Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Citizens Connect
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Job Portal
  • Media Mentions
    • Photos
    • Videos
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Citizens Connect
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Job Portal
  • Media Mentions
    • Photos
    • Videos
  • Contact Us
Niruta Publications

ಕಾಪು : ಕಿರುಚಿತ್ರದ ಮೂಲಕ ರಕ್ತದಾನ ಜಾಗೃತಿ

6/27/2018

0 Comments

 
Picture
0 Comments

Domestic Enquiry a way of learning

6/27/2018

3 Comments

 
HR Connect Karnataka ತಂಡದ ವತಿಯಿಂದ Domestic Enquiry ಯ ಕುರಿತು ಒಂದು ಕಿರುಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಇದೊಂದು ಒಳ್ಳೆಯ ಕೊಡುಗೆ. ಈ ಕಿರುಚಿತ್ರದ ತಂಡಕ್ಕೆ ನಿರಾತಂಕದ ಹಾಗೂ ಸಮಾಜಕಾರ್ಯದ ಹೆಜ್ಜೆಗಳು ಪರವಾಗಿ ಅಭಿನಂದನೆಗಳು. ಈ ಕಿರುಚಿತ್ರದ ಸಿಡಿ (CD) ಗಳನ್ನು ಖರೀದಿಸುವುದರ ಮೂಲಕ ಈ ತಂಡವು ಇನ್ನೂ ವಿಭಿನ್ನ ಪ್ರಯತ್ನಗಳನ್ನು ನಡೆಸಲು ಅವಕಾಶ ಮಾಡಿಕೊಡಬೇಕಾಗಿ ಈ ಮೂಲಕ ಕೋರಲಾಗಿದೆ. ಈ ಕಿರುಚಿತ್ರದ ಸಿಡಿ ಗಾಗಿ 9945582058 ಗೆ ಸಂಪರ್ಕಿಸಬಹುದು.

ರಮೇಶ ಎಂ.ಎಚ್.
ನಿರಾತಂಕ

Picture
Picture
3 Comments

ದ್ಯಾವ್ರೇ

2/28/2018

0 Comments

 
Picture
‘ದ್ಯಾವ್ರೇ’ ಎನ್ನುವುದು ಈ ಶೀರ್ಷಿಕೆಯಷ್ಟೇ ಅಲ್ಲ, ಅದೊಂದು ಆರ್ತನಾದ. ಮಾನವೀಯತೆಯ ಕರೆಯೂ ಹೌದು. ಬೇರೆ ಬೇರೆ ಕಾರಣಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಒಂದಿಷ್ಟು ಕೈದಿಗಳ ಬದುಕಿನ ಕಥೆಯನ್ನು ವಿಶಿಷ್ಟ ನಿರೂಪಣಾ ತಂತ್ರದ ಮೂಲಕ ಗಡ್ಡ ವಿಜಿ ಹೇಳಿದ್ದಾರೆ.

‘ಹಣ್ಣು ತಿಂದ್ರೆ ನೇಮು; ಸಿಪ್ಪೆ ತಿಂದ್ರೆ ಕ್ರೈಮು’

