Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಭಾರತೀಯ ಸಾಕ್ಷಿ ಅಧಿನಿಯಮ – 2023 ಪುಸ್ತಕದ ಬಗ್ಗೆ ಅಭಿಪ್ರಾಯ – ಡಾ. ಸಿ.ಆರ್. ಗೋಪಾಲ್

1/21/2025

0 Comments

 
Picture
Buy Here
Picture
ಡಾ. ಸಿ.ಆರ್. ಗೋಪಾಲ್
ಸಮಾಜಕಾರ್ಯ ಸಾಹಿತಿ
ಮಿತ್ರ ಶ್ರೀ ಜಿ.ಎನ್. ಶೇಖರ್‌ರವರು ಲೇಖಿಸಿದ, ‘ಭಾರತೀಯ ಸಾಕ್ಷಿ ಅಧಿನಿಯಮ-2023’ರ ಸುದೀರ್ಘ ಮಾರ್ಗದರ್ಶಿ ಕೃತಿಯನ್ನು ಆಸಕ್ತಿಯಿಂದ ಅವಲೋಕಿಸಿದ್ದೇನೆ. ಗ್ರಂಥವು ಸದರಿ ಅಧಿನಿಯಮದ ಪರಿಚ್ಛೇದಗಳ-ಕಲಮುಗಳ ಸರಳವಾದ ಹಾಗೂ ವಿಶದವಾದ ವಿವರಗಳನ್ನು ಒಳಗೊಂಡಿದೆ.

ಸಂಕೀರ್ಣ ಕಾನೂನಿನ ಅನುಚ್ಛೇದಗಳನ್ನು / ಕಲಮುಗಳನ್ನು ಅರ್ಥೈಸಿಕೊಳ್ಳುವುದು ಪ್ರಯಾಸದ ಕೆಲಸ. ಕೆಲವೊಮ್ಮೆ ಗೊಂದಲಗಳಾಗುವುದೂ ಸಹಜ. ಕಾನೂನು, ನ್ಯಾಯಾಲಯ, ವಿಚಾರಣೆ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಅವುಗಳ ನಿಖರವಾದ ಹಾಗೂ ಸ್ಪಷ್ಟವಾದ ಅರ್ಥಗಳನ್ನು ಕಂಡುಕೊಳ್ಳುವುದು ಅವಶ್ಯಕವಾಗುತ್ತದೆ. ಆ ಸಂದರ್ಭಗಳಲ್ಲಿ ಈ ಕೃತಿ ಸದರಿ ಪರಿಚ್ಛೇದಗಳನ್ನು ಸರಳವಾಗಿ ಮನದಟ್ಟು ಮಾಡುವ ಮಾರ್ಗದರ್ಶಿ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತದೆ.

ಅನ್ಯಾಯವಾಗಿ ಇಲ್ಲವೆ ನಿಷ್ಕಾರಣವಾಗಿ ವಿಚಾರಣೆಗೆ ಒಳಗಾದವರಿಗೆ ಹಾಗೂ ನ್ಯಾಯಾಲಯದ ಮೆಟ್ಟಿಲು ಹತ್ತಿದವರಿಗೆ, ತಮಗಾದ ಅನ್ಯಾಯವನ್ನು ದೃಢೀಕರಿಸಲು, ಸಂಬಂಧಪಟ್ಟ ಕಾಗದ ಪತ್ರಗಳ ಜೊತೆಗೆ, ಅವಶ್ಯಕವಾದ ಸಾಕ್ಷಿಗಳನ್ನು ವಿಚಾರಣೆಯಲ್ಲಿ ಅಥವಾ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕಾಗುತ್ತದೆ. ವಿಚಾರಣಾಧಿಕಾರಿಗಳು ಅಥವಾ ನ್ಯಾಯಾಧೀಶರು, ಅಂತಹ ಸಾಕ್ಷಿಗಳ ಹೇಳಿಕೆಯನ್ನು ಆಲಿಸಿ, ಅವುಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ, ತಮ್ಮ ನ್ಯಾಯನಿರ್ಣಯಗಳನ್ನು ಪ್ರಕಟಿಸಬೇಕಾಗುತ್ತದೆ. ಬಹುಮುಖ್ಯವಾದ ಈ ನ್ಯಾಯನಿರ್ಣಯ ವ್ಯವಸ್ಥೆಗೆ ಸಾಕ್ಷಿಗಳ ಹೇಳಿಕೆಗಳು ಪ್ರಮುಖವಾಗುತ್ತವೆ. ಈ ಹಿನ್ನೆಲೆಯಲ್ಲಿ ಮಿತ್ರ ಶ್ರೀ ಶೇಖರ್‌ರವರ ಈ ಬೃಹತ್ಕೃತಿ ನೆರವಿಗೆ ಬರುತ್ತದೆ.

