|
ಲೇಖಕರು : ಡಾ. ಸುಜಾತ ಎಂ & ಡಾ. ಕುಮುದಿನಿ ಅಚ್ಚಿ ಕಳೆದ ಎಂಟು ದಶಕಗಳಲ್ಲಿ ಸಮಾಜಕಾರ್ಯ ಶಿಕ್ಷಣವು ಹುಲಸಾಗಿ ಬೆಳೆದು ಬಂದಿದೆ. ಎಂಬತ್ತರ ದಶಕದಲ್ಲಿ ಬೆರಳೆಣಿಕೆಯಷ್ಟು ಇದ್ದ ಸಮಾಜಕಾರ್ಯ ಶಿಕ್ಷಣದ ಸಂಸ್ಥೆಗಳು ಇಂದು ಸಾವಿರದ ಅಂಕಿಮೀರಿ ಬೆಳೆದಿವೆ. ವೃತ್ತಿನಿರತ ಸಮಾಜಕಾರ್ಯಕರ್ತರಿಗೆ ಹೊಸ ಹೊಸ ಕ್ಷೇತ್ರಗಳು ಸ್ವೀಕರಿಸುತ್ತಿವೆ. ವೃತ್ತಿಪರ ಸಮಾಜಕಾರ್ಯದ ಸೇವೆಯನ್ನು ಜನರು, ಸಮುದಾಯಗಳು ಗುರುತಿಸುತ್ತಿವೆ. ಆದರೆ ಪಾಶ್ಚಿಮಾತ್ಯ ಪ್ರಭಾವದಲ್ಲಿ ಬೆಳೆದ ಭಾರತೀಯ ಸಮಾಜಕಾರ್ಯ ಶಿಕ್ಷಣವು ಹಲವು ತೊಂದರೆಗಳನ್ನು ಎದುರಿಸುತ್ತಿದೆ. ಅದರಲ್ಲಿ ಪ್ರಮುಖವಾದ ಸಮಸ್ಯೆ ಎಂದರೆ ಪ್ರಾಂತಿಯ ಭಾಷೆಯಲ್ಲಿ ಬರಹಗಳು, ಸಾಹಿತ್ಯಗಳು, ಪ್ರಕಟನೆಗಳು ಬರದೇ ಇರುವುದು. ಕನ್ನಡದ ಗ್ರಾಮೀಣ ವಿದ್ಯಾರ್ಥಿಗಳು ಇಂಗ್ಲೀಷನ್ನು ಅರ್ಥಮಾಡಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿರುವುದಿಲ್ಲ. ಹೀಗಾಗಿ ಅವರು ವಿಷಯದಲ್ಲಿ ಪ್ರಭುತ್ವವನ್ನು ಸಾಧಿಸುವಲ್ಲಿ ಹಿಂದೆ ಬೀಳುತ್ತಿದ್ದಾರೆ. ಪ್ರಾಂತೀಯ ಭಾಷೆಯಲ್ಲಿ ಪುಸ್ತಕಗಳು, ಬರಹಗಳು ಬಂದಿದ್ದಾದರೆ ವಿದ್ಯಾರ್ಥಿಗಳು ಸಹಜ ಸರಳವಾಗಿ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ನಮ್ಮ ಬಹುತೇಕ ಬರಹಗಳು, ಲೇಖನಗಳು ಇಂಗ್ಲೀಷಿನಲ್ಲಿ ಬರುತ್ತಿವೆ. ಇದನ್ನು ಅರಿತುಕೊಂಡ ಡಾ. ಎಂ. ಸುಜಾತ ಅವರು ಕನ್ನಡದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಕನ್ನಡದಲ್ಲಿ ಸಮಾಜಕಾರ್ಯ ಸಂಶೋಧನೆ ಎಂಬ ಗ್ರಂಥವನ್ನು ಹೊರತರುತ್ತಿರುವುದು ತುಂಬಾ ಸಂತೋಷದ ವಿಷಯ.
ಸಮಾಜಕಾರ್ಯ ಶಿಕ್ಷಣವು ಇನ್ನುಳಿದ ಅಧ್ಯಯನಗಳಿಗಿಂತ ವಿಭಿನ್ನವಾಗಿದೆ. ಸಮಾಜದಲ್ಲಿಯ ಸಮಸ್ಯೆಗಳನ್ನು ಸಂಶೋಧನೆಗಳ ಮುಖಾಂತರ ಅರಿತುಕೊಂಡು, ಅದನ್ನು ಅರಗಿಸಿಕೊಂಡು, ಆ ಸಮಸ್ಯೆಗಳಿಗೆ ಉತ್ತರವನ್ನು ಕಂಡು ಹಿಡಿದು, ಅದನ್ನು ಆಚರಣೆಯಲ್ಲಿ ತಂದು, ವ್ಯಕ್ತಿಗಳಿಗೆ, ವೃಂದಗಳಿಗೆ, ಸಮುದಾಯಗಳಿಗೆ ಸಹಾಯವನ್ನು ಮಾಡತಕ್ಕಂತಹ ವೃತ್ತಿ ಇದಾಗಿದೆ. ಸಮಾಜಕಾರ್ಯ ಸಂಶೋಧನೆಯು ಸಮಾಜದಲ್ಲಿಯ ನಿರುದ್ಯೋಗ ಸಮಸ್ಯೆ, ಬಡತನ ಸಮಸ್ಯೆ, ಜಾತಿ-ವರ್ಗ ಬೇಧಗಳ ಸಮಸ್ಯೆ, ಬುಡಕಟ್ಟು ಜನಾಂಗಗಳ ಸಮಸ್ಯೆ, ಊನಶಕ್ತರ- ದೀನದಲಿತರ ಸಮಸ್ಯೆ, ಆರ್ಥಿಕ ಸಂಸ್ಥೆಗಳ ಸಮಸ್ಯೆ, ರಾಜಕೀಯ ಸಮಸ್ಯೆ ಇಂತಹ ಹಲವಾರು ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪರಿಹಾರಗಳನ್ನು ಸೂಚಿಸುತ್ತದೆ ಹಾಗೂ ವೃತ್ತಿಪರವಾದ ಮಧ್ಯಸ್ಥಿಕೆಯನ್ನು ಕೂಡ ಮಾಡುತ್ತದೆ. ಆದುದರಿಂದ ಸಮಾಜಕಾರ್ಯ ಸಂಶೋಧನೆಗೆ ಸಮಾಜಕಾರ್ಯ ಶಿಕ್ಷಣದಲ್ಲಿ ಅತ್ಯಂತ ಮಹತ್ತರವಾದ ಸ್ಥಾನವಿದೆ. ಈ ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬೇಕಾದರೆ ಅದು ಮಾತೃಭಾಷೆಯಲ್ಲಿ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಡಾ. ಎಂ. ಸುಜಾತ ಅವರು ಹೊರತರುತ್ತಿರುವ "ಸಮಾಜಕಾರ್ಯ ಸಂಶೋಧನೆ" ಹೊತ್ತಿಗೆ ವೃತ್ತಿಪರ ಸಮಾಜಕಾರ್ಯಕರ್ತರಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಇತರ ಸಂಬಂಧಿತ ವ್ಯಕ್ತಿಗಳಿಗೆ ಒಂದು ದಾರಿದೀಪವಾಗಲಿದೆ. ಲೇಖಕರು : ಡಾ. ಲೋಕೇಶ್ ಎಂ.