ಇದು ದ್ಯಾವ್ರೇ ಚಿತ್ರದ ಮೊದಲು ಮತ್ತು ಕೊನೆಯ ದೃಶ್ಯ ಎರಡರಲ್ಲಿಯೂ ಬರುವ ಮಾತು. ದೊಡ್ಡ ದೊಡ್ಡ ಅಪರಾಧಗಳನ್ನು ಕದ್ದುಮುಚ್ಚಿ ಮಾಡುವವರು ಜೈಲಿನ ಹೊರಗೆ ರಾಜಾರೋಷವಾಗಿರುತ್ತಾರೆ. ಆದರೆ ಬದುಕಿನ ಆಕಸ್ಮಿಕಗಳಿಗೆ ಸಿಲುಕಿ, ಆ ಕ್ಷಣದಲ್ಲಿ ಮೈಮರೆತವರು ಜೈಲಿನೊಳಗೆ ಕೊಳೆಯುತ್ತಿರುತ್ತಾರೆ. ಇಂಥದ್ದೊಂದು ಎಳೆ ಇಟ್ಟುಕೊಂಡು ಗಡ್ಡ ವಿಜಿ ಕಟ್ಟಿದ ಸಿನಿಮಾ ‘ದ್ಯಾವ್ರೇ’. 2013ರಲ್ಲಿ ಬಿಡುಗಡೆಯಾದ ಈ ಚಿತ್ರ ವಾಣಿಜ್ಯಾತ್ಮಕವಾಗಿ ಯಶಸ್ಸನ್ನೇನೂ ಕಂಡಿದ್ದಲ್ಲ. ಆದರೆ ವಸ್ತುವಿನಲ್ಲಿನ ಹೊಸತನ ಮತ್ತು ‘ಅಪರಾಧ’ದ ವ್ಯಾಖ್ಯಾನಗಳನ್ನು ಮುರಿದು ಕಟ್ಟುವ ಪ್ರಯತ್ನದ ಕಾರಣದಿಂದ ಗಮನಸೆಳಯುವಂಥ ಚಿತ್ರ.

‘ದ್ಯಾವ್ರೇ’ ಎನ್ನುವುದು ಈ ಶೀರ್ಷಿಕೆಯಷ್ಟೇ ಅಲ್ಲ, ಅದೊಂದು ಆರ್ತನಾದ. ಮಾನವೀಯತೆಯ ಕರೆಯೂ ಹೌದು. ಬೇರೆ ಬೇರೆ ಕಾರಣಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಒಂದಿಷ್ಟು ಕೈದಿಗಳ ಬದುಕಿನ ಕಥೆಯನ್ನು ವಿಶಿಷ್ಟ ನಿರೂಪಣಾ ತಂತ್ರದ ಮೂಲಕ ಗಡ್ಡ ವಿಜಿ ಹೇಳಿದ್ದಾರೆ. ಇವರೆಲ್ಲರೊಳಗಿನ ಮನುಷ್ಯತ್ವವನ್ನು ಉದ್ದೀಪಿಸುವ, ಮೇಲ್ನೋಟಕ್ಕೆ ವಿಕ್ಷಿಪ್ತ ಎನಿಸುವ, ಆದರೆ ಆಳದಲ್ಲಿ ಅಷ್ಟೇ ಸಹಾನುಭೂತಿ ಹೊಂದಿರುವ ಜೈಲರ್‌ ಪಾತ್ರದಲ್ಲಿ ನಿರ್ದೇಶಕ ಯೋಗರಾಜ್‌ ಭಟ್‌ ನಟಿಸಿದ್ದಾರೆ. ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ ಮೊದಲ ಸಿನಿಮಾ ಇದು ಎನ್ನುವುದೂ ಇದರ ವಿಶೇಷತೆಗಳಲ್ಲೊಂದು.

ಜೈಲರ್‌ ಈಗ ತನ್ನದಲ್ಲದ ತಪ್ಪಿಗೆ ಕೈದಿಯಾಗಿ, ಕಂಬಿಗಳ ಹಿಂದೆ ಬದುಕ ಸವೆಸುತ್ತಿದ್ದಾನೆ. ಅವನು ತನ್ನ ವೃತ್ತಿಬದುಕಿನಲ್ಲಿ ಕಂಡ ಅನುಭವಗಳನ್ನು ಒಂದು ಕಾದಂಬರಿಯಾಗಿ ಬರೆಯುತ್ತಿದ್ದಾನೆ. ಆ ಕಾದಂಬರಿಯೇ ಈ ಸಿನಿಮಾ.