ಕೃತಿಕಾರರೇ ಹೇಳುವಂತೆ ಈ ಗ್ರಂಥವು ಮೂರು ವೈಲಕ್ಷಣ್ಯಗಳನ್ನು ಒಳಗೊಂಡಿದೆ.
  1. ಭಾರತೀಯ ಸಾಕ್ಷಿ ಅಧಿನಿಯಮ-2023ರ 170 ಪರಿಚ್ಛೇದಗಳನ್ನು ಪರಿಶೀಲಿಸಿ, 549  ಅಂಶಗಳನ್ನು ಪ್ರಶ್ನೋತ್ತರ ಮಾದರಿಯಲ್ಲಿ ಪ್ರಚುರಪಡಿಸುತ್ತದೆ.
  2. ಸದರಿ ಅಧಿನಿಯಮದ ಪರಿಚ್ಛೇದಗಳ / ತತ್ತ್ವಾದರ್ಶಗಳ 172 ಒಳನೋಟಗಳನ್ನು ಅರ್ಥೈಸಿಕೊಳ್ಳುವ ವಿವರಗಳನ್ನು ಒದಗಿಸುತ್ತದೆ.
  3. ಸದರಿ ಅಧಿನಿಯಮದಲ್ಲಿ ಉಲ್ಲೇಖಗೊಂಡ 92 ವ್ಯಾಖ್ಯೆಗಳ / ಪಾರಿಭಾಷಿಕ ಪದಗಳ ವ್ಯಾಖ್ಯಾನಗಳನ್ನು-ವಿವರಣೆಗಳನ್ನು ಸರಳವಾಗಿ ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಓದುಗನ ಮುಂದಿಡುತ್ತದೆ.
ಗ್ರಂಥವು ದೀರ್ಘವಾಗಿರುವುದರಿಂದ, ಸಹಜವಾಗಿಯೇ ಅಧಿನಿಯಮದ ಎಲ್ಲಾ ಅನುಚ್ಛೇದಗಳ ಹಾಗೂ ಸಂಬಂಧಪಟ್ಟ ವಿಷಯಗಳ ಚರ್ಚೆಯನ್ನು ವ್ಯಾಪಕವಾಗಿ ಮಾಡಲಾಗಿದೆ. ಪುಸ್ತಕವು ಸಾಕ್ಷಿ ಪ್ರಕ್ರಿಯೆಗೆ ಸಂಬಂಧಿಸಿದಂತೆ; ಪೀಠಿಕೆ, ವಾಸ್ತವದ ಚಿತ್ರಣವನ್ನು ನಿರೂಪಿಸುವುದು / ಪ್ರಸ್ತುತ ಪಡಿಸುವುದು, ಸಾಕ್ಷಿಗಳನ್ನು ಒಪ್ಪಿಕೊಳ್ಳುವುದು ಅಥವಾ ನಿರಾಕರಿಸುವುದು, ಸಾಕ್ಷಿಗಳ ಆಯ್ದ ಹೇಳಿಕೆಗಳನ್ನು ಅಧಿಕೃತವೆಂದು ನಿರ್ಣಯಿಸುವುದು, ವಿಶೇಷ ಸಂದರ್ಭಗಳಲ್ಲಿ ಸಾಕ್ಷಿಗಳ ಹೇಳಿಕೆಗಳು, ಸಾಕ್ಷಿಗಳ ಹೇಳಿಕೆಗಳು ಸಾಬೀತಾಗಬೇಕಾದ ಪ್ರಮಾಣ, ಮೂರನೆ ವ್ಯಕ್ತಿಗಳ ಹೇಳಿಕೆಗಳ ಪ್ರಸ್ತುತತೆಯ ಸಂದರ್ಭ, ಸಾಬೀತು ಮಾಡಬೇಕಾಗಿಲ್ಲದ ವಾಸ್ತವಗಳು, ಸಾಕ್ಷಿಗಳ ಮೌಲಿಕ ಹೇಳಿಕೆಗಳು, ಸಾಕ್ಷಿಗಳು ಹಾಜರುಪಡಿಸುವ ಅಧಿಕೃತ ದಾಖಲೆಗಳು, ಸಾರ್ವಜನಿಕ ದಾಖಲೆಗಳು, ಸಾಬೀತುಪಡಿಸಬೇಕಾದವರ ಜವಾಬ್ದಾರಿ, ಸಾಕ್ಷಿಗಳ ಪರೀಕ್ಷೆ, ಸಾಕ್ಷಿಗಳನ್ನು ಒಪ್ಪಿಕೊಳ್ಳುವ ಇಲ್ಲವೆ ತಿರಸ್ಕರಿಸುವ ವಿಚಾರ, ಸಾಕ್ಷಿಗಳ ಹೇಳಿಕೆಗಳು ಹಾಗೂ ಆಧಾರಗಳನ್ನು ಅವಲಂಬಿಸಿ, ತೆಗೆದುಕೊಂಡ ನ್ಯಾಯಾಲಯದ ತೀರ್ಪುಗಳು ಮುಂತಾದ ಅನೇಕಾನೇಕ ಅಂಶಗಳ ಬಗ್ಗೆ ಕೂಲಂಕುಷ ಪರಾಮರ್ಶೆ ಮಾಡಲಾಗಿದೆ.