ಯು. ಮತ್ತು ಪವಿತ್ರ ಎ.ವಿ. 20ನೇ ಶತಮಾನದಲ್ಲಿ ಆರಂಭಗೊಂಡ ನೂತನ ಜ್ಞಾನ ಶಾಖೆಯಾದ ಸಮಾಜಕಾರ್ಯ ವೃತ್ತಿಪರರಿಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವನ್ನು ಒದಗಿಸುವ ಬಹುಮುಖ ವೃತ್ತಿಯಾಗಿದೆ. ಪ್ರಸ್ತುತ ಸಮಾಜಕಾರ್ಯ ವೃತ್ತಿಯು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪಾತ್ರ ವಹಿಸುತ್ತಿದ್ದು, ಮಾನಸಿಕ ಆರೋಗ್ಯ ರಕ್ಷಣೆಯಲ್ಲೂ ತನ್ನದೇ ಆದ ಮಹತ್ವದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಆಧುನಿಕ ಸಮಾಜದಲ್ಲಿ ನಾನಾ ಕಾರಣಗಳಿಂದ ಮನೋವ್ಯಾಕುಲಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಹಾಗೂ ಅದರಲ್ಲಿರುವ ಸಂಕೀರ್ಣತೆಯ ಸವಾಲುಗಳು ದಿನೇ ದಿನೇ ಅಧಿಕವಾಗುತ್ತಿರುವುದು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ.
Author : Shankar Pathak This book was revised and updated parts of the Shankar Pathak's book "Social Work and Social Welfare", published in 2012 and this book was republished by National Book Trust of India under its subsidy scheme.
Contents PART ONE Social Policy and Social Welfare - A Social Historical Perspective Preface 1. Introduction 2. Towards a Theoretical Framework for the Study of Social Welfare 3. Social Change and Social Welfare in Ancient India 4. Social Policy and Social Welfare in Medieval India (1206-1706) 5. Christian Missionaries and Social Reform in India 6. Social Reform During the Colonial Era 7. Social Policy and Social Welfare During the Colonial Period (1800-1947) 8. Social Welfare: A Comparative Historical Perspective Author : T.K. Nair This book is definite to be a watershed contribution for the reorientation of social work education in the country in the coming decades. Scholars and practitioners have written on different issues needing urgent consideration and intervention. The eighth decade of social work education is only months away and this book is most welcome at this time.