ಖಾಕಿಯೊಳಗಿನ ಅಪರಾಧಿಗಳು, ಕೈದಿಯೊಳಗಿನ ಸಜ್ಜನರು, ಸಜ್ಜನರ ಮುಖವಾಡದೊಳಗಿನ ಪಾತಕಿಗಳು, ಪಾತಕ ದಿರಿಸಿನಲ್ಲಿನ ಮುಗ್ಧರು ಹೀಗೆ ಸಮಾಜದ ರೂಢಿಗತ ನಂಬಿಕೆಯನ್ನು ಮುರಿಯುತ್ತಲೇ ಹೋಗುತ್ತದೆ ಈ ಸಿನಿಮಾ. ಹಾಡುಗಳ ಕಾರಣಕ್ಕೂ ದ್ಯಾವ್ರೇ ಚಿತ್ರ ಮನಸ್ಸಿನಲ್ಲಿ ಉಳಿಯುತ್ತದೆ. ಯೋಗರಾಜ್‌ ಭಟ್‌ ಮತ್ತು ಜಯಂತ ಕಾಯ್ಕಿಣಿ ಬರೆದ ಹಾಡುಗಳು ಈ ಚಿತ್ರದಲ್ಲಿ ಒಂದು ಕ್ಯಾರೆಕ್ಟರ್‌ ಆಗಿಯೇ ಜೀವತಳೆದಿವೆ. ಸಿನಿಮಾದ ಹೊರತಾಗಿಯೂ ಮನಸ್ಸಿನಲ್ಲಿ ನೆಲೆನಿಂತು ಕಾಡುವ ಹಾಗಿವೆ. ಅವುಗಳಿಗೆ ವೀರ್‌ ಸಮರ್ಥ್‌ ಸಮರ್ಥ ಸಂಗೀತ ಸಂಯೋಜಿಸಿದ್ದಾರೆ.

ಅರಸು, ಸೋನುಗೌಡ, ಯೋಗರಾಜ್‌ ಭಟ್‌, ನೀನಾಸಂ ಸತೀಶ್‌, ರಾಜೇಶ್‌ ನಟರಂಗ, ಶ್ರುತಿ ಹರಿಹರನ್‌ ಎಲ್ಲರ ನಟನೆಯೂ ಅಚ್ಚುಕಟ್ಟಾಗಿದೆ.

ಈ ಚಿತ್ರವನ್ನು ನೀವು ಯೂ ಟ್ಯೂಬ್‌ನಲ್ಲಿ https://goo.gl/HKcNYz ಕೊಂಡಿ ಬಳಸಿ ನೋಡಬಹುದು.
 
ಕೃಪೆ
ಪ್ರಜಾವಾಣಿ
01-03-2018

0 Comments

ವಾಟರ್‌

2/21/2018

0 Comments

 
Picture
ವಾರಾಣಸಿಯಲ್ಲಿ ನಡೆಯುವ ಈ ಕಥನ ವಿಧವೆಯರ ಬದುಕಿನ ದಾರುಣತೆಯನ್ನೂ, ಅವರ ಮೇಲೆ ಶಾಸ್ತ್ರಗಳ ಸಂಕೋಲೆಗಳ ಹಿಂದೆ ನಡೆಯುವ ಶೋಷಣೆಯನ್ನು ದಿಟ್ಟವಾಗಿ ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ.

ಅವಳು ವಿಧವೆ. ಅವನಿಗೆ ಅವಳ ಶ್ವೇತವಸ್ತ್ರಕ್ಕಿಂತ ಮನಸ್ಸಿನ ಬಣ್ಣಗಳೇ ಕಾಣುತ್ತಿವೆ. ಗಂಗೆಯ ದಡದ ನಡುರಾತ್ರಿಯದು. ಅವನು ಹೇಳುತ್ತಾನೆ. ‘ಸಮಯ ಬದಲಾಗುತ್ತಿದೆ. ಹಳೆಯ ಪರಂಪರೆ, ಮೂಢನಂಬಿಕೆಗಳು ಎಲ್ಲವೂ ನಾಶವಾಗುತ್ತಿವೆ’ ‘ಇಡೀ ಪರಂಪರೆಯೇ ನಾಶವಾಗಬೇಕೇ? ಅದರಲ್ಲಿ ಒಳ್ಳೆಯ ಅಂಶಗಳೂ ಇವೆಯಲ್ಲ, ಅವನ್ನಾದರೂ ಉಳಿಸಿ ಕೊಳ್ಳಬೇಕಲ್ಲವೇ?’ ಹೀಗೆ ಪರಂಪರೆಯ ಕ್ರೌರ್ಯ ಮತ್ತು ಅದರಿಂದ ಬಿಡುಗಡೆಗೊಳ್ಳುವ ದಾರಿಯಲ್ಲಿನ ಅಡೆತಡೆಗಳನ್ನು ತೋರಿಸುವ ಸಿನಿಮಾ ದೀಪಾ ಮೆಹ್ತಾ ಅವರ ‘ವಾಟರ್‌’. ದೀಪಾ ಮೆಹ್ತಾ ಅವರ ತ್ರಿವಳಿ ಸಿನಿಮಾಗಳ ಮೂರನೇ ಸಿನಿಮಾ ಇದು (ಮತ್ತೆರಡು ‘ಅರ್ಥ್‌’ ಮತ್ತು ‘ಫೈರ್‌’).

ವಾರಾಣಸಿಯಲ್ಲಿ ನಡೆಯುವ ಈ ಕಥನ ವಿಧವೆಯರ ಬದುಕಿನ ದಾರುಣತೆಯನ್ನೂ, ಅವರ ಮೇಲೆ ಶಾಸ್ತ್ರಗಳ ಸಂಕೋಲೆಗಳ ಹಿಂದೆ ನಡೆಯುವ ಶೋಷಣೆಯನ್ನು ದಿಟ್ಟವಾಗಿ ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ.

ಬ್ರಿಟಿಷರ ಕಾಲಘಟ್ಟದ ನಾಲ್ಕು ವಿಧವೆಯರನ್ನು ಇಟ್ಟುಕೊಂಡು ಕಥೆಯನ್ನು ಹೇಳುತ್ತ ಹೋಗಿದ್ದಾರೆ ದೀಪಾ.  ಮಧುಮತಿ ವಿಧವೆಯರ ಆಶ್ರಮದ ಹಿರಿಯೆ. ಹಣ್ಣು ಹಣ್ಣು ಮುದುಕಿಯಾಗಿರುವ ಅವಳಿಗೆ ಕಟ್ಟುಪಾಡುಗಳಲ್ಲಿ ಅದಮ್ಯ ನಂಬಿಕೆ. ವಿಧವೆಯರು ಜೀವನಪರ್ಯಂತ ಜಪತಪಗಳಲ್ಲಿ ಕಳೆಯಬೇಕು. ಮದುವೆಯಾದರೆ ನರಕ ಖಂಡಿತ ಎನ್ನುವುದರಲ್ಲಿ ಅವಳಿಗೆ ಸಂದೇಹವಿಲ್ಲ. ಆದರೆ ಅವಳೇ ಊರಿನ ಶ್ರೀಮಂತರ ಕಾಮತೃಷೆಗಾಗಿ ವಿಧವೆಯರನ್ನು ಕಳಿಸುವ ದಂಧೆಯನ್ನೂ ಮಾಡುತ್ತಾಳೆ. ಶಕುಂತಲಾ ನಡುವಯಸ್ಸಿನ ವಿಧವೆ. ಅವಳು ವಿಧವಾಜೀವನವನ್ನು ಪರಂಪರಾ ನಿಷ್ಠಳಾಗಿಯೇ ಸಾಗಿಸುತ್ತಿದ್ದರೂ ಅವಳೊಳಗೆ ಗೊಂದಲವೂ ಇದೆ. ‌

