Blog |
2020ರ ವರ್ಷ ಹಲವು ಸವಾಲುಗಳನ್ನು ಮತ್ತು ಬದಲಾವಣೆಗಳನ್ನು ಈ ಜಗತ್ತಿನಲ್ಲಿ ಸೃಷ್ಟಿಸಿದೆ. ಪದವಿ, ಹಣ, ಆಸ್ತಿ, ಹೊನ್ನು, ಮಣ್ಣು, ಅಧಿಕಾರ ಮೊದಲಾದವುಗಳ ಬೆನ್ನು ಹತ್ತಿ ಹೊರಟ ಮನುಷ್ಯನನ್ನು ಕಣ್ಣಿಗೆ ಕಾಣದ ವೈರಸ್ ಒಂದು ಅಲುಗಾಡದಂತೆ ತಡೆದು ನಿಲ್ಲಿಸಿದೆ. ಪೂರ್ತಿ ಜಗತ್ತನ್ನೇ ತಲ್ಲಣಗೊಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಅನ್ನು 2020 ಮಾರ್ಚ 11 ರಂದು 'ಜಾಗತಿಕ ಪಿಡುಗು' ಎಂದು ಘೋಷಿಸಿದೆ. ಈ ರೀತಿಯ ಸಾಂಕ್ರಾಮಿಕ ಮಹಾಮಾರಿ ಮೊದಲನೆಯದೇನಲ್ಲ. ಮನುಕುಲದ ವಿಕಾಸದೊಟ್ಟಿಗೆ ಅವುಗಳ ತಾಂಡವ ಮಿಳಿತಗೊಂಡಿದೆ. ಆರನೇ ಶತಮಾನದ ಜಗತ್ತಿನ ಅತ್ಯಂತ ಭೀಕರ ಜಸ್ಟೀನಿಯನ್ ಪ್ಲೇಗ್ನಿಂದ ಹಿಡಿದು ಕಳೆದ ಶತಮಾನದ ಸ್ಪ್ಯಾನಿಷ್ ಫ್ಲ್ಯೂವರೆಗೂ ಮಾರಣಾಂತಿಕ ಪಿಡುಗುಗಳು ಮಾನವನ ಅಹಂಕಾರಕ್ಕೆ ಸರಿಯಾದ ಸವಾಲುಗಳನ್ನೇ ಒಡ್ಡಿವೆ.
4 Comments
![]()
ಒಮ್ಮೆ ಅಂತರರಾಷ್ಟ್ರೀಯ ಮಟ್ಟದ ಒಂದು ಸ್ವಯಂ ಸೇವಾ ಸಂಸ್ಥೆಯವರು ಹಿರಿಯ ನಾಗರೀಕರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಲು ನಿಧಿ ಸಂಗ್ರಹಣೆಯ ಅಭಿಯಾನವನ್ನು ಕೈಗೊಂಡರು. ಭಾರತದಾದ್ಯಂತ ಕಣ್ಣಿನ ಪೊರೆ ಸಮಸ್ಯೆಯ ಕುರಿತಾಗಿ ಸುಮಾರು ಐದು ಪುಟಗಳ ವರದಿಯನ್ನು ತಯಾರಿಸಿ ಹಲವಾರು ಜಾಹೀರಾತು ನೀಡಲಾಯಿತು. ಈ ವಿಸ್ತೃತ ವರದಿಯಲ್ಲಿ ಕಣ್ಣಿನ ಸಮಸ್ಯೆಯ ಕುರಿತು ಅಂಕಿ ಅಂಶಗಳು ಹಾಗೂ ಈ ಸಮಸ್ಯೆಯನ್ನು ಹೋಗಲಾಡಿಸಲು ಬೇಕಾದ ಅಪಾರವಾದ ಹಣವನ್ನು ದೇಣಿಗೆ ನೀಡಲು ಕೋರಲಾಗಿತ್ತು. ಜಾಹೀರಾತು ನೀಡಿ ಸುಮಾರು ದಿನಗಳು ಕಳೆದರೂ ಅಂದುಕೊಂಡ ಮಟ್ಟಿಗೆ ನಿಧಿ ಸಂಗ್ರಹಣೆ ಆಗಲಿಲ್ಲ. ನಂತರ ನಿಧಿ ಸಂಗ್ರಹಣೆ ಯಶಸ್ವಿಯಾಗಿ ಮಾಡಲು ಏನು ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಯಿತು. ಚರ್ಚೆಯಲ್ಲಿ ನಿಧಿ ಸಂಗ್ರಹಣೆಗಾಗಿ ಒಂದು ವಿನೂತನ ಪ್ರಯೋಗ ಮಾಡಲು ನಿರ್ಧರಿಸಿದರು.