ವಿಚಾರಣೆಗಳಲ್ಲಿ ಹಾಗೂ ಅಥವಾ ನ್ಯಾಯಾಲಯಗಳಲ್ಲಿ ಸಾಕ್ಷಿ ಪುರಾವೆ, ವಾದ ಪ್ರತಿವಾದಗಳ ಜೊತೆಗೆ, ವಿಚಾರಣಾಧಿಕಾರಿಗಳು ಅಥವಾ ನ್ಯಾಯಾಧೀಶರು ವಿಚಾರಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ, ದುರ್ನಡತೆಗಳ / ಅಪರಾಧಗಳ ಉದ್ದೇಶ ಹಾಗೂ ನ್ಯಾಯವಾದಿಗಳು ಪ್ರಕರಣಗಳನ್ನು ಪ್ರಸ್ತುತಪಡಿಸುವ ವಿಧಾನಗಳನ್ನು ಗಮನಿಸುತ್ತಾರೆ. ಹಾಗೇನೆ ಇಡೀ ಪ್ರಕ್ರಿಯೆಯಲ್ಲಿ ಕೆಲವು ಒಳನೋಟಗಳನ್ನು ಕಂಡುಕೊಳ್ಳಲು ಸದರಿ ಅಧಿನಿಯಮದ ಸಂಪೂರ್ಣ ಜ್ಞಾನ ಇರಬೇಕಾಗುತ್ತದೆ. ಅದಕ್ಕೆ ಶ್ರೀ ಶೇಖರ್‌ರವರ ಮಾರ್ಗದರ್ಶಿ ಕೃತಿ ನೆರವಿಗೆ ಬರುತ್ತದೆ.