‘ವಿಧವೆಯರು ವಿವಾಹ ಆಗಲೇಬಾರದೇ?’ ಎಂದು ಅವಳು ಪಂಡಿತರನ್ನು ಕೇಳಬಲ್ಲಳು. ಇನ್ನು ಕಲ್ಯಾಣಿ ಬಾಲವಿಧವೆಯಾಗಿ ಆಶ್ರಮ ಸೇರಿದವಳು. ಈಗವಳಿಗೆ ಯೌವನ. ಊರಿನ ಹಿರಿಯ ಸೇಠ್‌ ಮಗನ ಜತೆ ಪ್ರೇಮವಾಗುತ್ತದೆ. ವಿಧವಾಶ್ರಮವೆಂಬ ಜೈಲಿನಿಂದ ತಪ್ಪಿಸಿಕೊಂಡು ಹೋಗಬೇಕು ಎಂಬ ಕನಸನ್ನು ಕಾಣುತ್ತಿರುವವಳು. ಆದರೆ ತಾನು ಪ್ರೇಮಿಸುತ್ತಿರುವ ಹುಡುಗನ ತಂದೆಯೇ ತನ್ನನ್ನು ಭೋಗಿಸಿದ್ದಾನೆ ಎಂಬುದು ತಿಳಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮನಸ್ಸೊಳಗೆ ಸಾಧ್ಯವಾಗಿಸಿಕೊಂಡ ಬಿಡುಗಡೆ ಸಮಾಜದಲ್ಲಿ ಸಾಧ್ಯವಾಗದೇ ಹೋಗುತ್ತದೆ. ಇನ್ನೊಬ್ಬಳು ಚೂಯಿಯಾ. ಈಗಷ್ಟೇ ಆಶ್ರಮ ಸೇರಿಕೊಂಡಿರುವ ಎಂಟು ವರ್ಷದ ಬಾಲವಿಧವೆ. ಅವಳು ಭವಿಷ್ಯದ ಬೆಳಕಿನ ಪ್ರತಿನಿಧಿಯೂ ಹೌದು.
ಈ ನಾಲ್ಕು ಎಳೆಗಳನ್ನು ಇಟ್ಟುಕೊಂಡು ದೀಪಾ, ಮನುಷ್ಯಸಹಜ ಶ್ರೀಮಂತ ಜೀವನವನ್ನು ಅಕಾರಣವಾಗಿ ಬರಡುಗೊಳಿಸುವ ಸಂಪ್ರದಾಯಗಳ ಕ್ರೌರ್ಯವನ್ನು ಅನಾವರಣಗೊಳಿಸಿದ್ದಾರೆ. ಚಿತ್ರದಲ್ಲಿ ಮೊದಲಿನಿಂದಲೂ ಗಾಂಧೀಜಿ ಬೇರೆ ಬೇರೆ ಬಗೆಗಳಲ್ಲಿ ಉಲ್ಲೇಖಗೊಳ್ಳುತ್ತಲೇ ಹೋಗುತ್ತಾರೆ. ಕೊನೆಯಲ್ಲಿ ಅತ್ಯಾಚಾರಕ್ಕೊಳಗಾದ ಚೂಯಿಯಾಳನ್ನು ಶಕುಂತಲಾ ಗಾಂಧೀಜಿ ಪ್ರಯಾಣಿಸುತ್ತಿರುವ ರೈಲಿನಲ್ಲಿ ಹಾಕಿ ಕಳಿಸುವುದೂ ಚಿತ್ರಕ್ಕೆ ಸಿಕ್ಕಿರುವ ಅತ್ಯಂತ ಪ್ರಭಾವಿ ಮತ್ತು ಆಶಾದಾಯಕ ಅಂತ್ಯ.
​
ಎ.ಆರ್‌. ರೆಹಮಾನ್‌ ಅವರ ಸಂಯೋಜನೆಯ ಎಲ್ಲ ಹಾಡುಗಳೂ ಮನಸ್ಸಿನೊಳಗೆ ಭಾವತರಂಗಗಳನ್ನು ಎಬ್ಬಿಸುವಷ್ಟು ಶಕ್ತವಾಗಿದೆ. ಗಿಲ್ಸ್‌ ನುಟ್‌ಜೆನ್ಸ್‌ ಅವರ ಕ್ಯಾಮೆರಾ, ಕತ್ತಲೆ ಬೆಳಕಿನ ಕಾವ್ಯಾತ್ಮಕ ಸಂಯೋಜನೆಯ ಮೂಲಕವೇ ಕಥೆಯನ್ನು ಇನ್ನೊಂದು ಮಟ್ಟಕ್ಕೆ ಏರಿಸುತ್ತದೆ. ಪುಟಾಣಿ ಕಲಾವಿದೆ ಸರಳಾ ಕಾರಿಯಾ ವಾಸಮ್‌ ಬಹು ಬೇಗ ನಮ್ಮ ಭಾವಕೋಶದ ಭಾಗವಾಗಿಬಿಡುತ್ತಾಳೆ. ಲೀಸಾ ರೇ, ಸೀಮಾ ಬಿಸ್ವಾಸ್‌, ಜಾನ್‌ ಅಬ್ರಾಂ ಎಲ್ಲರ ಅಭಿನಯವೂ ಇಷ್ಟವಾಗುವಂತಿದೆ. https://goo.gl/anPKcN ಕೊಂಡಿ ಬಳಸಿಕೊಂಡು ‘ವಾಟರ್‌’ ಸಿನಿಮಾ ನೋಡಬಹುದು.