ಕೊರೊನಾ-2 ಸೋಂಕು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಈ ವೈರಾಣು ಸೂಕ್ತ ವೈಜ್ಞಾನಿಕ ಪುರಾವೆಯಂತೆ ವೇಗವಾಗಿ ರೋಗಗ್ರಸ್ಥ ಮಾನವನಿಂದ ಇನ್ನೊಬ್ಬ ಮಾನವನಿಗೆ ಹರಡುವುದನ್ನು ತಡೆಗಟ್ಟಲು ಇರುವ ಏಕೈಕ ಮಾರ್ಗ ಪ್ರತೇಕ ವಾಸ. ಹೀಗಾಗಿ ಎಲ್ಲರೂ ಮನೆಯಲ್ಲಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡುವಿಕೆಯ ಸರಪಣಿಯನ್ನು ತುಂಡರಿಸಬೇಕು ಎಂಬ ಕಾರಣಕ್ಕೆ ಜಗತ್ತಿನಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಹೇರಲಾಗಿದ್ದು, ಇದರ ಅಪಾಯವನ್ನು ತಗ್ಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಆಯಾ ದೇಶದ ಸರ್ಕಾರಗಳು ಮುಂದಾಗಿವೆ. ನಮ್ಮ ದೇಶವು ಬಲವಂತದ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದೆ. ಅದರ ನಡುವೆಯೂ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದನ್ನು ಕಂಡ ಜನರಿಗೆ ರೋಗದ ಭಯ, ಸಾವಿನ ಭೀತಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಇತರೆ ಸಾಂಕ್ರಮಿಕ ರೋಗಗಳಂತೆ ಇದು ಸಂಪೂರ್ಣ ನಿರ್ಮೂಲನೆವಾಗುವಂತದ್ದೇ ಅಥವಾ ಸರ್ವನಾಶ ಮಾಡುವಂತದೇ? ಇದು ಮುಂದುವರೆದರೆ ತುತ್ತಿನ ಚೀಲ ತುಂಬಿಕೊಳ್ಳುವುದು ದುಸ್ಥರ. ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಬರಿಗೈಯಲ್ಲಿ ಕುಳಿತಿದ್ದಾರೆ, ಭವಿಷ್ಯದ ಬಗ್ಗೆ ಇರುವ ಅನಿಶ್ಚಿತತೆ, ಆಕಾರಣ ಭಯ, ಆತಂಕ, ಖಿನ್ನತೆ, ದುಃಸ್ವಪ್ನಗಳು ಬಡವರು, ಶ್ರೀಮಂತರು ಎಂಬ ಭೇದವಿಲ್ಲದೆ ಹಳಬರು, ಹೊಸಬರೆನ್ನದೇ ದೇವರು, ಧರ್ಮವೆನ್ನದೇ ಎಲ್ಲ ಜನತೆಯನ್ನು ಕಾಡತೊಡಗಿವೆ. ಸೋಂಕಿತರ ತಕ್ಷಣದ ಚಿಕಿತ್ಸೆಗಾಗಿ ಸ್ಥಳಾಂತರ, ವಲಸಿಗರು ತಮ್ಮ ಮೂಲ ನೆಲೆಗಳಿಗೆ ಇಲ್ಲವೇ ಆಶ್ರಯವೇ ಇಲ್ಲದ ನಿರಾಶ್ರಿತರಿಗೆ ತಾತ್ಕಾಲಿಕ ತಾಣಗಳಲ್ಲಿನ ಸಮಸ್ಯೆಗಳು. ಈಗಾಗಲೇ ಹಲವಾರು ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಮತ್ತು ಆರೈಕೆದಾರರ ಆಸ್ಪತ್ರೆಯಲ್ಲಿನ ಸಮಸ್ಯೆಗಳು ಇವೆಲ್ಲವುಗಳ ಮಧ್ಯೆ ಸಾಮಾಜಿಕ ಅಂತರ ಮತ್ತು ಶುಚಿತ್ವದ ಕಟ್ಟುಪಾಡು.