Contents 1. Introduction - T.K.Nair 2. Philosophy of Social Work in Changing India - M.V. Moorthy 3. Evolutionary Excellence in Social Work - J.M.Sampath and Kalpana Sampath 4. Substance Use Disorders and Social Work Interventions - Shanthi Ranganathan 5. Poverty Alleviation through Skill Building: A Social Work Initiative - Nalini Gangadharan 6 Social Justice in India: Reflections - Henry J D’ Souza 7. Promoting Social Justice, Human Rights and Empowerment - Annie Namala 8. Voluntary Sector and Professional Social Work: Trends and Challenges - B. Devi Prasad 9. Should We Re-think the Nature of Social Work? - M.Nadarajah 10. Education for Professional Social Work in India: Overview - R.R. Singh 11. Humanitarianism Professionalized: Dilemmas of Social Work in India - T.K.Nair ಲೇಖಕರು : ಡಾ. ಸಿ.ಆರ್. ಗೋಪಾಲ್ ಹಿರಿಯ ಸಾಹಿತಿಗಳು ಹಾಗೂ ವಾಗ್ಮಿ ಡಾ. ಸಿ.ಆರ್. ಗೋಪಾಲ್ ಅವರು ರಚಿಸಿದ ಭಾಷಣ ಕೈಪಿಡಿ ಒಂದು ಸಂಶೋಧನಾ ಗ್ರಂಥವಾಗಿದೆ. ಭಾಷಣ ಒಂದು ಕಲೆ ಎಂದು ಜಗತ್ತಿನಾದ್ಯಂತ ಪರಿಗಣನೆಗೆ ಒಳಗಾಗಿದೆ. ಮಾತನಾಡುವವರೆಲ್ಲ ಭಾಷಣಕಾರರಾಗಲು ಸಾಧ್ಯವಿಲ್ಲ. ಅದೇ ರೀತಿ ಉಪನ್ಯಾಸ ಮಾಡುವವರು ಭಾಷಣಕಾರರಲ್ಲ. ಏಕೆಂದರೆ ಉಪನ್ಯಾಸವೆಂಬುದು ತರಗತಿಯ ಮಿತಿಯಲ್ಲಿ ವಿಷಯದ ನಿರ್ದಿಷ್ಟತೆಯಲ್ಲಿ ಹೇಳುವ ಬೋಧನೆ. ಇದು ಶೈಕ್ಷಣಿಕ ಶಿಸ್ತಿನ ಬೋಧನೆ. ಆದರೆ ಭಾಷಣ ಹಾಗಲ್ಲ, ಅಲ್ಲಿ ಕಲಿಯುವ ಆಸಕ್ತಿಯ ವಿದ್ಯಾರ್ಥಿಗಳಿರುವುದಿಲ್ಲ. ಅದಕ್ಕೆ ಬದಲಾಗಿ ಕೇಳುವ ಕುತೂಹಲದ ಪ್ರೇಕ್ಷಕರಿರುತ್ತಾರೆ. ಜೊತೆಗೆ ಕೇಳುಗರೆಲ್ಲ ಒಂದೇ ಮನೋಧರ್ಮದವರಲ್ಲ, ಒಂದೇ ಮನಸ್ಥಿತಿಯವರೂ ಅಲ್ಲ. ಭಿನ್ನ ಭಿನ್ನ ಅಭಿರುಚಿಯ, ಭಿನ್ನ ಭಿನ್ನ ಆಸಕ್ತಿಗಳ, ಭಿನ್ನ ಸಮುದಾಯಗಳ ಗುಂಪುಗಳು ಅಲ್ಲಿರುತ್ತವೆ. ಹೀಗಾಗಿ ಭಾಷಣ ಆಯಾ ಭಾಷಣಕಾರನ / ಭಾಷಣಕಾರ್ತಿಯ ಕಲಾತ್ಮಕ ಮೆರುಗಿನಿಂದಾಗಿ ಅದು ಸ್ವೀಕಾರ ಅಥವಾ ನಿರಾಕರಣೆಗೆ ಒಳಗಾಗುತ್ತದೆ.
ಲೇಖಕರು : ಡಾ. ಸಿ.ಆರ್. ಗೋಪಾಲ್ `ಸಮುದಾಯ ಸಂಘಟನೆ ಕೃತಿಯಲ್ಲಿ ಉಪಯುಕ್ತವಾಗುವ ವಿಷಯ ಸಂಗ್ರಹ ಸಾಕಷ್ಟು ಹೇರಳವಾಗಿದೆ. ಸಮುದಾಯ, ಸಮುದಾಯದ ಪ್ರಕಾರಗಳು, ಸಮುದಾಯದ ಲಕ್ಷಣಗಳು, ಸಮಸ್ಯೆಗಳು, ಸಮುದಾಯ ಸಂಘಟನೆಯ ಇತಿಹಾಸ, ಸಂಘಟನೆ, ಅಭಿವೃದ್ಧಿ, ಸಂಘಟನಾ ಮಾದರಿಗಳು, ಗ್ರಹಿಕೆಗಳು, ವೈಶಿಷ್ಟ್ಯತೆಗಳು, ಧ್ಯೇಯೋದ್ದೇಶಗಳು, ತತ್ತ್ವಗಳು, ಪ್ರಕ್ರಿಯೆಗಳು, ಕಾರ್ಯತಂತ್ರಗಳು ಸಮಾಜಕಾರ್ಯ ಕಾರ್ಯಕರ್ತನ ಪಾತ್ರ, ಇವೇ ಮೊದಲಾದ ಹಲವು ಹತ್ತು ಉಪಯುಕ್ತ ವಿಚಾರಗಳ ಬಗ್ಗೆ ಸಮೃದ್ಧ ಮಾಹಿತಿಗಳನ್ನು ವಿಶೇಷ ರೀತಿಯಲ್ಲಿ ಒದಗಿಸಿದ್ದಾರೆ. ಇವುಗಳ ಜೊತೆಗೆ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿರುವ ಸರ್ವೋದಯ ಮತ್ತು ಇತರ ವಿಶಿಷ್ಟ ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆಯೂ ಸಾಕಷ್ಟು ಸಮರ್ಪಕವಾಗಿ ಪರಿಚೈಸಿದ್ದಾರೆ. ಪ್ರತಿಪಾದಿಸಬೇಕಾದ ವಿವಿಧ ವಿಚಾರಗಳನ್ನು ಅಧ್ಯಾಯ, ಉಪ ಅಧ್ಯಾಯ ಹಾಗೂ ಶೀರ್ಷಿಕೆಗಳನ್ನಾಗಿ ವಿಭಾಗಿಸಿಕೊಂಡಿರುವ ಅನುಕ್ರಮ ಸಮಂಜಸವಾಗಿದೆ. ವಿಷಯಗಳನ್ನು ವಿಭಾಗಿಸಿಕೊಂಡಿರುವುದರಲ್ಲಿ ಒಂದು ಸೂಕ್ತ ಕ್ರಮಬದ್ಧತೆ ಇದೆ. ಒಂದು ಬಂಧ ಇದೆ.