ಕೃಪೆ
ಪ್ರಜಾವಾಣಿ
22-02-2018

0 Comments

ಚಿಲ್ಡ್ರನ್‌ ಆಫ್‌ ಹೆವನ್‌

1/24/2018

0 Comments

 
Picture
​ಕಾಣೆಯಾಗಿರುವ ಶೂ, ಜಗತ್ತಿನ ಎಲ್ಲ ಮಕ್ಕಳ ಭಗ್ನಕನಸಿನ ಪ್ರತೀಕವಾಗಿ, ಇಲ್ಲದವರ ಬದುಕಿನ ದಾರುಣತೆಯ ಸಂಕೇತವಾಗಿ ಮನಸ್ಸಲ್ಲಿ ಕೂತು ಬಿಡುತ್ತದೆ.  ಈ ಸಿನಿಮಾದ ಕೊನೆಯೂ ಅಷ್ಟೇ ಅರ್ಥಪೂರ್ಣವಾಗಿದೆ.

ಇರಾನ್‌ನ ಖ್ಯಾತ ನಿರ್ದೇಶಕ ಮಜೀದ್ ಮಜೀದಿ ನಿರ್ದೇಶನದ ಚಿತ್ರ ಚಿಲ್ಡ್ರನ್‌ ಆಫ್‌ ಹೆವನ್‌. ‘ದೊಡ್ಡವರ’ ವ್ಯಾವಹಾರಿಕ ಜಗತ್ತಿನ ಲೆಕ್ಕಾಚಾರಗಳಿಗೆ ಮಕ್ಕಳ ಮುಗ್ಧ ಜಗತ್ತು ನಲುಗುವ ಕಥೆಯನ್ನು ಅತ್ಯಂತ ನವಿರಾಗಿ ಹೇಳುವ ಸಿನಿಮಾ ಇದು.

ಅಲಿ ಏಳೆಂಟು ವರ್ಷದ ಪೋರ. ಅವನಿಗೆ ಜೆಹ್ರಾ ಎಂಬ ನಾಲ್ಕೈದು ವರ್ಷದ ಪುಟ್ಟ ತಂಗಿ ಇದ್ದಾಳೆ. ಮನೆ ಬಾಡಿಗೆ ಕಟ್ಟಲೂ ಹಣ ಇಲ್ಲದ ಬಡ ಕುಟುಂಬ ಅವರದು.

ಒಂದು ದಿನ ತಂಗಿಯ ಕೆಂಪು ಶೂಗಳನ್ನು ರಿಪೇರಿಗೆಂದು ತೆಗೆದುಕೊಂಡು ಹೋದ ಅಲಿ ಅದನ್ನು ಕಳೆದುಬಿಡುತ್ತಾನೆ. ಮನೆಯಲ್ಲಿ ಈ ವಿಷಯ ಗೊತ್ತಾದರೆ ಅಪ್ಪನಿಂದ ಏಟು ಬೀಳುವುದು ಖಚಿತ ಎಂದು ತಂಗಿಯ ಬಳಿ ಗುಟ್ಟು ಕಾಪಾಡುವಂತೆ ಕೇಳಿಕೊಳ್ಳುತ್ತಾನೆ. ಅವಳೂ ಒಪ್ಪಿಕೊಳ್ಳುತ್ತಾಳೆ.