ಬಹುಶಃ ದ್ವಿತೀಯ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ವಿಶ್ವದ ಎಲ್ಲಾ ರಾಷ್ಟ್ರಗಳು ತಮ್ಮ ತಮ್ಮ ದೇಶಗಳ ನಾಗರಿಕರನ್ನು ಸಂರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿವೆ. ಎಲ್ಲೆಡೆ ಎಲ್ಲರ ಮನದಲ್ಲಿ ಭಯದ ಛಾಯೆ ಮನೆಮಾಡಿದೆ. ಮನೆಯಿಂದ ಹೊರ ಬರುವುದಕ್ಕೂ ಅಂಜುವಂತಹ ಭಯಾನಕ ಸನ್ನಿವೇಶದಲ್ಲಿ ನಾವಿದ್ದೇವೆ. ವೈದ್ಯರಾಧಿಯಾಗಿ, ಆರಕ್ಷಕ, ಮಿಲಿಟರಿ ಹಾಗೆಯೇ ಕೊಂಚ ಮಟ್ಟಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಬ್ಭಂಧಿಗಳೂ ಸಹ ಕೊರೋನವೆಂಬ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಸಲುವಾಗಿ ಪ್ರವರ್ಧಮಾನಕ್ಕೆ ಬಂದ ಸಮಾಜಕಾರ್ಯಕರ್ತರು ಮುನ್ನೆಲೆಗೆ ಬರಲೇ ಇಲ್ಲ. ಇದಾಗಲೇ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜಕಾರ್ಯಕರ್ತರನ್ನು ಹೊರತುಪಡಿಸಿದರೆ ಇತರೆ ಯಾರೂ ಸಹ ಸದರಿ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಉಪಶಮನ ಮಾಡುವ ನಿಟ್ಟಿನಲ್ಲಿ ಯಾವುದೇ ರೀತಿಯ ಗಮನಾರ್ಹ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದನ್ನು ನಾವು ಒಪ್ಪಲೇಬೇಕಾಗಿದೆ.
Friends we are in a crisis. Social Work education taught us to respond to crisis situations at individual, group and community level. We are also taught and trained to take action in collaboration with the local communities, Government and the other stakeholders and players. Although we specialize in various forms to work with rural, tribal and urban communities, women and child, correctional administration, medical and psychiatric social work, industrial relations and personnel management, etc., the common thread that binds us all is the first lesson that we learnt ‘helping people help themselves’. To realise this all of us are in the field with NGOs, Government, private sector and also in national & international agencies while applying our professional skills at various levels – field intervention, training and capacity building, advocacy, lobbying, research, publication, management, administration, policy formulation, etc.
ಎಲ್ಲಾ ವಿಷಯಗಳ ವಿದ್ಯಮಾನಗಳಿಗಾಗಿ ಈ ಕೆಳಕಂಡ ಗ್ರೂಪ್ ಗಳಿಗೆ ಸದಸ್ಯರಾಗಿ.
ವಾಟ್ಸ್ ಅಪ್ ಗ್ರೂಪ್ : https://chat.whatsapp.com/IzxHo6xxKIRD29gUzLx7la ಗೂಗಲ್ ಗ್ರೂಪ್ : https://groups.google.com/forum/#!forum/cspsw ಮೊ: 9980066890, ಇ-ಮೇಲ್ : karnatakakakc@gmail.com ![]()
All the ISPSW Members,
Indian Society of Professional Social Work (ISPSW) Respected Sir/ Madam, Greetings from Indian Society of Professional Social Work (ISPSW). We are glad to inform your kind self that our ISPSW Annual General Body Meeting (AGBM) has been scheduled to be held on 29-02-2020 (Saturday) 5-00 PM at the R.B.Davis Auditorium, Central Institute of Psychiatry, Kanke, Ranchi 834006 on the second day of the XXXVIII Annual National Conference of the ISPSW, scheduled to be held from 28th, 29th February and 1st March 2020. World Social Work Day is on the 17th March 2020. It is the key day in the year that social workers worldwide stand together to advance our common message globally.
This year, the 2020 World Social Day highlights ‘Promoting the Importance of Human Relationships’. This is the fourth and final theme of the 2010 to 2020 Global Agenda for Social Work and Social Development. Our senior in IR, Sri M G Vaidya passed away at Hubli on 4th August 2018, when he was around 81-82 years. He was with Mysore Kirloskar Harihar and then with Harihar Polyfibres and after retirement, he was practicing Industrial Law at Hubli and advising Organizations in around Hubli.When I was working for Davangere Cotton Mills during 1976 to 1980 where I started my career, he was guiding us in our profession. Very friendly in his approach, rich in his knowledge in IR, has groomed many young and budding IR Professionals in North Karnataka. Let us pray that his soul rest in eternal peace.