ಪರಿವಿಡಿ 1. ಅಧ್ಯಾಯ-ಒಂದು ಪೀಠಿಕೆ, ಸಮುದಾಯ, ವ್ಯಾಖ್ಯೆಗಳು, ಸಮುದಾಯದ ವೈಲಕ್ಷಣಗಳು, ಸಮುದಾಯದ ಬಗ್ಗೆ ಸ್ವಾಭಿಮಾನ, ಐಕ್ಯಭಾವ, ಪರಾವಲಂಬನಾ ಭಾವ, ಪಾತ್ರ ನಿರ್ವಹಣಾ ಭಾವ, ಬದಲಾಗುತ್ತಿರುವ ಪರಿಸ್ಥಿತಿ, ಸಮುದಾಯ-ಸಮಾಜ, ನೆರೆಹೊರೆ, ಸಂಘ, ಸಂಸ್ಥೆ ಇವುಗಳಲ್ಲಿರುವ ವ್ಯತ್ಯಾಸಗಳು. 2. ಅಧ್ಯಾಯ-ಎರಡು ಸಮುದಾಯದ ಪ್ರಕಾರಗಳು :- ಭೌಗೋಲಿಕ ಮತ್ತು ಕ್ರಿಯಾತ್ಮಕ ಸಮುದಾಯಗಳು, ಗ್ರಾಮ ಸಮುದಾಯ, ಗ್ರಾಮ ಸಮುದಾಯದ ವೈಲಕ್ಷಣಗಳು, ಗ್ರಾಮ ಸಮುದಾಯಗಳ ವೈವಿಧ್ಯತೆ, ನಗರ ಸಮುದಾಯ, ಕೆಲವು ಆಯ್ದ ವ್ಯಾಖ್ಯೆಗಳು, ನಗರ ಸಮುದಾಯದ ವೈಲಕ್ಷಣಗಳು, ಬುಡಕಟ್ಟು ಸಮುದಾಯಗಳು, ಬುಡಕಟ್ಟು ಸಮುದಾಯದ ಪ್ರಮುಖ ಲಕ್ಷಣಗಳು. 3. ಅಧ್ಯಾಯ-ಮೂರು, ಭಾಗ-ಒಂದು ಗ್ರಾಮೀಣ ಸಮುದಾಯಗಳ ಸಮಸ್ಯೆಗಳ ಪಕ್ಷಿನೋಟ :- ಕೃಷಿ, ಭೂಮಿ, ಸುಧಾರಿತ ತಳಿಯ ಬೀಜ, ಗೊಬ್ಬರಗಳು, ಔಷಧಗಳು, ಯಾಂತ್ರೀಕರಣ, ಸಣ್ಣ ಹಿಡುವಳಿ, ಅಸ್ಥಿರ ಮಳೆ, ದಾಸ್ತಾನು, ಮಾರುಕಟ್ಟೆ, ಸಾರಿಗೆ-ಸಂಪರ್ಕ, ರೈತರ ಆತ್ಮಹತ್ಯೆ, ಆರ್ಥಿಕ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ಮೂಢನಂಬಿಕೆ, ಅಸ್ಪೃಶ್ಯತೆ, ಸಾಂಪ್ರದಾಯಿಕತೆ ಮತ್ತು ಪ್ರತಿಗಾಮಿ ಧೋರಣೆ, ಜೀತದಾಳುಗಳ ಸಮಸ್ಯೆ, ಮದ್ಯಪಾನ, ನಿರುದ್ಯೋಗ, ಮಹಿಳಾ ಅಸಮಾನತೆ, ಸ್ತ್ರೀಯರ ಸಮಸ್ಯೆಗಳು, (ಲಿಂಗ ತಾರತಮ್ಯ, ಶಿಕ್ಷಣ, ಉದ್ಯೋಗ, ಆರೋಗ್ಯ, ರಾಜಕೀಯ ಕ್ಷೇತ್ರ,) ನಾಗರೀಕ ಸೌಲಭ್ಯಗಳ ಕೊರತೆ, ನಿರಕ್ಷರತೆ, ಆರೋಗ್ಯ, ವಸತಿ, ಬಾಲಕಾರ್ಮಿಕರು, ಗ್ರಾಮೀಣ ರಸ್ತೆಗಳು, ಜನಸಂಖ್ಯಾ ಏರಿಕೆ, ವೃದ್ಧರ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ಆರೋಗ್ಯದ ಸಮಸ್ಯೆಗಳು. ಲೇಖಕರು: ಸದಾಶಿವಯ್ಯಾ ಮ. ಜಿರ್ಲಿಮಠ ಮುನ್ನುಡಿ
ಈ ಆವೃತ್ತಿಯನ್ನು ಸಾಕಷ್ಟು ಹೊಸ ಅಂಶಗಳೊಂದಿಗೆ ಪ್ರಸ್ತುತ ಪಡಿಸಲಾಗಿದೆ. ಮುಖ್ಯವಾಗಿ ವರ್ತನೆಯ ರೂಪಿಸುವಿಕೆ ಮತ್ತು ಸರಿಪಡಿಸುವಿಕೆಯ ಸಿದ್ಧಾಂತಗಳನ್ನು ಉದಾಹರಣೆಯೊಂದಿಗೆ, ಸಮಾಜಕಾರ್ಯ ಕ್ಷೇತ್ರಗಳಲ್ಲಿ ಇತ್ತೀಚಿನ ಬೆಳವಣಿಗೆ, ಸಮಾಜಕಾರ್ಯ ವಿಧಾನಗಳ ಸರಳ, ಸವಿವರವಾದ ವಿವರಣೆ ಮತ್ತು ಸಮಾಜಕಾರ್ಯ ವಿಧಾನಗಳಲ್ಲಿ ಕಾರ್ಯಕರ್ತರ ಪಾತ್ರ ಸೇರಿಸಲಾಗಿದೆ. ಅದರಲ್ಲಿಯೂ ಸಮುದಾಯ ಸಂಘಟನೆ, ಸಾಮಾಜಿಕ ಕ್ರಿಯೆಯೆ ಮಾದರಿ, ತತ್ವಗಳು, ತಂತ್ರಗಳು, ಪ್ರಕಾರಗಳೊಂದಿಗೆ ಅರ್ಥಿಯ ಮಾಹಿತಿ ಸಂಗ್ರಹಣೆಯ ಸಾಧನಗಳ ಸಂಕ್ಷಿಪ್ತ ವಿವರ ಮತ್ತು ವೃತ್ತಿಯಲ್ಲಿ ಕಂಡುಬರುವ ಕೆಲ ನೈತಿಕ ದ್ವಂದ್ವಗಳನ್ನು ಓದುಗರ ಮಾಹಿತಿಗಾಗಿ ಒದಗಿಸಲಾಗಿದೆ. ಹೊಸ ಅಂಶಗಳೊಂದಿಗೆ ನವೀಕರಿಸಲ್ಪಟ್ಟ ಮುದ್ರಣವನ್ನು ಓದುಗರಾದ ಸಮಾಜಕಾರ್ಯ ವಿದ್ಯಾರ್ಥಿಗಳಿಗೆ, ವೃತ್ತಿಯಲ್ಲಿ ತೊಡಗಿರುವ ವಿವಿಧ ವರ್ಗದವರಿಗೆ ಸಹಾಯಕವಾಗುವದೆಂಬ ಆಶಯದೊಂದಿಗೆ ಈ ಪ್ರಯತ್ನ ಮಾಡಲಾಗಿದೆ. ಈ ಪ್ರಯತ್ನದಲ್ಲಿ ಹೆಚ್ಚಿನ ವಿವರಗಳೊಂದಿಗೆ ಓದುಗರನ್ನು ತಲುಪಲು ಸೂಕ್ತ ಸಲಹೆಗಳನ್ನಿತ್ತು ಸಹಕರಿಸಿದ ಸಹೊದ್ಯೋಗಿಗಳಿಗೆ ಮತ್ತು ಪ್ರಸ್ತುತ ವೃತ್ತಿಬಾಂಧವರಾಗಿರುವ ಶಿಷ್ಯ ಮಿತ್ರರಿಗೂ ಧನ್ಯವಾದ ಹೇಳುವದನ್ನು ಮರೆಯಲು ಅಸಾಧ್ಯ. ಭವಿಷ್ಯದಲ್ಲಿ ಹೆಚ್ಚಿನ ಸುಧಾರಣೆಗೆ ಸೂಕ್ತ ವಿಮರ್ಶೆ ಸಲಹೆಗಳನ್ನು ಇವರೆಲ್ಲರಿಂದ ಎದುರು ನೋಡುತ್ತಾ ಪುಟ ವಿನ್ಯಾಸ ಮತ್ತು ಮುದ್ರಣದಲ್ಲಿ ಸಹಕರಿಸಿದ ಶ್ರೀ ಆಫ್ಸೆಟ್ ನವರಿಗೂ ಅಭಿನಂದನೆಗಳು. ಲೇಖಕರು ಸದಾಶಿವಯ್ಯಾ. ಮ. ಜಿರ್ಲಿಮಠ. ಲೇಖಕರು: ಸದಾಶಿವಯ್ಯಾ ಮ. ಜಿರ್ಲಿಮಠ ನನ್ನುಡಿ
ವೃಂದ ಸಮಾಜಕಾರ್ಯ ಸಾಕಷ್ಟು ಅಂಶಗಳೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಪಸರಿಸುತ್ತಿದೆ. ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ಸಮಾಜಕಾರ್ಯದ ವಿವಿಧ ಆಯಾಮಗಳಲ್ಲಿ ವೃತ್ತಿ ಆಚರಣೆಯ ಅನುಭವ, ಸಮಾಜಕಾರ್ಯ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಲಭ್ಯವಾಗಿಸುವ ಬಯಕೆ ಹೆಚ್ಚಿಸಿದೆ. ಮೊದಲೆರಡು ಮುದ್ರಣಗಳಿಗೆ ವ್ಯಕ್ತವಾದ ಪ್ರತಿಕ್ರಿಯೆ, ಪ್ರತಿಗಳಿಗಾಗಿ ಮೇಲಿಂದ ಮೇಲೆ ಕಂಡು ಬಂದ ಬೇಡಿಕೆ ಮತ್ತು ಲಭ್ಯವಾದ ಸಲಹೆ, ವಿಮರ್ಶೆಗಳನ್ನು ಒಳಗೂಡಿಸಿಕೊಂಡು ಸುಧಾರಿಸಿದ ಮತ್ತು ಹೆಚ್ಚಿನ ವಿವರದೊಂದಿಗೆ ಮೂರನೇಯ ಮುದ್ರಣಕ್ಕೆ ಕೈ ಹಾಕುವಂತೆ ಪ್ರೇರೇಪಿಸಿತು. ಈ ಆವೃತ್ತಿಯಲ್ಲಿ ಮುಖ್ಯವಾಗಿ ವರ್ತನೆಯ ಸುಧಾರಿಸುವ ಸಿದ್ದಾಂತಗಳನ್ನು ಉದಾಹರಣೆಗಳೊಂದಿಗೆ, ವೃಂದ ಪ್ರಕ್ರಿಯೆಯಲ್ಲಿ ಹೆಚ್ಚಿನ ಮಾಹಿತಿ, ವೃಂದ ಚಲನಾತ್ಮಕತೆಯಲ್ಲಿ (ಒಂಟಿತನ. ನಾಯಕತ್ವ, ಬಲಿಪಶುವಾಗುವಿಕೆ, ನಿಯಂತ್ರಣ ಇತ್ಯಾದಿ), ಇದರೊಂದಿಗೆ ತಂತ್ರ ಮತ್ತು ಕೌಶಲ್ಯಗಳ ವಿವರ, ಮಾಹಿತಿ ಸಂಗ್ರಹದ ಸಾಧನಗಳ ಸಂಕ್ಷಿಪ್ತ ವಿವರಣೆ ಮತ್ತು ನೈತಿಕ ದ್ವಂದ್ವಗಳ ಕುರಿತು ಸೇರ್ಪಡೆ ಮಾಡಿ ಓದುಗರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗುವಂತೆ ಪ್ರಯತ್ನಿಸಲಾಗಿದೆ. Author: Narasimham Rayadurgam Preface This book on “Vocational Rehabilitation of Disabled in India, Principles & Practice” is an attempt to educate the present and future rehabilitation professionals in the area of vocational rehabilitation.