ಮೂರನೆಯದಾಗಿ, ಸಾಕ್ಷಿ ಅಧಿನಿಯಮದಲ್ಲಿ ಉಲ್ಲೇಖಗೊಂಡ ಕಾನೂನಿನ ಪಾರಿಭಾಷಿಕ ಶಬ್ದಗಳಿಗೆ ಸೂಕ್ತ ಅರ್ಥವಿವರಣೆಯನ್ನು ಒದಗಿಸಲಾಗಿದೆ. ಕಾನೂನು ಜ್ಞಾನ, ವಾಸ್ತವ, ವಾಸ್ತವದ ಊಹೆ, ಅರ್ಹ ಸಾಕ್ಷಿ, ನೇರ ಸಾಕ್ಷಿ, ಅಸಂಬದ್ಧ ಸಾಕ್ಷಿ, ಪ್ರಮುಖ ಸಾಕ್ಷಿ, ಮೌಖಿಕ ಸಾಕ್ಷಿ, ಜಾಲತಾಣಗಳ ಸಾಕ್ಷಿ, ಸಾಕ್ಷಿ ಇಲ್ಲದಿರುವಿಕೆ, ಸಾಕ್ಷಿಗಳ ಪ್ರಾರಂಭಿಕ ವಿಚಾರಣೆ, ಸಾಕ್ಷಿ ಪ್ರಸ್ತುತಪಡಿಸುವ ಅಧಿಕೃತ ದಾಖಲೆಗಳು, ನಿರ್ದಿಷ್ಟ ಉತ್ತರಗಳನ್ನು ಕೊಡುವ ಪ್ರಶ್ನೆಗಳು, ಪಾಟಿಸವಾಲು, ತಕರಾರು, ಪ್ರಮಾಣಪತ್ರ, ಹೇಳಿಕೆಗಳು, ಅಧಿಕೃತತೆ, ಉತ್ತಮ ಪುರಾವೆಗಳು, ಉದ್ದೇಶ, ತಪ್ಪಿತಸ್ಥ / ದುರ್ನಡತೆಗಳಲ್ಲಿ ಭಾಗಿಯಾಗಿರುವವ ತನ್ನ ತಪ್ಪನ್ನು ಸ್ವಯಂಪ್ರೇರಣೆಯಿಂದ ಒಪ್ಪಿಕೊಳ್ಳುವಿಕೆ, ವಂಚನೆ, ಸಾಕ್ಷಿಯ ವಿರುದ್ಧವಾದ, ತಡೆಯಾಜ್ಞೆ, ಪುನರ್ವಿಚಾರಣೆ, ಮರಣ ಪ್ರಮಾಣಪತ್ರ, ನ್ಯಾಯಾಲಯದ ತೀರ್ಪು ಇತ್ಯಾದಿ ಇತ್ಯಾದಿ ಪಾರಿಭಾಷಿಕ ಶಬ್ದಗಳಿಗೆ ಸ್ಪಷ್ಟ ಅರ್ಥ ಮತ್ತು ಅವುಗಳು ಉಪಯೋಗವಾಗುವ ಸಂದರ್ಭಗಳನ್ನು ತಿಳಿಸಲಾಗಿದೆ.

ಮಾನ್ಯ ಶ್ರೀ ಶೇಖರ್‌ರವರ ಈ ನೀಳಗ್ರಂಥ ಶಾಸಕರು, ಕಾನೂನು ಜಾರಿಗೊಳಿಸುವ ಅಧಿಕಾರಿಗಳು, ನ್ಯಾಯಾಲಯದ ಅಧಿಕಾರಿಗಳು, ಪೋಲೀಸ್ ಅಧಿಕಾರಿಗಳು, ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡುವ ನ್ಯಾಯವಾದಿಗಳು / ವೃತ್ತಿನಿರತರು, ಕಾರ್ಮಿಕ ಸಂಘಗಳ ಮುಖ್ಯಸ್ಥರು, ನ್ಯಾಯವನ್ನು ದೊರಕಿಸಿಕೊಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡವರು, ಕಾನೂನು ವಿದ್ಯಾರ್ಥಿಗಳು ಮುಂತಾದವರಿಗೆ ತುಂಬಾ ಉಪಯುಕ್ತವಾಗುತ್ತದೆ.