SN Gopinath, Past Chairman NIPM Karnataka Chapter ಸಮಾಜಕಾರ್ಯ ಕ್ಷೇತ್ರದ ಎಲ್ಲರಿಗೂ ಸಮಾರಂಭಕ್ಕೆ ಆತ್ಮೀಯ ಸ್ವಾಗತ. ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಸಮಾರಂಭವನ್ನು ಯಶಸ್ವಿಯಾಗಿಸಬೇಕಾಗಿ ಈ ಮೂಲಕ ಕೋರಲಾಗಿದೆ.
ಸಮಾಜಕಾರ್ಯದಲ್ಲಿ ಶಿಕ್ಷಣ ಮಾಡುತ್ತಿದ್ದು ಇಲ್ಲವೇ ಪೂರ್ತಿಗೊಳಿಸಿದ್ದು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ವಿಶೇಷ ವಿದ್ಯಾರ್ಹತೆ ಹೊಂದಿರುವ ವಿದ್ಯಾರ್ಥಿಗಳಿಗೆ ಹಾಗೂ ಪ್ರಾರಂಭದ ಹಂತದಲ್ಲಿರುವ ವೃತ್ತಿಪರರಿಗೆ ಈ ವಿಷಯದಲ್ಲಿ ಅತಿ ಕಡಿಮೆ ಶುಲ್ಕದಲ್ಲಿ ಪರಿಣಿತರಿಂದ ತರಬೇತಿ ಕೊಟ್ಟು ಅವರ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಮಾರ್ಗದರ್ಶನ ನೀಡಿ ಉದ್ಯೋಗಾವಕಾಶ ಪಡೆಯಲು ಸೂಕ್ತ ವೇದಿಕೆ ನಿರ್ಮಿಸಿಕೊಡಲಾಗುವುದು. ಮೊದಲ ಹಂತದಲ್ಲಿ 50 ಪ್ರಶಿಕ್ಷಾರ್ಥಿಗಳಿಗೆ ಮಾತ್ರ ಅವಕಾಶವಿದ್ದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಸ್ಥಿತಿವಂತರಲ್ಲದ ವಿದ್ಯಾರ್ಥಿಗಳಿಗೆ ಶುಲ್ಕರಹಿತವಾಗಿ ಪ್ರವೇಶ ನೀಡುವ ಆಲೋಚನೆಯೂ ನಮ್ಮ ತಂಡದಲ್ಲಿದೆ. ಆದ್ದರಿಂದ ಆಸಕ್ತ ವಿದ್ಯಾರ್ಥಿಗಳು ಮತ್ತು ಪ್ರಾರಂಭದ ಹಂತದಲ್ಲಿರುವ ವೃತ್ತಿಪರರು ಹೆಚ್ಚಿನ ಮಾಹಿತಿಗಳಿಗಾಗಿ ನಿರಾತಂಕ ಸಂಸ್ಥೆಯನ್ನು ಸಂಪರ್ಕಿಸುವುದು.