Vocational Rehabilitation as a concept can be traced back to the First World War (1914 -1918), wherein the entire Europe and United States of America (USA) were involved. Several war veterans were injured but were skilled and available for bringing the country’s economy to keel. The Veterans’ Rehabilitation Act of 1920 of USA was the first in the modern times to utilize the services of the war disabled in reviving the country’s economy. This has been amended in due course to include other disabilities. The Department in the government of United States of America (USA) was named Veterans Rehabilitation Administration, later changed as Social & Rehabilitation Services (SRS) Administration and now known as Rehabilitation Services Administration. Internationally, it is a young profession. Such services are available in U.K., European countries, Japan, Singapore and other African and Asian countries. ಲೇಖಕರು : ಡಾ. ಸಿ.ಆರ್. ಗೋಪಾಲ್ ಯಾವುದೇ ಸಮಾಜ, ರಚನೆ ಮತ್ತು ಕಾರ್ಯಶೀಲತೆಯ ದೃಷ್ಟಿಯಿಂದ, ಸ್ಥಿರವಲ್ಲ ಮತ್ತು ನಿಷ್ಕ್ರಿಯದಲ್ಲ. ಅದು ರಚನೆಯ ದೃಷ್ಟಿಯಿಂದ ಮತ್ತು ಕ್ರಿಯೆಗಳ ದೃಷ್ಟಿಯಿಂದ ಚಲನಶೀಲವಾಗಿರುತ್ತದೆ ಮತ್ತು ಪರಿವರ್ತನಾಶೀಲವಾಗಿರುತ್ತದೆ. ಹಾಗಾಗಿ ಯಾವುದೇ ಸಮಾಜ ನಿರಂತರವಾಗಿ ಬದಲಾಗುತ್ತಿರುತ್ತದೆ. ಅಂತಹ ಬದಲಾವಣೆಗಳಿಗೆ ತೀವ್ರತೆ ಮತ್ತು ವ್ಯಾಪಕತೆ ಇರಬಹುದು, ಇಲ್ಲದಿರಬಹುದು. ಬದಲಾವಣೆ ಗೋಚರಿಸಬಹುದು ಇಲ್ಲವೇ ಗೋಚರಿಸದಿರಬಹುದು. ಇಂದು ಗೋಚರಿಸದೇ ಇದ್ದದ್ದು, ಇನ್ನೆಂದೊ ಗೋಚರಿಸಬಹುದು. ಈ ಬದಲಾವಣೆ ಆರ್ಥಿಕ, ಕೈಗಾರಿಕಾ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಮನರಂಜನಾ, ವೈಜ್ಞಾನಿಕ, ಸಾಂಸ್ಕೃತಿಕ, ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಆಗುತ್ತದೆ. ಇಂತಹ ಬದಲಾವಣೆಗಳನ್ನು, ಸಾಮಾಜಿಕ ಸಂಸ್ಥೆಗಳಾದ ಕುಟುಂಬ, ಸಮೂಹ, ಸಂಘಸಂಸ್ಥೆಗಳು, ಸಮುದಾಯ ಮತ್ತು ಕೊನೆಯದಾಗಿ ಇಡೀ ಸಮಾಜದಲ್ಲಿ ಕಾಣುತ್ತೇವೆ. ಬದಲಾವಣೆ ಈ ಸಂಸ್ಥೆಗೆಳ ರಚನೆಯಲ್ಲಷ್ಟೇ ಆಗದೆ ಕ್ರಿಯೆಗಳಲ್ಲಿಯೂ, ಸಂಬಂಧಗಳಲ್ಲಿಯೂ ಆಗುತ್ತದೆ. ಅದು ಹೊಸ ಸಂಬಂಧಗಳನ್ನು ಸೃಷ್ಟಿಸುವುದಲ್ಲದೆ ಹೊಸ ಕಟ್ಟುಪಾಡುಗಳಿಗೆ, ಹೊಸ ಮೌಲ್ಯಗಳಿಗೆ ದಾರಿ ಮಾಡಿಕೊಡುತ್ತದೆ. ಇದೇ ಸ್ಥಿತಿ ಮುಂದುವರೆದು ನಿಧಾನವಾಗಿ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿತ್ರಣವೇ ಬದಲಾಗುತ್ತದೆ.