ಹೀಗೆ ಕಳೆದು ಹೋದ ಒಂದು ಜೊತೆ ಶೂ ಸುತ್ತಲೇ ಮಕ್ಕಳಿಬ್ಬರ ಪ್ರಯಾಸದ ಕಥನವನ್ನು ಕಟ್ಟುತ್ತ ಹೋಗುತ್ತಾರೆ ನಿರ್ದೇಶಕರು. ಶೂ ಕಾಣೆಯಾಗಿರುವ ಸಂಗತಿಯನ್ನು ಮರೆಮಾಚಲು ಅಲಿಯ ಶೂವನ್ನೇ ತಂಗಿ ದಿನವು ಸಂಜೆ ಹಾಕಿಕೊಂಡು ಶಾಲೆಗೆ ಹೋಗುವುದು ಎಂದು ಒಪ್ಪಂದ ಮಾಡಿಕೊಳ್ಳುತ್ತಾರೆ.

ಮಕ್ಕಳ ಎಳೆ ಮನಸ್ಸಲ್ಲಿನ ತಾಜಾ ಕನಸುಗಳು ಬಡತನದ ಬೇಗೆಗೆ ಬಾಡುವುದನ್ನು ಮಜೀದ್‌ ಈ ಸಿನಿಮಾದಲ್ಲಿ ಎಲ್ಲೂ ಗೋಳು ಅನಿಸದ ಹಾಗೆಯೇ ಹೇಳಿದ್ದಾರೆ. ಕಾಣೆಯಾಗಿರುವ ಶೂ, ಜಗತ್ತಿನ ಎಲ್ಲ ಮಕ್ಕಳ ಭಗ್ನಕನಸಿನ ಪ್ರತೀಕವಾಗಿ, ಇಲ್ಲದವರ ಬದುಕಿನ ದಾರುಣತೆಯ ಸಂಕೇತವಾಗಿ ಮನಸ್ಸಲ್ಲಿ ಕೂತು ಬಿಡುತ್ತದೆ.  ಈ ಸಿನಿಮಾದ ಕೊನೆಯೂ ಅಷ್ಟೇ ಅರ್ಥಪೂರ್ಣವಾಗಿದೆ. 

ನಾಲ್ಕು ಕಿ.ಮೀ. ದೂರದ ಓಟದ ಸ್ಪರ್ಧೆಯೊಂದರಲ್ಲಿ ಮೂರನೇ ಬಹುಮಾನ ಬಂದವರಿಗೆ ಒಂದು ಜೊತೆ ಶೂ ಬಹುಮಾನ ಇರುತ್ತದೆ. ಇದನ್ನು ಕೇಳಿಸಿಕೊಂಡ ಅಲಿ, ತನ್ನ ತಂಗಿಗೆ ಆ ಶೂವನ್ನು ಗೆದ್ದುಕೊಡಲು ಬರಿಗಾಲಿನಲ್ಲಿ ಓಡುತ್ತಾನೆ. ಅವನಿಗೆ ಮೊದಲನೇ ಸ್ಥಾನ ಬರುವ ಇಚ್ಛೆ ಇಲ್ಲ. ಎರಡನೇ ಸ್ಥಾನದತ್ತಲೂ ಗಮನ ಇಲ್ಲ. ಮೂರನೇ ಸ್ಥಾನವೇ ಬರಬೇಕು. ಆದರೆ ಅಚಾನಕ್ಕಾಗಿ ಅಲಿ ಮೊದಲಿಗನಾಗಿಬಿಡುತ್ತಾನೆ. ಅಲ್ಲಿಯೂ ಅವನಿಗೆ ಶೂ ತಪ್ಪಿಹೋಗುತ್ತದೆ. ಹಾಗೆಯೇ ಮೊದಲ ಬಹುಮಾನ ಬಂದದ್ದು ಅವನಲ್ಲಿ ಖುಷಿಗಿಂತ ದುಃಖವನ್ನೇ ಹೆಚ್ಚಾಗಿ ತರುತ್ತದೆ.