ನಿರಾತಂಕ ತರಬೇತಿ ಕೇಂದ್ರ #326, 2ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಎದುರು, ಡಾ. ಅಂಬೇಡ್ಕರ್ ಕಾಲೇಜು ಹತ್ತಿರ, ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು-560056. ದೂ: 080-23213710, 9980066890 www.socialworkfootprints.org www.niratanka.org ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆ 2010 ರಲ್ಲಿ ಆರಂಭಗೊಂಡು ಸತತವಾಗಿ 8 ವರ್ಷಗಳಿಂದ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಈಗ ಪ್ರಸ್ತುತವಾಗಿ 3 ತಿಂಗಳಿಗೊಮ್ಮೆ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಲೇಖನಗಳನ್ನು ಆಹ್ವಾನಿಸಿ ಪ್ರಕಟಿಸಲಾಗುತ್ತಿದೆ. ಹಲವಾರು ಸಮಾಜಕಾರ್ಯ ಕ್ಷೇತ್ರದ ಸ್ನೇಹಿತರು ಆನ್ ಲೈನ್ ಪತ್ರಿಕೆಯನ್ನು ಹೊರತರಲು ಸಲಹೆ ನೀಡಿದ್ದಾರೆ. ಈ ಆನ್ ಲೈನ್ ಪತ್ರಿಕೆಯನ್ನು ಉಚಿತವಾಗಿ ಹಂಚಲು ಚಿಂತಿಸಲಾಗುತ್ತಿದೆ. ಮುದ್ರಣ ಮಾಧ್ಯಮದ ಮೂಲಕ ಎಲ್ಲ ಸಮಾಜಕಾರ್ಯ ವೃತ್ತಿನಿರತರನ್ನು ತಲುಪುವುದು ಕಷ್ಟವಾದ್ದರಿಂದ ಉಚಿತವಾಗಿ ಆನ್ ಲೈನ್ ಪತ್ರಿಕೆ ಶುರು ಮಾಡುವ ಆಲೋಚನೆ ನಮ್ಮದಾಗಿದೆ ಹಾಗೂ ವಸ್ತು ವಿಷಯಗಳಲ್ಲಿ ಸಮಾಜಕಾರ್ಯ ಕ್ಷೇತ್ರದ ದಿನನಿತ್ಯದ ವಿದ್ಯಮಾನಗಳನ್ನು ಗುರುತಿಸಿ 15 ದಿನಕ್ಕೊಮ್ಮೆ ಪತ್ರಿಕೆ ಹೊರತರಲಾಗುವುದು. ಈ ಪತ್ರಿಕೆಯಲ್ಲಿ ಈ ಕೆಳಕಂಡ ವಿಷಯಗಳಿರುತ್ತವೆ.
- ಪುಸ್ತಕಗಳ ಪರಿಚಯ - ಸಮಾಜಕಾರ್ಯ ಕ್ಷೇತ್ರದ ಸುದ್ದಿ - ಕ್ಷೇತ್ರ ಕಾರ್ಯ ಮತ್ತು ಬ್ಲಾಕ್ ಪ್ಲೇಸ್ಮೆಂಟ್ ಅವಕಾಶಗಳು - ಉದ್ಯೋಗ ಸುದ್ದಿ - ಟ್ರೈನಿಂಗ್, ಕಾನ್ಫರೆನ್ಸ್, ಸೆಮಿನಾರ್ - ಕಿರುಚಿತ್ರಗಳ ಮಾಹಿತಿ - ಉನ್ನತ ಶಿಕ್ಷಣ - ಸಂಶೋಧನೆಯಲ್ಲಿ ಅವಕಾಶಗಳು - ವಿದ್ಯಾರ್ಥಿ ವೇತನ ಮತ್ತು ಫೆಲೋಶಿಪ್ - ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕಥೆ, ಕವನ, ನಗೆಹನಿ - ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಯಶಸ್ವಿ ಪ್ರಯೋಗಗಳು - ಗ್ರಾಮೀಣ ಅಭಿವೃದ್ಧಿ - ಸರ್ಕಾರದ ವಿವಿಧ ಯೋಜನೆಗಳು - ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪ್ರಶ್ನೋತ್ತರ ಮಾಲಿಕೆ ಉಚಿತವಾಗಿ ಪತ್ರಿಕೆಯು 50000 ಕ್ಕೂ ಹೆಚ್ಚು ಜನರಿಗೆ ತಲುಪಬೇಕೆಂಬ ಆಶಯದೊಂದಿಗೆ ಪ್ರಥಮ ಸಂಚಿಕೆಗೆ ಸುದ್ದಿ ಕಳುಹಿಸಿಕೊಡುವವರು 25-09-2018ರ ಒಳಗೆ ಕಳುಹಿಸಿಕೊಡಬೇಕು. ನಿಮ್ಮ ಸಲಹೆ, ಸೂಚನೆ, ಸುದ್ದಿಗಳನ್ನು ವಾಟ್ಸ್ಅಪ್ ನಂ. 8310241136 ಹಾಗೂ editorsocialwork@gmail.comಗೆ ಕಳುಹಿಸಿಕೊಡಬಹುದು. www.socialworkfootprints.org www.niratanka.org |
Categories
All
Inviting Articles20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
Site
|
Vertical Divider
|
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
|
Vertical Divider
|
Contact us
080-23213710
+91-8073067542 Mail-nirutapublications@gmail.com Our Other Websites
|
MHR LEARNING ACADEMY
|
Receive email updates on the new books & offers
for the subjects of interest to you. |