವಿಧವಾಶ್ರಮವೆಂಬ ಜೈಲಿನಿಂದ ತಪ್ಪಿಸಿಕೊಂಡು ಹೋಗಬೇಕು ಎಂಬ ಕನಸನ್ನು ಕಾಣುತ್ತಿರುವವಳು. ಆದರೆ ತಾನು ಪ್ರೇಮಿಸುತ್ತಿರುವ ಹುಡುಗನ ತಂದೆಯೇ ತನ್ನನ್ನು ಭೋಗಿಸಿದ್ದಾನೆ ಎಂಬುದು ತಿಳಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮನಸ್ಸೊಳಗೆ ಸಾಧ್ಯವಾಗಿಸಿಕೊಂಡ ಬಿಡುಗಡೆ ಸಮಾಜದಲ್ಲಿ ಸಾಧ್ಯವಾಗದೇ ಹೋಗುತ್ತದೆ. ಇನ್ನೊಬ್ಬಳು ಚೂಯಿಯಾ. ಈಗಷ್ಟೇ ಆಶ್ರಮ ಸೇರಿಕೊಂಡಿರುವ ಎಂಟು ವರ್ಷದ ಬಾಲವಿಧವೆ. ಅವಳು ಭವಿಷ್ಯದ ಬೆಳಕಿನ ಪ್ರತಿನಿಧಿಯೂ ಹೌದು.
ಈ ನಾಲ್ಕು ಎಳೆಗಳನ್ನು ಇಟ್ಟುಕೊಂಡು ದೀಪಾ, ಮನುಷ್ಯಸಹಜ ಶ್ರೀಮಂತ ಜೀವನವನ್ನು ಅಕಾರಣವಾಗಿ ಬರಡುಗೊಳಿಸುವ ಸಂಪ್ರದಾಯಗಳ ಕ್ರೌರ್ಯವನ್ನು ಅನಾವರಣಗೊಳಿಸಿದ್ದಾರೆ. ಚಿತ್ರದಲ್ಲಿ ಮೊದಲಿನಿಂದಲೂ ಗಾಂಧೀಜಿ ಬೇರೆ ಬೇರೆ ಬಗೆಗಳಲ್ಲಿ ಉಲ್ಲೇಖಗೊಳ್ಳುತ್ತಲೇ ಹೋಗುತ್ತಾರೆ. ಕೊನೆಯಲ್ಲಿ ಅತ್ಯಾಚಾರಕ್ಕೊಳಗಾದ ಚೂಯಿಯಾಳನ್ನು ಶಕುಂತಲಾ ಗಾಂಧೀಜಿ ಪ್ರಯಾಣಿಸುತ್ತಿರುವ ರೈಲಿನಲ್ಲಿ ಹಾಕಿ ಕಳಿಸುವುದೂ ಚಿತ್ರಕ್ಕೆ ಸಿಕ್ಕಿರುವ ಅತ್ಯಂತ ಪ್ರಭಾವಿ ಮತ್ತು ಆಶಾದಾಯಕ ಅಂತ್ಯ.
​
ಎ.ಆರ್‌. ರೆಹಮಾನ್‌ ಅವರ ಸಂಯೋಜನೆಯ ಎಲ್ಲ ಹಾಡುಗಳೂ ಮನಸ್ಸಿನೊಳಗೆ ಭಾವತರಂಗಗಳನ್ನು ಎಬ್ಬಿಸುವಷ್ಟು ಶಕ್ತವಾಗಿದೆ. ಗಿಲ್ಸ್‌ ನುಟ್‌ಜೆನ್ಸ್‌ ಅವರ ಕ್ಯಾಮೆರಾ, ಕತ್ತಲೆ ಬೆಳಕಿನ ಕಾವ್ಯಾತ್ಮಕ ಸಂಯೋಜನೆಯ ಮೂಲಕವೇ ಕಥೆಯನ್ನು ಇನ್ನೊಂದು ಮಟ್ಟಕ್ಕೆ ಏರಿಸುತ್ತದೆ. ಪುಟಾಣಿ ಕಲಾವಿದೆ ಸರಳಾ ಕಾರಿಯಾ ವಾಸಮ್‌ ಬಹು ಬೇಗ ನಮ್ಮ ಭಾವಕೋಶದ ಭಾಗವಾಗಿಬಿಡುತ್ತಾಳೆ. ಲೀಸಾ ರೇ, ಸೀಮಾ ಬಿಸ್ವಾಸ್‌, ಜಾನ್‌ ಅಬ್ರಾಂ ಎಲ್ಲರ ಅಭಿನಯವೂ ಇಷ್ಟವಾಗುವಂತಿದೆ. https://goo.gl/anPKcN ಕೊಂಡಿ ಬಳಸಿಕೊಂಡು ‘ವಾಟರ್‌’ ಸಿನಿಮಾ ನೋಡಬಹುದು.

ಕೃಪೆ
ಪ್ರಜಾವಾಣಿ
22-02-2018

0 Comments

    Categories

    All
    Introduction To Social Work
    Others
    Social Work Research


    Niruta Publications

    Social Workers- Karnataka

    Leaders Talk

    Ramesha Niratanka

    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    List Your Product on Our Website 

    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com