ಹೀಗೆ ಮಕ್ಕಳ ಬದುಕಿನ ಕಥೆ ಹೇಳುತ್ತಲೇ ನಿರ್ದೇಶಕರು ದೊಡ್ಡವರಿಗೂ ಹಲವು ಮಾನವೀಯ ಪಾಠಗಳನ್ನು ಪಾಠ ಎನಿಸದ ರೀತಿಯಲ್ಲಿ ಹೇಳಿದ್ದಾರೆ.

https://goo.gl/JDMrqE ಕೊಂಡಿ ಬಳಸಿ ಅಂತರ್ಜಾಲದಲ್ಲಿ ಈ ಚಿತ್ರ ವೀಕ್ಷಿಸಬಹುದು.

ಕೃಪೆ
ಪ್ರಜಾವಾಣಿ
25-01-2018
0 Comments

Dr.Ravindranath Shanbhag - Akku and Leela real story

1/7/2018

2 Comments

 
2 Comments

“Our mums are sex workers” - BBC Stories

9/1/2017

5 Comments

 
5 Comments

Social Casework Philosophy, Principles and Components

11/23/2016

0 Comments

 
0 Comments

Social Casework Practice in Indian Society Relevance, Scope and Influence of Culture

11/23/2016

0 Comments

 
0 Comments

Historical Development of Social Casework

11/23/2016

2 Comments

 
2 Comments

THE INDIAN BANKER TAKING A GRASS ROOTS APPROACH TO REFORMING THE SYSTEM

8/2/2016

0 Comments

 
0 Comments

Models in social Group work

6/19/2016

0 Comments

 
0 Comments

Dr. Venkat Pulla Strengths Perspective 2014 Conversations

5/20/2016

0 Comments

 
Social work and human services professions gain great outcomes when they work with inherent strengths of individuals, families groups and organisations. Whenever we assist people in their recovery and their empowerment our commitment to build on these inherent strengths goes a long way. This approach lets us refrain from using any damaging and labeling and stigmatized language. Descriptions ascribed pathology owned by persons groups and organisations that suggest acceptance of their condition as being hopeless or helpless to change are constructively challenged through this practice. We have a great opportunity here to foster hope from within and by constantly focusing and working with precedent successes, we could see change by asking small questions: what has worked for the clients before? What does not work for them? And what might work in the present situation? These three questions allow facilitators and clients to make important changes in the processes and goals of engagement that allows the desired changes to blossom. In this paper the author describes this approach in social work and expands on its assumptions and its core elements.

Key words: resilience, strengths based practice, strengths approach, social work
0 Comments

Introduction to Social Case Work

5/17/2016

0 Comments

 
0 Comments

Research Methodology : Introduction

3/25/2016

0 Comments

 
0 Comments

Research Methodology Conceptual Foundation

3/25/2016

0 Comments

 
0 Comments

Introduction to Research Methodology - Debashish Banerji

3/25/2016

0 Comments

 
0 Comments

what is social work 

3/25/2016

1 Comment

 
1 Comment

The Profession of social work 

3/25/2016

0 Comments

 
0 Comments

Introduction to Social Work

3/25/2016

0 Comments

 
0 Comments

Be Media Savvy Social Workers 

3/15/2016

0 Comments

 
0 Comments

    Categories

    All
    Case Work
    Community Work
    Group Work
    Introduction To Social Work
    Others
    Social Work Research


    Niruta Publications

    Social Workers- Karnataka

    Leaders Talk

    Ramesha Niratanka

    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    List Your Product on Our Website 

    RSS Feed


SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • CERTIFICATE TRAINING COURSES
  • TRAINING PROGRAMMES

nIRATHANKA CITIZENS CONNECT

  • NIRATHANKA CITIZENS CONNECT

JOB

  • JOB PORTAL​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe



Picture
Follow Niruta Publications WhatsApp Channel
Follow Social Work Learning Academy WhatsApp Channel
Follow Social Work Books WhatsApp Channel



JOIN OUR ONLINE GROUPS


ONLINE STORE


Copyright Niruta Publications 2021,    Website Designing & Developed by: www.mhrspl.com