ಶ್ರೀ ಶೇಖರ್‌ರವರು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿನ ಸ್ನಾತಕೋತ್ತರ ಪದವಿಯ ಜೊತೆಗೆ, ಕಾನೂನು ಮತ್ತು ತರಬೇತಿ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆದಿರುವುದರಿಂದ ಹಾಗೂ ನಿರಂತರ ಕೃಷಿ ಮಾಡಿರುವುದರಿಂದ, ಇಂತಹ ಉಪಯುಕ್ತವಾದ ಕೃತಿಯನ್ನು ಬರೆಯಲು ಸಾಧ್ಯವಾಗಿದೆ. ಮಾನವ ಸಂಪನ್ಮೂಲ ಮತ್ತು ಕಾನೂನು ಕ್ಷೇತ್ರಗಳಿಗೆ ಉಪಯೋಗವಾಗುವ ಈ ಬಗೆಯ ಬೃಹದ್ಗ್ರಂಥವನ್ನು ರಚಿಸಿರುವುದಕ್ಕಾಗಿ, ಅವರನ್ನು ಸಂಬಂಧಪಟ್ಟವರ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಮಾನ್ಯ ಶೇಖರ್‌ರವರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ ಎಂದು ಹಾರೈಸುತ್ತೇನೆ.
​
ಪುಸ್ತಕ ಪ್ರಕಟಣೆಯ ಬಗ್ಗೆ ಹೇಳಲೇಬೇಕು. ಕೃತಿಯ ಮುಖಪುಟ ತುಂಬಾ ಆಕರ್ಷಕವಾಗಿದೆ. ಬಳಸಿರುವ ಕಾಗದದ ಗುಣಮಟ್ಟ ಉತ್ತಮವಾಗಿದೆ. ಪುಟಗಳ ಯೋಜನೆ-ಸಾಲುಗೂಡಿಕೆ ಸಮಂಜಸವಾಗಿದೆ. ಮುದ್ರಣ ಅಚ್ಚುಕಟ್ಟಾಗಿದೆ. ನಿರುತ ಪ್ರಕಾಶನದ ಪ್ರಕಟಣೆಯೆಂದ ಮೇಲೆ ಕೇಳಬೇಕೆ. ಈ ಎಲ್ಲ ಚಟುವಟಿಕೆಗಳನ್ನು ಆಸಕ್ತಿಯಿಂದ ನಿರ್ವಹಿಸಿದ ಮಿತ್ರ ಶ್ರೀ ಎಂ.ಎಚ್. ರಮೇಶರವರೂ ಅಭಿನಂದನಾರ್ಹರು.
 
ಸಿ.ಆರ್. ಗೋಪಾಲ್
ಸಮಾಜಕಾರ್ಯ ಸಾಹಿತಿ

ಶೇಖರ್ ಗಣಗಲೂರು ರವರ ಇತರೆ ಕೃತಿಗಳು

0 Comments



Leave a Reply.


    Welcome to our HR and Labour Law blog!
    ​We invite you to share your articles, book reviews, or any content related to labour laws and human resources. We will publish your contributions on our blog and circulate them among the HR community. Together, let’s share knowledge and foster growth in the HR and labour law domain.
    Kindly send to below
    Email:

    [email protected]

    Categories

    All
    Book Review
    General
    Human Resource
    Labour Laws
    Learning Series By Shekhar Ganagaluru
    PoSH


    Stay updated and informed by joining our WhatsApp group for HR and Employment Law Classes - Every Fortnight. The Zoom link for the sessions will be shared directly in the group.
    Picture
    Join Here

    Niruta Publications

    Social Workers- Karnataka

    Leaders Talk

    Picture

    MHR LEARNING ACADEMY

    Get it on Google Play store
    Download App
    Online Courses

    Editor's Blog
    Blog
    English Articles
    Kannada Articles

    Picture
    More Details



    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com