ಲೇಖಕರು : ಗಂಗಾಧರ ರೆಡ್ಡಿ ಎನ್. ಮತ್ತು ಡಾ. ಲೋಕೇಶ ಎಂ.ಯು ಸಮಾಜಕಾರ್ಯದ ಉದಯೋನ್ಮುಖ ಕ್ಷೇತ್ರವನ್ನು ಪರಿಚಯಿಸುವ ಕೃತಿ 'ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯ'. ಈ ಪುಸ್ತಕದ ಮೂಲ ಆಶಯ ಗ್ರಾಮೀಣ ಹಾಗೂ ಕನ್ನಡ ಭಾಷಾ ಮಾದ್ಯಮ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣಾ ಶಾಸ್ತ್ರದ ಮೂಲ ಪರಿಕಲ್ಪನೆಗಳು ಮತ್ತು ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯದ ಮಧ್ಯಸ್ಥಿಕೆಯನ್ನು ಅರ್ಥ ಮಾಡಿಸುವುದೇ ಆಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಚನೆಯಾದ ಸದರಿ ಪುಸ್ತಕ ಪ್ರಶಿಕ್ಷಕರಿಗೆ, ಸಂಶೋಧಕರಿಗೆ, ವೃತ್ತಿಪರರಿಗೆ ಹಾಗೂ ಕ್ಷೇತ್ರ ಕಾರ್ಯಕರ್ತರಿಗೆ ಮಾರ್ಗದರ್ಶಿ ಕೈಪಿಡಿಯಾಗಿದೆ. ಇದು ವಿಪತ್ತು ನಿರ್ವಹಣಾ ಶಾಸ್ತ್ರವನ್ನು ಅಧ್ಯಯನ ಮಾಡಬಯಸುವ ಎಲ್ಲಾ ವೃತ್ತಿಪರರಿಗೆ ಕನ್ನಡ ಭಾಷೆಯಲ್ಲಿ ಸಿಗುವ ಪ್ರಾಥಮಿಕ ಮಾಹಿತಿಯ ಮೂಲವೇ ಆಗಿದೆ.
ಸಮಾಜಕಾರ್ಯ ಸಾಹಿತ್ಯ ಕ್ಷೇತ್ರದ ಉದಯೋನ್ಮುಖ ಬರಹಗಾರ ಶ್ರೀಯುತ ಗಂಗಾಧರ ರೆಡ್ಡಿ ಎನ್. ರವರು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವಾನಿರತರಾದ ಡಾ. ಲೋಕೇಶ ಎಂ.ಯು. ರವರ ಸಹಯೋಗದಲ್ಲಿ ರಚಿಸಿದ ಚೊಚ್ಚಲ ಪುಸ್ತಕವೇ ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯ. ವ್ಯಕ್ತಿಗತ ಸಮಾಜಕಾರ್ಯ ಪರಿಚಯ ಯುವ ಲೇಖಕ ಗಂಗಾಧರ ರೆಡ್ಡಿ ಎನ್. ರವರು ಸಮಾಜಕಾರ್ಯ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಚೊಚ್ಚಲ ಕಾಣಿಕೆಯಾಗಿದ್ದು, ಪ್ರಶಿಕ್ಷಕ, ವಿದ್ಯಾರ್ಥಿ ಹಾಗೂ ವೃತ್ತಿಪರ ಸಮಾಜಕಾರ್ಯಕರ್ತರಿಂದ ಪ್ರಶಂಸೆಗೊಳಪಟ್ಟ ಪುಸ್ತಕವಾಗಿದೆ. ಸಮಾಜಕಾರ್ಯ ಹಾಗೂ ವಿಪತ್ತು ನಿರ್ವಹಣೆ ವಿಷಯದ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲನ್ನು ನಿರ್ಮಿಸಲಿರುವ ಸದರಿ ಪುಸ್ತಕದಲ್ಲಿ ಬಳಕೆಯಾಗಿರುವ ಭಾಷೆ ಸರಳವಾಗಿದೆ. ಪದಗಳ ಆರಿಸುವಿಕೆ ಮತ್ತು ಪದ ಪ್ರಯೋಗ ಸಮಂಜಸವಾಗಿದ್ದು, ಬರವಣಿಗೆಯಲ್ಲಿ ಸ್ಪಷ್ಟತೆ ಇದೆ. ನಿರೂಪಣೆ ಆತ್ಮೀಯವಾಗಿದ್ದು, ಓದಿಸಿಕೊಂಡು ಹೋಗುತ್ತದೆ. ಬರಹ ಮನಮುಟ್ಟುವಂತಿದ್ದು, ಓದುಗರನ್ನು ಸೆಳೆಯುತ್ತದೆ. ಪುಸ್ತಕದ ಮೂಲ ಓದುಗರಿಗೆ ವಿಷಯಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಸುವ ಉದ್ದೇಶದಿಂದ ನೀಡುರುವ ಜೀವಂತ ಉದಾಹರಣೆಗಳು ಸಮರ್ಪಕ ಹಾಗೂ ಸಮಯೋಚಿತವಾಗಿದ್ದು, ಅರ್ಥಗರ್ಭಿತವಾಗಿವೆ. ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಹಂತಗಳಲ್ಲಿ ಸಮಾಜಕಾರ್ಯ ವಿಷಯವನ್ನು ಅಧ್ಯಯನ ಮಾಡುವ ಪ್ರಶಿಕ್ಷಣಾರ್ಥಿಗಳಿಗೆ ಅನುಕೂಲವಾಗಲೆಂದು ಪಠ್ಯಕ್ರಮಕ್ಕೆ ಅನುಗುಣವಾಗಿ ರಚಿಸಲಾಗಿದೆ. ಈ ಎಲ್ಲಾ ವೈಶಿಷ್ಟ್ಯಗಳಿಂದ ಕೂಡಿದ ಪುಸ್ತಕ ಓದುಗ ಸಮುದಾಯದಿಂದ ಪ್ರಶಂಸಿಸಲ್ಪಟ್ಟಿದೆ. Author: Shankar Pathak This book is a selection of my published articles on a common theme. Most of them were written during a period of eight years 1979-1987 (chapters 1 to 4, and 6 and 7). Chapter 8 was written for the ASSWI seminar on poverty, December 1975 and published later in a book edited by R.R. Singh (Concept Publishing Co.). Chapter 5 was part of a special project conceived and executed by Dr. Murli Desai, who was then on the faculty of Tata Institute of Social Sciences and it was published in the Indian Journal of Social Work in April 1997. Chapter 9 was specially written during January-April 2013 for this publication, to provide the readers with an overview of India’s developmental planning of over sixty years, an empirial check on the conceptual-academic discussion of social development/ development in chapters No. 2 and 3. Readers may supplement the data and possibly arrive at a conclusion different than mine. For over six months a wealth of data from a variety of sources were collected-official/semi-official (government and industry) independent academic writers or other prestigius organisational sources like A.D.B. World Bank, O.E.C.D. and R.B.I. Only a small selection of the collected data is used in chapter 9 and some additional data is presented in the Appendix III, Statistical Profile.
ಲೇಖಕರು : ಡಾ. ಸಿ.ಆರ್. ಗೋಪಾಲ್ ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಒಂದು ವಿಧಾನ. ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ, ಸಮಾಜಕಾರ್ಯದ ಮೂಲವಿಧಾನಗಳೆಂದು ಪರಿಗಣಿಸಿದ್ದರೆ, ಸಾಮಾಜಿಕ ಕ್ರಿಯಾಚರಣೆಯನ್ನು ಸಮಾಜಕಾರ್ಯದ ಒಂದು ಪೂರಕವಿಧಾನ ಎಂದು ಪರಾಮರ್ಶಿಸಲಾಗಿದೆ. ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಪ್ರಮುಖ ವಿಧಾನಗಳಲ್ಲಿ ಒಂದು ಎಂದು ವಿಶ್ಲೇಷಣೆ ಮಾಡುವವರೂ ಇದ್ದಾರೆ.
ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ ಅನುಗಾಲ (ಅವಿರತ) ನಡೆಯುವ ಯೋಜನೆ / ಕಾರ್ಯಕ್ರಮಗಳಾಗಿರುವುದರಿಂದ ಅವುಗಳನ್ನು ಮೂಲವಿಧಾನಗಳೆಂದು ಕರೆಯಲಾಗಿದೆ. ಆದರೆ ಸಾಮಾಜಿಕ ಕ್ರಿಯಾಚರಣೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಸಂಘಟನೆಗೊಳ್ಳುತ್ತದಾದ್ದರಿಂದ, ಅವನ್ನು ಪೂರಕವಿಧಾನ ಎಂದು ನಿರ್ಣಯಿಸಿರಬೇಕು. ಸಮಾಜದ ಓರೆ-ಕೋರೆಗಳನ್ನು ತಿದ್ದಲು, ದೌರ್ಜನ್ಯಗಳನ್ನು ತಡೆಯಲು, ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಮಾಜಿಕ ಕ್ರಿಯಾಚರಣೆ ಪ್ರಸ್ತುತ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕ್ರಿಯಾಚರಣೆಯೂ ಅತಿ ಅವಶ್ಯಕವಾದ ವಿಧಾನವೇ ಹೌದು. ಸಾಮಾಜಿಕ ಕ್ರಿಯಾಚರಣೆ ಎರಡು ಶಬ್ದಗಳ ಪದಗುಚ್ಚ. ಆಂಗ್ಲ ಭಾಷೆಯ ‘Social Action’ ಎಂಬ ಪದಗುಚ್ಚಕ್ಕೆ ಸಾಮಾಜಿಕ ಪ್ರಚೋದನ ಕ್ರಿಯೆ, ಸಾಮಾಜಿಕ ಕ್ರಿಯೆ ಎಂಬ ಅರ್ಥಗಳಿವೆ. ಸಾಮಾಜಿಕ ಕ್ರಿಯಾಚರಣೆಯಲ್ಲಿ ಪ್ರಚೋದನೆಯ ಅಂಶದ ಹೊರತಾಗಿಯೂ ಇತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಾಮಾಜಿಕ ಕ್ರಿಯೆ ಎಂಬ ಪದಗುಚ್ಛ ಹೆಚ್ಚು ಸಮಂಜಸ. ಸಾಮಾಜಿಕ ಕ್ರಿಯಾಚರಣೆ ಬೃಹದಾಕಾರದ ಚಟುವಟಿಕೆ. ಅದನ್ನು ಸಾಧಿಸಲು ಬಹುಜನರ ಭಾಗವಹಿಸುವಿಕೆ ಅವಶ್ಯವಾಗಿರುತ್ತದೆ. ಈ ಬಹುಜನರಲ್ಲಿ ಸಾಮಾಜಿಕ ಕಾರ್ಯಕರ್ತ, ಕ್ರಿಯಾವಾದಿ, ದೌರ್ಜನ್ಯಕ್ಕೆ ಒಳಗಾದವರು, ನಾಯಕರು, ಗುಂಪುಗಳು, ವಿಷಯ ಪರಿಣಿತರು, ಸ್ವಯಂ ಸೇವಕರು, ಮುಂಚೂಣಿ ಕಾರ್ಯಕರ್ತರು, ಪ್ರಚಾರಕರು, ಹೋರಾಟಗಾರರು, ಭಾಷಣಕಾರರು, ಸಂಧಾನಕಾರರು, ವಿಪಕ್ಷದವರು ಮುಂತಾದವರು ಸೇರಿರುತ್ತಾರೆ. ಇವರೆಲ್ಲರೂ ಸಾಮಾಜಿಕ ಕ್ರಿಯಾಚರಣೆಯಲ್ಲಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ. ಈ ಸಾಮೂಹಿಕ ಸ್ವಭಾವವನ್ನು ಗುರುತಿಸಿ, ಸೋಷಲ್ ಯಾಕ್ಷನ್ಸ್ ಎಂಬ ಪದಗುಚ್ಚಕ್ಕೆ, `ಸಾಮಾಜಿಕ ಕ್ರಿಯಾಚರಣೆ’ ಎಂಬ ಪದಪುಂಜವನ್ನು ಬಳಸಲಾಗಿದೆ. |
Archives
March 2026
Categories
All
Social Work
|
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed